ಈ ನ್ಯಾನೊ ಫೈಬರ್‌ ಜೈವಿಕ ಗೊಬ್ಬರದ ತೂಕ 5 ಗ್ರಾಂ!

ಟಿಶ್ಯು ಪೇಪರ್‌ ಮಾದರಿಯಲ್ಲಿ ನ್ಯಾನೊ ಗೊಬ್ಬರ; ಖರ್ಚು ಕಡಿಮೆ; ಉಳಿತಾಯ ಹೆಚ್ಚು

Team Udayavani, Nov 30, 2019, 6:36 AM IST

zx-35

ಬೆಂಗಳೂರು: ನೋಡಲು ಅದು ಕೈ ಒರೆಸಿ ಕಸದ ಬುಟ್ಟಿಗೆ ಬಿಸಾಡುವ ಸಣ್ಣ ಟಿಶ್ಯು ಪೇಪರ್‌. ಕೇವಲ ಕಡ್ಡಿಪೊಟ್ಟಣದಲ್ಲಿ ಸುತ್ತಿ ಇಡಬಹುದಾದಷ್ಟು ಗಾತ್ರ ಹಾಗೂ ತೂಕ. ಅದನ್ನು ನೀರಿನಲ್ಲಿ ಬೆರೆಸಿ, ಸಿಂಪಡಿಸಿದರೆ ಸಾಕು. ಇಡೀ ಎಕರೆ ಜಮೀನಿನ ಬೆಳೆ ಉತ್ತಮವಾಗಿ ಬೆಳೆಯುತ್ತದೆ!

ಹೌದು. ಟಿಶ್ಯು ಪೇಪರ್‌ ಮಾದರಿಯ ಅತ್ಯಂತ ಹಗುರವಾದ “ನ್ಯಾನೊ ಫೈಬರ್‌ ಜೈವಿಕ ಗೊಬ್ಬರ’ ಇದು.
ಸಾಮಾನ್ಯವಾಗಿ ರೈತರು ಬೆಳೆ ಇಳುವರಿ ಹೆಚ್ಚಿಸಲು ಒಂದು ಎಕರೆಗೆ ಐದು ಕೆ.ಜಿ. ರಾಸಾಯನಿಕ ಗೊಬ್ಬರ ಸಿಂಪಡಿಸಿದರೆ ಅದರ ಬದಲಿಗೆ 5 ಗ್ರಾಂ ತೂಕದ ಈ ಒಂದು ತುಣುಕು ಹಾಳೆಯನ್ನು ನೀರಿನಲ್ಲಿ ಮಿಶ್ರಣ ಮಾಡಿ, ಸಿಂಪಡಿಸಿದರೆ ಸಾಕು. ವಿಶ್ವದ ಅತೀ ಹಗುರವಾದ ಜೈವಿಕ ಗೊಬ್ಬರ ಇದಾ ಗಿದೆ ಎಂದು ಇದನ್ನು ವಿಶ್ಲೇಷಿಸಲಾಗುತ್ತಿದೆ. ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ನೆಲಗಡಲೆ (ಶೇಂಗಾ) ಮತ್ತು ಟೊಮೇಟೊ ಮೇಲೆ ಇದರ ಪ್ರಯೋಗ ನಡೆಯುತ್ತಿದೆ.

ಈ ಬೆಳೆಗಳಿಗೆ ಪೂರಕವಾದ ಅತೀ ಹೆಚ್ಚು ಸೂಕ್ಷ್ಮಜೀವಿಗಳನ್ನು ನ್ಯಾನೊ ಫೈಬರ್‌ ಜೈವಿಕ ಗೊಬ್ಬರ ಹೊಂದಿದ್ದು, ಅದು ಒಂದು ಗ್ರಾಂ ರಾಸಾಯನಿಕ ಗೊಬ್ಬರದಲ್ಲಿರುವ ಸೂಕ್ಷ್ಮ ಜೀವಿಗಳಿಗಿಂತ ಸಾವಿರ ಪಟ್ಟು ಅಧಿಕ. ಈ ಜೈವಿಕ ಗೊಬ್ಬರದಿಂದ ಇಳುವರಿ ಪ್ರಮಾಣ ಶೇ.20 ರಷ್ಟು ಹೆಚ್ಚಳವಾಗಲಿದೆ.

