Safe: ಮುಖ್ಯ ಚುನಾವಣ ಆಯುಕ್ತ ರಾಜೀವ್ ಕುಮಾರ್ ರಕ್ಷಿಸಿದ ಬೆಂಗಳೂರು ಚಾರಣಿಗ
ಉತ್ತರಾಖಂಡದಲ್ಲಿ ಕಾಪ್ಟರ್ ತುರ್ತು ಭೂಸ್ಪರ್ಶ, 12000 ಅಡಿ ಎತ್ತರದಲ್ಲಿ ರಾತ್ರಿ ಕಳೆದ ಅಧಿಕಾರಿಗಳು!
Team Udayavani, Oct 19, 2024, 7:20 AM IST
ಡೆಹ್ರಾಡೂನ್: ಶೂನ್ಯಕ್ಕಿಂತ ಕಡಿಮೆ ತಾಪಮಾನವಿರುವ ಪ್ರದೇಶದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ್ದ ಕಾರಣ ಮುಖ್ಯ ಚುನಾವಣ ಆಯುಕ್ತ ರಾಜೀವ್ ಕುಮಾರ್ ಮತ್ತಿತರ ಚುನಾವಣಾಧಿಕಾರಿಗಳು ಅಲ್ಲೇ ಒಂದು ರಾತ್ರಿ ಕಳೆದಿದ್ದಾರೆ. ಅವರಿಗೆ ಬೆಂಗಳೂರಿನ ಚಾರಣಿಗ ಹಾಗೂ ಜತೆಗಾರರು ನೆರವು ನೀಡಿದ್ದಾರೆ.
ಹವಾಮಾನ ವೈಪರೀತ್ಯದಿಂದಾಗಿ ಉತ್ತರಾಖಂಡದ ರಾಲಂ ಎಂಬ ಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ ಚುನಾವಣಾಧಿಕಾರಿಗಳಿದ್ದ ಹೆಲಿಕಾಪ್ಟರ್ ಅನ್ನು ತುರ್ತು ಭೂಸ್ಪರ್ಶ ಮಾಡಿತ್ತು. 12 ಸಾವಿರ ಅಡಿ ಎತ್ತರದಲ್ಲಿನ ಈ ಪ್ರದೇಶದಲ್ಲಿ ರಾತ್ರಿ ಕಳೆಯಲು ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ. ಅಷ್ಟು ಎತ್ತರದ ಪ್ರದೇಶದಲ್ಲಿ ಅವರ ಸಂಪರ್ಕಕ್ಕಿದ್ದದ್ದು ಸ್ಯಾಟಲೈಟ್ ಫೋನ್ ಮಾತ್ರ.
ಈ ವೇಳೆ ಅವರ ಸಹಾಯಕ್ಕೆ ಬಂದ ಬೆಂಗಳೂರು ಮೂಲದ ಚಾರಣಿಗ ಹಾಗೂ ಅವರ ಸಂಗಡಿಗರು ಇಡೀ ರಾತ್ರಿ ಚಳಿ ತಡೆ ಯಲು ಬೆಂಕಿ ಹಚ್ಚಿ, ನೂಡಲ್ಸ್ ತಯಾರಿಸಿ ನೀಡಿದ್ದಾರೆ. ಬಳಿಕ ಗುರುವಾರ ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣ ಘಟಕ ಸಿಬಂದಿ ಚುನಾವಣ ಆಯುಕ್ತ ಹಾಗೂ ಅಧಿಕಾರಿಗಳನ್ನು ರಕ್ಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tender Scam: ಹಿರಿಯ ಐಎಎಸ್ ಅಧಿಕಾರಿ, ಮಾಜಿ ಆರ್ಜೆಡಿ ಶಾಸಕ ಅರೆಸ್ಟ್
Threat: ದೆಹಲಿಯಿಂದ ಲಂಡನ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ.. ತುರ್ತು ಲ್ಯಾಂಡಿಂಗ್
BRICS Meet: ಅ.22ಕ್ಕೆ ಬ್ರಿಕ್ಸ್ ಶೃಂಗ: 2ನೇ ಬಾರಿಗೆ ರಷ್ಯಾಕ್ಕೆ ಪ್ರಧಾನಿ ಮೋದಿ ಭೇಟಿ
JK Cabinet Meet: ಕಾಶ್ಮೀರಕ್ಕೆ ರಾಜ್ಯ ಸ್ಥಾನ ಕೊಡಿ: ಸಿಎಂ ಒಮರ್ ಸಂಪುಟ ಸಭೆ ನಿರ್ಣಯ
Assembly Election: ಮಹಾರಾಷ್ಟ್ರ ಚುನಾವಣೆ: ಆರೆಸ್ಸೆಸ್ನಿಂದ 60,000 ಸಭೆ ನಡೆಸಲು ನಿರ್ಧಾರ
MUST WATCH
ಹೊಸ ಸೇರ್ಪಡೆ
Tender Scam: ಹಿರಿಯ ಐಎಎಸ್ ಅಧಿಕಾರಿ, ಮಾಜಿ ಆರ್ಜೆಡಿ ಶಾಸಕ ಅರೆಸ್ಟ್
Thirthahalli: ಬೈಕ್- ಲಾರಿ ಅಪಘಾತ; ಸವಾರನಿಗೆ ಗಂಭೀರ ಗಾಯ
Mudhol: ಘಟಪ್ರಭಾ ನದಿಗೆ ಹರಿದು ಬಂದ ಹೆಚ್ಚಿನ ನೀರು… ಮುಳುಗಿದ ಬ್ಯಾರೇಜ್
Threat: ದೆಹಲಿಯಿಂದ ಲಂಡನ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ.. ತುರ್ತು ಲ್ಯಾಂಡಿಂಗ್
Siruguppa: ಆಸ್ತಿಗಾಗಿ ಮಗಳನ್ನು ಕೊಲೆ ಮಾಡಲು ಮುಂದಾದ ತಂದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.