Manipal: ಚಿರತೆ ಹಲವೆಡೆ ಓಡಾಟ, ಹೆಚ್ಚಿದ ಆತಂಕ

ಮನೆಯೊಂದರ ಕಾರಿಗೆ ಹಾನಿ, ಇಲಾಖೆ ಗಸ್ತಿಗೆ ಹೆಚ್ಚಿದ ಒತ್ತಡ

Team Udayavani, Jul 31, 2024, 7:30 AM IST

Manipal

ಮಣಿಪಾಲ: ಒಂದು ವಾರದಿಂದ ಮಣಿಪಾಲ ಪರಿಸರದಲ್ಲಿ ನಿರಂತರ ಚಿರತೆ ಓಡಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಅರಣ್ಯ ಇಲಾಖೆಯಿಂದ ಅತೀ ಶೀಘ್ರ ಚಿರತೆಯ ಜಾಡು ಹಿಡಿಯುವ ಕಾರ್ಯ ಆಗಬೇಕು ಎಂಬ ಆಗ್ರಹ ಜನರಿಂದ ವ್ಯಕ್ತವಾಗಿದೆ.

ಕಳೆದ ಶುಕ್ರವಾರ ರಾತ್ರಿ ಪೆರಂಪಳ್ಳಿಯ ಮನೆಯ ಆವರಣದೊಳಗೆ ಚಿರತೆ ಕಾಣಿಸಿಕೊಂಡಿತ್ತು. ಇದೀಗ ಸೋಮ ವಾರ ತಡರಾತ್ರಿ ಅನಂತ ನಗರ, ಸಿಂಡಿಕೇಟ್‌ ವೃತ್ತ, ಎಂಡ್‌ ಪಾಯಿಂಟ್‌ ಪ್ರದೇಶಗಳಲ್ಲಿ ಚಿರತೆಯನ್ನು ನೋಡಿ ಸ್ಥಳೀಯರು ಭಯಭೀತರಾಗಿದ್ದಾರೆ.

ಪೆರಂಪಳ್ಳಿಯಲ್ಲಿ ಚಿರತೆ ಚಲನವಲನ ಪತ್ತೆಯಾದ ಅನಂತರ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಸಿದರೂ ಚಿರತೆ ಪತ್ತೆಯಾಗಿರಲಿಲ್ಲ. ಈಗ ಅನಂತ ನಗರದಲ್ಲಿ ಚಿರತೆ ಓಡಾಡಿದ ಕುರುಹು ಪತ್ತೆಯಾಗಿದೆ. ಪೆರಂಪಳ್ಳಿಯಲ್ಲಿ ಓಡಾಡಿದ ಚಿರತೆಯೇ ಇಲ್ಲಿಗೂ ಬಂದಿರಬಹುದೇ ಅಥವಾ ಈ ಪರಿಸರದಲ್ಲಿ ಬೇರೆ 2-3 ಚಿರತೆ ಇರಬಹುದೇ ಎಂಬ ಆತಂಕ ಸ್ಥಳೀಯರಲ್ಲಿ ಮನೆಮಾಡಿದೆ.

ಇಲ್ಲಿನ ಸ್ಥಳೀಯರೊಬ್ಬರು ಪಾರ್ಕ್‌ ಮಾಡಿದ ಕಾರಿಗೆ ಹಾನಿಯಾಗಿದ್ದು, ಇದು ಚಿರತೆಯಿಂದಾಗಿರುವುದು ಎನ್ನಲಾಗಿದೆ. ಕಾರಿನ ಟೈರ್‌ ಮೇಲ್ಭಾಗದಲ್ಲಿ ಪರಚಿ ಜಖಂಗೊಳಿಸಿದಂತಿದೆ. ಈ ಪರಿಸರದಲ್ಲಿ ಚಿರತೆ ಓಡಾಡಿರುವ ಕಾಲಿನ ಹೆಜ್ಜೆ ಗುರುತು ಪತ್ತೆಯಾಗಿದ್ದು, ಅನುಮಾನಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಿದೆ.

ಮಣಿಪಾಲ ಎಂಡ್‌ಪಾಯಿಂಟ್‌ನಲ್ಲೂ ಚಿರತೆ ಓಡಾಟ ಕಂಡುಬಂದಿದ್ದು, ಅಲ್ಲಿನ ಸೆಕ್ಯೂರಿಟಿ ಗಾರ್ಡ್‌ ಚಿರತೆಯನ್ನು ನೋಡಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಎಂಡ್‌ಪಾಯಿಂಟ್‌ ಪ್ರದೇಶಕ್ಕೆ ಮಂಗಳವಾರ ಅರಣ್ಯ ಇಲಾಖೆ ಉಪ ವಲಯ ಅಧಿಕಾರಿ ಸುರೇಶ್‌ ಗಾಣಿಗ ಭೇಟಿ ನೀಡಿದ್ದು, ಅಲ್ಲಿ ಬೋನ್‌ ಇಡಲಾಗಿದೆ. ಈ ವೇಳೆ ಮಾಹೆ ಎಸ್ಟೇಟ್‌ ಆಫೀಸರ್‌ ಬಾಲಕೃಷ್ಣ ಪ್ರಭು, ಸೆಕ್ಯೂರಿಟಿ ಆಫೀಸರ್‌ ಸತೀಶ್‌ ಮೊದಲಾದವರು ಉಪಸ್ಥಿತರಿದ್ದರು.

