Kudremukha ವಲಯದಲ್ಲಿ ಇನ್ನಷ್ಟು ಸೂಕ್ಷ್ಮ ಪ್ರದೇಶಗಳು ಚಾರಣಕ್ಕೆ ಮುಕ್ತ?

ಸ್ಥಳೀಯರ ಆಗ್ರಹ ನೆಪ ; ಆರ್ಥಿಕ ಲಾಭದ ಉದ್ದೇಶ ಎಂಬುದು ಪರಿಸರಪ್ರೇಮಿಗಳ ಆರೋಪ

Team Udayavani, Jun 24, 2024, 7:10 AM IST

Kudremukha ವಲಯದಲ್ಲಿ ಇನ್ನಷ್ಟು ಸೂಕ್ಷ್ಮ ಪ್ರದೇಶಗಳು ಚಾರಣಕ್ಕೆ ಮುಕ್ತ?

ಮಂಗಳೂರು: ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ತಾಣಗಳನ್ನು ಚಾರಣಕ್ಕೆ ತೆರೆದಿರಿಸಿದ ದುಷ್ಪರಿಣಾಮವನ್ನು ಅರಿತಿರುವ ಹೊರತಾಗಿಯೂ ಅರಣ್ಯ ಇಲಾಖೆ ಕುದುರೆಮುಖ ವಲಯದ ಅನೇಕ ಸ್ಥಳಗಳನ್ನು ಚಾರಣಕ್ಕೆ ಮುಕ್ತಗೊಳಿಸಲು ಹೊರಟಂತಿದೆ.

ಕೆಲವು ಸ್ಥಳೀಯ ಜನಪ್ರತಿನಿಧಿಗಳು ತಮ್ಮ ವೈಯುಕ್ತಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಚಾರಣಗಳನ್ನು ಆರಂಭಿಸಲು ಒತ್ತಾಸೆ ಹೂಡಿರುವುದು ತಿಳಿದುಬಂದಿದೆ.

ಪ್ರಸ್ತುತ ಇದಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ಯಾವುದೇ ಕಾರಣಕ್ಕೂ ಪರಿಸರ ಸೂಕ್ಷ್ಮ ತಾಣಗಳಿಗೆ ಅನುಮತಿ ನೀಡಬಾರದು ಎನ್ನುವ ಮನವಿಯನ್ನು ರಾಜ್ಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನೀಡಿದ್ದಾರೆ.

ಕಳೆದ ಜನವರಿಯಲ್ಲಿ ಕುಮಾರ ಪರ್ವತಕ್ಕೆ ಒಂದೇ ದಿನ 4,000ಕ್ಕೂ ಅಧಿಕ ಮಂದಿ ಚಾರಣಿಗರು ಹೋಗಿ ಸಂಚಾರ ದಟ್ಟಣೆ ಉಂಟಾಗಿತ್ತು. ಅದನ್ನು ಮಾಧ್ಯಮಗಳಲ್ಲಿ ನೋಡಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತಾತ್ಕಾಲಿಕವಾಗಿ ಚಾರಣವನ್ನೇ ಸ್ಥಗಿತಗೊಳಿಸಿದ್ದರು.

