Music Programme: ಸಂಗೀತ ರಸಿಕರನ್ನು ರಂಜಿಸಿದ ಮಳೆಗಾಲದ ರಾಗಗಳ ಗಾಯನ
Team Udayavani, Jul 7, 2024, 6:15 AM IST
ಸ್ವರಾನಂದ್ ಪ್ರತಿಷ್ಠಾನ, ಮಂಗಳೂರು ಇದರ ಆಶ್ರಯದಲ್ಲಿ ಮಳೆಗಾಲದ ರಾಗಗಳ ಮೇಲಿನ ವಿಶೇಷ ಕಾರ್ಯಕ್ರಮ ಇತ್ತೀಚೆಗೆ ಮಂಗಳೂರಿನ ಬಿ.ಇ.ಎಂ. ಹೈಸ್ಕೂಲ್ನ ಸಭಾ ಭವನದಲ್ಲಿ ನಡೆಯಿತು. ರಾತ್ರಿ 8.30ಕ್ಕೆ ಆರಂಭವಾದ ಈ ಕಾರ್ಯಕ್ರಮವು ಗಾಯಕರಾದ ಬನಾರಸ್ನ ಪಂಡಿತ್ ರಿತೇಶ್ ಮಿಶ್ರಾ ಹಾಗೂ ಪಂಡಿತ್ ರಜನೀಶ್ ಮಿಶ್ರಾ ಸಹೋದರರು ವರ್ಷ ಋತುವಿನ ಮೇಘ… ಮಲ್ಹಾರ್ ಹಾಗೂ ಮಿಯಾ ಮಲ್ಹಾರ್ ರಾಗಗಳನ್ನು ಪ್ರಸ್ತುತಪಡಿಸಿ ಕೊನೆಯಲ್ಲಿ ರಾಗ್ ಜೈಜವಂತಿಯಲ್ಲಿ ಮಧ್ಯ ಲಯ್ ತೀನ್ ತಾಳದ ಒಂದು ಬಂದಿಶ್ ಹಾಗೂ ಧೃತ್ ಏಕ್ ತಾಳದಲ್ಲಿ ಒಂದು ಸುಂದರ ತರಾನ ಹಾಡಿ ಸಂಗೀತ ರಸಿಕರನ್ನು ರಂಜಿಸಿದರು.
ತಬಲಾದಲ್ಲಿ ಭಾರವಿ ದೇರಾಜೆ ಸುರತ್ಕಲ್ ಹಾಗೂ ಸಂವಾದಿನಿಯಲ್ಲಿ ಪ್ರಸಾದ್ ಕಾಮತ್ ಉಡುಪಿ ಅಲ್ಲದೆ ತಾನ್ಪುರಾದಲ್ಲಿ ದಯಾಕರ್ ಭಟ್ ಹಾಗೂ ನಾಗೇಂದ್ರ ನಾಯಕ್ ಸಹಕರಿಸಿದರು. ತೇಜಸ್ವಿ ಜೂನಿಯರ್ ಶಂಕರ್ ಕಾರ್ಯಕ್ರಮ ನಿರ್ವಹಣೆಯನ್ನು ಮಾಡಿದರು.
ಕಳೆದ ಆರು ತಿಂಗಳ ಹಿಂದೆ ಹುಟ್ಟಿಕೊಂಡ ಈ ಸ್ವರಾನಂದ ಪ್ರತಿಷ್ಠಾನವು ಅಹೋರಾತ್ರಿ ಕಛೇರಿ ಸರಣಿಯೊಂದಿಗೆ ಪ್ರಾರಂಭಿಸಿ ಈಗಾಗಲೇ ಹದಿಮೂರು ಸಂಗೀತ ಗೋಷ್ಠಿಗಳನ್ನು ಆಯೋಜಿಸಿದೆ. ಪ್ರಸಿದ್ಧ ಕಲಾವಿದರುಗಳನ್ನು ಆಮಂತ್ರಿಸಿ ಕಛೇರಿಗಳನ್ನು ಆಯೋಜಿಸುವುದರ ಜತೆಗೆ ಸ್ಥಳೀಯ ಪ್ರತಿಭೆಗಳಿಗೂ ಪ್ರೋತ್ಸಾಹ ನೀಡುತ್ತಿದೆ. ಬೈಠಕ್ ಮಾದರಿಯಲ್ಲಿ ನಡೆಯುವ ಈ ಸಂಗೀತ ಕಾರ್ಯಕ್ರಮಗಳಲ್ಲಿ ಕಲಾವಿದ ಹಾಗೂ ಪ್ರೇಕ್ಷಕರ ನಡುವಿನ ಅಂತರ ಬಹಳ ಕಡಿಮೆ ಇರುವುದರಿಂದ ಕಲಾವಿದರಿಗೂ ಹಾಗೂ ಪ್ರೇಕ್ಷಕರಿಗೆ ಉತ್ತಮ ರಸಾನುಭವವನ್ನು ನೀಡುತ್ತಿದೆ.
- ಲಕ್ಷ್ಮೀ ಶಂಕರ್, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Minchu Hulu Review: ಮಿಂಚುಹುಳು ತಂದ ಹೊಸಕಿರಣ
Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ
Vinesh Phogat; ನನ್ನ ತಂದೆಯ ಸಹಾಯವನ್ನು ವಿನೇಶ್ ಮರೆತಿದ್ದಾರೆ: ಬಬಿತಾ ಫೋಗಾಟ್
Bigg Boss: ಬಿಗ್ ಬಾಸ್ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.