ರಾತ್ರಿ ಓಡಾಡಲು ಭಯ
ಮಣಿಪಾಲದ ಮುಖ್ಯರಸ್ತೆಯ ಆಸು ಪಾಸಿನಲ್ಲಿಯೇ ಚಿರತೆ ಕಾಣಿಸಿ ಕೊಂಡಿರುವುದರಿಂದ ರಾತ್ರಿ ವೇಳೆ ಮಣಿಪಾಲ ಪರಿಸರದಲ್ಲಿ ಜನರು ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣಗೊಂಡಿದ್ದು, ಹೊಟೇಲ್‌ ಕಾರ್ಮಿಕರು ಸಹಿತ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಉದ್ಯೋಗಿಗಳು ಕೆಲಸ ಮುಗಿಸಿ ಮನೆ ಕಡೆಗೆ ತೆರಳಲು ಆತಂಕಪಡುವಂತಾಗಿದೆ.

ನಾಯಿಗಳಿಗೆ ಹೊಂಚು ಹಾಕುವ ಚಿರತೆ
ನಗರ ಭಾಗಕ್ಕೆ ಚಿರತೆಗಳು ಯಾಕೆ ಆಗಮಿಸುತ್ತಿವೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ವಿವಿಧ ಕಾರಣಗಳನ್ನು ನೀಡಿದ್ದಾರೆ. ಸಣ್ಣಪುಟ್ಟ ಕಾಡಿನಲ್ಲಿ ಚಿರತೆಗೆ ಬೇಕಾದ ಆಹಾರ ಕಡಿಮೆಯಾಗಿದ್ದು, ಇದು ನಾಡಿನತ್ತ ವಲಸೆ ಬರಲು ಕಾರಣವಾಗುತ್ತಿದೆ. ಸುಲಭವಾಗಿ ಸಿಗುವ ಕೋಳಿ, ನಾಯಿಗಳನ್ನು ಹುಡುಕಿಕೊಂಡು ಚಿರತೆ ಬರುತ್ತಿದೆ.

ಅದರಲ್ಲಿಯೂ ಮಣಿಪಾಲದಲ್ಲಿ ಬೀದಿನಾಯಿಗಳ ಸಂಖ್ಯೆ ಗಣನೀಯ ಏರಿಕೆಯಾಗಿದ್ದು, ಎಂಡ್‌ಪಾಯಿಂಟ್‌ ಸುತ್ತಲಿನ ಪ್ರದೇಶದಲ್ಲಿ ಚಿರತೆಗಳ ಬಾಯಿಗೆ ಆಹಾರವಾಗುತ್ತಿದೆ ಎಂಬುದು ಅರಣ್ಯ ಇಲಾಖೆ ಸಿಬಂದಿ ಅಭಿಪ್ರಾಯ. ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆಯೂ ಮುಂದಾಗಬೇಕಾದ ಅಗತ್ಯವಿದೆ ಎನ್ನುತ್ತಾರೆ ಸ್ಥಳೀಯರು.

ಚಿರತೆ ನೋಡಿ ಬೆಚ್ಚಿದ ಕಾರ್ಮಿಕರು
ಅನಂತನಗರ ಸಮೀಪದ‌ ಹೊಟೇಲ್‌ ಒಂದರಲ್ಲಿ ತಡರಾತ್ರಿ ಕರ್ತವ್ಯ ಮುಗಿಸಿ ರೂಮ್‌ ಕಡೆಗೆ ಸಾಗುತ್ತಿದ್ದ ಕಾರ್ಮಿಕರು ಚಿರತೆಯನ್ನು ಕಂಡು ಬೆಚ್ಚಿಬಿದ್ದ ಘಟನೆ ಸೋಮವಾರ ರಾತ್ರಿ ನಡೆದಿದೆ. ಚಿರತೆ ರಸ್ತೆಯಲ್ಲಿ ಹೋಗುತ್ತಿರುವುದು ಕಂಡು ಹೆದರಿದ ಕಾರ್ಮಿಕರು, ಕೆಲವರಿಗೆ ಮಾಹಿತಿ ನೀಡಿದ್ದಾರೆ. ಕೆಲವೇ ಸಮಯದಲ್ಲಿ ಚಿರತೆ ಪೊದೆಗಳ ಎಡೆಗೆ ಸಾಗಿ ಕಣ್ಮರೆಯಾಗಿದೆ ಎನ್ನುತ್ತಾರೆ ಕಾರ್ಮಿಕರು.

