ಮಡಾಮಕ್ಕಿ : ನೆಟ್‌ವರ್ಕ್‌ಗಾಗಿ ಎತ್ತರದ ಗುಡ್ಡದಲ್ಲಿ ಟೆಂಟ್‌

ಆನ್‌ಲೈನ್‌ ಕ್ಲಾಸ್‌, ವರ್ಕ್‌ ಫ್ರಂ ಹೋಮ್‌ ಸಂಕಷ್ಟ

Team Udayavani, Jun 19, 2021, 7:30 AM IST

ಮಡಾಮಕ್ಕಿ : ನೆಟ್‌ವರ್ಕ್‌ಗಾಗಿ ಎತ್ತರದ ಗುಡ್ಡದಲ್ಲಿ ಟೆಂಟ್‌

ಕುಂದಾಪುರ : ಇಡೀ ಊರಿಗೆ ನೆಟ್‌ವರ್ಕ್‌ ಇಲ್ಲ. ಎಡಿಬಿಡದೇ ಸುರಿಯುತ್ತಿರುವ ಮಳೆ. ಆನ್‌ಲೈನ್‌ ತರಗತಿ, ವರ್ಕ್‌ಫ್ರಂ ಹೋಂ ಕಿರಿಕಿರಿ. ಇದಕ್ಕಾಗಿ ಈ ಊರಿನ ಜನ ಕಂಡುಕೊಂಡ ಪರಿಹಾರ ಎತ್ತರದ ಗುಡ್ಡದಲ್ಲಿ ಟೆಂಟ್‌ ನಿರ್ಮಾಣ.

ಇಲ್ಲಿನ ಮಡಾಮಕ್ಕಿ ಗ್ರಾಮದ ಹಂಜ, ಕಾರಿಮಲೆ, ಎಡ್ಮಲೆ ಭಾಗದಲ್ಲಿ ನೆಟ್‌ವರ್ಕ್‌ ಸಮಸ್ಯೆಯಿದೆ. ಆದರೆ ಎತ್ತರದ ಗುಡ್ಡವೊಂದಿರುವ ಹಂಜದಲ್ಲಿ ಎಲ್ಲ ಕಂಪೆನಿಗಳ 4ಜಿ ನೆಟ್‌ವರ್ಕ್‌ ಸಿಗುತ್ತಿದೆ. ಇದಕ್ಕಾಗಿ ಮಕ್ಕಳ ಮತ್ತು ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಊರಿನಿಂದ 5-6 ಕಿ.ಮೀ. ದೂರದ ಎತ್ತರದಲ್ಲಿರುವ ಗುಡ್ಡದಲ್ಲಿ ಟೆಂಟ್‌ ನಿರ್ಮಿಸಲಾಗಿದೆ.

54 ಮನೆಗಳು
ಹಂಜದ 25 ಮನೆ, ಎಡ್ಮಲೆಯ 21 ಮನೆ ಹಾಗೂ ಕಾರಿಮಲೆಯ 8 ಸೇರಿದಂತೆ ಈ ಭಾಗದಲ್ಲಿ 54 ಮನೆಗಳಿದ್ದು, 400ರಿಂದ 500 ಮಂದಿ ನೆಲೆಸಿದ್ದಾರೆ. ಇಲ್ಲಿ ಯಾರಿಗೂ ನೆಟ್‌ವರ್ಕ್‌ ಸೌಲಭ್ಯವಿಲ್ಲ. ಈ ಊರಲ್ಲಿ ಸ್ನಾತಕೋತ್ತರ ಪದವಿ, ಪದವಿ, ಪಿಯುಸಿ, ಐಟಿಐ, ಪ್ರೌಢಶಾಲೆ, ಪ್ರಾಥಮಿಕ ಸೇರಿದಂತೆ ಒಟ್ಟು 33 ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಆನ್‌ಲೈನ್‌ ತರಗತಿ ನಡೆಯುತ್ತಿದ್ದು, ಅದಕ್ಕಾಗಿ ದಿನವೂ ಈ ಗುಡ್ಡವೇರಿ, ಟೆಂಟ್‌ನಲ್ಲಿ ಕುಳಿತು ಆನ್‌ಲೈನ್‌ ಪಾಠ ಕೇಳುವಂತಾಗಿದೆ.

