Mangaluru: ತುಳುನಾಡಿನಲ್ಲೇ “ತುಳು ಪಿಎಚ್‌ಡಿ’ಗಿಲ್ಲ ಅವಕಾಶ !

ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಇದ್ದರೂ ಪಿಎಚ್‌ಡಿ ಭಾಗ್ಯವಿಲ್ಲ

Team Udayavani, Oct 17, 2024, 7:45 AM IST

Mangaluru-VV

ಮಂಗಳೂರು: ತುಳುನಾಡಿನಲ್ಲಿ ತುಳು ಭಾಷೆಯಲ್ಲಿಯೇ ಉನ್ನತ ಶಿಕ್ಷಣ ಪಡೆದು ಪಿಎಚ್‌ಡಿ ಪಡೆಯುವ ಆಸೆಯಿದ್ದರೆ ಅದು ಈಡೇರದು! ಯಾಕೆಂದರೆ, ತುಳುವಿನಲ್ಲಿ ಪಿಎಚ್‌ಡಿ ಪಡೆಯಲು ಮಂಗಳೂರು ವಿ.ವಿ.ಯಲ್ಲಿ ಅವಕಾಶವೇ ಇಲ್ಲ.

ಕನ್ನಡ ವಿಭಾಗದಲ್ಲಿ ತುಳುವಿನ ವಿಷಯದ ಬಗ್ಗೆ ಪಿಎಚ್‌ಡಿ ಮಾಡಲು ಮಂಗಳೂರು ವಿ.ವಿ. ಸಹಿತ ಇತರ ಕಡೆಯಲ್ಲಿ ಅವಕಾಶವಿದೆ. ಆದರೆ ಕನ್ನಡ ಲಿಪಿಯಲ್ಲಿ ತುಳು ಭಾಷೆಯಲ್ಲಿ ಬರೆದು ಪಿಎಚ್‌ಡಿ ಮಾಡಲು ತುಳು ವಿಭಾಗವಿಲ್ಲದೆ ಸಾಧ್ಯವಾಗುತ್ತಿಲ್ಲ. ವಿ.ವಿ. ವ್ಯಾಪ್ತಿಯ ತುಳು ಎಂಎ ಸ್ನಾತಕೋತ್ತರ ವಿಭಾಗದಲ್ಲಿ ಇದುವರೆಗೆ 5 ತಂಡಗಳಲ್ಲಿ 81 ವಿದ್ಯಾರ್ಥಿಗಳು ತುಳು ಪದವೀಧರರಾಗಿದ್ದಾರೆ. ತುಳು ಭಾಷೆ, ಸಂಸ್ಕೃತಿ, ಜಾನಪದ, ಇತಿಹಾಸಗಳ ಬಗ್ಗೆ ಬೆಳಕು ಚೆಲ್ಲುವ ಆಸಕ್ತಿ ಅರಳಿಸುವ ಉದ್ದೇಶದಿಂದ ಪದವಿ ಪಡೆದಿದ್ದಾರೆ. ಇದೇ ವಿದ್ಯಾರ್ಥಿಗಳ ಪೈಕಿ ಹಲವರಿಗೆ ಪಿಎಚ್‌ಡಿ ಮಾಡಲು ಆಸಕ್ತಿ ಇದೆ. ಆದರೆ, ತುಳು ವಿಭಾಗವಿಲ್ಲ ಎಂಬ ಕಾರಣದಿಂದ ಪಿಎಚ್‌ಡಿ ಅವಕಾಶ ಅವರಿಗೆ ದೊರೆಯುವುದಿಲ್ಲ.