ಎಳನೀರು, ಬಂಗಾರ ಪಲ್ಕೆ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಎಳನೀರು ಜಲಪಾತ, ಬಂಗಾರಪಲ್ಕೆ ಹಾಗೂ ಸೂಜಿಕಲ್ಲು ಗುಡ್ಡಗಳನ್ನು ಸಾರ್ವಜನಿಕ ಪ್ರವೇಶಕ್ಕಾಗಿ ತೆರೆಯಲು ಯೋಜಿಸಲಾಗುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಸ್ಥಳಗಳು ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ ಹಾಟ್‌ಸ್ಪಾಟ್‌ಗೆ ಸೇರಿವೆ. ಅಲ್ಲದೆ ಆನೆ ಕಾರಿಡಾರ್‌ನ ಭಾಗವೂ ಆಗಿವೆ. ಒಮ್ಮೆ ಚಾರಣಿಗರನ್ನು ಒಳಗೆ ಬಿಟ್ಟಲ್ಲಿ ಕುಮಾರ ಪರ್ವತ, ಕುದುರೆಮುಖ, ನೇತ್ರಾವತಿ ಶಿಖರದಂತೆ ಇವೂ ಅನಗತ್ಯವಾಗಿ ಮಾನವನ ಒತ್ತಡಕ್ಕೆ ಒಳಗಾಗಲಿವೆ. ಮಾಲಿನ್ಯ ಒಂದೆಡೆಯಾದರೆ, ದೊಡ್ಡ ಸಂಖ್ಯೆಯಲ್ಲಿನ ಚಾರಣಿಗರಿಂದ ಪರಿಸರದ ಸಮತೋಲನವೂ ಹದಗೆಡಲಿದೆ ಎಂದು ಸ್ಥಳೀಯ ಪರಿಸರ ಸಂಘಟನೆಯಾದ “ಪರಿಸರ ತಪಸ್ಸು’ ಇದರ ಸಂಚಾಲಕ ಪವನ್‌ ಕಾಕತ್ಕರ್‌ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಬೇಡಿಕೆಯ ನೆಪ?
ಇಲ್ಲಿ ಚಾರಣ ಆರಂಭಿಸಲು ಸ್ಥಳೀಯರ ಒತ್ತಾಯ ಇದೆ ಎನ್ನುವ ನೆಪವನ್ನು ಮುಂದಿಡಲಾಗುತ್ತಿದ್ದು, ಉಳ್ಳವರಿಂದ ಹೋಮ್‌ಸ್ಟೇ ಉದ್ಯಮಕ್ಕೆ ಪೂರಕವಾಗಿ ಆರ್ಥಿಕ ಲಾಭಕ್ಕಾಗಿ ಮಾಡುತ್ತಿರುವ ಸಾಧ್ಯತೆಗಳಿವೆ ಎನ್ನುತ್ತಾರೆ ಪರಿಸರ ಪ್ರಿಯರು.

ಬಂಗಾರಪಲ್ಕೆ ಪ್ರದೇಶವು ಬಹಳ ಆಳವಾದ ಜಾಗವಾಗಿದ್ದು, ಇದಕ್ಕೆ ಸರಿಯಾದ ದಾರಿಗಳಿಲ್ಲ. ಇಲ್ಲಿ ಈ ಹಿಂದೆ ಮಣ್ಣು ಕುಸಿದು ಯುವಕನೊಬ್ಬ ಸಾವನ್ನಪ್ಪಿದ್ದ. ಇದು ಅಪಾಯಕಾರಿ ಎನ್ನುವ ಹಣೆಪಟ್ಟಿಯನ್ನೂ ಪಡೆದುಕೊಂಡಿದ್ದು, ಚಾರಣಕ್ಕೆ ಸೂಕ್ತವಲ್ಲ ಎನ್ನುವುದು ಅವರ ಅಭಿಪ್ರಾಯ.

ಹೊಸ ಸ್ಥಳಗಳ ಸೇರ್ಪಡೆ ಪರಿಶೀಲನೆಯಲ್ಲಿ
ಕುದುರೆಮುಖ ಅರಣ್ಯ ವ್ಯಾಪ್ತಿಯ 2-3 ಹೊಸ ಸ್ಥಳಗಳನ್ನು ಚಾರಣಕ್ಕೆ ಸೇರಿಸಲು ಸ್ಥಳೀಯರಿಂದ ಒತ್ತಾಯವಿದೆ. ಅದೇ ರೀತಿ ಹಲವರ ವಿರೋಧವೂ ಇದೆ. ಆದರೆ ಜವಾಬ್ದಾರಿಯುತರಿಗೆ ನಿಯಂತ್ರಿತ ವಾಗಿ ಚಾರಣಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವುದು ಇಲಾಖೆಯ ಅಭಿಪ್ರಾಯ. ಕುದುರೆಮುಖ ವಲಯದ ಧಾರಣಾ ಶಕ್ತಿಯ ಅನ್ವಯ ದಿನಕ್ಕೆ 300 ಮಂದಿಗೆ ಮಾತ್ರ ಗರಿಷ್ಠ ಅನುಮತಿ ನೀಡಲಾಗುತ್ತಿದೆ. ಇದೇಮಿತಿಯಲ್ಲಿ ಹೊಸ ಸ್ಥಳಗಳಿಗೂ ಅನುಮತಿ ಕೊಡುವ ಬಗ್ಗೆ ಸದ್ಯ ಚರ್ಚೆ ನಡೆಯು ತ್ತಿದ್ದು, ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಕುದುರೆ ಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್‌ ಬಾಬು ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.