Smart Card Delay: ಹೊಸ ವಾಹನ ಬಂದರೂ ಸ್ಮಾರ್ಟ್‌ ಕಾರ್ಡ್‌ ಬರಲೇ ಇಲ್ಲ!

 ವಿತರಣೆಯಲ್ಲಿ ವಿಳಂಬ; ಸವಾರರಿಗೆ ಸಮಸ್ಯೆ

Team Udayavani, Jan 29, 2025, 7:50 AM IST

Smart-card

ಮಂಗಳೂರು: ಹೊಸ ವಾಹನ ಖರೀದಿಸಿ ಸುತ್ತಾಡುವವರಿಗೆ ಈಗ ತಲೆನೋವು ಎದುರಾಗಿದೆ. ಹೊಸ ವಾಹನ ಹೊಸ ಬಂದು ತಿಂಗಳು ಹಲವು ಆದರೂ ರಾಜ್ಯದ ಹಲವು ಮಂದಿಗೆ ಸ್ಮಾರ್ಟ್‌ ಕಾರ್ಡ್‌ ಇನ್ನೂ ದೊರಕಿಲ್ಲ.

ಬೆಂಗಳೂರು, ಮಂಗಳೂರು, ಉಡುಪಿ, ಮೈಸೂರು, ಬೀದರ್‌, ಪುತ್ತೂರು ಸೇರಿದಂತೆ ಮತ್ತಿತರ ಕಡೆಗಳಲ್ಲಿ ವಾಹನದ ನೋಂದಣಿ ಪತ್ರ ಸ್ಮಾರ್ಟ್‌ ಕಾರ್ಡ್‌ ವಿತರಣೆಯಲ್ಲಿ ನಿರಂತರ ವಿಳಂಬವಾಗುತ್ತಿದ್ದು, ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಹೊಸ ವಾಹನಗಳನ್ನು ಎರಡು ಮೂರು ತಿಂಗಳು ಕಳೆದರೂ ರಸ್ತೆಗಿಳಿಸಲು ಹಿಂಜರಿಕೆ ಪಡುತ್ತಿದ್ದಾರೆ. ಸ್ಮಾರ್ಟ್‌ಕಾರ್ಡ್‌ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಪೊಲೀಸರು ತಪಾಸಣೆ ವೇಳೆ ವಾಹನಗಳ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದು ಹಲವು ಸವಾರರಿಗೆ ನೋಂದಣಿ ಪತ್ರವಿಲ್ಲದ ಕಾರಣ ದಂಡ ವಿಧಿಸಲಾಗಿದೆ ಎಂಬುವುದು ಮಾಲಕರ ಆರೋಪ!

ಕಳೆದ ಒಂದೆರಡು ವರ್ಷಗಳಿಂದ ಈ ಸಮಸ್ಯೆ ಉಲ್ಬಣಗೊಂಡಿದ್ದು, ಇಲಾಖೆಯಿಂದ ಸಮರ್ಪಕ ಉತ್ತರ ವಾಹನ ಮಾಲಕರಿಗೆ ಸಿಗುತ್ತಿಲ್ಲ. ದಾಖಲೆಗಳನ್ನು ವರ್ಗಾಯಿಸಲಾಗುತ್ತಿದೆ. ತಾಂತ್ರಿಕ ಸಮಸ್ಯೆ ಕಾರಣ ನೀಡುತ್ತ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತಿದ್ದಾರೆ. ವಾಹನ ತಪಾಸಣೆ ವೇಳೆ ಆರ್‌ಸಿ ಸಿಕ್ಕಿಲ್ಲ ಎನ್ನುವ ಮಾತನ್ನು ತನಿಖಾ ಸಿಬಂದಿ ಒಪ್ಪುವುದಿಲ್ಲ. ಅದರಲ್ಲೂ ಕರಾವಳಿ ಅಂತಾರಾಜ್ಯ ವ್ಯಾಪ್ತಿಗೆ ಸಮೀಪವಾಗಿರುವ ಕಾರಣದಿಂದ ಕೇರಳ ಪೊಲೀಸರು ವಾಹನದ ನೋಂದಣಿ ಪತ್ರವಿಲ್ಲದೆ ಸಂಚಾರ ನಡೆಸಲು ಅನುಮತಿಸುತ್ತಿಲ್ಲ ಎನ್ನಲಾಗಿದೆ. ದಂಡ ಪಾವತಿಸಲು ಹಿಂದೇಟು ಹಾಕುವ ವಾಹನ ಮಾಲಕರು ವಾಹನಗಳ ಡೀಲರ್‌ಗಳ ಬಳಿ ಬಂದು ತಗಾದೆ ಎತ್ತುತ್ತಿದ್ದಾರೆ.

