![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 25, 2020, 5:45 AM IST
ಪಾಟ್ನಾ: “ನಿಮ್ಮ ಅಪ್ಪನನ್ನು ಕೇಳಿ – ಅವಕಾಶ ಸಿಕ್ಕಾಗ ಯಾವುದಾದರೂ ಶಾಲೆ, ಕಾಲೇಜುಗಳನ್ನು ತೆರೆದಿದ್ದಾರೆಯೋ ಅಥವಾ ಹಣ ಮಾಡುವುದರಲ್ಲೇ ಬ್ಯುಸಿಯಾಗಿದ್ದರೋ ಎಂದು?’
ಹೀಗೆಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧ ನೇರ ವಾಗ್ಧಾಳಿ ನಡೆಸಿರುವುದು ಬಿಹಾರ ಸಿಎಂ ನಿತೀಶ್ ಕುಮಾರ್. ಚುನಾವಣೆಗೆ ಇನ್ನೇನು 4 ದಿನಗಳು ಇರುವಂತೆಯೇ ಟೇಘ್ರಾ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಾ, ರಾಜಕೀಯ ಪ್ರತಿಸ್ಪರ್ಧಿ ವಿರುದ್ಧ ಕಟು ಮಾತು ಗಳಿಂದಲೇ ದಾಳಿ ನಡೆಸಿ ರುವ ನಿತೀಶ್, “ರಾಜ್ಯದ ಅಧಿಕಾರದ ಗದ್ದುಗೆಯಲ್ಲಿ ಇತರರೂ ಇದ್ದರು. ಆದರೆ ಅವರೇನು ಮಾಡಿದರು? ಶಾಲೆ-ಕಾಲೇಜು ಕಟ್ಟಿದರಾ? ಆಡಳಿತ ನಡೆಸಿದರು, ಅಕ್ರಮ ಆಸ್ತಿ ಮಾಡಿಕೊಂಡರು, ಜೈಲಿಗೆ ಹೋದರು ಅಷ್ಟೆ’ ಎಂದರು.
ಇದೇ ವೇಳೆ, ಎಲ್ಜೆಪಿ ಸ್ಥಾಪಕ ರಾಮ್ವಿಲಾಸ್ ಪಾಸ್ವಾನ್ ಹುಟ್ಟೂರು ಅಲೌಲಿಯಲ್ಲಿ ಶನಿವಾರ ಬಿಹಾರ ಸಿಎಂ ನಿತೀಶ್ ಕುಮಾರ್ ಚುನಾವಣಾ ಪ್ರಚಾರ ನಡೆಸಿದ್ದಾರೆ. ಆದರೆ, ತಮ್ಮ ಭಾಷಣದಲ್ಲಿ ಎಲ್ಲೂ ಎಲ್ಜೆಪಿ ಅಥವಾ ಚಿರಾಗ್ ಪಾಸ್ವಾನ್ ಪರವಾಗಲೀ, ವಿರುದ್ಧವಾಗಲೀ ಪ್ರಸ್ತಾವ ಮಾಡಲಿಲ್ಲ.
10 ಲಕ್ಷ ಉದ್ಯೋಗ, ಸಾಲ ಮನ್ನಾ: ಆರ್ಜೆಡಿ ಶನಿವಾರ ಬಿಹಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, 10 ಲಕ್ಷ ಉದ್ಯೋಗ ಸೃಷ್ಟಿ, ರೈತರ ಸಾಲ ಮನ್ನಾ, ಹೊಸ ಕೈಗಾರಿಕಾ ನೀತಿ ಸೇರಿದಂತೆ ವಿವಿಧ ಆಶ್ವಾಸನೆಗಳನ್ನು ನೀಡಿದೆ. ಅಧಿಕಾರಕ್ಕೆ ಬಂದರೆ ಕೃಷಿ, ಕೈಗಾರಿಕೆ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಪಕ್ಷದ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.
ಎನ್ಡಿಎಗೆ ಜಯ?
ಮುಂದಿನ ವಾರವೇ ಬಿಹಾರ ಚುನಾವಣೆಯ ಮೊದಲ ಹಂತ ಆರಂಭವಾಗಲಿದ್ದು, ಎಬಿಪಿ -ಸಿವೋಟರ್ ನಡೆಸಿರುವ ಚುನಾವಣಾಪೂರ್ವ ಸಮೀಕ್ಷೆಯೂ ಎನ್ಡಿಎಗೆ ಜಯ ಖಚಿತ ಎಂದು ಹೇಳಿದೆ.
ಫಡ್ನವೀಸ್ಗೆ ಸೋಂಕು
ಬಿಹಾರ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಅವರಿಗೆ ಶನಿ ವಾರ ಕೊರೊನಾ ಸೋಂಕು ದೃಢಪಟ್ಟಿದೆ. ವಿಶೇಷವೆಂದರೆ, ಬಿಹಾರದಲ್ಲಿ ಬಿಜೆಪಿಯ ಒಟ್ಟು 7 ನಾಯ ಕರಿಗೆ ಪಾಸಿಟಿವ್ ಆದಂತಾಗಿದೆ. ಈಗಾಗಲೇ ಪಕ್ಷದ ನಾಯ ಕರಾದ ಸುಶೀಲ್ ಮೋದಿ, ಶಹನವಾಜ್ ಹುಸೇನ್, ರಾಜೀವ್ ಪ್ರತಾಪ್ ರೂಡಿ, ಮಂಗಲ್ ಪಾಂಡೆ, ಜೆಡಿಯು ನ ವಿಜಯ್ ಕುಮಾರ್ ಮಾಂಝಿಗೆ ಸೋಂಕು ದೃಢಪಟ್ಟಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.