Ranaji Trophy: ಹೊರಮೈದಾನ ಒದ್ದೆ : ಕರ್ನಾಟಕ-ಕೇರಳ ಪಂದ್ಯಕ್ಕೆ ತೊಂದರೆ


Team Udayavani, Oct 19, 2024, 1:32 AM IST

ranaj

ಬೆಂಗಳೂರು: ನಗರದಲ್ಲಿ ಗುರುವಾರ ಸುರಿದ ಭಾರೀ ಮಳೆಯಿಂದಾಗಿ ಆಲೂರಿನಲ್ಲಿ ಹೊರಮೈದಾನ ಒದ್ದೆಯಾಗಿದ್ದರಿಂದ ಕರ್ನಾಟಕ ಮತ್ತು ಕೇರಳ ನಡುವಣ ರಣಜಿ ಟ್ರೋಫಿಯ ಎಲೈಟ್‌ “ಸಿ’ ಬಣದ ದ್ವಿತೀಯ ಪಂದ್ಯದ ಮೊದಲ ದಿನ ಕೇವಲ 23 ಓವರ್‌ಗಳ ಆಟ ನಡೆಯಿತು.

ಹೊರಮೈದಾನ ಒದ್ದೆಯಾಗಿದ್ದರಿಂದ ಪಂದ್ಯ ತುಂಬಾ ತಡವಾಗಿ ಆರಂಭಗೊಂಡಿತ್ತು. ಟಾಸ್‌ ಗೆದ್ದ ಕರ್ನಾಟಕ ತಂಡವು ಪಿಚ್‌ನ ಲಾಭವೆತ್ತಲು ಮೊದಲು ಫೀಲ್ಡಿಂಗ್‌ ನಡೆಸಲು ನಿರ್ಧರಿಸಿತು. ಆದರೆ ಕೇರಳದ ಆರಂಭಿಕ ಆಟಗಾರರು ಬಹಳಷ್ಟು ಎಚ್ಚರಿಕೆಯ ಆಟವಾಡಿ 23 ಓವರ್‌ ಆಡಿ ಯಾವುದೇ ವಿಕೆಟ್‌ ಕಳೆದುಕೊಳ್ಳದೇ 88 ರನ್‌ ಗಳಿಸಿದರು. ಮಂದ ಬೆಳಕಿನಿಂದ ದಿನದಾಟ ನಿಲ್ಲಿಸಿದಾಗ ಕೇರಳ 88 ರನ್‌ ಗಳಿಸಿತ್ತು.

ಇನ್ನಿಂಗ್ಸ್‌ ಆರಂಭಿಸಿದ ರೋಹನ್‌ ಕುಣ್ಣುಮ್ಮಾಲ್‌ ಮತ್ತು ವತ್ಸಲ್‌ ಗೌಡ್‌ ಅವರು ಎಚ್ಚರಿಕೆಯ ಆಟವಾಡಿದರು. ಕರ್ನಾಟಕ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕುಣ್ಣುಮ್ಮಾಲ್‌ 74 ಎಸೆತ ಎದುರಿಸಿ 9 ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ 57 ರನ್‌ ಗಳಿಸಿ ಅಜೇಯರಾಗಿ ಉಳಿದರು. ಅವರಿಗೆ ಉಪಯುಕ್ತ ಬೆಂಬಲ ನೀಡಿದ ವತ್ಸಲ್‌ ಗೌಡ್‌ 64 ಎಸೆಗಳಿಂದ 31 ರನ್‌ ಗಳಿಸಿ ಆಡುತ್ತಿದ್ದಾರೆ.

ಸಂಕ್ಷಿಪ್ತ ಸ್ಕೋರು: ಕೇರಳ ಪ್ರಥಮ ಇನ್ನಿಂಗ್ಸ್‌ 23 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 88 (ರೋಹನ್‌ ಕುಣ್ಣುಮ್ಮಾಲ್‌ 57 ಬ್ಯಾಟಿಂಗ್‌, ವತ್ಸಲ್‌ ಗೌಡ್‌ 31 ಬ್ಯಾಟಿಂಗ್‌).