ಜತೆಗೆ ಬೆಳೆಯ ಗುಣಮಟ್ಟ ಸಾಮಾನ್ಯ ಗೊಬ್ಬರ ಸಿಂಪಡಣೆಯಲ್ಲಿ ಬೆಳೆದ ಬೆಳೆಗಳಿಗಿಂತ ಉತ್ತಮವಾಗಿರುತ್ತದೆ. ಬೆಳೆಗಳ ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ಮದ್ರಾಸ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ ಮದ್ರಾಸ್‌) ಮತ್ತು ಫಿಬ್‌ ಸೊಲ್‌ ಲೈಫ್ ಟೆಕ್ನಾಲಜೀಸ್‌ ಪ್ರೈ.ಲಿ., ಸಂಯುಕ್ತವಾಗಿ ಇದನ್ನು ಅಭಿವೃದ್ಧಿಪಡಿಸಿದೆ.

ಏನಿದರ ಉಪಯೋಗ?
ಸಾರಜನಕ ಸ್ವೀಕರಿಸುವ ಈ ಬ್ಯಾಕ್ಟೀರಿಯಾ ಗಳು, ಫಾಸ್ಪೆಟ್‌ ಅನ್ನು ಕರಗಿಸುವುದರ ಜತೆಗೆ ಸಾವಯವವಲ್ಲದ ರೂಪದಿಂದ ಸಸ್ಯಗಳನ್ನು ಸಾವಯವ ರೂಪಕ್ಕೆ ಪರಿವರ್ತಿಸುತ್ತವೆ. ಇದರಿಂದ ಬೇರು, ಚಿಗುರುಗಳ ಬೆಳವಣಿಗೆಗೆ ಅನುಕೂಲ ಆಗುತ್ತದೆ. ಕಿಣ್ವದ ಚಟುವಟಿಕೆ ಸುಧಾರಿಸುವುದರಿಂದ ಮೊಳಕೆಯೊಡೆಯುವಿಕೆ ಪ್ರಮಾಣ ಹೆಚ್ಚಾಗುತ್ತದೆ. ಸಸ್ಯದ ರೋಗ ನಿರೋಧಕ ಶಕ್ತಿ ಸುಧಾರಿಸುವ ಮೂಲಕ ವಾತಾ ವರಣದ ಒತ್ತಡಗಳು ಮತ್ತು ಸೋಂಕುಗಳನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತವೆ. ನೆಲಗಡಲೆ, ಕಬ್ಬು, ಪ್ಲಾಂಟೇಶನ್‌ ಬೆಳೆಗಳು ಸೇರಿ ಒಂಬತ್ತು ಪ್ರಕಾರದ ಬೆಳೆಗಳ ಮೇಲೆ ಇದನ್ನು ಪ್ರಯೋಗ ಮಾಡಬಹುದು.

