ಖಂಡಿತವಾಗಿಯೂ ಇದು ಯುದ್ಧದ ಸಮಯ ಅಲ್ಲವೇ ಅಲ್ಲ


Team Udayavani, Feb 10, 2022, 6:00 AM IST

ಖಂಡಿತವಾಗಿಯೂ ಇದು ಯುದ್ಧದ ಸಮಯ ಅಲ್ಲವೇ ಅಲ್ಲ

2020ರ ಆರಂಭದಿಂದಲೂ ಕೊರೊನಾದಂಥ ಮಹಾಮಾರಿ ವಿರುದ್ಧ ಇಡೀ ಜಗತ್ತು ಹೋರಾಟ ನಡೆಸುತ್ತಿರುವುದಷ್ಟೇ. ಯಾರ ಊಹೆಗೂ ನಿಲುಕದ ಈ ಕೊರೊನಾ ಮಹಾಮಾರಿ, ಲಕ್ಷಾಂತರ ಮಂದಿಯ ಸಾವಿಗೂ ಕಾರಣವಾಗಿದೆ. ಇದು ಒಂದು ರೀತಿಯಲ್ಲಿ ಮನುಕುಲದ ವಿರುದ್ಧ ಕೊರೊನಾ ವೈರಸ್‌ ಸಾರಿರುವ ಸಮರ. ಈ ಸಮರದ ವಿರುದ್ಧ ಇಡೀ ಜಗತ್ತು ಹೋರಾಟ ನಡೆಸುತ್ತಲೇ ಇದೆ. ಆದರೆ ಇಂದಿಗೂ ಈ ಯುದ್ಧದಲ್ಲಿ ನಾವು ಸಂಪೂರ್ಣವಾಗಿ ಸಫ‌ಲರಾಗಿಲ್ಲ ಎಂಬುದನ್ನು ಮನಗಾಣಬೇಕು.

ಇಂಥ ಹೊತ್ತಿನಲ್ಲೇ ರಷ್ಯಾ ಉಕ್ರೇನ್‌ ವಿರುದ್ಧ ಸಮರಕ್ಕೆ ಮುಂದಾಗಿದೆ. ಈಗಾಗಲೇ ಉಕ್ರೇನ್‌ ಗಡಿಯಲ್ಲಿ ಲಕ್ಷಾಂತರ ಸೈನಿಕರನ್ನು ರಷ್ಯಾ ನಿಯೋಜಿಸಿದೆ. ಅಷ್ಟೇ ಅಲ್ಲ, ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಇಲ್ಲಿಗೆ ಸಾಗಿಸಲಾಗಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಯುದ್ಧವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಹಿಂದೊಮ್ಮೆ ಸೋವಿಯತ್‌ ಒಕ್ಕೂಟದ ಭಾಗವಾಗಿದ್ದ ಉಕ್ರೇನ್‌, ಇದರ ಪತನದ ಅನಂತರ ಬೇರೊಂದು ದೇಶವಾಗಿ ಉದಯಿಸಿರುವುದನ್ನು ಇತಿಹಾಸ ಹೇಳಿದೆ. ಆರಂಭದಲ್ಲಿ ರಷ್ಯಾ ಪರ ಸಹಾನುಭೂತಿ ಹೊಂದಿದವರೇ ಉಕ್ರೇನ್‌ ಗದ್ದುಗೆ ಹಿಡಿಯುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಟ್ರೆಂಡ್‌ ಬದಲಾಗಿದ್ದು, ರಷ್ಯಾ ವಿರುದ್ಧ ಮನೋಭಾವ ಹೊಂದಿರುವವರು ಅಧಿಕಾರ ಹಿಡಿದಿದ್ದಾರೆ.

ಇದರ ಜತೆಗೆ ಸೋವಿಯತ್‌ ಯೂನಿಯನ್‌ನಿಂದ ಸಿಡಿದುಹೋಗಿದ್ದ ಬಹುತೇಕ ದೇಶಗಳು ಐರೋಪ್ಯ ಒಕ್ಕೂಟಕ್ಕೆ ಸೇರ್ಪಡೆಯಾಗಿವೆ. ಅಲ್ಲದೆ ಐರೋಪ್ಯ ಒಕ್ಕೂಟಕ್ಕೆ ಸೇರಿರುವ ಕೆಲವು ದೇಶಗಳು ಅಮೆರಿಕ ನೇತೃತ್ವದ ನ್ಯಾಟೋ ಪಡೆಗೆ ಸದಸ್ಯರಾಗಿ ಸೇರ್ಪಡೆಯಾಗಿವೆ. ಉಕ್ರೇನ್‌ ಕೂಡ ನ್ಯಾಟೋದ ಭಾಗವಾಗಲು ಹೊರಟಿದ್ದೇ ಇಂದಿನ ಎಲ್ಲ ಪರಿಸ್ಥಿತಿಗಳಿಗೆ ಕಾರಣವಾಗಿದೆ.

