ಸ್ವರ ಸಾಮ್ರಾಟ್ ಪಂಡಿತ್ ವೆಂಕಟೇಶ್ ಕುಮಾರ್; ಇವರಿಗೆ ಖ್ಯಾತಿ ಸುಮ್ಮನೆ ಬಂದಿಲ್ಲ

ಪ್ರಖ್ಯಾತಿಯ ಉತ್ತುಂಗಕ್ಕೆ ಏರುವ ಹಿಂದೆ ಅಪಾರ ಶ್ರಮ ಅಡಗಿದೆ

Team Udayavani, Dec 7, 2022, 7:52 PM IST

1 wrrwerew

ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜ ಗಾಯಕ ಮತ್ತು ಗುರು ಪಂಡಿತ್ ಎಂ. ವೆಂಕಟೇಶ್ ಕುಮಾರ್ ಅವರು ತಮ್ಮ ರೋಮಾಂಚಕ ಗಾಯನ ಶೈಲಿಗೆ ಹೆಸರುವಾಸಿಯಾದವರು. ಪ್ರೊ. ವೆಂಕಟೇಶ್ ಕುಮಾರ್ ಅವರು ಮಧುರವಾದ, ದೃಢವಾದ ಮತ್ತು ರೋಮಾಂಚಕ ಧ್ವನಿಯೊಂದಿಗೆ ಕೇಳುಗರನ್ನು ಹೊಸ ಲೋಕದಲ್ಲಿ ತೇಲಿಸುವ ಪ್ರತಿಭಾನ್ವಿತ ಗಾಯಕರಲ್ಲಿ ಒಬ್ಬರಾಗಿದ್ದಾರೆ.

1953 ಜುಲೈ 1 ರಂದು ಜನನ. 1968ರಲ್ಲಿ ಅವರು 12 ವರ್ಷದವರಾಗಿದ್ದಾಗ, ವೆಂಕಟೇಶ್ ಕುಮಾರ್ ಅವರನ್ನು ಅವರ ಚಿಕ್ಕಪ್ಪ ಶ್ರೀ ಬೆಳಗಲ್ಲು ವೀರಣ್ಣ ಅವರು ಗದಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಪುಟ್ಟರಾಜ ಗವಾಯಿಗಳ ಬಳಿಗೆ ಕರೆದೊಯ್ದರು. ಪಂಡಿತ ಪುಟ್ಟರಾಜ ಗವಾಯಿಯವರ ಬಳಿ ಗ್ವಾಲಿಯರ್ ಮತ್ತು ಕಿರಾಣಾ ಘರಾಣಾ ಶೈಲಿಗಳಲ್ಲಿ ಹಿಂದೂಸ್ಥಾನಿ ಗಾಯನವನ್ನು ಕಲಿತರು. ಅವರು ತಮ್ಮ ಪ್ರಸ್ತುತಿಗಳಲ್ಲಿ ಈ ಶೈಲಿಗಳನ್ನು ಸಲೀಸಾಗಿ ಸಂಯೋಜಿಸುತ್ತಾರೆ, ಆದರೂ ಅವರು ಈ ಘರಾನಾಗಳನ್ನು ಮೀರಿದ ಪ್ರಭಾವಗಳನ್ನು ಒಪ್ಪಿಕೊಳ್ಳುತ್ತಾರೆ.

ಪುಟ್ಟರಾಜ ಗವಾಯಿ ಅವರಲ್ಲಿ ಸುದೀರ್ಘ 12 ವರ್ಷಗಳ ಕಾಲ ಆಶ್ರಮದಲ್ಲಿ ವಾಸಿಯಾಗಿ ಕಠಿಣ ಅಭ್ಯಾಸದ ಮೂಲಕವೇ ಉನ್ನತ ಶ್ರೇಣಿಯ ಗಾಯಕರಾದವರು. ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರು. ಅವರ ಶ್ರದ್ದೆ ಮತ್ತು ಸಂಗೀತವನ್ನೇ ಪ್ರಪಂಚ ಎಂದು ತಿಳಿದು  ಹಿಂದೂಸ್ಥಾನಿ ಗಾಯನವನ್ನು ಕಲಿತರು.

ಕುಮಾರ್ ಅವರು ತಮ್ಮ ಪ್ರಸ್ತುತಿಗಳಲ್ಲಿ ಈ ಎರಡೂ ಶೈಲಿಗಳನ್ನು ಸಂಯೋಜಿಸುತ್ತಾರೆ. ಗುರುಗಳಿಂದ ಕರ್ನಾಟಕ ಸಂಗೀತದಲ್ಲಿಯೂ ತರಬೇತಿ ಪಡೆದಿದ್ದರು ಮತ್ತು ಇದರ ಪರಿಣಾಮವಾಗಿ, ಪಂಡಿತ್ ಕುಮಾರ್ ಅವರ ಸಂಗೀತದಲ್ಲಿ, ವಿಶೇಷವಾಗಿ ಅವರ ಸರಗಮ್ ಮಾದರಿಗಳಲ್ಲಿ ಕರ್ನಾಟಕ ಸಂಗೀತದ ಅಂಶಗಳ ಕುರುಹುಗಳನ್ನು ಕಾಣಬಹುದಾಗಿದೆ.