ಎಷ್ಟು ಬೆಲೆ?
ಒಂದು ಎಕರೆ ಜಮೀನಿನಲ್ಲಿ ಕೃಷಿ ಬೆಳೆಗಳಿಗೆ ಒಂದು ಹಂಗಾಮಿಗೆ ರೈತರು ಸರಾಸರಿ 4ರಿಂದ 5 ಸಾವಿರ ರೂ. ಗೊಬ್ಬರಕ್ಕಾಗಿ ಖರ್ಚು ಮಾಡುತ್ತಾರೆ. ಈ ನ್ಯಾನೊ ಫೈಬರ್‌ ಜೈವಿಕ ಗೊಬ್ಬರದಿಂದ ಆ ಖರ್ಚು ಅರ್ಧಕ್ಕರ್ಧ ಅಂದರೆ 2,500 ರೂ. ಆಗಲಿದೆ. ಒಂದು ಹಾಳೆಗೆ 400ರಿಂದ 600 ರೂ. ಆಗುತ್ತದೆ. ಕಳೆದ ವರ್ಷ ಇದು ಬಿಡುಗಡೆಯಾಗಿದ್ದು, ಮದ್ರಾಸ್‌ ಐಐಟಿ ಯಿಂದ ಪೇಟೆಂಟ್‌ ಕೂಡ ದೊರಕಿದೆ. ಕೇಂದ್ರ ಸರಕಾರದಿಂದ ಪೇಟೆಂಟ್‌ ಪಡೆಯುವ ಪ್ರಕ್ರಿಯೆ ನಡೆದಿದೆ ಎಂದು ಫಿಬ್‌ ಸೋಲ್‌ನ ಸಿಟಿಒ ಹಾಗೂ ನಿರ್ದೇಶಕ ಡಾ| ಅನಂತ್‌ ರಹೇಜಾ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ನ್ಯಾನೊ ಗೊಬ್ಬರದ ಪ್ರಯೋಗ ಜಿಕೆವಿಕೆ ಆವರಣದಲ್ಲಿ ನೆಲಗಡಲೆ ಮತ್ತು ಟೊಮೇಟೊ ಮೇಲೆ ನಡೆಯುತ್ತಿದೆ. ಕೀಟಗಳ ಬಾಧೆ ನಿಯಂತ್ರಣ, ಇಳುವರಿ ಹೆಚ್ಚಳ, ಮಣ್ಣಿನ ಗುಣಮಟ್ಟ ಬಗ್ಗೆ ಪರೀಕ್ಷಿಸಲಾಗುವುದು.
– ಡಾ| ವೈ.ಜಿ. ಷಡಾಕ್ಷರಿ, ನಿರ್ದೇಶಕರು (ಸಂಶೋಧನೆ), ಜಿಕೆವಿಕೆ

- ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

3-bng

Bengaluru: ನಗರದಲ್ಲಿ 3 ವರ್ಷದಲ್ಲಿ 9700 ಮರಗಳ ಹನನ

ನಟಿಯಾಗುವ ಕನಸು ಕಂಡಿದ್ದ ದ್ರುವಿ ಪಟೇಲ್ ಗೆ ‘ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2024’ ಕಿರೀಟ

ನಟಿಯಾಗುವ ಕನಸು ಕಂಡಿದ್ದ ಧ್ರುವಿ ಪಟೇಲ್ ಗೆ ‘Miss India Worldwide 2024’ ಕಿರೀಟ

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Kolkata: ಶನಿವಾರದಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

4-mc-sudhakar

Students ಆತ್ಮಹತ್ಯೆ ತಡೆಗೆ ಕಾಲೇಜುಗಳಲ್ಲಿ ಜಾಗೃತಿ: ಸಚಿವ

3-bng

Bengaluru: ನಗರದಲ್ಲಿ 3 ವರ್ಷದಲ್ಲಿ 9700 ಮರಗಳ ಹನನ

Yermarus: Private bus caused end of 150 sheeps

Yermarus: ಖಾಸಗಿ ಬಸ್ ಹರಿದು 150 ಕುರಿಗಳ ಮಾರಣಹೋಮ

ನಟಿಯಾಗುವ ಕನಸು ಕಂಡಿದ್ದ ದ್ರುವಿ ಪಟೇಲ್ ಗೆ ‘ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2024’ ಕಿರೀಟ

ನಟಿಯಾಗುವ ಕನಸು ಕಂಡಿದ್ದ ಧ್ರುವಿ ಪಟೇಲ್ ಗೆ ‘Miss India Worldwide 2024’ ಕಿರೀಟ

Family drama ‘Langoti Man’ hits screens today

Langoti Man: ಫ್ಯಾಮಿಲಿ ಡ್ರಾಮಾ ʼಲಂಗೋಟಿ ಮ್ಯಾನ್‌ʼ ಇಂದು ತೆರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.