ರೆಪೋ ದರ ಮತ್ತೆ ಏರಿಕೆ; ಮಧ್ಯಮ ವರ್ಗದವರಿಗೆ ಅನ್ಯಾಯ


Team Udayavani, Jun 9, 2022, 6:00 AM IST

ರೆಪೋ ದರ ಮತ್ತೆ ಏರಿಕೆ; ಮಧ್ಯಮ ವರ್ಗದವರಿಗೆ ಅನ್ಯಾಯ

ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣ, ಇನ್ನೂ ದೂರ ಸರಿಯದ ಕೊರೊನಾ ಸೇರಿದಂತೆ ಹಲವಾರು ಜಾಗತಿಕ ವಿಚಾರಗಳು ಬಹುತೇಕ ದೇಶಗಳ ಆರ್ಥಿಕತೆ ಮೇಲೆ ಇಂದಿಗೂ ಪೆಟ್ಟು ನೀಡುತ್ತಲೇ ಇವೆ. ದೇಶದ ಒಳಗೆ ಅಗತ್ಯ ವಸ್ತುಗಳ ಬೆಲೆ ಗಗನಮುಖೀಯಾಗಿದ್ದು, ಹಣದುಬ್ಬರವೂ ಹೆಚ್ಚಾಗುತ್ತಲೇ ಇದೆ. ಹಣದುಬ್ಬರ ಹೆಚ್ಚಾದಂತೆ, ಶ್ರೀಸಾಮಾನ್ಯನ ಬದುಕೂ ಮೂರಾಬಟ್ಟೆಯಾಗುತ್ತಿರುವುದು ಈಗಂತೂ ಎಲ್ಲರ ಕಣ್ಣಿಗೆ ಕಾಣಿಸುತ್ತಲೇ ಇದೆ.

ಏರುಗತಿಯಲ್ಲಿರುವ ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇವಲ ಒಂದು ತಿಂಗಳ ಆಸುಪಾಸಿನಲ್ಲಿ ಮತ್ತೆ ರೆಪೋ ದರವನ್ನು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಏರಿಕೆ ಮಾಡಿದೆ. ಕಳೆದ ತಿಂಗಳ ಮೇ 4ರಂದು 40 ಬೇಸಿಸ್‌ ಪಾಯಿಂಟ್ಸ್‌ನಷ್ಟು ಏರಿಕೆ ಮಾಡಿದ್ದ ಅದು, ಈಗ 50 ಬೇಸಿಸ್‌ ಪಾಯಿಂಟ್ಸ್‌ ಏರಿಸಿದೆ. ವಿಚಿತ್ರವೆಂದರೆ ಇದರ ನೇರ ಹೊಡೆತ ಮಧ್ಯಮ ವರ್ಗಕ್ಕೇ ತಟ್ಟಲಿದೆ. ಅಂದರೆ, 50 ಬೇಸಿಸ್‌ ಪಾಯಿಂಟ್ಸ್‌ ಏರಿಕೆಯಿಂದಾಗಿ ಗೃಹ ಮತ್ತು ವಾಹನ ಸಾಲದ ಮೇಲಿನ ಬಡ್ಡಿದರ ಹೆಚ್ಚಳವಾಗಿ ಗ್ರಾಹಕರು ಕಟ್ಟುವ ಇಎಂಐ ಮೊತ್ತ ಹೆಚ್ಚಳವಾಗಲಿದೆ. ಮೊದಲೇ ಹಣದುಬ್ಬರದ ಕಾರಣದಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಮಧ್ಯಮ ವರ್ಗಕ್ಕೆ ಈ ರೀತಿಯೂ ಪ್ರತ್ಯಕ್ಷ ಹೊಡೆತ ಬೀಳುತ್ತಿದೆ.

