Olympics ತಯಾರಿಗೆ ಆರ್ಥಿಕ ನೆರವು ಪಡೆದಿಲ್ಲ: ಅಶ್ವಿ‌ನಿ ಪೊನ್ನಪ್ಪ

ಟಾರ್ಗೆಟ್‌ ಪೋಡಿಯಂ ಯೋಜನೆಯ ಸಹಾಯ ಪಡೆದಿಲ್ಲ ಎಂದ ಶಟ್ಲರ್‌

Team Udayavani, Aug 14, 2024, 12:00 AM IST

ASHWINI-PONNAPPA

ಬೆಂಗಳೂರು: ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಸ್ಕೀಮ್‌ನ (ಟಿಒಪಿಎಸ್‌) ಅಡಿಯಲ್ಲಿ ಒಲಿಂಪಿಕ್ಸ್‌ ತಯಾರಿಗಾಗಿ ತಾನು ಯಾರಿಂದಲೂ 1.5 ಕೋಟಿ ರೂ. ಹಣ ಸ್ವೀಕರಿಸಲಿಲ್ಲ, ಇದೊಂದು ಸುಳ್ಳು ವರದಿ ಎಂದು ಪ್ಯಾರಿಸ್‌ ಒಲಿಂಪಿಕ್ಸ್‌ ಮಹಿಳಾ ಡಬಲ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕನ್ನಡತಿ ಅಶ್ವಿ‌ನಿ ಪೊನ್ನಪ್ಪ ಸ್ಪಷ್ಟನೆ ನೀಡಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ ವನಿತಾ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ ಮತ್ತು ತನಿಷಾ ಕ್ರಾಸ್ಟೊ ಜೋಡಿ ಸ್ಪರ್ಧಿಸಿತ್ತು. ಆದರೆ ಗ್ರೂಪ್‌ ಹಂತದಲ್ಲೇ ಸೋತು ಕೂಟದಿಂದ ಹೊರಬಿದ್ದಿತ್ತು. ಇದರ ಬೆನ್ನಲ್ಲೇ, ಟಿಒಪಿಎಸ್‌ ಮೂಲಕ ಅಶ್ವಿ‌ನಿ ಮತ್ತು ತನಿಷಾ ತಲಾ 1.5 ಕೋಟಿ ರೂ. ನೆರವು ಪಡೆದ ಹೊರತಾಗಿಯೂ ಒಲಿಂಪಿಕ್ಸ್‌ನಲ್ಲಿ ಅವರು ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಇವರ ವಿರುದ್ಧ ಟೀಕೆಗಳು ಕೇಳಿ ಬಂದಿದ್ದವು. ಇದೇ ವಿಚಾರವಾಗಿ ಸ್ಪಷ್ಟನೆ ನೀಡಿರುವ ಅಶ್ವಿ‌ನಿ, ಅವೆಲ್ಲ ಸುಳ್ಳು ಎಂದಿದ್ದಾರೆ.

ಟಿಒಪಿಎಸ್‌ನಲ್ಲಿ ನಾನಿರಲಿಲ್ಲ
ಈ ಬಗ್ಗೆ ಟ್ವೀಟ್‌ ಮಾಡಿರುವ ಅಶ್ವಿ‌ನಿ, ಸತ್ಯಾಸತ್ಯತೆ ಪರಿಶೀಲಿಸದೆ ಹೇಗೆ ವರದಿಯೊಂದನ್ನು ಬರೆಯಲು ಸಾಧ್ಯ? ಇಂತಹ ಸುಳ್ಳುಗಳನ್ನು ಯಾಕಾದರೂ ಬರೆಯುತ್ತಾರೆ? ನಾವು ತಲಾ 1.5 ಕೋಟಿ ರೂ. ಪಡೆದಿದ್ದೇವೆಯೇ? ಯಾರು ಕೊಟ್ಟಿದ್ದು? ಯಾಕಾಗಿ? ನಾನಂತೂ ಈ ಹಣವನ್ನು ಪಡೆದಿಲ್ಲ. ನಾನು ಟಿಒಪಿಎಸ್‌ ಯೋಜನೆಯ ಭಾಗವಾಗಿರಲೂ ಇಲ್ಲ ಎಂದು ಬರೆದುಕೊಂಡಿದ್ದಾರೆ.

2023ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದ ಎಚ್‌.ಎಸ್‌. ಪ್ರಣಯ್‌ 1.8 ಕೋಟಿ, ಅಶ್ವಿ‌ನಿ-ತನಿಷಾ ತಲಾ 1.5 ಕೋಟಿ, ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಜೋಡಿಗೆ 5.62 ಕೋಟಿ ರೂ., ಜರ್ಮನಿಯಲ್ಲಿ ತರಬೇತಿಗಾಗಿ ಲಕ್ಷ್ಯ ಸೇನ್‌ಗೆ 26.60 ಲಕ್ಷ, ಫ್ರಾನ್ಸ್‌ನಲ್ಲಿ ಸಿಂಧು ತರಬೇತಿಗೆ ಸರಕಾರ 9.33 ಲಕ್ಷ ರೂ. ನೀಡಿತ್ತು ಎಂದು ವರದಿಯೊಂದು ಹೇಳಿತ್ತು. ಇಷ್ಟಾಗಿಯೂ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ ವಿಭಾಗ ನೀರಸ ಪ್ರದರ್ಶನ ನೀಡಿದೆ ಎಂದು ಟೀಕೆ ವ್ಯಕ್ತವಾಗಿತ್ತು.

