ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅತೀ ಹಿಂದುಳಿದ ಸಮುದಾಯದ ಮೀಸಲಾತಿಗೆ ಸುಪ್ರೀಂ ಸಮ್ಮತಿ
ಏಳು ಸದಸ್ಯರ ಸಾಂವಿಧಾನಿಕ ಪೀಠ 6:1ರ ಬಹುಮತದಲ್ಲಿ ಮಹತ್ವದ ತೀರ್ಪು
Team Udayavani, Aug 1, 2024, 1:50 PM IST
ನವದೆಹಲಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಲ್ಲಿನ ಅತೀ ಹಿಂದುಳಿದ ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿಒಳ ಮೀಸಲಾತಿಯನ್ನು ನೀಡುವ ಪ್ರಸ್ತಾಪಕ್ಕೆ ಸುಪ್ರೀಂಕೋರ್ಟ್ ನ ಏಳು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ಗುರುವಾರ (ಆಗಸ್ಟ್ 01) ಸಮ್ಮತಿ ಸೂಚಿಸಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅತೀ ಹಿಂದುಳಿದ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವ ಬಗ್ಗೆ ಸುಪ್ರೀಂಕೋರ್ಟ್ ಚೀಫ್ ಜಸ್ಟೀಸ್ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಏಳು ಸದಸ್ಯರ ಸಾಂವಿಧಾನಿಕ ಪೀಠ 6:1ರ ಬಹುಮತದಲ್ಲಿ ಮಹತ್ವದ ತೀರ್ಪು ನೀಡಿದ್ದು, ಜಸ್ಟೀಸ್ ಬೇಲಾ ತ್ರಿವೇದಿ ಈ ಪ್ರಸ್ತಾಪಕ್ಕೆ ಅಸಮ್ಮತಿ ಸೂಚಿಸಿದ್ದರು.
ಆಂಧ್ರಪ್ರದೇಶ Vs ಇ.ವಿ. ಚಿನ್ನಯ್ಯ ಅವರ ಪ್ರಕರಣದಲ್ಲಿನ 2004ರ ಪಂಚ ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಪೀಠ ನೀಡಿರುವ ತೀರ್ಪನ್ನು ತಳ್ಳಿ ಹಾಕಿದೆ. ಆ.1ರಂದು ನೀಡಿರುವ ಏಳು ಜಡ್ಜ್ ಗಳ ಪೀಠದಲ್ಲಿ ಜಸ್ಟೀಸ್ ಬಿಆರ್ ಗವಾಯಿ, ಜಸ್ಟೀಸ್ ವಿಕ್ರಮ್ ನಾಥ್, ಜಸ್ಟೀಸ್ ಪಂಕಜ್ ಮಿಥಾಲ್, ಜಸ್ಟೀಸ್ ಮನೋಜ್ ಮಿಶ್ರಾ ಮತ್ತು ಜಸ್ಟೀಸ್ ಸತೀಶ್ ಚಂದ್ರ ಮಿಶ್ರ ಅವರನ್ನೊಳಗೊಂಡಿದೆ.
ಸಮಾಜದಲ್ಲಿ ವ್ಯವಸ್ಥಿತವಾದ ತಾರತಮ್ಯವನ್ನು ಎದುರಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಮೇಲಕ್ಕೇರಲು ಅಸಾಧ್ಯವಾಗಿದೆ. ಸಂವಿಧಾನದ 14 ಕಲಂ ಜಾತಿಯ ಒಳ ಮೀಸಲಾತಿಗೆ ಅವಕಾಸ ಕಲ್ಪಿಸಿದೆ. ಐತಿಹಾಸಿಕ ಮತ್ತು ಪ್ರಾಯೋಗಿಕ ಪುರಾವೆಗಳು ಪರಿಶಿಷ್ಟ ಜಾತಿ ಸಾಮಾಜಿಕವಾಗಿ ಭಿನ್ನಜಾತಿಯ ವರ್ಗವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಚೀಫ್ ಜಸ್ಟೀಸ್ ಡಿ.ವೈ.ಚಂದ್ರಚೂಡ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.