
Uttar Pradeshದಲ್ಲಿ 13,000 ಅಕ್ರಮ ಮದರಸಾಗಳು ಪತ್ತೆ; ಎಸ್ ಐಟಿ ವರದಿ ಬಹಿರಂಗ
ಶ್ರಾವಸ್ತಿ ಮತ್ತು ಬಹ್ರೈಚ್ ಸೇರಿದಂತೆ ಏಳು ಜಿಲ್ಲೆಗಳಲ್ಲಿವೆ..
Team Udayavani, Mar 7, 2024, 10:37 AM IST

ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್ ಐಟಿ) ರಾಜ್ಯದಲ್ಲಿ 13,000 ಕಾನೂನು ಬಾಹಿರ ಮದರಸಾಗಳು ಇದ್ದಿರುವುದನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:Bank Fraud Case… 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅಮೆರಿಕದಲ್ಲಿ ಪತ್ತೆ
ಎಸ್ ಐಟಿ ಅಕ್ರಮ ಮದರಸಾಗಳನ್ನು ಪತ್ತೆ ಹಚ್ಚಿ ಕಲೆ ಹಾಕಿ ತಯಾರಿಸಿರುವ ವರದಿಯನ್ನು ಸರ್ಕಾರಕ್ಕೆ ನೀಡಲಿದ್ದು, ಈ ಕಾನೂನು ಬಾಹಿರ ಮದರಸಾವನ್ನು ಮುಚ್ಚುವಂತೆ ಶಿಫಾರಸು ಮಾಡಿರುವುದಾಗಿ ವರದಿ ವಿವರಿಸಿದೆ.
ಜೀ ನ್ಯೂಸ್ ಮೂಲಗಳ ಪ್ರಕಾರ, ಬಹುತೇಕ ಅಕ್ರಮ ಮದರಸಾಗಳು ನೇಪಾಳ ಗಡಿಭಾಗದಲ್ಲಿರುವುದಾಗಿ ತಿಳಿಸಿದೆ. ಈ ಮದರಸಾಗಳಿಗೆ ಕಳೆದ ಎರಡು ದಶಕಗಳಿಂದ ಗಲ್ಫ್ ದೇಶಗಳಿಂದ ಹಣಕಾಸು ನೆರವು ಒದಗಿಸುತ್ತಿರುವುದಾಗಿ ವರದಿ ಹೇಳಿದೆ.
ಎಸ್ ಐಟಿ ವರದಿಯು ಕೆಲವು ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದೆ. ಇದರಲ್ಲಿ ಹೆಚ್ಚಿನ ಮದರಸಾಗಳು ನೇಪಾಳದ ಗಡಿಯಲ್ಲಿರುವ ಮಹಾರಾಜ್ ಗಂಜ್, ಶ್ರಾವಸ್ತಿ ಮತ್ತು ಬಹ್ರೈಚ್ ಸೇರಿದಂತೆ ಏಳು ಜಿಲ್ಲೆಗಳಲ್ಲಿವೆ ಎಂದು ತಿಳಿಸಿದೆ.
ಪ್ರತಿ ಗಡಿ ಜಿಲ್ಲೆಯು 500ಕ್ಕೂ ಹೆಚ್ಚು ಮದರಸಾಗಳನ್ನು ಹೊಂದಿದ್ದು, ಇದು ಅಂತಾರಾಷ್ಟ್ರೀಯ ಗಡಿ ಸಮೀಪದ ಬಗ್ಗೆ ಕಳವಳ ಮೂಡಿಸುವಂತಿದೆ. ಈ ಮದರಸಾಗಳ ಆರ್ಥಿಕ ಲೆಕ್ಕಚಾರದ ಬಗ್ಗೆ ಎಸ್ ಐಟಿ ಮಾಹಿತಿ ಕೇಳಿದ್ದು, ಬಹುತೇಕ ಮದರಸಾಗಳು ಸ್ಪಷ್ಟವಾಗಿ ಆದಾಯ ಮತ್ತು ಖರ್ಚು, ವೆಚ್ಚದ ಮಾಹಿತಿ ನೀಡಲು ವಿಫಲವಾಗಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿರುವುದಾಗಿ ವಿವರಿಸಿದೆ.
ಮದರಸಾಗಳ ಮೂಲಕ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿರುವ ಸಂಚು ಅಡಗಿರುವುದಾಗಿ ಎಸ್ ಐಟಿ ತಿಳಿಸಿದೆ. ದೇಣಿಗೆಯ ಮೂಲಕ ಮದರಸಾ ನಿರ್ಮಿಸಿರುವುದಾಗಿ ಹೇಳಿರುವ ಬಹುತೇಕ ಮದರಸಾಗಳು ದೇಣಿಗೆ ಕೊಟ್ಟವರ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.