![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 15, 2022, 10:52 PM IST
ಹೊಸದಿಲ್ಲಿ: ಥಾಮಸ್ ಕಪ್ ಗೆಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬ್ಯಾಂಕಾಕ್ನಿಂದ ಭಾರತಕ್ಕೆ ಮರಳಿದ ಬಳಿಕ ತನ್ನ ನಿವಾಸಕ್ಕೆ ಆಗಮಿಸುವಂತೆ ತಂಡದ ಸದಸ್ಯರಿಗೆ ಆಹ್ವಾನ ನೀಡಿದರು.
ಆ್ಯತ್ಲೀಟ್ಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಲು ಪ್ರಧಾನಿ ಎಂದಿಗೂ ಮರೆಯುವುದಿಲ್ಲ. ರವಿವಾರ ಕೂಡ ಆಟಗಾರರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ರಲ್ಲದೇ ತವರಿಗೆ ಮರಳಿದ ಬಳಿಕ ಸಂವಾದ ನಡೆಸಲು ತನ್ನ ನಿವಾಸಕ್ಕೆ ಬರುವಂತೆ ಆಹ್ವಾನ ನೀಡಿದರು.
ಪ್ರಧಾನಿ ಜತೆ ಮೊದಲು ಕಿದಂಬಿ ಶ್ರೀಕಾಂತ್ ಮಾತನಾಡಿದರು. ಆಬಳಿಕ ಲಕ್ಷ್ಯ ಸೇನ್, ಪ್ರಣಯ್ ಮತ್ತು ಚಿರಾಗ್ ಶೆಟ್ಟಿ ಜತೆ ಮಾತನಾಡಿದರು. ನೀವೆಲ್ಲರೂ ಸೇರಿ ಈ ಸಾಧನೆ ಮಾಡಿದ್ದೀರಿ. ಇದೊಂದು ಭಾರತದ ಅದ್ಭುತ ಗೆಲುವುಗಳಲ್ಲಿ ಒಂದಾಗಿದೆ ಎಂದವರು ಈ ವೇಳೆ ತಿಳಿಸಿದರು. ಆಟಗಾರರು ವಿಶ್ವಖ್ಯಾತಿಯ ಸಾಧನೆ ಮಾಡಲು ಪ್ರೇರೆಪಿಸಿದ ಹೆತ್ತವರಿಗೂ ಕೂಡ ಈ ಸಂದರ್ಭ ಮೋದಿ ಅವರು ಅಭಿನಂದನೆ ಸಲ್ಲಿಸಿದರು.
ರಾಷ್ಟ್ರಪತಿ ಕೋವಿಂದ್ ಅಭಿನಂದನೆ
ಬ್ಯಾಡ್ಮಿಂಟನ್ ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳು. ತಂಡವು ಇತಿಹಾಸ ನಿರ್ಮಿಸಿದೆ. ಭವಿಷ್ಯದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಇದು ಪ್ರೇರಣೆಯಾಗಲಿ. ಚಾಂಪಿಯನ್ನರ ಸಾಧನೆಯಿಂದ ಭಾರತ ಹೆಮ್ಮೆಪಡುವಂತೆ ಆಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಭಾರತೀಯ ತಂಡಕ್ಕೆ ಅಭಿನಂದನೆ ಗಳು. ತಂಡವು ಬಲಿಷ್ಠ ತಂಡಗಳಾದ ಮಲೇಶ್ಯ, ಡೆನ್ಮಾರ್ಕ್ ಮತ್ತು ಇಂಡೋ ನೇಶ್ಯ ವಿರುದ್ಧ ಗೆಲುವು ಸಾಧಿಸುವ ಮೂಲಕ ಅಸಾಧಾರಣ ಸಾಧನೆ ಮಾಡಿದೆ ಎಂದು ಕೇಂದ್ರದ ಕ್ರೀಡಾ ಸಚಿವ ಅನುರಾಗ್ ಠಾಕುರ್ ತಿಳಿಸಿದ್ದಾರೆ.