ತುಳು ಎಂಎ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಕಣ್ವತೀರ್ಥ ಅವರ ಪ್ರಕಾರ “ತುಳುವಿನ ಅಧಿಕೃತ ಲಿಪಿಯನ್ನು ಸರಕಾರ ಇನ್ನಷ್ಟೇ ಅಧಿಕೃತ ಮಾಡಬೇಕಿದೆ. ಹೀಗಾಗಿ ನಮಗೆ ಈಗ ತುಳುವಿನಲ್ಲಿ ಪಿಎಚ್‌ಡಿಯನ್ನು ಕನ್ನಡ ಭಾಷೆಯಲ್ಲಿ ನಡೆಸಲು ಅವಕಾಶ ನೀಡುವಂತೆ ವಿ.ವಿ. ಹಾಗೂ ಸರಕಾರವನ್ನು ಆಗ್ರಹಿಸುತ್ತಲೇ ಬಂದಿದ್ದೇವೆ. ಇದಕ್ಕೂ ಮೊದಲು ತುಳು ವಿಭಾಗ ಆರಂಭಿಸಬೇಕಿದೆ’ ಎಂಬುದು ನಮ್ಮ ಆಗ್ರಹ ಎನ್ನುತ್ತಾರೆ.

“ಕುಪ್ಪಂ ವಿಶ್ವವಿದ್ಯಾನಿಲಯದಲ್ಲಿ ತುಳುವಿನಲ್ಲಿ ಇಬ್ಬರು ಪಿಎಚ್‌ಡಿ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಅಲ್ಲಿ ತುಳು ಪಿಎಚ್‌ಡಿ ಸಾಧ್ಯವಾಗುವುದಾದರೆ, ನಮ್ಮೂರಿನ ವಿ.ವಿ.ಯಲ್ಲಿ ಯಾಕೆ ಈ ಅವಕಾಶ ಇಲ್ಲ’ ಎಂಬ ಪ್ರಶ್ನೆ ತುಳು ಎಂಎ ವಿಭಾಗದ ಪ್ರಶಾಂತಿ ಶೆಟ್ಟಿ ಇರುವೈಲು ಅವರದ್ದು.

2007ರಿಂದ ತುಳು ಕಲಿಕೆಗೆ ಸಿಕ್ಕಿತ್ತು ಅವಕಾಶ
ಪ್ರಾಥಮಿಕ ಶಿಕ್ಷಣದಲ್ಲಿ 6ರಿಂದ 10ನೇ ತರಗತಿವರೆಗೆ ತುಳು ಭಾಷೆಯನ್ನು ಕಲಿಯಲು 2007ರಿಂದ ಅವಕಾಶ ನೀಡಲಾಗಿತ್ತು. ಉನ್ನತ ಶಿಕ್ಷಣದಲ್ಲಿ ತುಳು ಭಾಷೆ, ಜಾನಪದ, ಇತಿಹಾಸಗಳ ಬಗ್ಗೆ ಅಧ್ಯಯನವಾಗಬೇಕು ಎಂಬ ನಿಟ್ಟಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಬಲ ಒತ್ತಾಸೆಯಿಂದಾಗಿ ಮಂಗಳೂರು ವಿಶ್ವವಿದ್ಯಾನಿಲಯವು 2018ರಲ್ಲಿ ತನ್ನ ಘಟಕ ಕಾಲೇಜಾದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಆರಂಭಿಸಿತ್ತು. ತುಳು ಉಪನ್ಯಾಸಕರು ದೊರಕಿದರೆ ಮುಂದೆ ಕಾಲೇಜು ಹಂತದಲ್ಲಿ ತುಳು ಶಿಕ್ಷಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದು ಎಂಬ ದೂರದೃಷ್ಟಿಯಿತ್ತು.