ಮಳೆಯಿಂದ ಸಂಕಷ್ಟ
ಬೇಸಗೆಯಲ್ಲಾದರೆ ಟೆಂಟ್‌ನ ಆವಶ್ಯಕತೆ ಅಷ್ಟೊಂದು ಇರಲಿಲ್ಲ. ಆದರೆ ಈಗ ಭಾರೀ ಗಾಳಿ-ಮಳೆಗೆ ಟೆಂಟ್‌ನೊಳಗೆ ಕುಳಿತು ಪಾಠ ಕೇಳುವುದು ಅಥವಾ ಕೆಲಸ ಮಾಡುವುದು ಭಾರೀ ಕಷ್ಟಕರವಾಗಿದೆ. ಮಳೆಗೆ ಗುಡ್ಡವೇರಿ ಹೋಗುವುದು ಸಹ ಸವಾಲಿನ ಕೆಲಸವಾಗಿದೆ.

ನೆಟ್‌ವರ್ಕ್‌ ಕಲ್ಪಿಸಲು ಆಗ್ರಹ
ನಕ್ಸಲ್‌ ಪೀಡಿತ ಮಡಾಮಕ್ಕಿ ಗ್ರಾಮದ ಈ ಹಂಜ, ಎಡ್ಮಲೆ, ಕಾರಿಮಲೆ ಊರಿನ ಜನರು ಕಳೆದ ಹಲವು ವರ್ಷಗಳಿಂದ ನೆಟ್‌ವರ್ಕ್‌ ಸಮಸ್ಯೆ ಪರಿಹಾರಕ್ಕಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮೊರೆಯಿಡುತ್ತಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ನೆಟ್‌ವರ್ಕ್‌ ವ್ಯವಸ್ಥೆ ಕಲ್ಪಿಸಲಿ ಎನ್ನುವುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.

ನೆಟ್‌ವರ್ಕ್‌ಗೆ ವ್ಯವಸ್ಥೆ ಮಾಡುವಂತೆ ಪಂಚಾಯತ್‌ನಿಂದ ಸಂಬಂಧಪಟ್ಟವರಿಗೆ ಅಹವಾಲು ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈಗಂತೂ ಆನ್‌ಲೈನ್‌ ತರಗತಿ, ವರ್ಕ್‌ ಫ್ರಂ ಹೋಮ್‌ ಪದ್ದತಿ ಹೆಚ್ಚಾಗಿರುವುದರಿಂದ ನೆಟ್‌ವರ್ಕ್‌ ಆವಶ್ಯಕತೆ ಬಹಳಷ್ಟಿದೆ. ಇನ್ನಾದರೂ ಪ್ರಯತ್ನಿಸಲಿ.
– ದಯಾನಂದ ಪೂಜಾರಿ, ಉಪಾಧ್ಯಕ್ಷರು, ಮಡಾಮಕ್ಕಿ ಗ್ರಾ.ಪಂ.

ಮನೆಯಲ್ಲಿ ನೆಟ್‌ವರ್ಕ್‌ ಇಲ್ಲ. ಹಾಗಾಗಿ ಗುಡ್ಡಕ್ಕೆ ಹೋಗಿ ಆನ್‌ಲೈನ್‌ ಪಾಠ ಕೇಳುವಂತಾಗಿದೆ. ಈಗಂತೂ ಜೋರಾಗಿ ಮಳೆ ಬರುತ್ತಿದ್ದು, ಪಾಠ ಕೇಳುವುದೇ ಕಷ್ಟವಾಗಿದೆ. ನಮ್ಮ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ನೆಟÌರ್ಕ್‌ ವ್ಯವಸ್ಥೆ ಕಲ್ಪಿಸಿಕೊಡಲಿ.
– ಸುಮಂತ್‌ ಶೆಟ್ಟಿ ಹಂಜ, ಎಂಕಾಂ ವಿದ್ಯಾರ್ಥಿ

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.