ಟಾಪ್ ನ್ಯೂಸ್

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

1-gadaga

Gadag: ಕೇವಲ 10 ಸಾವಿರ ರೂಪಾಯಿ ಬಡ್ಡಿ ಹಣ ವಾಪಸ್ ಕೊಡದಿದ್ದಕ್ಕೆ ಮನೆಯಿಂದ ಹೊರಹಾಕಿ ಕಿರುಕುಳ

Gadaga: ಅಪ್ರಾಪ್ತೆ ಮೇಲೆ ಅತ್ಯಾಚಾರ… ಪೋಕ್ಸೋ ಕಾಯ್ದೆಯಡಿ ಇಬ್ಬರು ಆರೋಪಿಗಳ ಬಂಧನ

Gadaga: ಅಪ್ರಾಪ್ತೆ ಮೇಲೆ ಅತ್ಯಾಚಾರ… ಪೋಕ್ಸೋ ಕಾಯ್ದೆಯಡಿ ಇಬ್ಬರು ಆರೋಪಿಗಳ ಬಂಧನ

ವಿಜಯಪುರ: ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ… ಸಾಧು-ಸಂತರ ಮೂಲಕ ಈಶ್ವರಪ್ಪ ಶಕ್ತಿ ಪ್ರದರ್ಶನ

ವಿಜಯಪುರ: ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ… ಸಾಧು-ಸಂತರ ಮೂಲಕ ಈಶ್ವರಪ್ಪ ಶಕ್ತಿ ಪ್ರದರ್ಶನ

Trade War: ಅಮೆರಿಕದ ಕಲ್ಲಿದ್ದಲು, ಅನಿಲ ಆಮದಿನ ಮೇಲೆ ಶೇ.15ರಷ್ಟು ಸುಂಕ ಹೇರಿದ ಚೀನಾ!

Trade War: ಅಮೆರಿಕದ ಕಲ್ಲಿದ್ದಲು, ಅನಿಲ ಆಮದಿನ ಮೇಲೆ ಶೇ.15ರಷ್ಟು ಸುಂಕ ಹೇರಿದ ಚೀನಾ!

Kalaburagi: MLC ಬಿ.ಜಿ. ಪಾಟೀಲ್ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ: ಕೆಲ ಕಾಲ ಆತಂಕ

Kalaburagi: MLC ಬಿ.ಜಿ. ಪಾಟೀಲ್ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ: ಕೆಲ ಕಾಲ ಆತಂಕ

ರಿಷಬ್‌ ʼKantara Chapter 1ʼ ವಾರ್​ ಸೀಕ್ವೆನ್ಸ್​ ಶೂಟ್‌ಗೆ 500ಕ್ಕೂ ಹೆಚ್ಚು ಫೈಟರ್ಸ್‌

ರಿಷಬ್‌ ʼKantara Chapter 1ʼ ವಾರ್​ ಸೀಕ್ವೆನ್ಸ್​ ಶೂಟ್‌ಗೆ 500ಕ್ಕೂ ಹೆಚ್ಚು ಫೈಟರ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Abhishek-Sharma

ಒಂದು ಹಂತದ ಮಟ್ಟಿಗೆ ಯುವರಾಜ್‌ ಸಿಂಗ್‌ ಬಯಕೆ ಈಡೇರಿಸಿದ್ದೇನೆ: ಅಭಿಷೇಕ್‌ ಶರ್ಮ

BPL–Darbar-rajashai

BPL: ಸಂಬಳ ಕೊಡದ ಸಿಟ್ಟಿಗೆ ಕ್ರಿಕೆಟಿಗರ ಕಿಟ್‌ ಬ್ಯಾಗ್‌ ಲಾಕ್‌ ಮಾಡಿದ ಬಸ್‌ ಚಾಲಕ!

RCB-women

ಆರ್‌ಸಿಬಿ ಮಹಿಳಾ ತಂಡಕ್ಕೆ ಹೀದರ್‌ ಗ್ರಹಾಂ, ಗಾರ್ಥ್

JONATHAN

National Games: ಪುರುಷರ ಶೂಟಿಂಗ್‌ ಸ್ಪರ್ಧೆ; ರಾಜ್ಯದ ಶೂಟರ್‌ ಜೋನಾಥನ್‌ಗೆ ಚಿನ್ನ

Sanju-Samson

Injury: ವಿಕೆಟ್‌ ಕೀಪರ್‌-ಬ್ಯಾಟರ್‌ ಸಂಜು ಸ್ಯಾಮ್ಸನ್‌ ಗಾಯಾಳು

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

7

Udupi: ಪಶುಪಾಲನ ಇಲಾಖೆಯಲ್ಲಿ ಶೇ.80 ಹುದ್ದೆಗಳು ಖಾಲಿ

1-gadaga

Gadag: ಕೇವಲ 10 ಸಾವಿರ ರೂಪಾಯಿ ಬಡ್ಡಿ ಹಣ ವಾಪಸ್ ಕೊಡದಿದ್ದಕ್ಕೆ ಮನೆಯಿಂದ ಹೊರಹಾಕಿ ಕಿರುಕುಳ

Gadaga: ಅಪ್ರಾಪ್ತೆ ಮೇಲೆ ಅತ್ಯಾಚಾರ… ಪೋಕ್ಸೋ ಕಾಯ್ದೆಯಡಿ ಇಬ್ಬರು ಆರೋಪಿಗಳ ಬಂಧನ

Gadaga: ಅಪ್ರಾಪ್ತೆ ಮೇಲೆ ಅತ್ಯಾಚಾರ… ಪೋಕ್ಸೋ ಕಾಯ್ದೆಯಡಿ ಇಬ್ಬರು ಆರೋಪಿಗಳ ಬಂಧನ

6

Kaup: ಧಾರ್ಮಿಕತೆಯೊಂದಿಗೆ ಟೂರಿಸಂಗೂ ಒತ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.