![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 3, 2023, 7:00 AM IST
“ಮಿಸ್ಟರ್ ಕ್ಲೀನ್’ ಎಂಬ ಅಭಿದಾನ ಹೊಂದಿರುವ ಡಾ. ಮಾಣಿಕ್ ಸಾಹಾ ಎರಡನೇ ಅವಧಿಗೆ ತ್ರಿಪುರ ಮುಖ್ಯಮಂತ್ರಿ ಗಾದಿಗೆ ಏರುತ್ತಿದ್ದಾರೆ.
ಬರ್ಡೊವಾಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಕಾಂಗ್ರೆಸ್ ಹಿರಿಯ ನಾಯಕ ಆಶಿಶ್ ಕುಮಾರ್ ಸಾಹಾರನ್ನು 1,257 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಣಿಕ್ ಅವರನ್ನು ಘೋಷಿಸಿದಕ್ಕೆ ಪಕ್ಷದೊಳಗೇ ಭಿನ್ನಮತದ ನಡುವೆಯೂ ಪ್ರಬಲ ಪೈಪೋಟಿ ಇದ್ದ ಕ್ಷೇತ್ರದಲ್ಲಿ ಅವರು ಜಯಶೀಲರಾಗಿದ್ದಾರೆ.
ತ್ರಿಪುರದಲ್ಲಿ ಶಾಲಾ ಹಂತದ ವಿದ್ಯಾಭ್ಯಾಸ ಪಡೆದ ಮಾಣಿಕ್ ನಂತರ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ವೃತ್ತಿಯಲ್ಲಿ ಇವರು ಡೆಂಟಲ್ ಸರ್ಜನ್. ರಾಜಕೀಯಕ್ಕೆ ಸೇರ್ಪಡೆಗೂ ಮುನ್ನ ತ್ರಿಪುರ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. 2016ರಲ್ಲಿ ಬಿಜೆಪಿ ಸೇರ್ಪಡೆ, 2020ರಲ್ಲಿ ತ್ರಿಪುರ ಬಿಜೆಪಿ ಅಧ್ಯಕ್ಷ ಸ್ಥಾನ. 2022ರ ಅಲ್ಪ ಅವಧಿಗೆ ಏ.3ರಿಂದ ಜು.4ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು. ಕಳೆದ ವರ್ಷ ಬಿಜೆಪಿ ಹೈಕಮಾಂಡ್ ಬಿಪ್ಲಬ್ ದೇಬ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ಸಾಹಾರನ್ನು ನೇಮಿಸಿತು. ಅಲ್ಪ ಅವಧಿಯಲ್ಲೇ ಜನರ ಪ್ರೀತಿ ಗಳಿಸಲು ಸಫಲರಾದರು. “ಮಿ. ಕ್ಲೀನ್’ ಇಮೇಜ್ ಮೂಲಕ ಮತ್ತೂಂದು ಅವಧಿಗೆ ರಾಜ್ಯದಲ್ಲಿ ಕಮಲ ಅರಳಿಸಲು ಯಶಸ್ವಿಯಾಗಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.