ರೋಗನಿರೋಧಕ ಶಕ್ತಿ ವೃದ್ಧಿಗೆ ಆದ್ಯತೆ


Team Udayavani, Jul 10, 2021, 6:45 AM IST

ರೋಗನಿರೋಧಕ ಶಕ್ತಿ ವೃದ್ಧಿಗೆ ಆದ್ಯತೆ

ಕೊರೊನಾ ವೈರಸ್‌ನಿಂದಾಗಿ ಜಗತ್ತಿನಾ ದ್ಯಂತ ಇಡೀ ಮಾನವ ಕುಲ ಬಳಲುತ್ತಿದೆ. ಇದರಿಂದ ರಕ್ಷಣೆ ಪಡೆಯುವಲ್ಲಿ ನಮ್ಮ ದೇಹದಲ್ಲಿ ನೈಸರ್ಗಿಕವಾಗಿರುವ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದು ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳಿಗೂ ಕೊರೊನಾ ಸೋಂಕು ಬಾಧಿಸದಂತೆ ಅವರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆದ್ಯತೆ ನೀಡುವುದು ಅವಶ್ಯವಾಗಿದೆ.

ವಿಟಮಿನ್‌-ಸಿ, ವಿಟಮನ್‌-ಡಿ ಮತ್ತು ಸತು(ಜಿಂಕ್‌) ಮಾತ್ರೆಗಳನ್ನು ನೀಡುವುದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕಗಳಾಗಿವೆ. ದೈನಂದಿನ ಆವಶ್ಯಕತೆಗೆ ವಿಟಮಿನ್‌ -ಡಿ ಪೂರಕವು ಉಪಯುಕ್ತವಾಗಿದೆ. ವಿಟಮಿನ್‌-ಡಿ ಜೀವಸತ್ವವು ಇಮ್ಯೂನೋ ಮೊಡ್ಯುಲೆಟರಿ ಆಗಿದ್ದು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ವಿಟಮಿನ್‌- ಸಿ ಉತ್ಕರ್ಷಣ ನಿರೋಧಕ (ಆ್ಯಂಟಿ-ಆಕ್ಸಿಡೆಂಟ್‌) ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಪ್ರತಿಕ್ರಿಯಾತ್ಮಕ ಆಮ್ಲಜನಕ ಪ್ರಭೇದಗಳನ್ನು (ರಿಯಾಕ್ಟಿವ್‌ ಆಕ್ಸಿಜನ್‌ ಸ್ಪೈಸಸ್‌) ಹಿಮ್ಮೆಟ್ಟಿಸಲು ವಿಟಮಿನ್‌ -ಸಿ ಉಪಯುಕ್ತವಾಗಿದೆ. ಸೋಂಕಿನ ಸಮಯದಲ್ಲಿ ವಿಟಮಿನ್‌- ಸಿ ಮಟ್ಟವು ಕಡಿಮೆಯಾಗಬಹುದು ಹಾಗೂ ಸೋಂಕಿನ ತೀವ್ರತೆಯೊಂದಿಗೆ ವಿಟಮಿನ್‌ -ಸಿಯ ಆವಶ್ಯಕತೆಯು ಹೆಚ್ಚಾಗುತ್ತದೆ.
ಸತು(ಜಿಂಕ್‌)ವಿನಲ್ಲಿನ ಇಮ್ಯುನೋಮೊಡ್ಯುಲೇಟರಿ ಮತ್ತು ಆ್ಯಂಟಿವೈರಲ್‌ ಗುಣಲಕ್ಷಣಗಳು ಮಹತ್ವದ ಪಾತ್ರ ವಹಿಸುತ್ತವೆ. ಸತುವಿನ ಕೊರತೆಯು ವೈರಸ್‌ ಹಾಗೂ ಬ್ಯಾಕ್ಟಿರೀಯಾಗಳನ್ನು ನಾಶಮಾಡುವ “ಎನ್‌ಕೆ’ ಮತ್ತು ಸೈಟೊಟೊಝಿಕ್‌ “ಟಿ ‘ ಸೆಲ್‌ಗ‌ಳ ಚಟುವಟಿಕೆಗಳನ್ನು ಕಡಿಮೆ ಮಾಡುತ್ತದೆ.

ಜೀವಸತ್ವಗಳನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಬಹುದು- ಕೊಬ್ಬು ಕರಗಬಲ್ಲ- ಪ್ಯಾಟ್‌ ಸೊಲ್ಯುಬುಲ್‌ ಹಾಗೂ ನೀರಿನಲ್ಲಿ ಕರಗುವ ವಾಟರ್‌ ಸೊಲ್ಯುಬುಲ್‌. ನೀರಿನಲ್ಲಿ ಕರಗುವಂಥ ಜೀವಸತ್ವಗಳು ಸಾಮಾನ್ಯವಾಗಿ ನಿರುಪದ್ರವವಾಗಿರುತ್ತವೆ. ಏಕೆಂದರೆ ಇದನ್ನು ಮೂತ್ರದ ಮೂಲಕ ಹೊರಹಾಕಲಾಗುತ್ತದೆ. ಕೊಬ್ಬು ಕರಗಬಲ್ಲ ವಿಟಮಿನ್‌ ಎ, ಡಿ, ಸಿ, ಕೆ ಗಳನ್ನು ಅಧಿಕವಾಗಿ ತೆಗೆದುಕೊಂಡಾಗ ಅವು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂಬುದನ್ನು ಹೆತ್ತವರು ನೆನಪಿನಲ್ಲಿಟ್ಟುಕೊಳ್ಳಬೇಕು.

