Desi Swara: ನ್ಯೂಯಾರ್ಕ್‌ ಮತ್ತು ನ್ಯೂಜೆರ್ಸಿ: ಆಕರ್ಷಿಸಿದ ಇಂಡಿಯಾ ಡೇ ಪರೇಡ್‌

ವಿದೇಶಿ ನೆಲದಲ್ಲಿ ಅನಿವಾಸಿಗರ ತ್ರಿವರ್ಣ ಸಂಭ್ರಮ -

Team Udayavani, Aug 24, 2024, 10:03 AM IST

Desi Swara: ನ್ಯೂಯಾರ್ಕ್‌ ಮತ್ತು ನ್ಯೂಜೆರ್ಸಿ: ಆಕರ್ಷಿಸಿದ ಇಂಡಿಯಾ ಡೇ ಪರೇಡ್‌

ಅಮೆರಿಕ: ಅಮೆರಿಕದಲ್ಲಿ ಅತೀ ಹೆಚ್ಚು ಭಾರತೀಯರು ವಾಸಿಸುವ ನಗರಗಳಲ್ಲಿ ನ್ಯೂಯಾರ್ಕ್‌ ಮತ್ತು ನ್ಯೂಜೆರ್ಸಿ ಮುಂಚೂಣಿಯಲ್ಲಿವೆ. ಈ ಎರಡೂ ನಗರಗಳಲ್ಲಿ ಅಮೆರಿಕದ ಹಬ್ಬಗಳ ಜತೆಜತೆಗೆ ಭಾರತದ ಬಹುತೇಕ ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈ ರೀತಿಯ ಹಬ್ಬಗಳನ್ನು, ಹೆಚ್ಚಿನವರು ಉದ್ಯೋಗದಲ್ಲಿರುವುದರಿಂದ ವಾರಾಂತ್ಯದಲ್ಲಿ ಆಚರಿಸುತ್ತಾರೆ. ಆದ್ದರಿಂದ ಈ ಸಾಲಿನ ಭಾರತದ ಸ್ವಾತಂತ್ರ್ಯೋತ್ಸವವನ್ನು ನ್ಯೂಜೆರ್ಸಿಯಲ್ಲಿ ಆ.11ರಂದು ಮತ್ತು ನ್ಯೂಯಾಕ್‌ನಲ್ಲಿ ಆ.18ರಂದು ಆಚರಿಸಲಾಯಿತು. ಆ. 11ರಂದು ನ್ಯೂಜೆರ್ಸಿಯ Oak Tree Road ಎಂಬಲ್ಲಿ ಮೆರವಣಿಗೆಯಲ್ಲಿ ಸಾಗಿದ ಇಂಡಿಯಾ ಡೇ ಪರೇಡ್‌ ಅತ್ಯಾಕರ್ಷಕವಾಗಿತ್ತು.

ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟ ಸೋನುಸೂದ್‌ ಮತ್ತು ಖ್ಯಾತ ಹಿಂದಿ ಚಿತ್ರನಟಿ ಮತ್ತು ಗಾಯಕಿ ಸೋನು ಚೌಹಾಣ್‌ ಪ್ರಧಾನ ಆಕರ್ಷಣೆಯಾಗಿದ್ದರು. ಈ ಮೆರವಣಿಗೆಯ ಪ್ರಮುಖ ಆಕರ್ಷಣೆ ಪುರಿ ಜಗನ್ನಾಥ ದೇವಸ್ಥಾನದ ರಥ. ನೆರೆದವರಿಗೆಲ್ಲರಿಗೂ ರಥವನ್ನು ಎಳೆಯುವ ಅವಕಾಶವೂ ಇತ್ತು.