ಮುಂಬಯಿಗೆ ಮೊದಲ ಇನ್ನಿಂಗ್ಸ್‌  ಮುನ್ನಡೆ
ಮುಂಬಯಿ: ಎಲೈಟ್‌ “ಎ’ ಬಣದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬಯಿ ವಿರುದ್ಧ ಮಹಾರಾಷ್ಟ್ರ ತಂಡವು ಕೇವಲ 126 ರನ್ನಿಗೆ ಆಲೌಟಾಗಿದೆ. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಆರಂಭಿಸಿದ ಮುಂಬಯಿ ತಂಡವು ದಿನದಾಟದ ಅಂತ್ಯಕ್ಕೆ ಮೂರು ವಿಕೆಟಿಗೆ 220 ರನ್‌ ಗಳಿಸಿದೆ. ತಂಡ ಈಗಾಗಲೇ ಮೊದಲ ಇನ್ನಿಂಗ್ಸ್‌ನಲ್ಲಿ 94 ರನ್‌ ಮುನ್ನಡೆ ಪಡೆದಿದೆ.

ಆರಂಭಿಕ ಆಟಗಾರ ಆಯುಷ್‌ ಮಾತ್ರೆ ಅವರ ಅಮೋಘ ಶತಕ ಹಾಗೂ ಅಜಿಂಕ್ಯ ರಹಾನೆ ಮತ್ತು ಶ್ರೇಯಸ್‌ ಅಯ್ಯರ್‌ ಜತೆಗೂಡಿ ಪೇರಿಸಿದ ಉತ್ತಮ ಜತೆಯಾಟದ ಆಟದಿಂದಾಗಿ ಮುಂಬಯಿ ಮುನ್ನಡೆ ಸಾಧಿಸುವಂತಾಯಿತು. ಆಯುಷ್‌ 163 ಎಸೆತ ಎದುರಿಸಿ 127 ರನ್‌ ಗಳಿಸಿ ಆಡುತ್ತಿದ್ದಾರೆ. 17 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದ್ದಾರೆ. ಅವರು ರಹಾನೆ ಜತೆ ಮೂರನೇ ವಿಕೆಟಿಗೆ 99 ಮತ್ತು ಅಯ್ಯರ್‌ ಜತೆ ಮುರಿಯದ ನಾಲ್ಕನೇ ವಿಕೆಟಿಗೆ ಈಗಾಗಲೇ 97 ರನ್‌ ಪೇರಿಸಿದ್ದಾರೆ. ಅಯ್ಯರ್‌ 45 ರನ್‌ ಗಳಿಸಿ ಆಡುತ್ತಿದ್ದಾರೆ.

