![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Feb 23, 2023, 9:42 AM IST
ಉಡುಪಿ: ಡಿಜಿಟಲ್ ಕೋರ್ಸ್ಗಳ ಮೂಲಕ ಎಂಜಿಎಂ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ತರಬೇತಿ ಒದಗಿಸುವ ಉದ್ದೇಶ ದಿಂದ ಮಣಿಪಾಲ ಟೆಕ್ನಾಲಜಿಸ್ ಲಿಮಿಟೆಡ್ನ ಡಿಜಿಟಲ್ ಸೊಲ್ಯೂಶನ್ ವಿಭಾಗವು ಎಂಜಿಎಂ ಸಂಧ್ಯಾ ಕಾಲೇಜಿನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಬುಧವಾರ “ಉದಯವಾಣಿ’ಯ ಮಣಿಪಾಲದ ಕೇಂದ್ರ ಕಚೇರಿಯಲ್ಲಿ ನಡೆದ ಒಡಂಬಡಿಕೆ ಕರಾರುಪತ್ರಕ್ಕೆ ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷರಾದ ಟಿ. ಸತೀಶ್ ಯು. ಪೈ ಸಮ್ಮುಖದಲ್ಲಿ ಮಣಿಪಾಲ ಟೆಕ್ನಾಲಜಿಸ್ ಸಂಸ್ಥೆಯ ಎಂಡಿ ಹಾಗೂ ಸಿಇಒ ಅಭಯ್ ಗುಪ್ತೆ ಹಾಗೂ ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ್ ನಾಯ್ಕ ಸಹಿ ಹಾಕಿದರು.
ಪ್ರಾರಂಭಿಕವಾಗಿ ಎಂಜಿಎಂ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸ್ಗಳ ಬಗ್ಗೆ ಪ್ರಸೆಂಟೇಷನ್ ಮೂಲಕ ತಿಳುವಳಿಕೆ ನೀಡುವುದರೊಂದಿಗೆ ಕೌಶಲಾಧಾರಿತ ಆ್ಯನಿಮೇಶನ್, ಕಂಟೆಂಟ್ ಬರವಣಿಗೆ ಸಹಿತ 16 ವಿವಿಧ ಕೋರ್ಸ್ಗಳ ತರಬೇತಿ ನೀಡಿ ಅವರಿಗೆ ಉದ್ಯೋಗಾವಕಾಶ ಕಲ್ಪಿಸುವ ಪ್ರಯತ್ನವೂ ನಡೆಯಲಿದೆ. 2ನೇ ಹಂತದಲ್ಲಿ ಯುಜಿಸಿ ಮತ್ತು ರಾಷ್ಟ್ರೀಯ ಕೌಶಲಾಭಿವೃದ್ಧಿ ಮಂಡಳಿ(ಎನ್ಎಸ್ ಡಿಸಿ)ಯ ಅನುಮೋದನೆಯೊಂದಿಗೆ ಪದವಿ ಕೋರ್ಸ್ಗಳನ್ನು ಪ್ರಾರಂಭಿಸುವ ಉದ್ದೇಶ ಹೊಂದಲಾಗಿದೆ.
ಡಿಜಿಟಲ್ ಸೊಲ್ಯೂಶನ್ಸ್ನ ಬಿಝಿನೆಸ್ ಹೆಡ್ ಹಾಗೂ ಉಪಾಧ್ಯಕ್ಷರಾದ ಗುರುಪ್ರಸಾದ್ ಕಾಮತ್, ಲರ್ನಿಂಗ್ ಇನ್ನೋವೇಶನ್ಸ್ ಆ್ಯಂಡ್ ಕಂಟೆಂಟ್ ನಿರ್ದೇಶಕ ದರ್ಶನ್ ಪಾಟೀಲ್, ಸೊಲ್ಯೂಷನ್ ಸ್ಟ್ರಾಟಜಿಸ್ಟ್ ಕೆ. ವಿಘ್ನೇಶ್ ಕಾಮತ್, ಕಾಲೇಜಿನ ಪ್ರಾಂಶುಪಾಲ ಪ್ರೊ| ಲಕ್ಷ್ಮೀ ನಾರಾಯಣ ಕಾರಂತ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಡಾ| ಎಂ. ವಿಶ್ವನಾಥ ಪೈ, ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಿಕೆ ಡಾ| ಮಲ್ಲಿಕಾ ಎ. ಶೆಟ್ಟಿ ಹಾಜರಿದ್ದರು.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
You seem to have an Ad Blocker on.
To continue reading, please turn it off or whitelist Udayavani.