Notifiable disease: ಹಾವು ಕಡಿತ: 8 ತಿಂಗಳಲ್ಲಿ 58 ಜನ ಸಾವು
1 ವಾರದಲ್ಲಿ 387 ಜನರಿಗೆ ಹಾವು ಕಡಿತ
Team Udayavani, Sep 7, 2024, 12:27 AM IST
ಬೆಂಗಳೂರು: ರಾಜ್ಯದಲ್ಲಿ ಹಾವು ಕಡಿತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಣೆ ಮಾಡಿದರೂ ಸಾವಿನ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. ಒಂದು ವಾರದಲ್ಲಿ 387 ಜನರಿಗೆ ಹಾವು ಕಚ್ಚಿದ್ದು ಐವರು ಹಾವಿನ ವಿಷದಿಂದ ಪ್ರಾಣ ಕಳೆದುಕೊಂಡಿದ್ದಾರೆ.
2024ರ ಜ. 1ರಿಂದ ಸೆ. 5ರ ವರೆಗೆ ರಾಜ್ಯದಲ್ಲಿ 8,171 ಜನರಿಗೆ ಹಾವು ಕಚ್ಚಿದ್ದು, 58 ಜನ ಮೃತಪಟ್ಟಿದ್ದರು. ಕಳೆದ ವರ್ಷ 5,316 ಮಂದಿ ಹಾವಿನ ಕಡಿತಕ್ಕೆ ಒಳಗಾಗಿದ್ದು, ಅವರಲ್ಲಿ 13 ಮಂದಿ ಮೃತಪಟ್ಟಿದ್ದಾರೆ. 2024ರ ಫೆಬ್ರವರಿ ಯಲ್ಲಿ ಕರ್ನಾಟಕದಲ್ಲಿ ಹಾವು ಕಡಿತವನ್ನು ಅಧಿಸೂಚಿತ ಕಾಯಿಲೆ ಎಂದು ರಾಜ್ಯ ಸರಕಾರ ಘೋಷಣೆ ಮಾಡಿತ್ತು.
ಹಾವು ಬಂತೆಂದು ಕಚೇರಿಯೇ ಸ್ಥಳಾಂತರ!
ಅಥಣಿ ಪಟ್ಟಣದಲ್ಲಿರುವ ಬ್ರಿಟಿಷರ ಕಾಲದ ಹಳೆ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ ಹಾವು ಕಾಣಿಸಿಕೊಂಡದ್ದರಿಂದ ಸಿಬಂದಿ ಇಡೀ ದಿನ ಹೊರಗೆ ಕುಳಿತು ಕಾರ್ಯ ನಿರ್ವಹಿಸಿದ್ದಲ್ಲದೇ ನೂತನ ಸರಕಾರಿ ಕಟ್ಟಡ ಆಗುವವರೆಗೂ ಇಲ್ಲಿರಲು ಸಾಧ್ಯವಿಲ್ಲ ಎಂದು ನಿರ್ಣಯಿಸಿ ಸಂಜೆ ವೇಳೆಗೆ ಕಚೇರಿಯನ್ನೇ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡಿದ ಘಟನೆ ಗುರುವಾರ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Darshan: ಅಪರಿಚಿತರಿಂದ ದರ್ಶನ್ಗೆ ಹನುಮಾನ್ ಚಾಲೀಸಾ ಪುಸ್ತಕ
Munirathna Audio: ಬಿಜೆಪಿ ಶಾಸಕ ಮುನಿರತ್ನ ಪ್ರಕರಣ; ಮತ್ತೊಂದು ಆಡಿಯೋ ವೈರಲ್?
Congress Govt., ಸಿಐಡಿಗೆ ಪ್ರಕರಣಗಳ ಹೊರೆ: ವಿಚಾರಣೆ, ತನಿಖೆ ವಿಳಂಬ!
Karnataka Govt.,; ಕೆಎಸ್ಸಾರ್ಟಿಸಿ ನಿಲ್ದಾಣದಲ್ಲಿ ಶೀಘ್ರವೇ ನಮ್ಮ ಕ್ಲಿನಿಕ್!
Prajwal Revanna Case ಸಹಾಯವಾಣಿ ಇದ್ದರೂ ದೂರಿಗೆ ನಕಾರ!
MUST WATCH
ಹೊಸ ಸೇರ್ಪಡೆ
Kiccha Sudeep: ʼಸೈಮಾʼ ಕಾರ್ಯಕ್ರಮದಲ್ಲಿ ನಿರೂಪಕನಿಗೆ ʼಕನ್ನಡʼ ಪಾಠ ಮಾಡಿದ ಕಿಚ್ಚ
ಇನ್ನು ಹತ್ತು ವರ್ಷಗಳಲ್ಲಿ ದಾವಣಗೆರೆ ಐಎಎಸ್ ಹಬ್- ಜಿ.ಬಿ. ವಿನಯ್ ಕುಮಾರ್
Kolkata: ಟ್ರೈನಿ ವೈದ್ಯೆ ಅತ್ಯಾಚಾರ – ಹತ್ಯೆ ಪ್ರಕರಣ: ಮಹತ್ವದ ಮಾಹಿತಿ ನೀಡಿದ ಸಿಬಿಐ
Sandalwood: ದೆವ್ವ ಹುಡುಕಿ ಹೊರಟ ʼಮಾಂತ್ರಿಕʼ
Shiv sena:ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂ. ಬಹುಮಾನ: ಶಿವಸೇನಾ ಶಾಸಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.