Desi Swara: ನ್ಯೂಯಾರ್ಕ್‌ ಮತ್ತು ನ್ಯೂಜೆರ್ಸಿ: ಆಕರ್ಷಿಸಿದ ಇಂಡಿಯಾ ಡೇ ಪರೇಡ್‌

ವಿದೇಶಿ ನೆಲದಲ್ಲಿ ಅನಿವಾಸಿಗರ ತ್ರಿವರ್ಣ ಸಂಭ್ರಮ -

Team Udayavani, Aug 24, 2024, 10:03 AM IST

Desi Swara: ನ್ಯೂಯಾರ್ಕ್‌ ಮತ್ತು ನ್ಯೂಜೆರ್ಸಿ: ಆಕರ್ಷಿಸಿದ ಇಂಡಿಯಾ ಡೇ ಪರೇಡ್‌

ಅಮೆರಿಕ: ಅಮೆರಿಕದಲ್ಲಿ ಅತೀ ಹೆಚ್ಚು ಭಾರತೀಯರು ವಾಸಿಸುವ ನಗರಗಳಲ್ಲಿ ನ್ಯೂಯಾರ್ಕ್‌ ಮತ್ತು ನ್ಯೂಜೆರ್ಸಿ ಮುಂಚೂಣಿಯಲ್ಲಿವೆ. ಈ ಎರಡೂ ನಗರಗಳಲ್ಲಿ ಅಮೆರಿಕದ ಹಬ್ಬಗಳ ಜತೆಜತೆಗೆ ಭಾರತದ ಬಹುತೇಕ ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈ ರೀತಿಯ ಹಬ್ಬಗಳನ್ನು, ಹೆಚ್ಚಿನವರು ಉದ್ಯೋಗದಲ್ಲಿರುವುದರಿಂದ ವಾರಾಂತ್ಯದಲ್ಲಿ ಆಚರಿಸುತ್ತಾರೆ. ಆದ್ದರಿಂದ ಈ ಸಾಲಿನ ಭಾರತದ ಸ್ವಾತಂತ್ರ್ಯೋತ್ಸವವನ್ನು ನ್ಯೂಜೆರ್ಸಿಯಲ್ಲಿ ಆ.11ರಂದು ಮತ್ತು ನ್ಯೂಯಾಕ್‌ನಲ್ಲಿ ಆ.18ರಂದು ಆಚರಿಸಲಾಯಿತು. ಆ. 11ರಂದು ನ್ಯೂಜೆರ್ಸಿಯ Oak Tree Road ಎಂಬಲ್ಲಿ ಮೆರವಣಿಗೆಯಲ್ಲಿ ಸಾಗಿದ ಇಂಡಿಯಾ ಡೇ ಪರೇಡ್‌ ಅತ್ಯಾಕರ್ಷಕವಾಗಿತ್ತು.

ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟ ಸೋನುಸೂದ್‌ ಮತ್ತು ಖ್ಯಾತ ಹಿಂದಿ ಚಿತ್ರನಟಿ ಮತ್ತು ಗಾಯಕಿ ಸೋನು ಚೌಹಾಣ್‌ ಪ್ರಧಾನ ಆಕರ್ಷಣೆಯಾಗಿದ್ದರು. ಈ ಮೆರವಣಿಗೆಯ ಪ್ರಮುಖ ಆಕರ್ಷಣೆ ಪುರಿ ಜಗನ್ನಾಥ ದೇವಸ್ಥಾನದ ರಥ. ನೆರೆದವರಿಗೆಲ್ಲರಿಗೂ ರಥವನ್ನು ಎಳೆಯುವ ಅವಕಾಶವೂ ಇತ್ತು.

ವ್ಯಾಪಾರಿಗಳು ತಮ್ಮ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆಹಾರ ಮಳಿಗೆಯಿಂದ ಆಭರಣ ಮಳಿಗೆಗಳ ಸ್ತಬ್ಧ ಚಿತ್ರ ಮತ್ತು ಪ್ರಚಾರ ಮಳಿಗೆಗಳನ್ನು ತೆರೆದಿದ್ದರು. ಈ ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಬಟ್ಟೆಯಿಂದ ತಯಾರಿಸಿದ ತ್ರಿವರ್ಣ ಧ್ವಜವನ್ನು, ಜತೆಗೆ ಆಹಾರದ ಪೊಟ್ಟಣ, ನೀರಿನ ಬಾಟಲಿಗಳನ್ನೂ ಉಚಿತವಾಗಿ ಹಂಚಲಾಗಿತ್ತು. ಸಮಾರಂಭವನ್ನು ಪ್ರಾಯೋಜಿಸಿದ ಸಂಘಸಂಸ್ಥೆಗಳ ವತಿಯಿಂದಲೂ ಸ್ತಬ್ಧ ಚಿತ್ರಗಳಿದ್ದವು.

