Railway Track; ಎಡಕುಮೇರಿ: ರೈಲು ಮಾರ್ಗ ದುರಸ್ತಿ ಚುರುಕು
ಚಾರ್ಮಾಡಿ ಘಾಟಿ: ಮರ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ
Team Udayavani, Jul 31, 2024, 6:10 AM IST
ಮಂಗಳೂರು: ಎಡಕುಮೇರಿ ಹಾಗೂ ಕಡಗರವಳ್ಳಿ ನಡುವೆ ರೈಲು ಮಾರ್ಗದಲ್ಲಿ ಆಗಿರುವ ಭೂಕುಸಿತದ ಪ್ರದೇಶಲ್ಲಿ ದುರಸ್ತಿ ಕಾರ್ಯಗಳು ಚುರುಕಾಗಿ ನಡೆಯುತ್ತಿವೆ.
ಇದುವರೆಗೆ 1900 ಘನ ಅಡಿಗಳಷ್ಟು ಬಂಡೆಗಳನ್ನು ಜೋಡಿಸಲಾಗಿದೆ. ಸಂಪೂರ್ಣ ಸುಧಾರಣೆಗೆ ಇನ್ನೂ 2000 ಘನ ಅಡಿ ಬಂಡೆಗಳ ಅಗತ್ಯವಿದೆ. 1 ಲಕ್ಷ ಮರಳ ಚೀಲಗಳು ಅಗತ್ಯವಿದ್ದು ಈಗಾಗಲೇ 93,200 ಚೀಲಗಳನ್ನು ಒದಗಿಸಲಾಗಿದೆ. ಅರ್ತ್ಮೂವರ್ ಮತ್ತಿತರ ಯಂತ್ರೋಪರಕಣಗಳ ಚಾಲನೆಗಾಗಿ 26 ಬ್ಯಾರೆಲ್ ಡೀಸೆಲ್ ಪೂರೈಸಲಾಗಿದೆ.
ಒಟ್ಟಾರೆ ಈಗಾಗಲೇ ಕಾರ್ಯೋನ್ಮು ಖವಾಗಿರುವ 11 ಹಿಟಾಚಿ/ಪಾಕ್ಲೈನ್ ಅರ್ತ್ಮೂವರ್ ಮಷಿನ್ಗಳ ಜತೆಗೆ ಎರಡು ಹೆಚ್ಚುವರಿ ಹಿಟಾಚಿಗಳನ್ನೂ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಸುರಿಯುತ್ತಿರುವ ಮಳೆಯ ಹೊರತಾಗಿಯೂ ಮಂಗಳವಾರ ಕಾರ್ಮಿಕರು 23 ವ್ಯಾಗನ್ಗಳಷ್ಟು ಬಂಡೆಗಳನ್ನು ಕೆಳಗಿಳಿಸಿದ್ದಾರೆ. ಇದುವರೆಗೆ ಒಟ್ಟು 94 ವ್ಯಾಗನ್ ಬಂಡೆಗಳನ್ನು ಈ ಪ್ರದೇಶಕ್ಕೆ ಇಳಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಚಾರ್ಮಾಡಿ ಘಾಟಿ: ರಸ್ತೆಗೆ ಉರುಳಿದ ಮರ, ತೆರವು
ಬೆಳ್ತಂಗಡಿ: ಚಿಕ್ಕಮಗಳೂರು ಹಾಗೂ ಬೆಳ್ತಂಗಡಿ ಭಾಗದಲ್ಲಿ ಮಳೆ ಹೆಚ್ಚಿದ ಪರಿಣಾಮ ಜು.30ರಂದು ಮುಂಜಾನೆ ಚಾರ್ಮಾಡಿ ಘಾಟಿಯ ರಸ್ತೆಗೆ ಮರ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ತತ್ಕ್ಷಣ ಕೊಟ್ಟಿಗೆಹಾರ ಭಾಗದಲ್ಲಿ ವಾಹನ ಸಂಚಾರ ತಡೆಹಿಡಿಯಲಾಯಿತು. ಬಳಿಕ ತೆರವು ಕಾರ್ಯ ನಡೆಸಿ ಮಧ್ಯಾಹ್ನದೊಳಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudubidire: 77 ಕೋ.ರೂ. ವೆಚ್ಚದ ಅಮೃತ್ 2.0 ನೀರಿನ ಯೋಜನೆಗೆ ಚಾಲನೆ
Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ
Surathkal: ಕಾಟಿಪಳ್ಳ ಮಸೀದಿಗೆ ಕಲ್ಲು: 6 ಮಂದಿ ಸೆರೆ
Surathkal: ಬೈಕ್ ನಲ್ಲಿ ಬಂದು ಮಸೀದಿಗೆ ಕಲ್ಲು ಬಿಸಾಡಿದ ಕಿಡಿಗೇಡಿಗಳು… ಪ್ರಕರಣ ದಾಖಲು
Democracy Day: ದಕ್ಷಿಣ ಕನ್ನಡ: 130 ಕಿ.ಮೀ. ವ್ಯಾಪ್ತಿಯಲ್ಲಿ 84,200 ಮಂದಿ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.