ತುಳು ಎಂಎಗೆ ಎದುರಾಗಿದೆ ಸಂಚಕಾರ!
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಡಿ ಕಾರ್ಯನಿರ್ವಹಿಸುತ್ತಿರುವ ತುಳು ಸ್ನಾತಕೋತ್ತರ ವಿಭಾಗದ 2024-25ನೇ ಸಾಲಿನ ಪ್ರವೇಶಾತಿ ಶುಲ್ಕವನ್ನು ಈ ಹಿಂದೆ ಇರುವುದಕ್ಕಿಂತ ದುಪ್ಪಟ್ಟು ಮಾಡಿರುವ ಪರಿಣಾಮ ವಿದ್ಯಾರ್ಥಿಗಳ ದಾಖಲಾತಿ ಇಲ್ಲದೆ ಈ ವಿಭಾಗಕ್ಕೆ ಸಂಚಕಾರ ಎದುರಾಗಿದೆ. ಆರಂಭದಲ್ಲಿ ತುಳು ಎಂಎಗೆ ವಾರ್ಷಿಕ ಸುಮಾರು 15 ಸಾವಿರ ರೂ. ಶುಲ್ಕ ಇತ್ತು. ವಿದ್ಯಾರ್ಥಿಗಳ ಮನವಿ ಹಿನ್ನೆಲೆಯಲ್ಲಿ 2020-21ರಿಂದ 4 ಸಾವಿರ ರೂ. ಶುಲ್ಕ ಕಡಿತಗೊಳಿಸಲಾಗಿತ್ತು. ಈ ವರ್ಷದಿಂದ ಶುಲ್ಕವನ್ನು ಮತ್ತೆ ಏರಿಸಿದ್ದು, 22,410 ರೂ. ಎಂದು ನಿಗದಿಪಡಿಸಲಾಗಿದೆ. ಇಷ್ಟು ಶುಲ್ಕ ತೆತ್ತು ಪ್ರವೇಶ ಪಡೆಯಲು ವಿದ್ಯಾರ್ಥಿಗಳು ನಿರಾಕರಿಸುತ್ತಿದ್ದಾರೆ.


“ಸರಕಾರದಿಂದ ಅನುಮೋದನೆ ಆಗಬೇಕು’

ತುಳುವಿನ ವಿಷಯ ಆಧಾರಿತವಾಗಿ ಸಂಶೋಧನೆ ಮಾಡಲು ಮಂಗಳೂರು ವಿ.ವಿ.ಯಲ್ಲಿ ಅವಕಾಶವಿದೆ. ಆದರೆ, ತುಳುವಿನಲ್ಲಿ ಪಿಎಚ್‌ಡಿ ಮಾಡಬೇಕಾದರೆ ತುಳು ವಿಭಾಗ ರಚನೆ ಆಗಬೇಕು. ಅದಕ್ಕೆ ಸರಕಾರದಿಂದ ಅಧಿಕೃತ ಅನುಮೋದನೆ ದೊರಕಬೇಕು. ಅದು ದೊರೆಯದೆ ಪಿಎಚ್‌ಡಿಗೆ ಅವಕಾಶ ನೀಡಲು ಆಗುವುದಿಲ್ಲ.
ಪ್ರೊ| ಪಿ. ಎಲ್‌. ಧರ್ಮ, ಕುಲಪತಿ, ಮಂಗಳೂರು ವಿ.ವಿ.

ಟಾಪ್ ನ್ಯೂಸ್

Argentina: ಹೋಟೆಲ್‌ ಬಾಲ್ಕನಿಯ 3ನೇ ಮಹಡಿಯಿಂದ ಬಿದ್ದು ಖ್ಯಾತ ಗಾಯಕ ಮೃತ್ಯು

Argentina: ಹೋಟೆಲ್‌ ಬಾಲ್ಕನಿಯ 3ನೇ ಮಹಡಿಯಿಂದ ಬಿದ್ದು ಖ್ಯಾತ ಗಾಯಕ ಮೃತ್ಯು

Tragedy: ಕಾರು ಪಲ್ಟಿಯಾಗಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಮೃತ್ಯು, ಸಿಎಂ ಸಂತಾಪ

Tragedy: ಕಾರು ಪಲ್ಟಿಯಾಗಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಮೃತ್ಯು, ಸಿಎಂ ಸಂತಾಪ

2

Actor Darshan: ಅ.22ಕ್ಕೆ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ

Oxford University: ಆಕ್ಸ್‌ಫ‌ರ್ಡ್‌ ವಿವಿ ಕುಲಪತಿ ಹುದ್ದೆ… ಭಾರತ ಮೂಲದವರು ರೇಸ್‌ನಲ್ಲಿ

Oxford University: ಆಕ್ಸ್‌ಫ‌ರ್ಡ್‌ ವಿವಿ ಕುಲಪತಿ ಹುದ್ದೆ… ಭಾರತ ಮೂಲದವರು ರೇಸ್‌ನಲ್ಲಿ

India- Canada: ಭಾರತದ ಮೇಲೆ ನಿರ್ಬಂಧ ವಿಧಿಸಿದರೆ ಕೆನಡಾಕ್ಕೆ ನಷ್ಟ!

