ಚೆಂಡು ಒಂದು ಅಡಿ ದೂರ ಹೋಗಿದ್ದರೆ ಫಲಿತಾಂಶವೇ ಬದಲಾಗುತ್ತಿತ್ತು !

ಬ್ರಾಥ್ ವೇಟ್ ಹೋರಾಡಿದರೂ ಸೋತ ವಿಂಡೀಸ್

Team Udayavani, Jun 23, 2019, 10:49 AM IST

carlos

ಮ್ಯಾಂಚೆಸ್ಟರ್: ಈ ವಿಶ್ವಕಪ್ ನ ಅತೀ ರೋಮಾಂಚನಕಾರಿ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಐದು ರನ್ ಅಂತರದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದೆ. ಅದ್ಭುತ ಬ್ಯಾಟಿಂಗ್ ಮಾಡಿದ ವಿಂಡೀಸ್ ನ ಕಾರ್ಲೋಸ್ ಬ್ರಾಥ್ ವೇಟ್ ಶತಕ ಸಿಡಿಸಿದರೂ ತಂಡಕ್ಕೆ ಗೆಲುವು ತರುವಲ್ಲಿ ವಿಫಲರಾದರು.

ಇಲ್ಲಿನ ಓಲ್ಡ್ ಟ್ರಫಾರ್ಡ್ ಮೈದಾನದಲ್ಲಿ ಶನಿವಾರ ನಡೆದ 29ನೇ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿತ್ತು. ವೇಗಿ ಕಾಟ್ರೆಲ್ ವಿಂಡೀಸ್ ಗೆ ಉತ್ತಮ ಆರಂಭವನ್ನೇ ನೀಡಿದರು. ಕೇವಲ 7 ರನ್ ಗೆ ಕಿವೀಸ್ ಆರಂಭಿಕರಿಬ್ಬರು ಪೆವಿಲಿಯನ್ ಸೇರಿಯಾಗಿತ್ತು. ನಂತರ ಒಂದಾದ ನಾಯಕ ವಿಲಿಯಮ್ಸನ್ ಮತ್ತು ಅನುಭವಿ ರಾಸ್ ಟೇಲರ್ ತಂಡಕ್ಕೆ ಆಧಾರವಾದರು. ಟೇಲರ್ 69 ರನ್ ಬಾರಿಸಿದರೆ, ವಿಲಿಯಮ್ಸನ್ ಕೂಟದ ಮತ್ತೊಂದು ಶತಕ ಬಾರಿಸಿದರು(148 ರನ್ ) . ಕೊನೆಯಲ್ಲಿ ಮತ್ತೆ ಕುಸಿತ ಕಂಡ ಕಿವೀಸ್ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತು.

ಉತ್ತಮ ಆರಂಭ ಪಡೆಯದ ವಿಂಡೀಸ್
292 ರನ್ ಗುರಿ ಸವಾಲು ಪಡೆದ ವಿಂಡೀಸ್ ಗೆ ಕೂಡ ನಿರೀಕ್ಷಿತ ಆರಂಭ ಸಿಗಲಿಲ್ಲ. ಶೈ ಹೋಪ್ ಮತ್ತು ನಿಕೊಲಸ್ ಪೂರನ್ ತಲಾ ಒಂದು ರನ್ ಗಳಿಸಿ ಔಟಾದರು. ನಂತರ ಜೊತೆಯಾದ ಅನುಭವಿ ಗೇಲ್ ಮತ್ತು ಯುವ ಆಟಗಾರ ಶಿಮ್ರನ್ ಹೆತ್ಮೈರ್ ಮೂರನೇ ವಿಕೆಟ್ ಗೆ 122 ರನ್ ಜೊತೆಯಾಟ ನಡೆಸಿದರು. ಹೆತ್ಮೈರ್ 54 ರನ್ ಗಳಿಸಿ ಔಟಾದರೆ, ಗೇಲ್ 87 ರನ್ ಗಳಿಸಿದರು. ಅಲ್ಲಿಯ ತನಕ ವಿಂಡೀಸ್ ಕೈಯಲ್ಲೇ ಇದ್ದ ಪಂದ್ಯವನ್ನು ನ್ಯೂಜಿಲ್ಯಾಂಡ್ ನಿಧಾನವಾಗಿ ತನ್ನೆಡೆಗೆ ಸೆಳೆದುಕೊಂಡಿತು. ವಿಂಡೀಸ್ ಆಟಗಾರರು ಪೆವಿಲಿಯನ್ ಪೆರೇಡ್ ನಡೆಸಿದರು.

