Secret meeting: ಕೇಂದ್ರ ಸಚಿವ ಪ್ರಹ್ಲಾದ ಜೋಶಿ- ವಿಜಯೇಂದ್ರ ಗೌಪ್ಯ ಸಭೆ


Team Udayavani, Aug 24, 2024, 1:04 AM IST

Joshi-vijyebdra

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿವಾಸಕ್ಕೆ ಶುಕ್ರವಾರ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗೌಪ್ಯ ಮಾತುಕತೆ ನಡೆಸಿದ್ದು ಕುತೂಹಲ ಕೆರಳಿಸಿದೆ.

ಖಾಸಗಿ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ವಿಜಯೇಂದ್ರ ನಗರದಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿವಾಸಕ್ಕೆ ಭೇಟಿ ನೀಡಿದ್ದರು.

ಸ್ವಾಗತಕ್ಕೆ ಜಮಾಯಿಸಿದ್ದ ಪಕ್ಷದ ಕಾರ್ಯಕರ್ತರು, ನಾಯಕರನ್ನು ಮಾತನಾಡಿಸಿದ ವಿಜಯೇಂದ್ರ ನೇರವಾಗಿ ಜೋಶಿ ಅವರೊಂದಿಗೆ ಮನೆಯೊಳಗೆ ತೆರಳಿದರು. ಕೆಲವು ಕಾಲ ಇಬ್ಬರೇ ಮಾತುಕತೆ ನಡೆಸಿದರು. ಈ ಭಾಗದ ಕೆಲ ಮುಖಂಡರು, ಪಕ್ಷದ ಕೆಲವು ನಾಯಕರು ಭಿನ್ನರಾಗ ಎತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಸುಮಾರು ಐದಾರು ನಿಮಿಷ ಇಬ್ಬರೂ ಮಾತುಕತೆ ನಡೆಸಿದ್ದಾರೆ.

ಇದಕ್ಕೂ ಮೊದಲು ಪಕ್ಷದ ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ್‌, ಮಹಾನಗರ ಜಿಲ್ಲಾಧ್ಯಕ್ಷ  ತಿಪ್ಪಣ್ಣ ಮಜ್ಜಗಿ, ಮಾಜಿ ಮೇಯರ್‌ ವೀರಣ್ಣ ಸವಡಿ ಜತೆ ಕೆಲವು ಕಾಲ ಮಾತನಾಡಿದರು. ಮುಡಾ ಹಗರಣದ ವಿರುದ್ಧ ಬಿಜೆಪಿ-ಜೆಡಿಎಸ್‌ ಹಮ್ಮಿಕೊಂಡಿದ್ದ ಪಾದಯಾತ್ರೆ ಯಶಸ್ಸಿನ ಕುರಿತು ಚರ್ಚಿಸಿದರು. ಆದರೆ ಇದನ್ನು ಹೊರತುಪಡಿಸಿ ಅಂತಹ ಯಾವುದೇ ಗಂಭೀರ ಮಾತುಕತೆ ನಡೆದಿಲ್ಲ ಎಂದು ಮುಖಂಡರೊಬ್ಬರು ಸ್ಪಷ್ಟಪಡಿಸಿದ್ದಾರೆ.

ಆ ಬಳಿಕ ಪತ್ರಕರ್ತರ ಜತೆ ಮಾತನಾಡಿದ ವಿಜಯೇಂದ್ರ, ಖಾಸಗಿ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದೆ. ಕೇಂದ್ರ ಸಚಿವರು ಇರುವುದು ಗೊತ್ತಾಯಿತು. ಹೀಗಾಗಿ ಅವರನ್ನು ಭೇಟಿಯಾಗಲು ಬಂದಿದ್ದೇನೆ. ಅಂತಹ ವಿಶೇಷತೆ ಏನಿಲ್ಲ. ಜೋಶಿ ಅವರು ನಮ್ಮ ನಾಯಕರು, ಮಾರ್ಗದರ್ಶಕರು. ಅವರನ್ನು ಭೇಟಿ ಮಾಡಲು ಬಂದಿದ್ದೆ ಎಂದರು.

