![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Mar 6, 2022, 9:35 PM IST
ಪುಣೆ: ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪುಣೆ ಮೆಟ್ರೋ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ, ಭಾನುವಾರ ಲೋಕಾರ್ಪಣೆ ಮಾಡಿದರು. ಪುಣೆಯ ಗಾರ್ವಾರೆ ಮೆಟ್ರೋ ರೈಲು ನಿಲ್ದಾಣದಲ್ಲಿ ನಡೆದ ಉದ್ಘಾಟನಾ ಸಮಾರಂಭದ ನಂತರ, ನಿಲ್ದಾಣದಲ್ಲಿರುವ ಕಿಯೋಸ್ಕ್ನಿಂದ ಖುದ್ದು ಟಿಕೆಟ್ ಖರೀದಿಸಿದ ಮೋದಿ, ಅಲ್ಲಿಂದ ಐದು ಕಿ.ಮೀ. ದೂರದಲ್ಲಿರುವ ಆನಂದನಗರ್ ನಿಲ್ದಾಣದವರೆಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಪ್ರಧಾನಿಯಿದ್ದ ಬೋಗಿಯಲ್ಲಿದ್ದ ದಿವ್ಯಾಂಗರ ಜೊತೆಯಲ್ಲಿ ಮೋದಿ ಉಭಯಕುಶಲೋಪರಿ ನಡೆಸಿದರು.
ಒಟ್ಟು 32 ಕಿ.ಮೀ. ಉದ್ದದ ಈ ಯೋಜನೆಗೆ 2016ರಲ್ಲಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಮೊದಲ ಹಂತದಲ್ಲಿ 12 ಕಿ.ಮೀ. ದೂರದವರೆಗಿನ ಯೋಜನೆ ಸಿದ್ಧವಾಗಿದ್ದು, ಉಳಿದ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ.
ಶಿವಾಜಿ ಪುತ್ಥಳಿ ಅನಾವರಣ
ಪುಣೆ ಮಹಾನಗರ ಪಾಲಿಕೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಿವಾಜಿ ಪುತ್ಥಳಿಯನ್ನು ಪ್ರಧಾನಿ ಲೋಕಾರ್ಪಣೆ ಮಾಡಿದರು. 9.5 ಅಡಿ ಎತ್ತರದ 1,850 ಕೆಜಿ ತೂಕದ ಕಂಚು ಲೋಹದ ಮತ್ತೂಂದು ಸ್ವರೂಪವಾದ ಗನ್ ಮೆಟಲ್ನಿಂದ ನಿರ್ಮಿಸಲಾಗಿದೆ. ಇದೇ ವೇಳೆ, ಮೋದಿಯವರು ಪಾಲಿಕೆ ಆವರಣದಲ್ಲಿರುವ ಜ್ಯೋತಿಭಾಯಿ ಫುಲೆಯವರ ಪುತ್ಥಳಿಗೂ ಮಾಲಾರ್ಪಣೆ ಮಾಡಿದರು.
ಮ್ಯೂಸಿಯಂ ಉದ್ಧಾಟನೆ
ಖ್ಯಾತ ವ್ಯಂಗ್ಯಚಿತ್ರಕಾರ ದಿ. ಆರ್.ಕೆ. ಲಕ್ಷ್ಣಣ್ರವರ ಜೀವನವನ್ನು ಕಟ್ಟಿಕೊಡುವ ಹೊಸ ವಸ್ತುಸಂಗ್ರಹಾಲಯವನ್ನು ಮೋದಿ ಉದ್ಘಾಟಿಸಿದರು. ಇದರಲ್ಲಿ ಲಕ್ಷ್ಮಣ್ ಅವರು ಕಾಮನ್ ಮ್ಯಾನ್ ಪರಿಕಲ್ಪನೆಯಡಿ ರಚಿಸಿದ 30,000 ವ್ಯಂಗ್ಯಚಿತ್ರಗಳನ್ನು ಕಾಣಬಹುದಾಗಿದೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.