ಟಾಪ್ ನ್ಯೂಸ್

Rss

Assembly Election: ಮಹಾರಾಷ್ಟ್ರ ಚುನಾವಣೆ: ಆರೆಸ್ಸೆಸ್‌ನಿಂದ 60,000 ಸಭೆ ನಡೆಸಲು ನಿರ್ಧಾರ

uttara-Korea

Inteligence: ಉತ್ತರ ಕೊರಿಯಾದಿಂದ ರಷ್ಯಾಕ್ಕೆ 12,000 ಸೈನಿಕರು: ದಕ್ಷಿಣ ಕೊರಿಯಾ ಹೇಳಿಕೆ

Bihar-tragey

Tragedy: ಬಿಹಾರದ 2 ಜಿಲ್ಲೆಗಳಲ್ಲಿ ಕಳ್ಳಭಟ್ಟಿ ದುರಂತ: ಒಟ್ಟು 35 ಮಂದಿ ಸಾವು

Maha-Rig

Maharashtra: ವಾಣಿಜ್ಯ ವಾಹನಗಳಿಗೂ ಇನ್ನು ಡೀಲರ್‌ಗಳಿಂದಲೇ ನೋಂದಣಿ

supreme-Court

Court: ಬಾಲ್ಯವಿವಾಹ ತಡೆ ಕಾನೂನಿಗೆ ವೈಯಕ್ತಿಕ ಕಾನೂನು ಅಡ್ಡಿ ಆಗಬಾರದು: ಸುಪ್ರೀಂ

GOLD2

Gold Price: ದೆಹಲಿಯಲ್ಲಿ 80 ಸಾವಿರ ರೂ.ಗಳ ಸನಿಹಕ್ಕೆ ಚಿನ್ನದ ದರ

NZ-Rachin

India Vs New Zealand Test: ಇನ್ನಿಂಗ್ಸ್‌ ಸೋಲು ತಪ್ಪಿಸಲು ಭಾರತ ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rss

Assembly Election: ಮಹಾರಾಷ್ಟ್ರ ಚುನಾವಣೆ: ಆರೆಸ್ಸೆಸ್‌ನಿಂದ 60,000 ಸಭೆ ನಡೆಸಲು ನಿರ್ಧಾರ

Food-de

New Policy: ಜೊಮ್ಯಾಟೋ, ಸ್ವಿಗ್ಗಿಫುಡ್‌ ಡೆಲಿವರಿ ಮಾಡುವರಿಗೆ ಸಾಮಾಜಿಕ ಭದ್ರತೆ ನೀತಿ?

uttara-Korea

Inteligence: ಉತ್ತರ ಕೊರಿಯಾದಿಂದ ರಷ್ಯಾಕ್ಕೆ 12,000 ಸೈನಿಕರು: ದಕ್ಷಿಣ ಕೊರಿಯಾ ಹೇಳಿಕೆ

Bihar-tragey

Tragedy: ಬಿಹಾರದ 2 ಜಿಲ್ಲೆಗಳಲ್ಲಿ ಕಳ್ಳಭಟ್ಟಿ ದುರಂತ: ಒಟ್ಟು 35 ಮಂದಿ ಸಾವು

Maha-Rig

Maharashtra: ವಾಣಿಜ್ಯ ವಾಹನಗಳಿಗೂ ಇನ್ನು ಡೀಲರ್‌ಗಳಿಂದಲೇ ನೋಂದಣಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Rss

Assembly Election: ಮಹಾರಾಷ್ಟ್ರ ಚುನಾವಣೆ: ಆರೆಸ್ಸೆಸ್‌ನಿಂದ 60,000 ಸಭೆ ನಡೆಸಲು ನಿರ್ಧಾರ

Food-de

New Policy: ಜೊಮ್ಯಾಟೋ, ಸ್ವಿಗ್ಗಿಫುಡ್‌ ಡೆಲಿವರಿ ಮಾಡುವರಿಗೆ ಸಾಮಾಜಿಕ ಭದ್ರತೆ ನೀತಿ?

uttara-Korea

Inteligence: ಉತ್ತರ ಕೊರಿಯಾದಿಂದ ರಷ್ಯಾಕ್ಕೆ 12,000 ಸೈನಿಕರು: ದಕ್ಷಿಣ ಕೊರಿಯಾ ಹೇಳಿಕೆ

Bihar-tragey

Tragedy: ಬಿಹಾರದ 2 ಜಿಲ್ಲೆಗಳಲ್ಲಿ ಕಳ್ಳಭಟ್ಟಿ ದುರಂತ: ಒಟ್ಟು 35 ಮಂದಿ ಸಾವು

Maha-Rig

Maharashtra: ವಾಣಿಜ್ಯ ವಾಹನಗಳಿಗೂ ಇನ್ನು ಡೀಲರ್‌ಗಳಿಂದಲೇ ನೋಂದಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.