Mumbai: ಸಿದ್ಧಿಕಿಗೆ ದಾವೂದ್ ಸಂಪರ್ಕ ಇದ್ದಿದ್ದಕ್ಕೆ ಹ*ತ್ಯೆ: ಬಿಷ್ಣೋಯ್ ಗ್ಯಾಂಗ್ ಸದಸ್ಯ
ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ, ಶೂಟರ್ ಫೋನ್ನಲ್ಲಿ ಜೀಶಾನ್ ಫೋಟೋ ಪತ್ತೆ
Team Udayavani, Oct 20, 2024, 7:40 AM IST
ಮುಂಬೈ: ‘ಬಾಬಾ ಸಿದ್ಧಿಕಿ ಒಳ್ಳೆಯ ಮನುಷ್ಯ ಅಲ್ಲ, ಅವರಿಗೆ ದಾವೂದ್ ಇಬ್ರಾಹಿಂ ಜತೆ ಸಂಪರ್ಕ ಇತ್ತು. ಅದಕ್ಕಾಗಿ ಅವರನ್ನು ಕೊಲ್ಲಲಾಯಿತು’ ಎಂದು ಬಿಷ್ಣೋಯ್ ಗ್ಯಾಂಗ್ನ ಸದಸ್ಯನೊಬ್ಬ ಆಘಾತಕಾರಿ ಹೇಳಿಕೆ ನೀಡಿದ್ದಾನೆ.
ಇತ್ತೀಚೆಗೆ ಉತ್ತರಪ್ರದೇಶದ ಮಥುರಾದಲ್ಲಿ ಬಂಧನಕ್ಕೊಳಗಾದ ಯೋಗೇಶ್ ದೆಹಲಿಯ ಜಿಮ್ ಮಾಲೀಕನ ಹತ್ಯೆ ಆರೋಪಿ. “ಸಿದ್ಧಿಕಿ ವಿರುದ್ಧ ಮುಂಬೈ ಪೊಲೀಸರು ಮಹಾರಾಷ್ಟ್ರ ಸಂಘಟಿತ ಅಪರಾಧ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ದಾವೂದ್ ಜತೆ ಸಂಪರ್ಕ ಇತ್ತು. ಹಾಗಾಗಿ ಕೊಲ್ಲಲಾಯಿತು’ ಎಂದು ಪೊಲೀಸರ ವಿಚಾರಣೆ ವೇಳೆ ಆತ ಮಾಹಿತಿ ನೀಡಿದ್ದಾರೆ.
50 ಲಕ್ಷ ಬೇಡಿಕೆ:
ಈ ನಡುವೆ, ಶುಕ್ರವಾರ ಬಂಧಿತರಾದ 5 ಆರೋಪಿಗಳು ಸಿದ್ಧಿಕಿ ಹತ್ಯೆಗೆ 50 ಲಕ್ಷ ರೂ. ಬೇಡಿಕೆಯಿಟ್ಟಿದ್ದರು. ಆದರೆ ಹಣದ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ, ಸಿದ್ದಿಕಿಯವರು ರಾಜಕೀಯವಾಗಿ ಪ್ರಭಾವಯುತವಾಗಿದ್ದರಿಂದ ಹಿಂದೆ ಸರಿದಿದ್ದರು. ಬಳಿಕ ಶೂಟರ್ಗಳಿಗೆ ವಾಹನ ಮತ್ತಿತರ ವಸ್ತುಗಳ ಪೂರೈಕೆಗೆ ಸಹಾಯ ಮಾಡಲು ಒಪ್ಪಿದ್ದರು ಎನ್ನಲಾಗಿದೆ.
ಈ ನಡುವೆ, ತನಿಖೆಯಲ್ಲಿ ಶೂಟರ್ ಒಬ್ಬನ ಸ್ನ್ಯಾಪ್ಚಾಟ್ ಖಾತೆಯಲ್ಲಿ ಸಿದ್ಧಿಕಿ ಪುತ್ರ ಝೀಶಾನ್ ಫೋಟೋ ಸಿಕ್ಕಿದೆ. ಸಾಕ್ಷ್ಯಗಳು ಉಳಿಯಬಾರದೆಂದು ಆರೋಪಿಗಳು ಸ್ನ್ಯಾಪ್ಚಾಟ್ ಮೂಲಕ ಸಂಪರ್ಕಿಸುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: ಸಿಆರ್ಪಿಎಫ್ ಶಾಲೆ ಬಳಿ ಭಾರೀ ಸ್ಪೋಟ; ಸ್ಥಳಕ್ಕೆ ಪೊಲೀಸರ ದೌಡು
Odisha: ಪ್ರಧಾನಿಗೆ 100 ರೂ ನೀಡಿದ ಬುಡಕಟ್ಟು ಮಹಿಳೆ; ನಾರಿಶಕ್ತಿಯ ಆಶೀರ್ವಾದ ಎಂದ ಮೋದಿ
Online Nikah: ಪಾಕ್ ಯುವತಿಯನ್ನು ಆನ್ಲೈನ್ನಲ್ಲಿ ವಿವಾಹವಾದ ಬಿಜೆಪಿ ಮುಖಂಡನ ಪುತ್ರ!
GST; ಜೀವ, ಆರೋಗ್ಯ ವಿಮೆಗೆ ಜಿಎಸ್ಟಿ ವಿನಾಯಿತಿ?
Bomb Threat: ಒಂದೇ ದಿನ 30ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್ ಕರೆ!
MUST WATCH
ಹೊಸ ಸೇರ್ಪಡೆ
Chittapur: ತಾಯಿಯನ್ನೇ ಕೊ*ಲೆಗೈದ ಮಗ: ಆರೋಪಿಯ ಬಂಧನ
Davanagere: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಅ.23ರಂದು ಪ್ರತಿಭಟನೆ: ರವಿನಾರಾಯಣ್
Kanakapura: ವಿವಾಹಕ್ಕೆ ಹೋಗುತ್ತಿದ್ದವರ ಬಸ್ ಪಲ್ಟಿ; 20ಕ್ಕೂ ಹೆಚ್ಚು ಮಂದಿಗೆ ಗಾಯ
Director Guruprasad: ʼಮಠʼ ನಿರ್ದೇಶಕ ಗುರುಪ್ರಸಾದ್ ವಿರುದ್ಧ ದೂರು; ಆಗಿದ್ದೇನು?
Dandeli: ಅಪರಿಚಿತ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ; ಸವಾರ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.