Mangaluru: ನಿವೃತ್ತ ಪಿಡಿಒ ಕೊಲೆ ಆರೋಪಿ ಬಂಧನ

ಮಹಿಳೆಯರ ಗೆಳೆತನ ಬೆಳೆಸಿ ಚಿನ್ನಾಭರಣ ದೋಚುತ್ತಿದ್ದ ಖದೀಮ

Team Udayavani, Sep 17, 2024, 11:58 PM IST

PDO-Arrest

ಮಂಗಳೂರು: ಮಹಿಳೆಯರೊಂದಿಗೆ ಸ್ನೇಹದ ನಾಟಕವಾಡಿ ಅವರೊಂದಿಗೆ ಸಂಪರ್ಕ ಇಟ್ಟುಕೊಂಡು ಅವರಿಂದಲೇ ಚಿನ್ನಾಭರಣ ದೋಚುತ್ತಿದ್ದ ಕಳ್ಳ, ನಿವೃತ್ತ ಪಿಡಿಒ ಓರ್ವರನ್ನು ಹತ್ಯೆಗೈದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ಬೆಳ್ಮಣ್ಣಿನ ರೋಹಿತ್‌ ಮಥಾಯಿಸ್‌ (33) ಬಂಧಿತ ಆರೋಪಿ. ಈತ 2021ರ ಡಿಸೆಂಬರ್‌ ತಿಂಗಳ ಮೊದಲ ವಾರದಿಂದ ಕುಲಶೇಖರದ ಮಹಿಳೆಯೋರ್ವರ ಜತೆ ಕೆಲವು ತಿಂಗಳು ಸಂಪರ್ಕವನ್ನಿಟ್ಟುಕೊಂಡು ಆಕೆಯೊಂದಿಗೆ ವಾಸವಿದ್ದು, ಬಳಿಕ ಆಕೆಯ ಮನೆಯಿಂದಲೇ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿ ಹೋಗಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

ಚಿನ್ನಾಭರಣಕ್ಕಾಗಿ ಕೊಲೆ
ರೋಹಿತ್‌ ಮಥಾಯಿಸ್‌ 2019ರಲ್ಲಿ ಬೆಳ್ಮಣ್ಣಿನಲ್ಲಿ ನೆರೆಮನೆಯವರಾದ ನಿವೃತ್ತ ಪಿಡಿಒ ಭರತಲಕ್ಷ್ಮೀ ಅವರನ್ನು ಇತರರೊಂದಿಗೆ ಸೇರಿಕೊಂಡು ಚಿನ್ನಾಭರಣಕ್ಕಾಗಿ ಕೊಲೆ ಮಾಡಿ ದೇಹವನ್ನು ಬಾವಿಗೆ ಹಾಕಿದ್ದ. ಜೈಲುವಾಸ ಅನುಭವಿಸಿ ಅನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಜಾಲತಾಣದ ಮೂಲಕ ಗೆಳೆತನ
ಆರೋಪಿ ಫೇಸ್‌ಬುಕ್‌ನಂತಹ ಜಾಲತಾಣಗಳ ಮೂಲಕ ಮಹಿಳೆಯರ ಗೆಳೆತನ ಮಾಡಿ ವಿಶ್ವಾಸಗಳಿಸುತ್ತಿದ್ದ. ಇದೇ ರೀತಿ ಕುಲಶೇಖರದ ಮಹಿಳೆಯ ಸಂಪರ್ಕವೂ ಅಗಿ ಆಕೆಯ ಜತೆ ವಾಸವಿದ್ದು, ಕಳವು ಮಾಡಿಕೊಂಡು ಹೋಗಿದ್ದ.

ಮತ್ತೊಂದು ಪ್ರಯತ್ನದಲ್ಲಿದ್ದಾಗ ಸಿಕ್ಕಿಬಿದ್ದ
ಆರೋಪಿ ರೋಹಿತ್‌ ಕಳವಿನ ಬಳಿಕ ಮುಂಬಯಿಗೆ ತೆರಳಿದ್ದ. ಇದೇ ರೀತಿ ಹಲವು ಮಹಿಳೆಯರನ್ನು ವಂಚಿಸಲು ಯೋಜನೆ ರೂಪಿಸಿಕೊಂಡಿದ್ದ. ಓರ್ವ ಮಹಿಳೆ ಈತನ ಬಲೆಗೆ ಬಿದ್ದಿದ್ದಳು. ಅನಂತರ ಆಕೆಗೆ ಸಂಶಯ ಬಂದಿತ್ತು. ಆಕೆಯ ಮೂಲಕವೇ ಉಪಾಯವಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