ಸವಾಯಿ ಗಂಧರ್ವ ಸಂಗೀತ ಮಹೋತ್ಸವದಲ್ಲಿ ಪ್ರದರ್ಶನ ನೀಡಲು ಶ್ರೇಷ್ಠ ಗಾಯಕ ಪಂಡಿತ್ ಭೀಮಸೇನ್ ಜೋಶಿ ಅವರಿಂದ ಮೊದಲ ಆಹ್ವಾನವನ್ನು ಪಡೆದರು. ಇದು ವೆಂಕಟೇಶ್ ಕುಮಾರ್ ಅವರಿಗೆ ದೊರೆತ ರಾಷ್ಟ್ರೀಯ ಮಾನ್ಯತೆಗೆ ಮೊದಲ ಹೆಜ್ಜೆಯಾಗಿತ್ತು. ಅಂದಿನಿಂದ ಅವರು ಸಾವಿರಾರು ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು 1988 ರಿಂದ ಆಲ್ ಇಂಡಿಯಾ ರೇಡಿಯೊದ “ಎ” ದರ್ಜೆಯ ಕಲಾವಿದರಾಗಿದ್ದಾರೆ.

”ಪ್ರತಿಷ್ಠಿತ ಸವಾಯಿ ಗಂಧರ್ವ ಸಂಗೀತೋತ್ಸವದಲ್ಲಿ ಮೊದಲ ಬಾರಿಗೆ ಹಾಡಬೇಕಿತ್ತು. ನನ್ನ ಪ್ರದರ್ಶನದ ಮೊದಲು, ನಾನು ಕಲಾವಿದರ ಕೋಣೆಯಲ್ಲಿ ಕುಳಿತಿದ್ದೆ. ಭಾರತರತ್ನ ಪಂಡಿತ್ ಭೀಮಸೇನ್ ಜೋಶಿಯವರು ಅಲ್ಲಿಗೆ ಬಂದು ರಾಗಗಳನ್ನು ಹೆಚ್ಚು ಅಭ್ಯಾಸ ಮಾಡುವಂತೆ ಸಲಹೆ ನೀಡಿದರು. ಪಂಡಿತ್‌ಜೀಯವರ ಸಲಹೆಯ ಮೇರೆಗೆ ನಾನು ಅಭ್ಯಾಸವನ್ನು ಪ್ರಾರಂಭಿಸಿದೆ. ಅವರ ಮಾರ್ಗದರ್ಶನ ನನಗೆ ಸಂಗೀತದಲ್ಲಿ ಮುಂದುವರಿಯಲು ಸಹಕಾರಿಯಾಯಿತು” ಎಂದು ದಿಗ್ಗಜರ ಒಡನಾಟವನ್ನು ಸದಾ ನೆನಪಿಸುತ್ತಾರೆ.

ಸಂಗೀತ ಮನೋಧರ್ಮದ ಮೇಧಾವಿಗಳಾದ ವೆಂಕಟೇಶ್ ಕುಮಾರ್ ಅವರು ಸ್ವರ ಸಿದ್ಧತೆಗೆ ಪರಿಶುದ್ಧ ತಯಾರಿ ಹೆಚ್ಚು ಮುಖ್ಯವಾಗಿ, ನಮ್ರತೆ ಮತ್ತು ಸರಳತೆಯನ್ನು ಹೊಂದಿರುವ ಖ್ಯಾತ ಗಾಯಕರಲ್ಲಿ ಒಬ್ಬರು.

ಗಾಯನ ಸಂಪ್ರದಾಯದಲ್ಲಿ ಶ್ರೀಮಂತರಾಗಿ, ಭಕ್ತಿಯಲ್ಲಿ ಆಳವಾಗಿ ಅವರ ಅಪಾರ ಅನುಭವ, ಅವರಲ್ಲಿ ಆಳವಾಗಿ ಬೇರೂರಿರುವ ಬದ್ಧತೆಯು ಅವರನ್ನು ಸಂಗೀತಲೋಕದ ದಿಗ್ಗಜನಾಗಿ ಪರಿಗಣಿಸಲು ಕೆಲಸ ಮಾಡಿದೆ ಎನ್ನುವುದು ಅವರ ಮಾತುಗಳಲ್ಲೇ ತಿಳಿದು ಬರುತ್ತದೆ. ದಾಸರ ಪದಗಳು ಮತ್ತು ಭಕ್ತಿಗೀತೆಗಳನ್ನು ಹಾಡುವುದರಲ್ಲಿ ಅವರು ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದಾರೆ.

