Sirsi: ಪಕ್ಷದಲ್ಲಿ ಶುದ್ಧೀಕರಣ ಚರ್ಚೆಯ ಬಳಿಕ ಬಿಜೆಪಿಗೆ ಹೋಗುವೆ: ಕೆ.ಎಸ್.ಈಶ್ವರಪ್ಪ
ಸೈದ್ದಾಂತಿಕ ನಿಲುವು ಇದ್ದರೆ ಬಿಜೆಪಿ ಸಂಘಟನೆಗೆ ಒಳಿತು, ವೈಯಕ್ತಿಕ ನಿಲುವೇ ಹೆಚ್ಚಾದರೆ ಸಂಕಷ್ಟ : ಮಾಜಿ ಸಚಿವ
Team Udayavani, Sep 13, 2024, 5:26 PM IST
ಶಿರಸಿ: ಬಿಜೆಪಿ ನಮ್ಮ ತಾಯಿ, ಅದರ ಶುದ್ಧೀಕರಣಕ್ಕೆ ಹೊರ ಬಂದಿದ್ದೇನೆ. ಮತ್ತೆ ಇದರ ಬಗ್ಗೆ ಚರ್ಚೆಯಾದ ಬಳಿಕ ಬಿಜೆಪಿಗೆ ಹೋಗುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ ಸೈದ್ದಾಂತಿಕ ನಿಲುವು ಇದ್ದರೆ ಪಕ್ಷದ (ಬಿಜೆಪಿ) ಸಂಘಟನೆಗೆ ಒಳಿತು. ವೈಯಕ್ತಿಕ ನಿಲುವೇ ಹೆಚ್ಚಾದರೆ ಸಂಕಷ್ಟ. ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ಪ್ರಧಾನಿ ಮೋದಿ ಅವರು ಹೇಳುತ್ತಾರೆ. ಆದರೆ ಕರ್ನಾಟಕದಲ್ಲಿ ಆಗಿದ್ದೇನು? ಎಂದು ಪ್ರಶ್ನಿಸಿದರು.
ಹಿಂದೂ ಸಮಾಜ ಒಟ್ಟಾಗುವ ತನಕ ಕೆಲವು ಗೂಂಡ ಮನಸ್ಥಿತಿಯ ಮುಸ್ಲಿಂರಿಗೆ ಹೆದರಿಕೆ ಇರುವುದಿಲ್ಲ. ದೇವರ ಮೇಲೆ ನಂಬಿಕೆಯೇ ಇಲ್ಲದ ಸಿದ್ದರಾಮಯ್ಯ ಚಾಮುಂಡೇಶ್ವರಿ ದೇವಿ ದರ್ಶನ ಪದೇ ಪದೇ ಮಾಡುವುದೇಕೆ? ಅವರ ಪತ್ನಿ ವಿನಾಕಾರಣ ವಿವಾದಕ್ಕೆ ಸಿಕ್ಕಿಬಿದ್ದ ಬಗ್ಗೆ ಬೇಸರ ಇದೆ ಎಂದರು.
ಡಿ.ಕೆ.ಶಿವಕುಮಾರ ಅವರೂ ಕುಟುಂಬ ಸಹಿತ ವೈಷ್ಣೋ ದೇವಿ ದರ್ಶನಕೆ ಹೋಗಿದ್ದಾರೆ. ಹಿಂದುತ್ವ ಬಿಟ್ಟರೆ ನಾಯಕತ್ವ ಇಲ್ಲ ಎಂದರು. ಸಿದ್ದರಾಮಯ್ಯ ಟೀಂ ಎಂಥ ಪರಿಸ್ಥಿತಿ ಬಂದ್ರೂ ರಾಜೀನಾಮೆ ಕೊಡಲ್ಲ ಎನ್ನುತ್ತದೆ. ಸಂವಿಧಾನಕ್ಕೆ ಗೌರವ ಕೊಡುವುದಾಗಿ ಹೇಳಿ ಪ್ರಮಾಣವಚನ ಪಡೆದವರು ಕೋರ್ಟ್ ತೀರ್ಪಿಗೆ ಬದ್ಧ ಇರಬೇಕು. ಇಂತಹ ಹಟಗಳೇ ಕಾಂಗ್ರೆಸ್ ಗೆ ಶಿಕ್ಷೆ ಕೊಡುತ್ತವೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Rummy Aata Movie: ಸೆ.20ರಿಂದ ರಮ್ಮಿ ಆಟ ಶುರು
Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್ ಟಿಆರ್ ಸಿನಿಮಾ ವೀಕ್ಷಿಸಿದ ರೋಗಿ.!
Video: ಕೇವಲ ಒಂದೇ ಚಕ್ರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಪೈಲೆಟ್
Pavagada: ಆಂಬ್ಯುಲೆನ್ಸ್ ಸಿಗದೆ ವೃದ್ದ ಮೃತದೇಹವನ್ನು ಬೈಕ್ ನಲ್ಲಿಯೇ ಕೊಂಡೊಯ್ದ ಮಕ್ಕಳು
India: ಭಾರತದ ಈ ಏಳು ರೈಲ್ವೆ ನಿಲ್ದಾಣಗಳ ಹೆಸರೇ ತುಂಬಾ ತಮಾಷೆಯಾಗಿದೆ… ಎಲ್ಲಿವೆ ಅವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.