![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Apr 18, 2020, 7:04 PM IST
ಮಣಿಪಾಲ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೋವಿಡ್ 19 ಸಂಬಂಧ ಲಾಕ್ಡೌನ್ ಜಾರಿಯಾಗಿದ್ದು ಬಹುತೇಕ ವ್ಯವಹಾರಗಳು ಸ್ತಬ್ಧವಾಗಿವೆ. ಈ ರಾಷ್ಟ್ರಗಳಿಗೆ ಉದ್ಯೋಗ ಕಾರಣಕ್ಕೆ ತೆರಳಿದ ಬಹುತೇಕರು ಬರೀ ಕೈಯಲ್ಲಿ ಕುಳಿತಿದ್ದಾರೆ. ಈ ಕುರಿತಂತೆ ಸಿರಿಯಾ ದೇಶದ ಪಕ್ಕದಲ್ಲಿರುವ ಲೆಬನಾನ್ ಕಾರ್ಮಿಕರ ರಕ್ಷಣೆ ಮುಂದಾಗಬೇಕು ಎಂದು ಎನ್ಜಿಒಗಳು ಮನವಿ ಮಾಡಿವೆ. ಮಧ್ಯಪ್ರಾಚ್ಯಾದ್ಯಂತ ವಲಸೆ ಕಾರ್ಮಿಕರು ಉದ್ಯೋಗ ಕಳೆದು ಕೊಳ್ಳುವ ಭೀತಿಯಲ್ಲಿದ್ದಾರೆ.
ಕೊಲ್ಲಿ ರಾಜ್ಯಗಳು ಮತ್ತು ಸೌದಿ ಅರೇಬಿಯಾದ ಕೆಲವು ಭಾಗಗಳಲ್ಲಿ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಚ್ಚಿದ ವಿಮಾನ ನಿಲ್ದಾಣಗಳು ಕಾರ್ಮಿಕರನ್ನು ಕಟ್ಟಿಹಾಕಿವೆ. ಅತ್ತ ತಾಯ್ನಾಡಿಗೆ ತೆರಳಲು ಸಾಧ್ಯವಾಗುತ್ತಿಲ್ಲ, ಇತ್ತ ದುಡಿಯಲೂ ಸಾಧ್ಯವಾಗುತ್ತಿಲ್ಲ. ಲಾಕ್ಡೌನ್ ಪ್ರಾರಂಭವಾಗುವ ಮೊದಲೇ ಲೆಬನಾನ್ನ ಆರ್ಥಿಕ ಪರಿಸ್ಥಿತಿ ಕುಸಿದಿತ್ತು. ಬಹುತೇಕ ಆದಾಯದ ಮೂಲಗಳನ್ನು ಛಿದ್ರಗೊಳಿಸಿದ್ದವು.
ಇದರ ಜತೆಗೆ ಈಗ ಕೋವಿಡ್-19 ವೈರಸ್ ಹಾನಿಯೂ ಬಹುದೊಡ್ಡ ಸಮಸ್ಯೆಯಾಗಿದೆ. ಮನೆಯಲ್ಲಿ ಕೆಲಸ ಮಾಡುವ ಹೊರ ದೇಶದ ಕಾರ್ಮಿಕರಿಗೆ ಸಂಬಳ ಸಿಗಲಾರದೆಂಬ ಭಯ ಆರಂಭವಾಗಿದೆ.
ಕೆಲವು ಮನೆಗಳಲ್ಲಿ ಕಾರ್ಮಿಕರನ್ನು ತೀವ್ರವಾಗಿ ಹಿಂಸಿಸ ಲಾಗುತ್ತಿದ್ದು, ಅಪಾಯಕಾರಿ ಕೆಲಸಕ್ಕೆ ಒತ್ತಾಯಿಸಲಾಗುತ್ತಿದೆ. ಮನೆಗಳ ಒಳಗೆ ಸ್ವತ್ಛಗೊಳಿಸುವಿಕೆಗೆ ಬಳಸುತ್ತಿದ್ದಾರೆ. ಈಗ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದೇ ಇರುವ ಕಾರಣ ವೇತನವೂ ಸಿಗುವುದು ಅನುಮಾನವಾಗಿದ್ದು, ಅವರ ಭವಿಷ್ಯ ಕತ್ತಲೆಯಲ್ಲಿದೆ.
