ದಸರಾ: 650ಕೆಜಿ ಭಾರದ ಮರದ ಅಂಬಾರಿ ಹೊತ್ತು “ಅರ್ಜುನ” ತಾಲೀಮು
Team Udayavani, Sep 19, 2019, 12:20 PM IST
ಮೈಸೂರು:ನಾಡಹಬ್ಬ ಮೈಸೂರು ದಸರಾ ಉತ್ಸವದ ಜಂಬೂ ಸವಾರಿ ಮೆರವಣಿಗೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಗಜಪಡೆ ತಾಲೀಮು ನಡೆಯುತ್ತಿದ್ದು, ಗುರುವಾರ ಬೆಳಗ್ಗೆ “ಅರ್ಜುನನ ಬೆನ್ನ ಮೇಲೆ 280ಕೆಜಿ ತೂಕದ ಮರದ ಅಂಬಾರಿ ಸೇರಿದಂತೆ ಒಟ್ಟು 650ಕೆಜಿ ಭಾರ ಹೊರಿಸಿ ತಾಲೀಮು ನಡೆಸಿದರು.
ಈ ವರ್ಷ ಅಕ್ಟೋಬರ್ 8ರಂದು ವಿಜಯದಶಮಿಯಂದು ಜಂಬೂ ಸವಾರಿ ನಡೆಯಲಿದ್ದು, ಇಂದು ಮೈಸೂರಿನಲ್ಲಿ ದಸಾರ ಮೆರವಣಿಗೆ ಸಾಗುವ ಹಾದಿಯಲ್ಲಿ ಅರ್ಜುನ ಆನೆ ಮೈಮೇಲೆ ಮರಳು ತುಂಬಿಸಿದ್ದ ಚೀಲ, ಮರದ ಅಂಬಾರಿಯನ್ನು ಬೆನ್ನ ಮೇಲೆ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿ ಸಾಗಿತ್ತು.
ದಸರಾ ಮೆರವಣಿಗೆ ಮಾರ್ಗದಲ್ಲಿ 650ಕೆಜಿ ತೂಕ ಹೊತ್ತು ಇತರ ಆನೆಗಳ ಜತೆ ಅರ್ಜುನ ಯಶಸ್ವಿಯಾಗಿ ತಾಲೀಮು ನಡೆಸಿರುವುದಾಗಿ ವರದಿ ತಿಳಿಸಿದೆ.
ಉಪ ಅರಣ್ಯಾಧಿಕಾರಿ ಅಲೆಗ್ಸಾಂಡರ್ ಮಾತನಾಡಿ, ಯಾವುದೇ ತೊಂದರೆ ಇಲ್ಲದೆ ಅರ್ಜುನ ಅಂಬಾರಿ ಹೊತ್ತೊಯ್ಯುವ ಕೆಲಸವನ್ನು ಪೂರ್ಣಗೊಳಿಸಿದೆ. ಇದೇ ರೀತಿ ನಾಳೆಯಿಂದ ಇತರ ಆನೆಗಳ ಮೇಲೂ ಭಾರ ಹೊರಿಸಿ ತಾಲೀಮು ನಡೆಸಲಾಗುವುದು ಎಂದು ತಿಳಿಸಿದರು.
ದಸರಾ ಗಜಪಡೆಯಲ್ಲಿದ್ದ ವರಲಕ್ಷ್ಮಿ ಎಂಬ ಹೆಣ್ಣಾನೆ ಗರ್ಭಿಣಿಯಾಗಿದ್ದು, ಇಂದು ತಾಲೀಮಿನಲ್ಲಿ ಪಾಲ್ಗೊಂಡಿಲ್ಲ. ಗಜಲಕ್ಷ್ಮಿ ಆನೆ ಆರೋಗ್ಯವಂತವಾಗಿದ್ದು, ದೈಹಿಕವಾಗಿಯೂ ಸಶಕ್ತವಾಗಿದೆ ಎಂದು ಅಲೆಕ್ಸಾಂಡರ್ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹುಸಿ ಬೆದರಿಕೆ ಸಂದೇಶ ನಿರ್ದಾಕ್ಷಿಣ್ಯ ಕ್ರಮ ಅಗತ್ಯ
Karkala: ಪರಶುರಾಮನ ನಕಲಿ ವಿಗ್ರಹ ಪ್ರಕರಣದ ತನಿಖೆ ಚುರುಕುಗೊಳಿಸಿ: ಮುನಿಯಾಲು
Goa: ದಿ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಜನಪ್ರತಿನಿಧಿ ತೇಜಸ್ವಿ
Mangaluru: “ಕ್ಯಾಂಪ್ಕೊ’ದಿಂದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಯ ಭೇಟಿ
Udupi: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ: ಡಾ.ಎಂ.ಎನ್.ರಾಜೇಂದ್ರ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.