ಒಂದು ವೇಳೆ ಉಕ್ರೇನ್‌ಗೆ ನ್ಯಾಟೋ ಬಂದಿಳಿದಿರೆ, ತಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರ ಆತಂಕ. ಏಕೆಂದರೆ ನ್ಯಾಟೋದ ನೇತೃತ್ವ ವಹಿಸಿರುವುದು ಅಮೆರಿಕ ಮತ್ತು ಇಂಗ್ಲೆಂಡ್‌. ಈಗಾಗಲೇ ಪೋಲೆಂಡ್‌ ಸೇರಿದಂತೆ ಕೆಲವು ದೇಶಗಳಲ್ಲಿ ನ್ಯಾಟೋ ಬಂದಿದೆ. ಉಕ್ರೇನ್‌ಗೂ ಬಂದರೆ ಸರಿ ಇರದು ಎಂದು ರಷ್ಯಾ ಹೇಳುತ್ತಿದೆ.

ಅಂದರೆ ಸದ್ಯ ರಷ್ಯಾ ಬದಿಯಲ್ಲೇ ಬಂದು ಕುಳಿತುಕೊಳ್ಳಲು ಅಮೆರಿಕಕ್ಕೆ ಸಾಧ್ಯವಾಗುವುದಿಲ್ಲ. ಉಕ್ರೇನ್‌ ನ್ಯಾಟೋದ ಸದಸ್ಯ ರಾಷ್ಟ್ರವಾದರೆ ಗಡಿಯಲ್ಲೇ ಬಂದು ಕುಳಿತುಕೊಳ್ಳಬಹುದು ಇದರಿಂದ ರಷ್ಯಾದ ಭದ್ರತೆಗೆ ಧಕ್ಕೆ ಬರುತ್ತದೆ ಎಂಬ ಆಲೋಚನೆಯಲ್ಲೂ ರಷ್ಯಾವಿದೆ.

ಅತ್ತ ಅಮೆರಿಕ ಕೂಡ ತನ್ನ ಪಟ್ಟು ಸಡಿಲಿಸದೇ ಉಕ್ರೇನ್‌ ಪರವಾಗಿ ನಿಂತಿದೆ. ಒಂದು ವೇಳೆ ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿದರೆ ತಾನು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಎಚ್ಚರಿಕೆ ನೀಡಿದ್ದಾರೆ. ಇದರ ಜತೆಯಲ್ಲೇ ರಷ್ಯಾಗೆ ಚೀನ ಬೆಂಬಲ ನೀಡಿದ್ದು, ಒಂದು ವೇಳೆ ಅಮೆರಿಕ ಯುದ್ಧಭೂಮಿಗೆ ಬಂದರೆ ರಷ್ಯಾ ಜತೆಗೆ ಚೀನವನ್ನು ಎದುರಿಸಬೇಕಾಗುತ್ತದೆ. ಆಗ ಜಗತ್ತಿನ ದೊಡ್ಡ ಶಕ್ತಿಗಳೆಲ್ಲ ಕೂಡಿ ಮತ್ತೂಂದು ಯುದ್ಧಕ್ಕೆ ಸಾಕ್ಷಿಯಾಗಬೇಕಾಗುತ್ತದೆ.

ಸದ್ಯ ಈಗ ಜಗತ್ತಿಗೆ ಯುದ್ಧ ಬೇಕಾಗಿಲ್ಲ. ಹಿಂದಿನ ಕಾಲದ ಹಾಗೆ ಶಸ್ತ್ರಾಸ್ತ್ರ ಹಿಡಿದು ಯುದ್ಧವನ್ನು ನಡೆಸಬೇಕಾಗಿಯೂ ಇಲ್ಲ. ಈಗಲೇ ಪರೋಕ್ಷ ಯುದ್ಧಗಳನ್ನು ನಾವು ಬೇರೆ ಬೇರೆ ರೀತಿಯಲ್ಲಿ ನೋಡುತ್ತಿದ್ದೇವೆ. ಹೀಗಾಗಿ ಅಮೆರಿಕ, ರಷ್ಯಾ, ಚೀನದಂಥ ದೇಶಗಳು ಯುದ್ಧದ ಬಗ್ಗೆ ಮಾತನಾಡದೆ ಮನುಕುಲದ ಏಳಿಗೆಯತ್ತ ಮಾತ್ರ ಗಮನಹರಿಸಬೇಕು.

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.