![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 7, 2021, 7:41 PM IST
ರಾಯ್ಪುರ್: ಛತ್ತೀಸ್ಗಡದಲ್ಲೊಬ್ಬ ಒಂದೇ ಮದುವೆ ಮಂಟಪದಲ್ಲಿ ಇಬ್ಬರು ಮಹಿಳೆಯರಿಗೆ ತಾಳಿ ಕಟ್ಟಿ ಸಂಸಾರ ಜೀವನ ನಡೆಸಲಾರಂಭಿಸಿದ್ದಾನೆ. ಆತನ ಮದುವೆ ಆಮಂತ್ರಣ, ಫೋಟೋ, ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಸ್ತಾರ್ ಜಿಲ್ಲೆಯ ಗ್ರಾಮವೊಂದರ ಚಂದು ಮೌರ್ಯನ ಡಬಲ್ ಪ್ರೇಮ ಪ್ರಸಂಗದ ಕಥೆಯೇ ಇದು.
ಸಣ್ಣ ಪ್ರಮಾಣದ ಕೃಷಿಕ ಮತ್ತು ಕೂಲಿ ಕಾರ್ಮಿಕನಾಗಿರುವ ಚಂದು ತೋಕಪಾಲ್ ಎಂಬಲ್ಲಿಗೆ ಮೂರು ವರ್ಷದ ಹಿಂದೆ ಕೆಲಸಕ್ಕೆ ಹೋಗಿದ್ದ. ಅಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ಸುಂದರಿ ಕಶ್ಯಪ್ ಎಂಬಾಕೆಯನ್ನು ಭೇಟಿಯಾದ. ಆಕೆಯ ಮೇಲೆ ಚಂದುಗೆ “ಮೊದಲ ನೋಟದ ಪ್ರೇಮ’ವಾಯಿತು. ನಂತರ ಅವರು ಫೋನ್ ಮೂಲಕ ನಿಕಟ ಸಂಪರ್ಕ ಇರಿಸಿಕೊಂಡಿದ್ದರು. ಒಂದು ವರ್ಷ ಕಳೆದ ಬಳಿಕ ಚಂದು ಇರುವ ಗ್ರಾಮಕ್ಕೆ ಹಸೀನಾ ಬಗೇಲ್ ಎಂಬ ಮತ್ತೂಬ್ಬ ಯುವತಿ ಆಕೆಯ ಬಂಧುವಿನ ಮದುವೆಗೆ ಆಗಮಿಸಿದ್ದಳು. ಅದಕ್ಕೆ ಬಂದಿದ್ದ ಚಂದು ಹಸೀನಾಳನ್ನು ನೋಡಿದ. ಈ ಪ್ರಕರಣದಲ್ಲಿ ಹಸೀನಾಗೆ ಚಂದುವಿನ ಮೇಲೆ ಲವ್ ಅಂಕುರಿಸಿತು. ಆದರೆ ಆತ ವಿಚಾರ ಅರುಹಿದಾಗ, ತನ್ನ ಜತೆಗೆ ಬಾಂಧವ್ಯ ಇರಿಸಲೇಬೇಕು ಎಂದು ಹಸೀನಾ ಪಟ್ಟು ಹಿಡಿದಳು. ಹೀಗೆ ಅವಳ ಜತೆಗೆ ಕೂಡ ಮಾತುಕತೆ ನಡೆಯುತ್ತಿತ್ತು.
ಇದನ್ನೂ ಓದಿ:ಷೇರುಪೇಟೆಗೆ ಅಮೆರಿಕ ಪ್ರತಿಕೂಲ: ಬಿಎಸ್ಇ ಸೂಚ್ಯಂಕ 80 ಪಾಯಿಂಟ್ಸ್ ಇಳಿಕೆ
ಒಂದು ದಿನ ಚಂದುವಿನ ಮನೆಗೆ ಹಸೀನಾ ಬಂದು ವಾಸ್ತವ್ಯ ಹೂಡುವುದಾಗಿ ಹೇಳಿದಳು. ಆ ಸುದ್ದಿ ಕೇಳಿ ಸುಂದರಿ ಕೂಡ ಪ್ರಿಯಕರನ ಮನೆಗೆ ಬಂದಳು. ಗ್ರಾಮದಲ್ಲಿ “ಪ್ರೇಮ ಪ್ರಸಂಗ’ ಮನೆ ಮಾತಾಯ್ತು. ಇದೆಂಥಾ ಜೀವನ ಎಂದು ಹಲವಾರು ಪ್ರಶ್ನಿಸಲಾರಂಭಿದಳು. ಕೊನೆಗೆ ಚಂದು ಒಂದೇ ಮದುವೆ ಮಂಪಟದಲ್ಲಿ ಇಬ್ಬರಿಗೂ ತಾಳಿ ಕಟ್ಟಿದ್ದಾನೆ. ಸುಂದರಿಯ ಮನೆಯವರು ಮದುವೆಯಿಂದ ದೂರ ಉಳಿದಿದ್ದರೆ, ಹಸೀನಾಳ ಮನೆಯವರು ಬಂದು ಜೋಡಿಗೆ ಶುಭ ಹಾರೈಸಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.