ಲೆಬನಾನ್ನಲ್ಲಿ 2.50 ಲಕ್ಷ ವಲಸೆ ಕಾರ್ಮಿಕರಿದ್ದಾರೆ. ಇವರಲ್ಲಿ ಮುಖ್ಯವಾಗಿ ಗೃಹ ಕಾರ್ಮಿಕರು ಹೆಚ್ಚಿದ್ದಾರೆ. ತಮ್ಮ ಉದ್ಯೋಗದಾತರ ಮನೆಗಳಲ್ಲಿ ಕೆಲಸ ಮಾಡಿ ಸಾಮಾನ್ಯವಾಗಿ ಅಲ್ಲೇ ವಾಸಿಸುತ್ತಾರೆ.
ಕೋವಿಡ್ 19 ಪೀಡಿತ ರಾಷ್ಟ್ರವಾದ ಇರಾನ್ನ ಸಮೀಪದಲ್ಲೇ ಈ ರಾಷ್ಟ್ರ ಇದೆ. ಅದಕ್ಕೆ ಹೋಲಿಸಿದರೆ ಕೊಲ್ಲಿ ರಾಜ್ಯಗಳಲ್ಲಿನ ಅಧಿಕೃತ ಕೊರೊನಾ ವೈರಸ್ ಸಂಖ್ಯೆಗಳು ತುಲನಾತ್ಮಕವಾಗಿ ಕಡಿಮೆ ಇದೆ. ಮೇ ತಿಂಗಳ ಕೊನೆಯಲ್ಲಿ ರಂಜಾನ್ ಅಂತ್ಯದ ವೇಳೆಗೆ ಈ ಪ್ರದೇಶದ ವಿಮಾನ ನಿಲ್ದಾಣಗಳು ತೆರೆಯುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಒಂದಿಷ್ಟು ಮಂದಿ ತಮ್ಮ ದೇಶಗಳಿಗೆ ತೆರಳುವ ಸಾಧ್ಯತೆ ಇದೆ. ಕೋವಿಡ್ 19 ಬಿಕ್ಕಟ್ಟು ಕೊಲ್ಲಿಯಾದ್ಯಂತ ಉದ್ಯೋಗವನ್ನು ಕುಂಠಿತಗೊಳಿಸಿದೆ. ಇದರಿಂದ ನಿರ್ಮಾಣ ವಲಯ, ಚಿಲ್ಲರೆ ವ್ಯಾಪಾರ ಮತ್ತು ಇತರ ಕ್ಷೇತ್ರಗಳಿಗೆ ಸಮಸ್ಯೆ ಆಗಿದೆ. ದೇಶಗಳ ಆರ್ಥಿಕ ಸ್ಥಿತಿಯ ಮೇಲೂ ಹೊಡೆತ ಬೀಳುವ ಆತಂಕ ಎದುರಾಗಿದೆ.
ಟೀಕೆಗೆ ಗುರಿ
ಲೆಬನಾನ್ಗೆ ವಲಸೆ ಬಂದ ಗೃಹ ಕಾರ್ಮಿಕರನ್ನು ಶೋಷಿಸುವ ಅಥವಾ ನಿಂದಿಸುವ ಉದ್ಯೋಗದಾತರರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಸರಕಾರ ಸ್ಪಷ್ಟವಾಗಿ ಎಚ್ಚ ರಿಸದಿರುವುದು ಟೀಕೆಗೆ ಗುರಿಯಾಗಿದೆ. ಕೋವಿಡ್-19ನಂತಹ ಸಾಂಕ್ರಾಮಿಕ ರೋಗ ಹರಡುವ ಸಮಯದಲ್ಲಿ ಕಾರ್ಮಿಕರಿಗೂ ಆರೋಗ್ಯ ಸೇವೆಗೆ ಅವಕಾಶವಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅಮ್ನೆಸ್ಟಿ ಇಂಟರ್ನ್ಯಾಶನಲ್ನ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಘಟಕ ಮಾಧ್ಯಮಗಳಿಗೆ ತಿಳಿಸಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.