ಟಾಪ್ ನ್ಯೂಸ್

Subhra-Swamy

Mangaluru Visit: ಇಂದು ಡಾ. ಸುಬ್ರಮಣಿಯನ್‌ ಸ್ವಾಮಿ ಮಂಗಳೂರಿಗೆ

aane

Sulya: ಆಲೆಟ್ಟಿ: ಕಾಡಾನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ

Mangaluru-BjP

Nagamangala Riots: ಕದ್ರಿ: ಗಣೇಶೋತ್ಸವ ಸಮಿತಿಗಳ ಒಕ್ಕೂಟದಿಂದ ಪ್ರತಿಭಟನೆ

udUdupi ಗೀತಾರ್ಥ ಚಿಂತನೆ-34: ಸ್ವಕರ್ಮ, ಸ್ವಧರ್ಮ: ಉತ್ಪಾದನೆಯ ಮರ್ಮ

Udupi ಗೀತಾರ್ಥ ಚಿಂತನೆ-34: ಸ್ವಕರ್ಮ, ಸ್ವಧರ್ಮ: ಉತ್ಪಾದನೆಯ ಮರ್ಮ

PROTEST

Udupi: ನಾಗಮಂಗಲ ಘಟನೆ ಖಂಡಿಸಿ ವಿವಿಧೆಡೆ ಪ್ರತಿಭಟನೆ

Tulunadu-utsava

Mangaluru: ತುಳುನಾಡ ಉತ್ಸವ ಪಿಲಿಕುಳ ಕಂಬಳ: ಬೆಂಗಳೂರಿನಲ್ಲಿ ಸಭೆ

police

Udupi: ನಾಪತ್ತೆಯಾಗಿದ್ದ ಬಾಲಕನ ರಕ್ಷಣೆ, ಮಕ್ಕಳ ರಕ್ಷಣ ಘಟಕಕ್ಕೆ ಹಸ್ತಾಂತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಉಪಾಹಾರ ಕೂಟ ನಿಗದಿ ಮಾಡಿ ರದ್ದುಗೊಳಿಸಿದ ಸಿಎಂ ಸಿದ್ದರಾಮಯ್ಯ

Congress ಉಪಾಹಾರ ಕೂಟ ನಿಗದಿ ಮಾಡಿ ರದ್ದುಗೊಳಿಸಿದ ಸಿಎಂ ಸಿದ್ದರಾಮಯ್ಯ

Krishna Byre Gowda “ದಕ್ಷಿಣ ರಾಜ್ಯಗಳು ಜಿಎಸ್‌ಟಿ ಪಾಲಿಗೆ ಧ್ವನಿ ಎತ್ತಬೇಕಿದೆ’

Krishna Byre Gowda “ದಕ್ಷಿಣ ರಾಜ್ಯಗಳು ಜಿಎಸ್‌ಟಿ ಪಾಲಿಗೆ ಧ್ವನಿ ಎತ್ತಬೇಕಿದೆ’

Renukaswamy Case ನಟ ದರ್ಶನ್‌ ಗ್ಯಾಂಗ್‌ ನ್ಯಾಯಾಂಗ ಬಂಧನ ವಿಸ್ತರಣೆ

Renukaswamy Case ನಟ ದರ್ಶನ್‌ ಗ್ಯಾಂಗ್‌ ನ್ಯಾಯಾಂಗ ಬಂಧನ ವಿಸ್ತರಣೆ

gNagamangala ನಡೆದಿದ್ದು ಸಣ್ಣ ಗಲಾಟೆ: ಗೃಹ ಸಚಿವ ಪರಮೇಶ್ವರ್‌

Mandya; ನಾಗಮಂಗಲದಲ್ಲಿ ನಡೆದಿದ್ದು ಸಣ್ಣ ಗಲಾಟೆ: ಗೃಹ ಸಚಿವ ಪರಮೇಶ್ವರ್‌

Second PUC ಮಾದರಿ ಪ್ರಶ್ನೆಪತ್ರಿಕೆ ಪ್ರಕಟ

Second PUC ಮಾದರಿ ಪ್ರಶ್ನೆಪತ್ರಿಕೆ ಪ್ರಕಟ

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

Subhra-Swamy

Mangaluru Visit: ಇಂದು ಡಾ. ಸುಬ್ರಮಣಿಯನ್‌ ಸ್ವಾಮಿ ಮಂಗಳೂರಿಗೆ

aane

Sulya: ಆಲೆಟ್ಟಿ: ಕಾಡಾನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ

congress

Haryana ಚುನಾವಣೆ: 89 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಣಕ್ಕೆ, ಸಿಪಿಎಂಗೆ 1 ಸ್ಥಾನ

suicide (2)

Kanpur:ಮಹಿಳೆಯ ಬೆತ್ತಲೆ, ರುಂಡವಿಲ್ಲದ ಮೃತದೇಹ ಪತ್ತೆ

1bbb

Baahubali; ನೆರೆ ನೀರಲ್ಲಿ ತಲೆ ಮೇಲೆ ಬೈಕ್‌ ಹೊತ್ತು ನಡೆದ ‘ಬಾಹುಬಲಿ’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.