![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Sep 13, 2023, 12:23 PM IST
ಮುಂಬೈ: ಕಟುಕ ತಂದೆಯೊಬ್ಬ ಎಂಟು ದಿನದ ಹಸುಳೆಯ ಬಾಯಿಯೊಳಗೆ ತಂಬಾಕು ತುಂಬಿಸಿ ಕೊಲೆಗೈದಿರುವ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ಜಲ್ ಗಾಂವ್ ಜಿಲ್ಲೆಯ ಜಮ್ಮೇರ್ ತಾಲೂಕಿನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Belagavi: ನಿಜಗುಣಾನಂದ ಸ್ವಾಮೀಜಿಗೆ ಜೀವ ಬೆದರಿಕೆ: ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಈ ಘಟನೆಯನ್ನು ಆಶಾ ಕಾರ್ಯಕರ್ತೆಯೊಬ್ಬರು ಬೆಳಕಿಗೆ ತಂದಿದ್ದು, ಬಳಿಕ ಪೊಲೀಸರು ಆರೋಪಿ ಗೋಕುಲ್ ಗೋತಿರಾಮ್ ಜಾಧವ್ (30ವರ್ಷ) ಎಂಬಾತನನ್ನು ಬಂಧಿಸಿದ್ದರು.
ಜಾಧವ್ ಗೆ ಎರಡು ಹೆಣ್ಣುಮಕ್ಕಳಿದ್ದು, ಸೆಪ್ಟೆಂಬರ್ 2ರಂದು ವಾಕೋಡ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆತನ ಪತ್ನಿ ಮೂರನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮೂರನೆಯದ್ದು ಹೆಣ್ಣು ಮಗುವಾಗಿದ್ದಕ್ಕೆ ಅಸಮಾಧಾನಗೊಂಡ ಜಾಧವ್, ಸೆಪ್ಟೆಂಬರ್ 10ರಂದು ಪುಟ್ಟ ಮಗುವಿನ ಬಾಯಿಯೊಳಗೆ ತಂಬಾಕು ತುಂಬಿದ್ದ. ಇದರ ಪರಿಣಾಮ ಮಗು ಕೊನೆಯುಸಿರೆಳೆದಿತ್ತು.
ಈತನ್ಮಧ್ಯೆ ಆಶಾ ಕಾರ್ಯಕರ್ತೆ ಮಗುವಿನ ಜನನವನ್ನು ದಾಖಲಿಸಿಕೊಳ್ಳುವ ನಿಟ್ಟಿನಲ್ಲಿ ಜಾಧವ್ ಮನೆಗೆ ಭೇಟಿ ನೀಡಿದ್ದರು. ಆದರೆ ಜಾಧವ್ ಪತ್ನಿ ಮಗು ಇಲ್ಲ ಎಂಬುದಾಗಿ ಹೇಳಿದ್ದಳು. ನಂತರ ಈ ವಿಚಾರವನ್ನು ಆಶಾ ಕಾರ್ಯಕರ್ತೆ ವೈದ್ಯಾಧಿಕಾರಿಗಳಿಗೆ ತಿಳಿಸಿದ್ದರು. ನಂತರ ವೈದ್ಯಾಧಿಕಾರಿ ಡಾ.ಸಂದೀಪ್ ಕುಮಾವತ್ ಜಾಧವ್ ಮನೆಗೆ ಭೇಟಿ ನೀಡಿ ಮಗುವಿನ ಬಗ್ಗೆ ವಿಚಾರಿಸಿದ್ದರು.
ಆರಂಭದಲ್ಲಿ ಮಗು ಅನಾರೋಗ್ಯದಿಂದ ಸಾವನ್ನಪ್ಪಿರುವುದಾಗಿ ಜಾಧವ್ ಪತ್ನಿ ತಿಳಿಸಿದ್ದಳು. ಕೊನೆಗೆ ವೈದ್ಯರು ಜಾಧವ್ ನನ್ನು ಪ್ರಶ್ನಿಸತೊಡಗಿದಾಗ, ಮಗುವನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಮಗುವಿನ ಬಾಯಿಯೊಳಗೆ ತಂಬಾಕು ತುಂಬಿದ್ದರಿಂದ ಸಾವನ್ನಪ್ಪಿದ್ದು, ನಂತರ ಅದೇ ದಿನ ರಾತ್ರಿ ಗುಂಡಿ ತೋಡಿ ಶವವನ್ನು ಹೂತು ಹಾಕಿರುವುದಾಗಿ ಜಾಧವ್ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಘಟನೆ ಬಗ್ಗೆ ವೈದ್ಯಾಧಿಕಾರಿ ಡಾ.ಸಂದೀಪ್ ಅವರು ನೀಡಿರುವ ಮಾಹಿತಿ ಆಧಾರದ ಮೇಲೆ ಪೊಲೀಸರು ಜಾಧವ್ ವಿರುದ್ಧ ದೂರು ದಾಖಲಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
You seem to have an Ad Blocker on.
To continue reading, please turn it off or whitelist Udayavani.