ಎಫ್ಎಟಿಎಫ್ 6 ಕಟ್ಟಾಜ್ಞೆ ಪಾಲಿಸದ ಪಾಕ್
Team Udayavani, Oct 19, 2020, 1:31 AM IST
ಹೊಸದಿಲ್ಲಿ: ಉಗ್ರರಿಗೆ ಆರ್ಥಿಕ ನೆರವು ನೀಡಿ ಇಕ್ಕಟ್ಟಿಗೆ ಸಿಲುಕಿರುವ ಪಾಕಿಸ್ಥಾನಕ್ಕೆ ಈ ಬಾರಿಯೂ “ಬೂದು ಪಟ್ಟಿ’ ಭೂತ ಬೆನ್ನೇರುವ ಸಾಧ್ಯತೆಯಿದೆ. ಮಸೂದ್ ಅಜರ್, ಹಫೀಜ್ ಸಯೀದ್ ವಿರುದ್ಧ ಕ್ರಮ ಸೇರಿದಂತೆ ಎಫ್ಎಟಿಎಫ್ ಸೂಚಿಸಿದ್ದ 6 ಕಟ್ಟಾಜ್ಞೆಗಳನ್ನು ಪಾಕ್ ಇನ್ನೂ ಪೂರೈಸಿಲ್ಲ!
ಉಗ್ರರ ಹಣಕಾಸು ಚಟುವಟಿಕೆ ಮೇಲೆ ಕಣ್ಣಿಡುವ ಆರ್ಥಿಕ ಕ್ರಿಯಾ ಕಾರ್ಯಪಡೆ (ಎಫ್ಎಟಿಎಫ್) ಅ.21-23 ರವರೆಗೆ ಸಭೆ ಸೇರಲಿದೆ. ಆದರೆ, ಈ ಒಂದು ವರ್ಷದಲ್ಲಿ ಎಫ್ಎಟಿಎಫ್ ಹೇಳಿದ್ದ ಪ್ರಮುಖ 6 ಸೂಚನೆಗಳನ್ನು ಪಾಲಿಸದೇ ಇರುವುದು ಸ್ವತಃ ಪಾಕ್ಗೆ ಮುಳುವಾಗಲಿದೆ.
ಉಗ್ರರ ನಿಯಂತ್ರಣಕ್ಕೆ ಎಫ್ಎಟಿಎಫ್ ಒಟ್ಟು 27 ಟಾಸ್ಕ್ಗಳನ್ನು ನೀಡಿತ್ತು. ಇವುಗಳಲ್ಲಿ 21 ಮಾತ್ರವೇ ಇಸ್ಲಾಮಾಬಾದ್ ಪೂರೈಸಿದೆ. ಜೆಇಎಂ ಮುಖ್ಯಸ್ಥ ಅಜರ್, ಎಲ್ಇಟಿ ಸಂಸ್ಥಾಪಕ ಹಫೀಜ್, ಪ್ರಮುಖ ಉಗ್ರ ಕಮಾಂ ಡರ್ ಝಾಕೀರ್ ರೆಹಮಾನ್ ಲಖೀÌ ವಿರುದ್ಧ ಇಮ್ರಾನ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಭಯೋತ್ಪಾದನೆ ನಿಯಂತ್ರಣ ಕಾನೂನಿನಡಿಯಲ್ಲಿ ನಿಷೇಧಕ್ಕೊಳಗಾಗಿದ್ದ 7,600 ಉಗ್ರರ ಪಟ್ಟಿಯಲ್ಲಿ 4 ಸಾವಿರಕ್ಕೂ ಅಧಿಕ ಹೆಸರನ್ನು ಕೈಬಿಟ್ಟಿರುವುದು ಪಾಕ್ಗೆ ಅತಿದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ.
ಎಫ್ಎಟಿಎಫ್ ನ 39 ಸದಸ್ಯ ರಾಷ್ಟ್ರಗಳ ಪೈಕಿ 12 ರಾಷ್ಟ್ರಗಳ ಬೆಂಬಲ ಪಡೆದರಷ್ಟೇ ಪಾಕ್ ಬೂದುಪಟ್ಟಿಯಿಂದ ಹೊರಬರಲಿದೆ. ಆದರೆ ಪಾಕಿಸ್ಥಾನವನ್ನು ಟರ್ಕಿ, ಚೀನ, ಮಲೇಷ್ಯಾ ಮಾತ್ರವೇ ಬೆಂಬಲಿಸುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಐಶಾರಾಮಿ ಕಾರು, ಫೈವ್ ಸ್ಟಾರ್ ಹೋಟೆಲ್ ಶೈಲಿಯ ಆಶ್ರಮ…ಕೋಟಿ ಸಂಪತ್ತಿನ ಒಡೆಯ ಭೋಲೆ ಬಾಬಾ!
9 ತಿಂಗಳ ಹಿಂದೆ ನಾಪತ್ತೆಯಾದ ಮಗಳ ಬಗ್ಗೆ DCM ಪವನ್ ಕಲ್ಯಾಣ್ ಬಳಿ ದೂರು.. 9 ದಿನದಲ್ಲಿ ಪತ್ತೆ
Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ
Agniveer; ಪರಿಹಾರವಲ್ಲ, ಪಿಂಚಣಿ,ಹುತಾತ್ಮ ಗೌರವ ಕೊಡಿ:ಯೋಧನ ತಂದೆ ಆಗ್ರಹ
Bihar ಸೇತುವೆ ಕುಸಿತಕ್ಕೆ ಹೂಳು ತೆಗೆದಿದ್ದೇ ಕಾರಣ!
MUST WATCH
ಹೊಸ ಸೇರ್ಪಡೆ
MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು
ಐಶಾರಾಮಿ ಕಾರು, ಫೈವ್ ಸ್ಟಾರ್ ಹೋಟೆಲ್ ಶೈಲಿಯ ಆಶ್ರಮ…ಕೋಟಿ ಸಂಪತ್ತಿನ ಒಡೆಯ ಭೋಲೆ ಬಾಬಾ!
Bengaluru: ಬೈಕ್ಗೆ ಲಾರಿ ಡಿಕ್ಕಿ : ರಿಯಲ್ ಎಸ್ಟೇಟ್ ಏಜೆಂಟ್ ಸಾವು
Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು
Bengaluru: ಹಳೇ ದ್ವೇಷಕ್ಕೆ ವ್ಯಕ್ತಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.