![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Nov 14, 2020, 6:45 PM IST
ಕೋಲ್ಕತಾ: ಟೀಮ್ ಇಂಡಿಯಾದ ಪ್ರಮುಖ ಆಟಗಾರ ರೋಹಿತ್ ಶರ್ಮ ಇನ್ನೂ ಪೂರ್ತಿ ಫಿಟ್ನೆಸ್ ಹೊಂದಿಲ್ಲ, ಹೀಗಾಗಿ ಅವರನ್ನು ಆಸ್ಟ್ರೇಲಿಯ ಪ್ರವಾಸದ ಸೀಮಿತ ಓವರ್ಗಳ ಸರಣಿಯಿಂದ ಕೈಬಿಡಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಕಳೆದ ಐಪಿಎಲ್ ಕೂಟದ ಪಂಜಾಬ್ ಎದುರಿನ ಅ. 18ರ ಪಂದ್ಯದ ವೇಳೆ ರೋಹಿತ್ ಶರ್ಮ ಸ್ನಾಯು ಸೆಳೆತಕ್ಕೆ ಸಿಲುಕಿದ್ದರು. ಅನಂತರ ಅವರು 4 ಪಂದ್ಯಗಳಿಂದ ಹೊರಗುಳಿದಿದ್ದರು. ಕೊನೆಯ 3 ಪಂದ್ಯಗಳಿಗೆ ಮರಳಿ, ತಂಡದ ನೇತೃತ್ವ ವಹಿಸಿದರು. ಫೈನಲ್ನಲ್ಲಿ ಕಪ್ತಾನನ ಆಟವಾಡಿ ಮುಂಬೈ ಇಂಡಿಯನ್ಸ್ಗೆ 5ನೇ ಟ್ರೋಫಿ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಇದನ್ನು ಕಂಡಾಗ ರೋಹಿತ್ ಶರ್ಮ ಚೇತರಿಸಿಕೊಂಡಿದ್ದಾರೆ, ಅವರನ್ನು ಆಸ್ಟ್ರೇಲಿಯ ಪ್ರವಾಸಕ್ಕೆ ಆರಿಸಬಹುದು ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೀಗ ಕೊನೆಯ ಹಂತದಲ್ಲಿ ನಡೆಯುವ ಟೆಸ್ಟ್ ಸರಣಿಗಷ್ಟೇ ಅವರನ್ನು ಸೇರಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಅಖಂಡ ಶ್ರೀನಿವಾಸ್ ಮೂರ್ತಿಗೆ ನ್ಯಾಯ ಒದಗಿಸುವಂತೆ ಸಿಎಂ ಬಳಿ ಸಿದ್ದರಾಮೇಶ್ವರ ಶ್ರೀ ಮನವಿ
ಶೇ. 70ರಷ್ಟು ಫಿಟ್ನೆಸ್
“ರೋಹಿತ್ ಶರ್ಮ ಕೇವಲ ಶೇ. 70ರಷ್ಟು ಫಿಟ್ನೆಸ್ ಹೊಂದಿದ್ದಾರೆ. ಇನ್ನೂ ಶೇ. 30ರಷ್ಟು ಚೇತರಿಕೆ ಕಾಣಬೇಕಿದೆ. ಇದಕ್ಕೆ ಇನ್ನೂ ಸ್ವಲ್ಪ ಕಾಲ ಬೇಕಾಗುತ್ತದೆ. ಹೀಗಾಗಿ ಅವರನ್ನು ಆಸ್ಟ್ರೇಲಿಯ ಪ್ರವಾಸದ ಏಕದಿನ ಹಾಗೂ ಟಿ20 ಸರಣಿಯಿಂದ ಹೊರಗಿರಿಸಲಾಯಿತು. ಟೆಸ್ಟ್ ಸರಣಿ ವೇಳೆ ಅವರು ಸಂಪೂರ್ಣವಾಗಿ ಗುಣಮುಖರಾಗುವ ವಿಶ್ವಾಸವಿದೆ’ ಎಂದು ಗಂಗೂಲಿ ಹೇಳಿದರು.
ಆದರೆ ಪೂರ್ತಿ ಫಿಟ್ನೆಸ್ ಹೊಂದಿಲ್ಲದ ಕೀಪರ್ ವೃದ್ಧಿಮಾನ್ ಸಾಹಾ ಆಸ್ಟ್ರೇಲಿಯಕ್ಕೆ ತೆರಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗಂಗೂಲಿ, “ಅವರ ಸಮಸದ್ಯೆ ಬಗ್ಗೆ ನಿಮಗೆ ಮಾಹಿತಿ ಇದೆಯೇ? ನಮಗೆ ಗೊತ್ತು, ಫಿಸಿಯೋಗೆ ಗೊತ್ತು, ಎನ್ಸಿಎಗೆ ತಿಳಿದಿದೆ. ಅವರಿಗೆ ಅವಳಿ ಸ್ವಾಯು ಸೆಳೆತದ ಸಮಸ್ಯೆ ಇದೆ. ಟೆಸ್ಟ್ ವೇಳೆ ಚೇತರಿಸುವ ನಂಬಿಕೆ ಇರುವುದರಿಂದ ಸಾಹಾ ಆಸ್ಟ್ರೇಲಿಯಕ್ಕೆ ತೆರಳಿದ್ದಾರೆ’ ಎಂದರು.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.