India- Canada: ಭಾರತದ ಮೇಲೆ ನಿರ್ಬಂಧ ವಿಧಿಸಿದರೆ ಕೆನಡಾಕ್ಕೆ ನಷ್ಟ!

bhopal

Raids: ಜೂನಿಯರ್ ಆಡಿಟರ್ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಕಂಡು ಅಧಿಕಾರಿಗಳೇ ದಂಗು

Nayab Singh Saini: 2ನೇ ಬಾರಿಗೆ ಹರಿಯಾಣ ಸಿಎಂ ಆಗಿ ಸೈನಿ ಇಂದು ಪ್ರಮಾಣ ವಚನ ಸ್ವೀಕಾರ

Haryana: 2ನೇ ಬಾರಿಗೆ ಸಿಎಂ ಆಗಿ ಸೈನಿ ಇಂದು ಪ್ರಮಾಣ ವಚನ, ಪ್ರಧಾನಿ, ಬಿಜೆಪಿ ಗಣ್ಯರು ಭಾಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Bangaladesh illegal immigrants: ಕಾರ್ಮಿಕರ ಮಾಹಿತಿ ಸಂಗ್ರಹ ಆರಂಭಿಸಿದ ಪೊಲೀಸರು

Palm-Oil

Edible Oil Mission: ಕರಾವಳಿಗರ ಕೈ ಹಿಡಿದೀತೇ ಎಣ್ಣೆ ತಾಳೆ

Symoblic

Belthangady: ಬಾಲಕಿಗೆ ಕಿರುಕುಳ; ಪೋಕ್ಸೋ ಪ್ರಕರಣ ದಾಖಲು

Crime

Mangaluru: ಬಸ್‌ ನಿರ್ವಾಹಕನ ಕೊಲೆ; ಆರೋಪಿಗಳ ಸುಳಿವು ಲಭ್ಯ?

Sulya13

Guttigaru: ವೃದ್ಧರನ್ನು ಹೊತ್ತುಕೊಂಡು ಆಸ್ಪತ್ರೆಗೆ ಕೊಂಡೊಯ್ದರು!

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

Argentina: ಹೋಟೆಲ್‌ ಬಾಲ್ಕನಿಯ 3ನೇ ಮಹಡಿಯಿಂದ ಬಿದ್ದು ಖ್ಯಾತ ಗಾಯಕ ಮೃತ್ಯು

Argentina: ಹೋಟೆಲ್‌ ಬಾಲ್ಕನಿಯ 3ನೇ ಮಹಡಿಯಿಂದ ಬಿದ್ದು ಖ್ಯಾತ ಗಾಯಕ ಮೃತ್ಯು

Bengaluru: ರಾಜಕಾಲುವೆ ಒತ್ತುವರಿಯೇ ಅವಾಂತರಕ್ಕೆ ಕಾರಣ; ಆಯುಕ್ತ

Bengaluru: ರಾಜಕಾಲುವೆ ಒತ್ತುವರಿಯೇ ಅವಾಂತರಕ್ಕೆ ಕಾರಣ; ಆಯುಕ್ತ

Havery ಧಾರಾಕಾರ ಮಳೆ; ರಸ್ತೆ ಕಾಣದೆ ಚರಂಡಿಗೆ ಬಿದ್ದು ಕೊಚ್ಚಿ ಹೋದ ಬಾಲಕ

Haveri: ಧಾರಾಕಾರ ಮಳೆ; ರಸ್ತೆ ಕಾಣದೆ ಚರಂಡಿಗೆ ಬಿದ್ದು ಕೊಚ್ಚಿ ಹೋದ ಬಾಲಕ

Bengalruru Rain: ಬಿಬಿಎಂಪಿ ಕಳಪೆ ಕಾಮಗಾರಿ ಬಿಚ್ಚಿಟ್ಟ ಮಳೆ

Bengalruru Rain: ಬಿಬಿಎಂಪಿ ಕಳಪೆ ಕಾಮಗಾರಿ ಬಿಚ್ಚಿಟ್ಟ ಮಳೆ

5

Bengaluru Rain: ಮಳೆಗೆ 4 ಬಡಾವಣೆ ನಿವಾಸಿಗಳ ಗುಳೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.