MNG-VA-Strik

Kundapura: ವಿಎ ಮುಷ್ಕರ: ಸಿಇಟಿ ಮಕ್ಕಳಿಗೆ ಜಾತಿ ಪ್ರಮಾಣಪತ್ರಕ್ಕೆ ತೊಡಕು

Putturu–derla

Putturu: 45 ವರ್ಷ ಬಳಿಕ ಮನೆ ಸೇರಿದ ದೇರ್ಲ ನಿವಾಸಿ

Malpe-Fisheris

Malpe: ಮೀನುಗಾರರ ಬೇಡಿಕೆಯ ಈಡೇರಿಕೆ ಬಗ್ಗೆ ಪರಿಶೀಲಿಸುವೆ: ಸಿಎಂ ಸಿದ್ದರಾಮಯ್ಯ

Padubidiri-Theifs

Padubidiri: ಅಂತರ್‌ ಜಿಲ್ಲಾ ಕುಖ್ಯಾತ ಬೈಕ್‌ ಕಳ್ಳರ ಬಂಧನ

Gvk-Venuru-Accident

ಗುರುವಾಯನಕೆರೆ-ವೇಣೂರು ರಸ್ತೆಯಲ್ಲಿ ಡಿವೈಡರ್‌ಗೆ ಬೈಕ್‌ ಢಿಕ್ಕಿ: ಯುವಕ ಸ್ಥಳದಲ್ಲೇ ಮೃತ್ಯು

ಗೀತಾರ್ಥ ಚಿಂತನೆ-185: ದೇವರಿಗೆ ಅಧೀನತ್ವ, ಜೀವರಿಗೆ ಪರಾಧೀನತ್ವಗೀತಾರ್ಥ ಚಿಂತನೆ-185: ದೇವರಿಗೆ ಅಧೀನತ್ವ, ಜೀವರಿಗೆ ಪರಾಧೀನತ್ವ

ಗೀತಾರ್ಥ ಚಿಂತನೆ-185: ದೇವರಿಗೆ ಅಧೀನತ್ವ, ಜೀವರಿಗೆ ಪರಾಧೀನತ್ವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP-Chowta

Mangaluru: ರಾಜ್ಯ ಇಎಸ್‌ಐ ಸೊಸೈಟಿ ರಚಿಸಿ: ಸಂಸದ ಕ್ಯಾ. ಬ್ರಿಜೇಶ್‌ ಚೌಟ 

thiruvailu-kambhala

Kambala: ಫೆ.15ಕ್ಕೆ ವಾಮಂಜೂರು ತಿರುವೈಲುಗುತ್ತು ಕಂಬಳ; ತಿರುವೈಲೋತ್ಸವ

4

Kinnigoli: ಹೊಸಕಾವೇರಿ ಎರಡು ಮನೆಗಳಿಗೆ ಕಳ್ಳರ ಕರಾಮತ್ತು; ಪಾತ್ರೆ, ಕುಕ್ಕರ್‌ ಕಳವು

2

Mangaluru: ಗಾಂಜಾ ಸೇವನೆ; ಯುವಕನ ಬಂಧನ

13

ಲಾರಿಗೆ ಟೆಂಪೋ ಢಿಕ್ಕಿ: ಚಾಲಕನಿಗೆ ಗಾಯ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡ ಸ್ಪೀಕರ್‌ ಖಾದರ್‌

MUST WATCH

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

ಹೊಸ ಸೇರ್ಪಡೆ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

MNG-VA-Strik

Kundapura: ವಿಎ ಮುಷ್ಕರ: ಸಿಇಟಿ ಮಕ್ಕಳಿಗೆ ಜಾತಿ ಪ್ರಮಾಣಪತ್ರಕ್ಕೆ ತೊಡಕು

Putturu–derla

Putturu: 45 ವರ್ಷ ಬಳಿಕ ಮನೆ ಸೇರಿದ ದೇರ್ಲ ನಿವಾಸಿ

MP-Chowta

Mangaluru: ರಾಜ್ಯ ಇಎಸ್‌ಐ ಸೊಸೈಟಿ ರಚಿಸಿ: ಸಂಸದ ಕ್ಯಾ. ಬ್ರಿಜೇಶ್‌ ಚೌಟ 

thiruvailu-kambhala

Kambala: ಫೆ.15ಕ್ಕೆ ವಾಮಂಜೂರು ತಿರುವೈಲುಗುತ್ತು ಕಂಬಳ; ತಿರುವೈಲೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.