Policy Revise: ಡಿಸೆಂಬರ್ನಿಂದ ರಾಜ್ಯದಲ್ಲಿ ಹೊಸ ಜವುಳಿ ನೀತಿ: ಶಿವಾನಂದ ಪಾಟೀಲ್
ಅಕ್ಟೋಬರ್ ಒಳಗೆ ಹೊಸ ನೀತಿ ಸಿದ್ಧವಾಗಲಿದೆ: ಸಕ್ಕರೆ, ಜವುಳಿ ಖಾತೆ ಸಚಿವ
Team Udayavani, Sep 7, 2024, 2:20 AM IST
ಬೆಂಗಳೂರು: ರಾಜ್ಯದಲ್ಲಿ ಈ ವರ್ಷದ ಡಿಸೆಂಬರ್ನಿಂದ ಹೊಸ ಜವುಳಿ ನೀತಿ ಜಾರಿಗೊಳಿಸಲಾಗುವುದು ಎಂದು
ಸಕ್ಕರೆ ಹಾಗೂ ಜವುಳಿ ಖಾತೆ ಸಚಿವ ಶಿವಾನಂದ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರತೀ 5 ವರ್ಷಗಳಿಗೊಮ್ಮೆ ಜವುಳಿ ನೀತಿ ಪರಿಷ್ಕರಿಸಲಾಗುತ್ತದೆ. ಈಗಿರುವ ನೀತಿ ನವೆಂಬರ್ 24ಕ್ಕೆ ಅಂತ್ಯಗೊಳ್ಳಲಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಅಕ್ಟೋಬರ್ ಒಳಗೆ ಹೊಸ ನೀತಿ ಸಿದ್ಧವಾಗಲಿದೆ ಎಂದರು.
ಸಕ್ಕರೆ ನೀತಿ ರೂಪಿಸಲು ಹಿಂದಿನ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿ’ಸೋಜಾ ನೇತೃತ್ವ ದಲ್ಲಿ ಸಮಿತಿ ರಚಿಸಲಾಗಿತ್ತು. ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿನ ನೀತಿಗಳನ್ನು ಪರಿಶೀಲಿಸಿ, ರಾಜ್ಯಕ್ಕೆ ಅಗತ್ಯವಾದ ನೀತಿಯನ್ನು ಸಿದ್ಧಗೊಳಿಸ ಲಾಗುತ್ತಿದೆ ಎಂದರು.
ರಾಜ್ಯ ಸರಕಾರ ವಿದ್ಯುತ್ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳ ವಿದ್ಯುತ್ ಸಬ್ಸಿಡಿಗೆ ಇದ್ದ ಮಿತಿಯನ್ನು ರದ್ದುಪಡಿಸಿದೆ. ಇದರಿಂದ ಪ್ರತೀ ನೇಕಾರರಿಗೆ ವಾರ್ಷಿಕ ಕನಿಷ್ಠ 40 ಸಾವಿರ ರೂ. ಉಳಿತಾಯವಾಗಲಿದೆ. ಮೊದಲು 1ರಿಂದ 10 ಎಚ್ಪಿ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿತ್ತು. 10 ಎಚ್ಪಿಗಿಂತ ಮೇಲ್ಪಟ್ಟವರು ತಿಂಗಳಿಗೆ ಎಷ್ಟೇ ಬಳಸಿದರೂ ಪ್ರತೀ ಯೂನಿಟ್ಗೆ 1.25 ರೂ. ಪಾವತಿಸ ಬೇಕು. ಇದರಿಂದ 4 ಸಾವಿರ ಘಟಕಗಳಿಗೆ ಅನುಕೂಲವಾಗಲಿದೆ ಎಂದರು.
ಎಂ.ಬಿ.ಪಾಟೀಲ್ಗಿಂತ ಹಿರಿಯರು ಕಾಂಗ್ರೆಸ್ನಲ್ಲಿದ್ದಾರೆ: ಸಚಿವ
ಮುಂದಿನ ಮುಖ್ಯಮಂತ್ರಿ ಎಂ.ಬಿ. ಪಾಟೀಲ್ ಎಂಬ ಚರ್ಚೆ ನಡೆಯುತ್ತಿರುವ ಬಗ್ಗೆ ಜವುಳಿ ಖಾತೆ ಸಚಿವ ಶಿವಾನಂದ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ನಲ್ಲಿ ಎಂ.ಬಿ. ಪಾಟೀಲ್ಗಿಂತ ತುಂಬಾ ಜನ ಹಿರಿಯರು ಇದ್ದಾರೆ. ಆದ್ದರಿಂದ ಅವರಿನ್ನೂ ಕಾಯಬೇಕು ಎಂದು ತಿಳಿಸಿದ್ದಾರೆ. ಗೃಹ ಸಚಿವ ಪರಮೇಶ್ವರ್ ಹಾಗೂ ಎಂ.ಬಿ. ಪಾಟೀಲ್ ಉಪಾಹಾರ ಸಭೆ ನಡೆಸಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅವರ ವಿರುದ್ಧ ಬಂದಿರುವ ಭ್ರಷ್ಟಾಚಾರದ ಆರೋಪಕ್ಕೆ ನಾನು ಉತ್ತರಿಸಲಾಗದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.