ಬ್ರಾಥ್ ವೇಟ್ ಅಬ್ಬರ
ಒಂದು ಹಂತದಲ್ಲಿ 167 ರನ್ ಗೆ ಏಳು ವಿಕೆಟ್ ಕಳೆದು ಕೊಂಡ ವಿಂಡೀಸ್ ಇನ್ನೂರು ರನ್ ಒಳಗೆ ಆಲೌಟ್ ಆಗುವ ಲಕ್ಷಣ ಕಂಡು ಬಂದಿತ್ತು. ಆಗ ಏಕಾಂಗಿಯಾಗಿ ಹೋರಾಡಿದ ಕಾರ್ಲೋಸ್ ಬ್ರಾಥ್ ವೇಟ್ ಕಿವೀಸ್ ಫೀಲ್ಡರ್ ಗಳಿಗೆ ಮೈದಾನದ ಮೂಲೆ ಮೂಲೆಯ ಪರಿಚಯ ಮಾಡಿಸಿದರು. ಬಾಲಂಗೋಚಿಗಳ ಜೊತೆ ಸೇರಿ ಹೋರಾಟ ನಡೆಸಿದ ಬ್ರಾಥ್ ವೇಟ್ ವಿಂಡೀಸ್ ಗೆ ಮತ್ತೆ ಗೆಲುವಿನ ಅಸೆ ಚಿಗುರಿಸಿದರು. ಕೇವಲ 82 ಎಸೆತಗಳಲ್ಲಿ 101 ರನ್ ಬಾರಿಸಿದ ಬ್ರಾಥ್ ವೇಟ್ ಒಂಬತ್ತು ಫೋರ್ ಮತ್ತು ಐದು ಸಿಕ್ಸರ್ ಚಚ್ಚಿದರು.

ಕ್ಷಣ ಕ್ಷಣದ ರೋಮಾಂಚನ
ಕೊನೆಯ ಮೂರು ಓವರ್ ಗಳಲ್ಲಿ ಗೆಲುವಿಗೆ 33 ರನ್ ಅಗತ್ಯವಿತ್ತು. ಈ ಕೂಟದ ಯಶಸ್ವಿ ಬೌಲರ್ ಆದ ಮ್ಯಾಟ್ ಹೆನ್ರಿ ಎಸೆದ 48ನೇ ಓವರ್ ನಲ್ಲಿ ಭರ್ಜರಿ ಮೂರು ಸಿಕ್ಸರ್ ಸಹಾಯದಿಂದ 25 ರನ್ ಚಚ್ಚಿದ ಬ್ರಾಥ್ ವೇಟ್ ಗೆ ಕೊನೆಯ 12 ಎಸೆತಗಳಲ್ಲಿ ಕೇವಲ 8 ರನ್ ಗಳಿಸಲಷ್ಟೇ ಬಾಕಿ ಇತ್ತು. ಆದರೆ ನೀಶಮ್ ಎಸೆದ 49ನೇ ಓವರ್ ನ ಮೊದಲ ಮೂರು ಎಸೆತಗಳಲ್ಲಿ ಯಾವುದೇ ರನ್ ಬರಲಿಲ್ಲ. ನಾಲ್ಕನೇ ಎಸೆತಕ್ಕೆ ಎರಡು ರನ್ ತೆಗೆದ ಬ್ರಾಥ್ ವೇಟ್ ಅದ್ಭುತ ಶತಕ ಪೂರೈಸಿದರು.

ಗೆಲುವಿಗೆ ಕೇವಲ 6 ರನ್ ಅಗತ್ಯವಿತ್ತು. ಕೊನೆಯ ಒಂದು ವಿಕೆಟ್ ಕೈಯಲ್ಲಿತ್ತು. ಓವರ್ ನ ಅಂತಿಮ ಎಸೆತವನ್ನು ಬಾನೆತ್ತೆರಕ್ಕೆ ಎತ್ತಿದ ಕಾರ್ಲೋಸ್ ಬ್ರಾಥ್ ವೇಟ್ ವಿಂಡೀಸ್ ಗೆ ಅದ್ಭುತ ಗೆಲುವು ತಂದರು ಎಂದೇವಿಂಡೀಸ್ ಅಭಿಮಾನಿಗಳು ಭಾವಿಸಿರುವಾಗ ಚೆಂಡು ಸಿಕ್ಸರ್ ಗೆರೆಯ ಹತ್ತಿರವೇ ನಿಂತಿದ್ದ ಟ್ರೆಂಟ್ ಬೌಲ್ಟ್ ಕೈ ಸೇರಿತ್ತು. ಕಿವೀಸ್ 5 ರನ್ ಅಂತರದಿಂದ ಗೆದ್ದಿತು. ಚೆಂಡು ಒಂದು ಅಡಿ ದೂರ ಹೋಗಿದ್ದರೆ ಪಂದ್ಯದ ಫಲಿತಾಂಶವೇ ಬದಲಾಗುತಿತ್ತು. ಒಂದು ಕ್ಷಣ 2016 ಟಿ ಟ್ವೆಂಟಿ ವಿಶ್ವಕಪ್ ಫೈನಲ್ ನೆನಪು ಮಾಡಿದ್ದ ಕಾರ್ಲೋಸ್ ಬ್ರಾಥ್ ವೇಟ್ ಕೊನೆಯವರೆಗೂ ಹೋರಾಡಿದರೂ ಗೆಲುವು ದಕ್ಕಲಿಲ್ಲ.

ಕಿವೀಸ್ ನಾಯಕ ವಿಲಿಯಮ್ಸನ್ ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ನ್ಯೂಜಿಲ್ಯಾಂಡ್ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ನೆಗೆಯಿತು.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.