ವಿಪರೀತ ರೋಗನಿರೋಧಕ ಶಕ್ತಿಯು ಹಾನಿಕಾರಕವಾಗಬಹುದು ಎಂಬುದಕ್ಕೆ ಪುರಾವೆಗಳಿವೆ. ಇದರರ್ಥ ರೋಗ ನಿರೋಧಕ ವ್ಯವಸ್ಥೆಯ ನಿಷ್ಕ್ರಿಯ (ಡಿಸ್‌ಫಂಕ್ಷನ್‌) ಅಥವಾ ಒವರ್‌ಡ್ರೈವ್‌- ಹಾನಿಗೆ ಕಾರಣವಾಗಬಲ್ಲುದಲ್ಲದೆ ಅತೀ ಬಲವಾದ ರೋಗನಿರೋಧಕ ಶಕ್ತಿಯು ಜೀವಕೋಶಗಳ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಬಹುದು. ಇದರಿಂದಾಗಿ ಪ್ರಮುಖ ಅಂಗಾಂಗಗಳು ಹಾನಿಗೊಳಗಾಗಬಹುದು.

ತಮ್ಮದೇ ಆದ ಅಡ್ಡಪರಿಣಾಮಗಳನ್ನು ಹೊಂದಿರುವ ಪೂರಕಗಳನ್ನು ತೆಗೆದುಕೊಳ್ಳುವುದಕ್ಕಿಂತ ಪ್ರತಿನಿತ್ಯ ದೈಹಿಕ ಚಟುವಟಿಕೆಕೆ, ಸಾಕಷ್ಟು ನೀರಿನ ಸೇವನೆ ಹಾಗೂ ನಿದ್ರೆ ಹೆಚ್ಚು ಪ್ರಯೋಜನಕಾರಿಯಾಗಿದೆ. ತುಳಸಿ ಹಾಗೂ ಶುಂಠಿ-ಆ್ಯಂಟಿ ವೈರಲ್‌ ಹಾಗೂ ಉರಿಯೂತ ನಿರೋಧಕ (ಆ್ಯಂಟಿ ಇನ್‌ಫ್ಲಮೇಟರಿ) ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇವುಗಳನ್ನು ಪ್ರತೀ ದಿನ ಸೇವಿಸಬಹುದು.

ಮಾರುಕಟ್ಟೆಗಳಲ್ಲಿ ಲಭಿಸುವ ರೋಗನಿರೋಧಕ ಶಕ್ತಿ ಹೆಚ್ಚಿಸುವ ಉತ್ಪನ್ನಗಳು ವಿವಿಧ ಔಷಧಯುಕ್ತ ಗಿಡಮೂಲಿಕೆಗಳ ಮಿಶ್ರಣವಾಗಿವೆ. ಪ್ರಸ್ತುತ ಅಧ್ಯಯನದ ಪ್ರಕಾರ ಮೂರರಿಂದ ಆರು ತಿಂಗಳುಗಳವರೆಗೆ ನಿಯಮಿತವಾಗಿ ಇವುಗಳನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ, ಶಕ್ತಿಯ ಮಟ್ಟ, ದೈಹಿಕ ಸಾಮರ್ಥ್ಯ ಮತ್ತು ಮಕ್ಕಳ ಜೀವನದ ಗುಣಮಟ್ಟ ವೃದ್ಧಿಸುತ್ತದೆ.

ಮಕ್ಕಳಿಗಿರಲಿ ಶ್ರೀರಕ್ಷೆ
ಈ ಕೆಲವೊಂದು ಕ್ರಮಗಳನ್ನು ಅನುಸರಿಸುವ ಮೂಲಕ ಮಕ್ಕಳಲ್ಲಿ ರೋನಿರೋಧಕ ಶಕ್ತಿಯನ್ನು ಸ್ವಾಭಾವಿಕವಾಗಿ ಹೆಚ್ಚಿಸಬಹುದಾಗಿದೆ.

1 ಸಮತೋಲಿತ, ಆರೋಗ್ಯಕರ ಆಹಾರ – ಹಣ್ಣು-ತರಕಾರಿಗಳ ಸೇವನೆ.
2 ಸಂಸ್ಕರಿಸಿದ ಆಹಾರವನ್ನು ಸ್ವೀಕರಿಸದೆ ಇರುವುದು.
3 ಪ್ರತೀ ದಿನ 8 ಲೋಟ ನೀರು ಕುಡಿಯುವುದು.
4 ಯೋಗ ಸೇರಿದಂತೆ ಉತ್ತಮ ದೈಹಿಕ ಚಟುವಟಿಕೆಗಳು.
5 8ರಿಂದ 10 ಗಂಟೆ ಉತ್ತಮ ನಿದ್ರೆ.
6 ಮನೆಯಲ್ಲಿ ಒತ್ತಡರಹಿತ ವಾತಾವರಣ ಕಾಯ್ದುಕೊಳ್ಳುವುದು.
7 ಎಳೆಬಿಸಿಲಿನ ಶಾಖ ಪಡೆಯುವುದು.
8 ಮೊಬೈಲ್‌ ಬಳಕೆಯನ್ನು ಕಡಿಮೆ ಮಾಡುವುದು.

– ಡಾ| ಸಂತೋಷ್‌ ಸೋನ್ಸ್‌, ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥರು, ಎ.ಜೆ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.