ನವಮಾಸ ನಮ್ಮನ್ನು ಹೊತ್ತು, ಹೆರುವ ಆಕೆಗೆ ಕೇವಲ ಒಂದು ದಿನ ಇತ್ತರೆ ಸಾಕೇ?


Team Udayavani, May 10, 2020, 1:18 PM IST

Mother-08

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಅಮ್ಮಾ ಎಂಬ ಪದದಲ್ಲೇ ಮಮತೆಯ ಕಣಜವಿದೆ, ಭಾವನೆಯ ಸೆಳೆತವಿದೆ, ಪ್ರೀತಿಯ ಪ್ರತಿಬಿಂಬವಿದೆ.

ಅದೇನೋ ಎಲ್ಲವನ್ನು ಸೈರಿಸುವ ಅದ್ಭುತ ಸಾಮರ್ಥ್ಯ ಆ ದೇವತೆಗಿದೆ. ಹೌದು ಒಂದೊಂದು ದಿನಗಳಿಗೂ ಅದರದೇ ಆದ ಮಹತ್ವವಿದೆ.

ಅದರಂತೆ ವಾಟ್ಸ್ಯಾಪ್ ಸ್ಟೇಟಸ್ ಗಳಲ್ಲಿ ರಾರಾಜಿಸುವಂತೆ ಹ್ಯಾಪಿ ಮದರ್ಸ್ ಡೇ ಅಂತನೂ ಹಾಕೊಂಡಿರುತ್ತೇವೆ. ನಾವು ಹುಟ್ಟುವ ಮೊದಲೇ ನಮ್ಮ ಹೆತ್ತು ಹೊತ್ತ ಆಕೆಗೆ ಕೇವಲ ಒಂದು ದಿನ ಇತ್ತರೆ ಸಾಕೇ?

ಬಡತನವಿರಲಿ, ನೋವಿರಲಿ ಆಕೆ ಮಾತ್ರ ತನ್ನ ಸಂಸಾರದ ಬಂಡಿಯನ್ನು ಸಮಾನವಾಗಿ ನೂಕುತ್ತಾ ಬಾಳದಾರಿಯಲ್ಲಿ ಮುನ್ನಡೆಯುವವಳು. ತನಗೆ ಮಾತ್ರ ಅಧರದಲ್ಲಿ ನೋವ ಅದುಮಿಟ್ಟು ಸದಾ ತನ್ನ ಕನಸ ಚಿಗುರ ಲತೆಗಳಿಗೆ ನೀರೆರೆದು ಪೋಷಿಸುವವಳು.

ಇಂದು ತನ್ನದೇ ಮಕ್ಕಳ ಕಾಲ ಕೆಳಗೆ ಕೆಲಸ ಮಾಡುತ್ತಾ, ಮನೆಯಂತಿರೋ ವೃದ್ಧಾಶ್ರಮದ ಆಶ್ರಯ ಪಡೆಯುತ್ತಾ ಹೇಗೋ ದಿನ ದೂಡುವಳು ಅಮ್ಮ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಏನೂ ಕೊರತೆಯಿಲ್ಲ ಅಲ್ಲಿ ಮಾತ್ರ ‘ಐ ಲವ್ ಯೂ ಅಮ್ಮ’. ಬದುಕು ಯಾಂತ್ರಿಕವಾಗಿದೆ ನಿಜ. ಆದರೆ ಕೂತು ಉಣ್ಣುವ ಪ್ರಾಯದಲ್ಲಿ ಯಂತ್ರದಂತೆ ದುಡಿಸಿ ನಮ್ಮ ಉದರವ ನಾವು ಸಾಕುವುದರಲ್ಲಿ ಏನಾದರೂ ಪ್ರಯೋಜನವಿದೆಯೇ?

ಈ ಲಾಕ್ ಡೌನ್ ರಜೆಯಲ್ಲಂತೂ ತಾಯಂದಿರಿಗೆ ಬಿಡುವಿಲ್ಲದ ಕಾಯಕ. ಬೆಳಗ್ಗಿನ ಉಪಾಹಾರದಿಂದ ಹಿಡಿದು ರಾತ್ರಿಯ ಭೋಜನದವರೆಗೆ ಆಕೆ ಎಲ್ಲರ ಹೊಟ್ಟೆ ತಣಿಸುವಲ್ಲೇ ಕಷ್ಟ ಪಡುತ್ತಾ ದಿನ ದೂಡುತ್ತಾಳೆ.