ಆರ್‌ಬಿಐನ ಪ್ರಕಾರ, ರೆಪೋ ದರ ಏರಿಕೆಯಿಂದಾಗಿ ಬ್ಯಾಂಕ್‌ಗಳು ತನ್ನಲ್ಲಿ ತೆಗೆದುಕೊಳ್ಳುವ ಸಾಲ ಕಡಿಮೆಯಾಗುತ್ತದೆ. ಇದರಿಂದಾಗಿ ಅದು ಜನರಿಗೆ ನೀಡುವ ಸಾಲವೂ ಕಡಿಮೆಯಾಗಿ, ಅವರ ಖರೀದಿ ಸಾಮರ್ಥ್ಯ ಕುಂಠಿತವಾಗುತ್ತದೆ. ಆಗ ಪರೋಕ್ಷವಾಗಿ ವಸ್ತುಗಳ ಮೇಲಿನ ಬೇಡಿಕೆ ಕಡಿಮೆಯಾಗಿ, ಹಣದುಬ್ಬರ ನಿಯಂತ್ರಣಕ್ಕೆ ಬರುತ್ತದೆ. ಆದರೆ ಆರ್‌ಬಿಐನ ಈ ಅರ್ಥಶಾಸ್ತ್ರದಿಂದಾಗಿ ಯಾವ ಪರಿಣಾಮ ಬೀರಲಿದೆ ಎಂಬ ವಿಶ್ಲೇಷಣೆಗಿಂತ, ಪೆಟ್ಟು ಮಾತ್ರ ಮಧ್ಯಮ ವರ್ಗದ ಜನರಿಗೇ ತಟ್ಟುತ್ತದೆ  ಎಂಬುದನ್ನು ಈ ಅರ್ಥಶಾಸ್ತ್ರದಲ್ಲಿ ಮರೆತಂತೆ ಕಾಣುತ್ತದೆ.

ಅಲ್ಲದೆ ಸಾಲ ಸಿಗಲಿಲ್ಲ ಎಂಬ ಮಾತ್ರಕ್ಕೆ ಜನ ಖರೀದಿ ನಿಲ್ಲಿಸುತ್ತಾರೆ ಎಂಬುದು ಸುಳ್ಳು. ಈಗ ಹಣದುಬ್ಬರಕ್ಕೆ ಕಾರಣವಾಗಿರುವುದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ. ಅಗತ್ಯ ವಸ್ತುಗಳ ಖರೀದಿ ಇಲ್ಲದೇ ಜನ ಬದುಕುವುದು ಹೇಗೆ ಎಂಬ ಸರಳ ಸಂಗತಿಯನ್ನು ಹೇಳಲು ಆರ್‌ಬಿಐ ಮರೆತಂತೆ ಕಾಣುತ್ತಿದೆ.

ಅಲ್ಲದೆ ರೆಪೋ ದರ ಏರಿಕೆಯಿಂದ ಗೃಹ ಮತ್ತು ವಾಹನ ಸಾಲದ ಮೇಲಿನ ಬಡ್ಡಿದರ ಹೆಚ್ಚುತ್ತದೆ ಎಂಬುದು ಒಂದು ಪಾರ್ಶ್ವವಾದರೆ, ಮತ್ತೂಂದು ಪಾರ್ಶ್ವದಲ್ಲಿ ಜನರ ಠೇವಣಿ ಮೇಲಿನ ಬಡ್ಡಿದರವೂ ಹೆಚ್ಚಾಗುತ್ತದೆ. ಒಂದು ಲೆಕ್ಕಾಚಾರದಲ್ಲಿ ಇದು ಉತ್ತಮ ನಡೆ ಎಂದು ಹೇಳಬಹುದಾದರೂ ಕೊರೊನಾ ಅನಂತರದಲ್ಲಿ ಜನರ ಉಳಿತಾಯ ಸಾಮರ್ಥ್ಯ ಕಡಿಮೆಯಾಗಿದೆ ಎಂಬುದು ಒಪ್ಪಿಕೊಳ್ಳಬೇಕಾದ ವಿಚಾರ.

ಇವೆಲ್ಲದರ ನಡುವೆ ಒಂದು ಸಮಾಧಾನದ ವಿಚಾರವೆಂದರೆ, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಮತ್ತು ಇಳಿಕೆ ತಟಸ್ಥ ರೂಪದಲ್ಲಿ ಇದೆ ಎಂಬುದು. ಅಲ್ಲದೆ, ಇತ್ತೀಚೆಗಷ್ಟೇ ಕೇಂದ್ರ ಸರಕಾರ, ಅಬಕಾರಿ ಸುಂಕ ಇಳಿಕೆ ಮಾಡಿರುವುದರಿಂದ ಮಧ್ಯಮ ವರ್ಗದ ಜನ ಉಸಿರಾಡುವಂತೆ ಮಾಡಿದೆ. ಹಾಗೆಯೇ, ಆರ್‌ಬಿಐ, ರಾಜ್ಯ ಸರಕಾರಗಳಿಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ವ್ಯಾಟ್‌ ಇಳಿಕೆ ಮಾಡುವಂತೆ ಮನವಿ ಮಾಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯಗಳು ಇಳಿಕೆ ಮಾಡಿದರೆ, ಆಗ ಜನರಿಗೆ ಒಂದಷ್ಟು ಸಮಾಧಾನವಾದರೂ ಸಿಕ್ಕಂತೆ ಆಗುತ್ತದೆ. ಇಲ್ಲವಾದರೆ ಇನ್ನಷ್ಟು ನಲುಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.