![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Nov 21, 2024, 9:20 PM IST
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಮಿcನಡ್ಕ ಬಳಿ ಸ್ಕೂಲ್ ಬಸ್ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಖಾಸಗಿ ಬಸ್ ಮನೆಯೊಂದಕ್ಕೆ ನುಗ್ಗಿದ ಘಟನೆ ನ. 21ರಂದು ಸಂಭವಿಸಿದೆ.
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಧುರಾ ಶಿಕ್ಷಣ ಸಂಸ್ಥೆಯ ಶಾಲಾ ಬಸ್ ಅಮಿcನಡ್ಕ ಬಳಿ ಪೆರ್ಲಂಪಾಡಿ ಕಡೆಗೆ ತಿರುವು ಪಡೆದುಕೊಳ್ಳುತ್ತಿದ್ದ ವೇಳೆ ಚಾಲಕ ಯಾವುದೇ ಸಿಗ್ನಲ್ ಹಾಕಿರಲಿಲ್ಲ ಎನ್ನಲಾಗಿದೆ. ಸ್ಕೂಲ್ ಬಸ್ ಹಿಂಬದಿಯಿಂದ ಖಾಸಗಿ ಬಸ್ ಬರುತ್ತಿತ್ತು. ಮುನ್ಸೂಚನೆ ಇಲ್ಲದೆ ದಿಢೀರ್ ಆಗಿ ಸ್ಕೂಲ್ ಬಸ್ ತಿರುವು ಪಡೆದುಕೊಂಡ ಪರಿಣಾಮ ಖಾಸಗಿ ಬಸ್, ಸ್ಕೂಲ್ ಬಸ್ಗೆ ಢಿಕ್ಕಿ ಹೊಡೆಯುವ ಸಾಧ್ಯತೆ ಇತ್ತು. ತತ್ಕ್ಷಣ ಖಾಸಗಿ ಬಸ್ ಚಾಲಕ ಬಸ್ ಅನ್ನು ಇನ್ನೊಂದು ಬದಿಗೆ ತಿರುಗಿಸಿದ್ದು, ಈ ವೇಳೆ ಮನೆಯೊಂದಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ.
ದೊಡ್ಡ ದುರಂತ ತಪ್ಪಿಸಿದ ಬಸ್ ಚಾಲಕ
ಶಾಲಾ ಬಸ್ನಲ್ಲಿ ಹಲವು ವಿದ್ಯಾರ್ಥಿಗಳಿದ್ದು, ಖಾಸಗಿ ಬಸ್ ಢಿಕ್ಕಿ ಹೊಡೆಯುತ್ತಿದ್ದರೆ ಭಾರೀ ಅಪಾಯ ಉಂಟಾಗುವ ಸಾಧ್ಯತೆ ಇತ್ತು. ಇದನ್ನು ಗಮನಿಸಿದ ಚಾಲಕ ಸಮಯಪ್ರಜ್ಞೆ ಮೆರೆದು ತನ್ನ ಬಸ್ ಅನ್ನು ಬೇರೆ ದಿಕ್ಕಿಗೆ ಚಲಾಯಿಸಿದ್ದಾರೆ. ಹಾಗಾಗಿ ದೊಡ್ಡ ದುರಂತವೊಂದು ತಪ್ಪಿದೆ. ಢಿಕ್ಕಿಯಿಂದ ಮನೆಗೆ, ಬಸ್ಗೆ ಹಾನಿ ಉಂಟಾಗಿದೆ.
You seem to have an Ad Blocker on.
To continue reading, please turn it off or whitelist Udayavani.