ಸಂಬಳವಿಲ್ಲದೆ ದುಡಿಯುವ ಆ ಮನಸ್ಸಿಗೆ ಮತ್ತು ದೇಹಕ್ಕೆ ಎಂದೂ ದಣಿಯದು. ತನ್ನ ಕುಟುಂಬವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಆಕೆ ಹೊಸ ಯುಗವಿದ್ದಂತೆ.

ತನ್ನ ಹೆಗಲಿಗೆ ಕೈ ಇತ್ತು ಬಾಳ ದಾರಿಯಲ್ಲಿ ಸಂಗಾತಿಯಾಗಿರುವ ಗಂಡನ ಮೇಲೆ ಅದೆಷ್ಟೋ ಬೆಟ್ಟದಷ್ಟು ಆಸೆ ಕನಸ ಹೊತ್ತು ನಮಗಾಗಿ ಜೀವದ ಹಂಗು ತೊರೆದು ಬಾಳ ಸವೆಸುವ ಪ್ರಪಂಚದ ಏಕೈಕ ಜೀವ ಎಂದರೆ ಅದು ಜನ್ಮವಿತ್ತ ಜನನಿ.

ತಾಯಂದಿರ ದಿನಾಚರಣೆಯ ಈ ಶುಭ ಘಳಿಗೆ ಕೇಳುವುದೊಂದೇ ಗೆಳೆಯರೇ ಅದೆಷ್ಟೋ ಅನಾಥ ಮಕ್ಕಳು ಅಮ್ಮಾ ಎಂದು ಕರೆಯಲು ಹಾತೊರೆಯುತ್ತಿರಲು, ಅದ ಕರೆಯೋ ಭಾಗ್ಯ ನಮ್ಮ ಹಣೆಬರಹದಲ್ಲಿಲ್ಲ ಎಂದು ಶಪಿಸಲು ಇರುವಷ್ಟು ದಿನ ಮಾತೆಯಂದಿರನ್ನು ಪ್ರೀತಿಯಿಂದ ಸಲಹಿ, ಅವರ ಕನಸ ಬೆನ್ನ ಹತ್ತಿ ಸಾಗಿ.

ಬೆಳೆದು ದೊಡ್ಡವಳಾದಾಗ ವರ್ಷಂಪ್ರತಿ ಈ ದಿನ ಎಚ್ಚರಿಸುತ್ತದೆ ಲೇಖನಿಯು ಗೀಚುವ ಅಕ್ಷರದೊಳು ಅದ ಹಿಡಿದ ಹಸ್ತದೊಳು ನೀ ಸ್ಪರ್ಶವಿತ್ತಂತೆ ಭಾಸ ಮಾಡುತ್ತಾ ಕೋರಲು ಶುಭಾಶಯ.

ಮಿಸ್ ಯೂ ಅಮ್ಮ…

– ಅರ್ಪಿತಾ ಕುಂದರ್, MCJ, ವಿವೇಕಾನಂದ ಕಾಲೇಜು, ಪುತ್ತೂರು

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು

ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು

‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….

‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….

ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು

ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು

Mother-09

ನಾನು ಅಮ್ಮನ ಕನಸಿನಲ್ಲಿ ಎಚ್ಚರವಾಗಿರುತ್ತೇನೆ, ಅವಳು ನನ್ನ ಕನಸಿನಲ್ಲಿ ಎಚ್ಚರವಾಗಿರುತ್ತಾಳೆ

‘ಜನನಿ ಮತ್ತು ಜನ್ಮಭೂಮಿ’; ಹೆತ್ತ ತಾಯಿ ಮತ್ತು ಹೊತ್ತ ತಾಯಿಯನ್ನು ನೆನಪಿಸಿಕೊಳ್ಳುವ ಸುದಿನ

‘ಜನನಿ ಮತ್ತು ಜನ್ಮಭೂಮಿ’; ಹೆತ್ತ ತಾಯಿ ಮತ್ತು ಹೊತ್ತ ತಾಯಿಯನ್ನು ನೆನಪಿಸಿಕೊಳ್ಳುವ ಸುದಿನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.