![Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು](https://www.udayavani.com/wp-content/uploads/2025/02/BASSI-415x234.jpg)
![Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು](https://www.udayavani.com/wp-content/uploads/2025/02/BASSI-415x234.jpg)
Team Udayavani, Oct 23, 2024, 12:41 AM IST
ಮೂಲ್ಕಿ: ಇಲ್ಲಿನ ಅಕ್ಕಸಾಲಿಗರ ಕೇರಿಯ ಮನೆಯೊಂದರಲ್ಲಿ ಚಿರತೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದ ಮರುದಿನವೇ ಮತ್ತೊಂದು ಚಿರತೆ ಅಲ್ಲಲ್ಲಿ ಸಂಚರಿಸುತ್ತಿರುವ ಬಗ್ಗೆ ಸುದ್ದಿಯಾಗಿದೆ.
ಅಕ್ಕಸಾಲಿಗರ ಕೇರಿಯಲ್ಲಿರುವ ಮೂಲ್ಕಿಯ ಗೀತಾ ಜುವೆಲ್ಲರ್ಸ್ ಮಾಲಕ ನಾಗರಾಜ ಆಚಾರ್ಯ ಅವರ ಮನೆಯ ಆವರಣದ ಒಳಗೆ ಸಂಜೆ 6.30ರ ವೇಳೆಗೆ ಬಂದಿದ್ದ ಚಿರತೆ ಕಾರು ನಿಲ್ಲಿಸುವ ಜಾಗದಲ್ಲಿದ್ದ ಬೆಕ್ಕೊಂದನ್ನು ಹಿಡಿದುಕೊಂಡು ಹೋಗಿರುವುದು ಅವರ ಸಿಸಿಟಿವಿ ದೃಶ್ಯಗಳಿಂದ ದೃಢವಾಗಿದೆ. ಮರುದಿನ ಕೊಯ್ನಾರ್ ಪರಿಸರ ಮತ್ತು ವಿಜಯ ಕಾಲೇಜು ರಸ್ತೆಯ ಯೂನಿಯನ್ ಕ್ಲಬ್ ಬಳಿಯ ರಸ್ತೆಯಲ್ಲಿ ಚಿರತೆಯನ್ನು ಕಂಡಿರುವ ಬಗ್ಗೆ ಸ್ಥಳೀಯರು ಉದಯವಾಣಿಗೆ ತಿಳಿಸಿದ್ದಾರೆ.
ಮೂಲ್ಕಿ ಕೊಯ್ನಾರು, ಅಕ್ಕಸಾಲಿಗರ ಕೇರಿ ಹಾಗೂ ವಿಜಯ ಕಾಲೇಜು ರಸ್ತೆ ಸಮೀಪದ ನಿವಾಸಿಗಳು ರಾತ್ರಿಯಾಗುವಷ್ಟರಲ್ಲಿ ಮನೆ ಸೇರಿಕೊಳ್ಳುವುದು ಸೂಕ್ತ ಎಂದು ಇಲಾಖೆ ತಿಳಿಸಿದೆ. ನಾಗರಾಜ ಅಚಾರ್ಯಅವರ ಮನೆಯ ಕಾಂಪೌಂಡ್ ಬಳಿ ಅರಣ್ಯ ಇಲಾಖೆಯನ್ನು ಸೆರೆ ಹಿಡಿಯಲು ಗೂಡು ಇರಿಸಿದೆ.
Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು
Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್ ಪತ್ರಿಕೆ
Mangaluru: ನದಿ-ಕಡಲು ಸಂಗಮದ ಸನಿಹದಲ್ಲೇ ಪ್ರವಾಸಿ ಸೇತುವೆ!
ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ
Bollywood: ರೀ-ರಿಲೀಸ್ ಗಳಿಕೆಯಲ್ಲಿ ʼತುಂಬಾಡ್ʼ ಮೀರಿಸಿದ ʼಸನಮ್ ತೇರಿ ಕಸಮ್ʼ
You seem to have an Ad Blocker on.
To continue reading, please turn it off or whitelist Udayavani.