ಮಣ್ಣಪಳ್ಳ ವಾಯು ವಿಹಾರಿಗಳಿಗೆ ಆತಂಕ
ಮಣಿಪಾಲದ ಮಣ್ಣಪಳ್ಳ ಕೆರೆ ಸುತ್ತಮುತ್ತ ಗಿಡಗಂಟಿ ಪೊದೆಗಳು ಬೆಳೆದುಕೊಂಡಿದ್ದು, ಈ ಭಾಗದಲ್ಲಿಯೂ ಚಿರತೆ ಅಡಗಿರುವ ಸಾಧ್ಯತೆ ಇದೆ. ನಿತ್ಯ ನೂರಾರು ಮಂದಿ ಹಿರಿಯರು, ಮಕ್ಕಳು ಇಲ್ಲಿ ವಿಹಾರಕ್ಕೆ ಆಗಮಿಸುತ್ತಿದ್ದು, ಚಿರತೆ ಓಡಾಟದ ವಿಚಾರದಿಂದ ಆತಂಕಗೊಂಡು ಕೆಲವರು ವಿಹಾರಕ್ಕೆ ತೆರಳು ಹಿಂದೇಟು ಹಾಕುತ್ತಿದ್ದಾರೆ. ತತ್‌ಕ್ಷಣವೇ ಇಲ್ಲಿ ಅಗತ್ಯ ಭದ್ರತ ಸಿಬಂದಿ ನೇಮಕ ಮಾಡಬೇಕು ಎಂದು ಸ್ಥಳೀಯರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ರಾತ್ರಿ ಅರಣ್ಯ ಇಲಾಖೆ ಗಸ್ತು ಅವಶ್ಯ
ಮಣಿಪಾಲದಲ್ಲಿ ಚಿರತೆ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ. ಮಣಿಪಾಲದಲ್ಲಿ ಗಿಡ, ಮರ ಪೊದೆಗಳಿರುವ ಜಾಗದಲ್ಲಿ ಚಿರತೆ ಸೆರೆ ಹಿಡಿಯುವ ಬೋನು ಇರಿಸುವಂತೆ ಒತ್ತಾಯಿಸಿದ್ದಾರೆ.

“ಮಣಿಪಾಲ ಪರಿಸರದಲ್ಲಿ ಕಾಣಿಸಿ ಕೊಂಡ ಚಿರತೆ ಸೆರೆ ಹಿಡಿಯಲು ಇಲಾಖೆ ಎಲ್ಲ ರೀತಿಯಿಂದ ಕಾರ್ಯಯೋಜನೆ ರೂಪಿಸಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಇಲಾಖೆ ಸಿಬಂದಿ ಈಗಾಗಲೇ ಚಿರತೆ ಕಾಣಿಸಿಕೊಂಡ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರು ಚಿರತೆ ಕಾಣಿಸಿಕೊಂಡಲ್ಲಿ ತತ್‌ಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿ. ಮಣಿಪಾಲ ಎಂಡ್‌ಪಾಯಿಂಟ್‌ ಪ್ರದೇಶದ ಬಳಿ ಚಿರತೆ ಸೆರೆ ಹಿಡಿಯಲು ಬೋನು ಇರಿಸಲಾಗಿದೆ. ರಾತ್ರಿ ವೇಳೆ ಮಣಿಪಾಲ ಸುತ್ತಮುತ್ತಲಿನ ಪ್ರದೇಶದಲ್ಲಿ ಗಸ್ತು ತಿರುಗಿ ಪರಿಶೀಲನೆ ನಡೆಸುವಂತೆ ಅಧಿಕಾರಿ, ಸಿಬಂದಿಗೆ ಸೂಚಿಸಲಾಗಿದೆ. ಚಿರತೆ ಕಂಡರೆ ಕೂಡಲೇ ಆರ್‌ಎಫ್ಒ (9900816131), ಡಿಆರ್‌ಎಫ್ಒ (9449103163), ಉಡುಪಿ ಆರ್‌ಎಫ್ಒ ಕಚೇರಿ 0820-2523081 ಮಾಹಿತಿ ನೀಡಬಹುದು.” – ವಾರಿಜಾಕ್ಷಿ, ಆರ್‌ಎಫ್ಒ, ಅರಣ್ಯ ಇಲಾಖೆ, ಉಡುಪಿ.

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

5

Kaup: ಶಿಲಾಮಯ ಗುಡಿಯ ಮೆರುಗು ಹೆಚ್ಚಿಸಿದ ಕಾರ್ಕಳ, ಸಿರಾದ ಕಲ್ಲು

4(1

Manipal: ನಮ್ಮ ಸಂತೆಯಲ್ಲಿ ಜನ ಸಾಗರ

Namma-SANTHE-1

Manipal: ನಮ್ಮ ಸಂತೆಗೆ ಎರಡನೇ ದಿನವೂ ಅಭೂತಪೂರ್ವ ಸ್ಪಂದನೆ: ಇಂದೇ ಕೊನೆಯ ದಿನ

8

Karkala: ಚಾರ್ಚ್‌ಗಿಟ್ಟ ಮೊಬೈಲ್‌ ಸ್ಫೋ*ಟ; ಮನೆಗೆ ಬೆಂಕಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.