ವ್ಯಾಪಾರಿಗಳು ತಮ್ಮ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆಹಾರ ಮಳಿಗೆಯಿಂದ ಆಭರಣ ಮಳಿಗೆಗಳ ಸ್ತಬ್ಧ ಚಿತ್ರ ಮತ್ತು ಪ್ರಚಾರ ಮಳಿಗೆಗಳನ್ನು ತೆರೆದಿದ್ದರು. ಈ ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಬಟ್ಟೆಯಿಂದ ತಯಾರಿಸಿದ ತ್ರಿವರ್ಣ ಧ್ವಜವನ್ನು, ಜತೆಗೆ ಆಹಾರದ ಪೊಟ್ಟಣ, ನೀರಿನ ಬಾಟಲಿಗಳನ್ನೂ ಉಚಿತವಾಗಿ ಹಂಚಲಾಗಿತ್ತು. ಸಮಾರಂಭವನ್ನು ಪ್ರಾಯೋಜಿಸಿದ ಸಂಘಸಂಸ್ಥೆಗಳ ವತಿಯಿಂದಲೂ ಸ್ತಬ್ಧ ಚಿತ್ರಗಳಿದ್ದವು.

ಆ.18 ರಂದು ನ್ಯೂಯಾರ್ಕ್‌ನಲ್ಲಿ ನಡೆದ ಆಚರಣೆಯ ಮೆರವಣಿಗೆಯು East 27th street madison avenue ರಸ್ತೆಯಲ್ಲಿ ನಡೆಯಿತು. ಇದರಲ್ಲೂ ಗಣಪತಿ ಸ್ತಬ್ಧ ಚಿತ್ರದ ಜತೆಗೆ ಪ್ರಮುಖ ಆಕರ್ಷಣೆಯಾಗಿ ಅಯೋಧ್ಯೆಯ ಶ್ರೀ ರಾಮಮಂದಿರದ ಸ್ತಬ್ಧ ಚಿತ್ರ ಗಮನ ಸೆಳೆಯಿತು. ಎಂದಿನಂತೆ ನ್ಯೂಯಾರ್ಕ್‌ ನಗರದ ವ್ಯಾಪಾರ ಮಳಿಗೆಗಳು ಮತ್ತು ಭಾರತದ ಬ್ಯಾಂಕ್‌ಗಳ ಪ್ರದರ್ಶನ ಮಳಿಗೆಗಳು ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಇದ್ದವು. ಈ ಸಮಯದಲ್ಲಿ ಹಿಂದಿ ಚಿತ್ರ ನಟ ಪಂಕಜ್‌ ತ್ರಿಪಾಠಿ, ಸೋನಾಕ್ಷಿ ಸಿನ್ಹಾ, ಆಕೆಯ ಪತಿ ಇಕ್ಬಾಲ್‌, ಮತ್ತು ಮನೋಜ್‌ ತಿವಾರಿ ಮೆರವಣಿಗೆಯಲ್ಲಿ ಸಾಗಿ ಬಂದು ನೆರೆದವರ ಮನರಂಜಿಸಿದ್ದರು.
ಮೆರವಣಿಗೆಯ ನಡುವೆ ಒಮ್ಮೆ ಮತ್ತು ಕೊನೆಯಲ್ಲಿ ನಿರ್ಮಿಸಲಾದ ವೇದಿಕೆಯಲ್ಲಿ ಭಾರತದಿಂದ ಆಗಮಿಸಿದ್ದ ಕಲಾವಿದರಿಂದ ಮನರಂಜನ ಕಾರ್ಯಕ್ರಮಗಳೂ ಇದ್ದವು.