ಇದೊಂದು ಭಾರತೀಯ ಬ್ಯಾಡ್ಮಿಂಟನ್ ಕ್ರೀಡೆಗೆ ಐತಿಹಾಸಿಕ ದಿನ ವಾಗಿದೆ. ಬ್ಯಾಡ್ಮಿಂಟನ್ ತಂಡದಿಂದ ಅಸಾಮಾನ್ಯ ಸಾಧನೆ ದಾಖಲಾಗಿದೆ. ಹಲವು ಬಾರಿ ಕಠಿನ ಪರಿಸ್ಥಿತಿ ಎದು ರಿಸಿದರೂ ವಿಚಲಿತರಾಗದೇ ಅದ್ಭುತ ನಿರ್ವಹಣೆ ನೀಡಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಆಟಗಾರರಿಗೆ ಮತ್ತು ತರಬೇತುದಾರರಿಗೆ ಅಭಿನಂದನೆಗಳು. ನೀವೆಲ್ಲರೂ ಚಾಂಪಿಯನ್ಸ್ ಎಂದು ಒಲಿಂಪಿಕ್ ಚಿನ್ನ ಗೆದ್ದಿರುವ ಶೂಟರ್ ಅಭಿನವ್ ಬಿಂದ್ರಾ ಹೇಳಿದ್ದಾರೆ.
ಇದೊಂದು ಭಾರತೀಯ ಬ್ಯಾಡ್ಮಿಂಟನ್ ರಂಗದ ಐತಿಹಾಸಿಕ ಕ್ಷಣ ಮತ್ತು ಸಾಧನೆ ಯಾಗಿದೆ. ಭಾರತೀಯ ತಂಡಕ್ಕೆ ಅಭಿನಂದನೆಗಳು ಎಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಭಾರತೀಯ ಬ್ಯಾಡ್ಮಿಂಟನ್ ಕ್ರೀಡೆಯು ಹೊಸ ಎತ್ತರಕ್ಕೆ ಏರುತ್ತಿದೆ. 73 ವರ್ಷಗಳ ಥಾಮಸ್ ಕಪ್ ತಂಡ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ತಂಡಕ್ಕೆ ಅಭಿನಂದನೆಗಳು. ನಿಮ್ಮಿಂದ ನಾವೆಲ್ಲರೂ ಹೆಮ್ಮೆಪಡುವಂತಾಗಿದೆ ಎಂದು ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ನ ಅಧ್ಯಕ್ಷ ಹಿಮಾಂತ ಬಿಸ್ವ ಶರ್ಮ ಹೇಳಿದ್ದಾರೆ.
ಬ್ಯಾಡ್ಮಿಂಟನ್ ಕೂಡ ಜನಪ್ರಿಯವಾಗಲಿ
ಬ್ಯಾಂಕಾಕ್, ಮೇ 15: ಭಾರತೀಯ ತಂಡವು 1983ರ ವಿಶ್ವಕಪ್ ಗೆದ್ದಾಗ ದೇಶವೂ ಕ್ರಿಕೆಟ್ಗೆ ಯಾವ ರೀತಿಯ ಪ್ರೋತ್ಸಾಹ ನೀಡಿತ್ತೋ ಆದೇ ರೀತಿ ಥಾಮಸ್ ಕಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತೀಯ ಬ್ಯಾಡ್ಮಿಂಟನ್ ಕ್ರೀಡೆಗೂ ಪ್ರೋತ್ಸಾಹ ನೀಡಲಿ ಎಂದು ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡದ ಕೋಚ್ ವಿಮಲ್ ಕುಮಾರ್ ಹಾರೈಸಿದ್ದಾರೆ. 1983ರಲ್ಲಿ ಭರಾತ ವಿಶ್ವಕಪ್ ಗೆದ್ದಾಗ ದೇಶ ದೆಲ್ಲಡೇ ವಿಜಯೋ ತ್ಸವ ಆಚರಿಸಲಾಗಿತ್ತು. ಕ್ರಿಕೆಟ್ ಜನಪ್ರಿಯ ಕ್ರೀಡೆ ಯಾಗಿರ ಬಹುದು. ಆದರೆ ಬ್ಯಾಡ್ಮಿಂಟನ್ ಆಟಗಾರರ ಈ ಸಾಧನೆಯಿಂದ ಬ್ಯಾಡ್ಮಿಂಟನ್ ಕ್ರೀಡೆಯೂ ಜನಪ್ರಿಯವಾಗಲಿ ಎಂದವರು ತಿಳಿಸಿದರು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.