ಪಂ. ವೆಂಕಟೇಶ್ ಕುಮಾರ್ ಅವರು ಕನ್ನಡ ವಚನಗಳು ದಾಸರ ಪದಗಳ ಗಾಯನಕ್ಕಾಗಿ ಕೋಟ್ಯಂತರ ಅಭಿಮಾನಿಗಳ ಪ್ರೀತಿ ಪಡೆದಿದ್ದಾರೆ, ನಾದವರ್ಷಿಣಿ ಸೇರಿದಂತೆ ಅನೇಕ ಭಕ್ತಿ ಮತ್ತು ಶಾಸ್ತ್ರೀಯ ಸಿಡಿ ಆಲ್ಬಂಗಳನ್ನು ಹೊಂದಿದ್ದಾರೆ. ಸ್ವರಶ್ರೀ, ಸಂಗೀತ ರತ್ನ, ಕರ್ನಾಟಕ ರಾಜ್ಯೋತ್ಸವ, ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ವೆಂಕಟೇಶ್ ಕುಮಾರ್ ಅವರು ಪ್ರಸ್ತುತ ಧಾರವಾಡ ವಿಶ್ವವಿದ್ಯಾಲಯದ ಸಂಗೀತ ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಗದಗ ಸಮೀಪದ ವಿಜಯ್ ಮಹಾಂತೇಶ ಕಲಾ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಕುಮಾರ್ ಅಲ್ಲಿ ಒಂದೂವರೆ ವರ್ಷ ಬೋಧನೆ ಮಾಡಿದರು. ಉಡುಪಿಯ ಮುಕುಂದ ಕೃಪಾದಲ್ಲಿಯೂ ಪಾಠ ಮಾಡಿದ್ದಾರೆ. ಕರ್ನಾಟಕ ಸರ್ಕಾರವು ನಡೆಸಿದ ಪರೀಕ್ಷೆಗೆ ಸೂಚಿಸಲಾದ ಸಂಗೀತದ ಪಠ್ಯಪುಸ್ತಕವನ್ನು ಅವರು ರಚಿಸಿದ್ದಾರೆ.

ಕುಮಾರ್ 33 ವರ್ಷಗಳ ಕಾಲ ಧಾರವಾಡದ ಯೂನಿವರ್ಸಿಟಿ ಕಾಲೇಜ್ ಆಫ್ ಮ್ಯೂಸಿಕ್‌ನಲ್ಲಿ ಸಂಗೀತ ವಿದ್ಯೆಯನ್ನು ಶಿಷ್ಯ ಕೋಟಿಗೆ ಧಾರೆ ಎರೆದರು. ಈ ಬದ್ಧತೆಯು ನಿಯಮಿತವಾಗಿ ಅವರಿಗೆ ಸಂಗೀತ ಕಚೇರಿಗಳನ್ನು ತಿರಸ್ಕರಿಸುವ ಅಗತ್ಯವೂ ಎದುರಾಗಿತ್ತು. ಅವರು 2015 ರಲ್ಲಿ ನಿವೃತ್ತಿ ಹೊಂದಿದರು.

ಸಾಧನೆಯ ಶಿಖರವನ್ನು ಏರಿದ ಇವರಿಗೆ ಸಂದ ಸನ್ಮಾನಗಳು ಸಾವಿರಾರು. ಉನ್ನತ ಪ್ರಶಸ್ತಿಗಳಾದ ಪದ್ಮಶ್ರೀ (2016), ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2012), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1999), ಕರ್ನಾಟಕ ಸಂಗೀತ ನಾಟ್ಯ ಅಕಾಡೆಮಿ ಪ್ರಶಸ್ತಿ (2007), ವತ್ಸಲಾ ಭೀಮಸೇನ್ ಜೋಶಿ ಪ್ರಶಸ್ತಿ (2008), ಕೃಷ್ಣ ಹಂಗಲ್ ಪ್ರಶಸ್ತಿ (2009), ಮಧ್ಯಪ್ರದೇಶ ಸರ್ಕಾರದಿಂದ ಕಾಳಿದಾಸ್ ಸಮ್ಮಾನ್. (2017 ವರ್ಷ, 2021 ರಲ್ಲಿ ಪ್ರದಾನ) ಹುಡುಕಿ ಬಂದಿವೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1

ಬಚ್ಚನ್, ಮೋಹನ್‌ಲಾಲ್‌ ನಂತಹ 20 ಸ್ಟಾರ್ಸ್‌ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.