ಆ.18 ರಂದು ನ್ಯೂಯಾರ್ಕ್‌ನಲ್ಲಿ ನಡೆದ ಆಚರಣೆಯ ಮೆರವಣಿಗೆಯು East 27th street madison avenue ರಸ್ತೆಯಲ್ಲಿ ನಡೆಯಿತು. ಇದರಲ್ಲೂ ಗಣಪತಿ ಸ್ತಬ್ಧ ಚಿತ್ರದ ಜತೆಗೆ ಪ್ರಮುಖ ಆಕರ್ಷಣೆಯಾಗಿ ಅಯೋಧ್ಯೆಯ ಶ್ರೀ ರಾಮಮಂದಿರದ ಸ್ತಬ್ಧ ಚಿತ್ರ ಗಮನ ಸೆಳೆಯಿತು. ಎಂದಿನಂತೆ ನ್ಯೂಯಾರ್ಕ್‌ ನಗರದ ವ್ಯಾಪಾರ ಮಳಿಗೆಗಳು ಮತ್ತು ಭಾರತದ ಬ್ಯಾಂಕ್‌ಗಳ ಪ್ರದರ್ಶನ ಮಳಿಗೆಗಳು ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಇದ್ದವು. ಈ ಸಮಯದಲ್ಲಿ ಹಿಂದಿ ಚಿತ್ರ ನಟ ಪಂಕಜ್‌ ತ್ರಿಪಾಠಿ, ಸೋನಾಕ್ಷಿ ಸಿನ್ಹಾ, ಆಕೆಯ ಪತಿ ಇಕ್ಬಾಲ್‌, ಮತ್ತು ಮನೋಜ್‌ ತಿವಾರಿ ಮೆರವಣಿಗೆಯಲ್ಲಿ ಸಾಗಿ ಬಂದು ನೆರೆದವರ ಮನರಂಜಿಸಿದ್ದರು.
ಮೆರವಣಿಗೆಯ ನಡುವೆ ಒಮ್ಮೆ ಮತ್ತು ಕೊನೆಯಲ್ಲಿ ನಿರ್ಮಿಸಲಾದ ವೇದಿಕೆಯಲ್ಲಿ ಭಾರತದಿಂದ ಆಗಮಿಸಿದ್ದ ಕಲಾವಿದರಿಂದ ಮನರಂಜನ ಕಾರ್ಯಕ್ರಮಗಳೂ ಇದ್ದವು.

ಮಳಿಗೆಗಳಲ್ಲಿ ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ಚಿಕ್ಕಚಿಕ್ಕ ಚೀಲಗಳಲ್ಲಿ, ಉದಾಹರಣೆಗೆ ಆಹಾರ ಉತ್ಪನ್ನಗಳಿಗೆ ಖ್ಯಾತಿ ಪಡೆದಿರುವ ಲಕ್ಷ್ಮೀ ಬ್ರಾಂಡ್‌ನ‌ವರು ತಲಾ 180ಗ್ರಾ ಬಾಸುಮತಿ ಅಕ್ಕಿ ಮತ್ತು ಕಡಲೆ ಹಿಟ್ಟು ನೀಡಿದರೆ, ಬೇರೆಯವರೂ ತಮ್ಮ ಮಳಿಗೆಯ ಹೆಸರಿರುವ ಚಿಕ್ಕಚಿಕ್ಕ ಹೆಣಿಗೆಗಳನ್ನು, ಸ್ಥಳೀಯ ಪತ್ರಿಕೆಗಳನ್ನು ಆಕರ್ಷಕ ಚೀಲದಲ್ಲಿ ಹಾಕಿ ಹಂಚುತ್ತಿದ್ದರು. ಸದ್ಗುರು, ಬ್ರಹ್ಮ ಕುಮಾರಿ, ವತಿಯಿಂದಲೂ ಪ್ರಚಾರ ಸಾಮಗ್ರಿಗಳನ್ನು ಹಂಚಲಾಗಿತ್ತು. ಮೆರವಣಿಗೆಯುದ್ದಕ್ಕೂ ಜಯಘೋಷ ಕೇಳಿ ಬರುತ್ತಿತ್ತು. ಎಲ್ಲೆಡೆ ಅಮೆರಿಕದ ರಾಷ್ಟ್ರ ಧ್ವಜ ಮತ್ತು ಭಾರತದ ಧ್ವಜಗಳು ರಾರಾಜಿಸುತ್ತಿದ್ದವು.

ಮಾಹಿತಿ: ವಂದಿತ ಗೌತಮ್‌ ಕಿಣಿ, ನ್ಯೂಜೆರ್ಸಿ

ಟಾಪ್ ನ್ಯೂಸ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.