ಮಳಿಗೆಗಳಲ್ಲಿ ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ಚಿಕ್ಕಚಿಕ್ಕ ಚೀಲಗಳಲ್ಲಿ, ಉದಾಹರಣೆಗೆ ಆಹಾರ ಉತ್ಪನ್ನಗಳಿಗೆ ಖ್ಯಾತಿ ಪಡೆದಿರುವ ಲಕ್ಷ್ಮೀ ಬ್ರಾಂಡ್‌ನ‌ವರು ತಲಾ 180ಗ್ರಾ ಬಾಸುಮತಿ ಅಕ್ಕಿ ಮತ್ತು ಕಡಲೆ ಹಿಟ್ಟು ನೀಡಿದರೆ, ಬೇರೆಯವರೂ ತಮ್ಮ ಮಳಿಗೆಯ ಹೆಸರಿರುವ ಚಿಕ್ಕಚಿಕ್ಕ ಹೆಣಿಗೆಗಳನ್ನು, ಸ್ಥಳೀಯ ಪತ್ರಿಕೆಗಳನ್ನು ಆಕರ್ಷಕ ಚೀಲದಲ್ಲಿ ಹಾಕಿ ಹಂಚುತ್ತಿದ್ದರು. ಸದ್ಗುರು, ಬ್ರಹ್ಮ ಕುಮಾರಿ, ವತಿಯಿಂದಲೂ ಪ್ರಚಾರ ಸಾಮಗ್ರಿಗಳನ್ನು ಹಂಚಲಾಗಿತ್ತು. ಮೆರವಣಿಗೆಯುದ್ದಕ್ಕೂ ಜಯಘೋಷ ಕೇಳಿ ಬರುತ್ತಿತ್ತು. ಎಲ್ಲೆಡೆ ಅಮೆರಿಕದ ರಾಷ್ಟ್ರ ಧ್ವಜ ಮತ್ತು ಭಾರತದ ಧ್ವಜಗಳು ರಾರಾಜಿಸುತ್ತಿದ್ದವು.

ಮಾಹಿತಿ: ವಂದಿತ ಗೌತಮ್‌ ಕಿಣಿ, ನ್ಯೂಜೆರ್ಸಿ

ಟಾಪ್ ನ್ಯೂಸ್

After Namibia 200 elephants slaughtered in Zimbabwe

Drought; ನಮೀಬಿಯಾ ಆಯ್ತು, ಈಗ ಜಿಂಬಾಬ್ವೆಯಲ್ಲಿ 200 ಆನೆಗಳ ಹತ್ಯೆ?

Champions Trophy; ICC delegation to Karachi for security review

Champions Trophy; ಭದ್ರತೆ ಪರಿಶೀಲನೆಗೆ ಐಸಿಸಿ ನಿಯೋಗ ಕರಾಚಿಗೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

After Namibia 200 elephants slaughtered in Zimbabwe

Drought; ನಮೀಬಿಯಾ ಆಯ್ತು, ಈಗ ಜಿಂಬಾಬ್ವೆಯಲ್ಲಿ 200 ಆನೆಗಳ ಹತ್ಯೆ?

Ranji Trophy: Samit Dravid in possible squad

Ranji Trophy: ಸಂಭಾವ್ಯ ತಂಡದಲ್ಲಿ ಸಮಿತ್‌ ದ್ರಾವಿಡ್‌

Champions Trophy; ICC delegation to Karachi for security review

Champions Trophy; ಭದ್ರತೆ ಪರಿಶೀಲನೆಗೆ ಐಸಿಸಿ ನಿಯೋಗ ಕರಾಚಿಗೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

After Namibia 200 elephants slaughtered in Zimbabwe

Drought; ನಮೀಬಿಯಾ ಆಯ್ತು, ಈಗ ಜಿಂಬಾಬ್ವೆಯಲ್ಲಿ 200 ಆನೆಗಳ ಹತ್ಯೆ?

Ranji Trophy: Samit Dravid in possible squad

Ranji Trophy: ಸಂಭಾವ್ಯ ತಂಡದಲ್ಲಿ ಸಮಿತ್‌ ದ್ರಾವಿಡ್‌

Champions Trophy; ICC delegation to Karachi for security review

Champions Trophy; ಭದ್ರತೆ ಪರಿಶೀಲನೆಗೆ ಐಸಿಸಿ ನಿಯೋಗ ಕರಾಚಿಗೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.