ಖಾಸಗಿ ಸಂಸ್ಥೆಯ ಗುತ್ತಿಗೆ ಮುಗಿದಿದ್ದೇ ಕಾರಣ
ರೋಸ್ಮಾಟ ಎನ್ನುವ ಖಾಸಗಿ ಸಂಸ್ಥೆಗೆ ಸ್ಮಾರ್ಟ್‌ ಕಾರ್ಡ್‌ಗಳನ್ನು ವಿತರಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು. ಅವರಿಗೆ ನೀಡಲಾಗಿದ್ದ ಅವಧಿ ಮುಗಿದ ಹಿನ್ನೆಲೆ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ತಾತ್ಕಾಲಿಕವಾಗಿ ಕೆಲವು ತಿಂಗಳುಗಳಿಗೆ ಹೆಚ್ಚುವರಿ ಅವಕಾಶ ನೀಡಲಾಗಿದೆ. ಆದರೆ ಸರಕಾರ ಮುಂಚಿತವಾಗಿ ಕ್ರಮ ವಹಿಸದಿರುವುದೇ ಸಮಸ್ಯೆಗೆ ಕಾರಣ ಎನ್ನಲಾಗಿದೆ.

ಸಾಫ್ಟ್‌ವೇರ್‌ ವರ್ಗಾವಣೆ ವೇಳೆ ಸಮಸ್ಯೆ
ಕಳೆದ ವರ್ಷ ಸ್ಮಾರ್ಟ್‌ ಕಾರ್ಡ್‌ ವಿತರಣೆಯಲ್ಲಿ ವಿಳಂಬ ಕಾಣಿಸಿಕೊಂಡಿತ್ತು. ಆ ಸಂದರ್ಭದಲ್ಲಿ ರೋಸ್ಮಾಟ ಸಂಸ್ಥೆಯನ್ನು ಬೊಟ್ಟುಮಾಡಲಾಗಿತ್ತು. ಸಾಫ್ಟ್‌ವೇರ್‌ ವರ್ಗಾವಣೆಯಿಂದಾಗಿ ವಿಳಂಬವಾಗುತ್ತಿದೆ ಎನ್ನುವ ಮಾತುಗಳು ಅಧಿಕಾರಿಗಳಿಂದ ಬಂದಿತ್ತು. ಕೆಲವೊಂದು ಕಾರ್ಡ್‌ಗಳ ಮಾಹಿತಿ ಸರಿಯಾಗಿ ಸಿಗದ ಹಿನ್ನೆಲೆಯಲ್ಲಿ ಸ್ಮಾರ್ಟ್‌ಕಾರ್ಡ್‌ ವಿತರಣೆ ವಿಳಂಬವಾಗುತ್ತಿದೆ ಎನ್ನಲಾಗಿತ್ತು. ಆದರೆ ಈ ಸಮಸ್ಯೆ ವರ್ಷ ಕಳೆದರೂ ಪರಿಹಾರವಾಗಿಲ್ಲ.

ಮೊಬೈಲ್‌ ಸಂದೇಶ ಬರುತ್ತೆ;
ಹೊಸ ವಾಹನ ಖರೀದಿಸಿ ಮೂರ್‍ನಾಲ್ಕು ತಿಂಗಳ ಬಳಿಕ ಸ್ಮಾರ್ಟ್‌ಕಾರ್ಡ್‌ಗಳನ್ನು ಪೋಸ್ಟಲ್‌ ಮೂಲಕ ರವಾನಿಸಲಾಗಿದೆ ಎಂದು ಮೊಬೈಲ್‌ಗೆ ಸಂದೇಶ ಬರುತ್ತದೆ. ಆದರೆ ಹಲವು ದಿನ ಕಳೆದರೂ ಕಾರ್ಡ್‌ ಕೈ ಸೇರುತ್ತಿಲ್ಲ. ಅನೇಕ ಸವಾರರಿಗೆ ಇಂತಹ ಅನುಭವಗಳಾಗಿವೆ. ಮಂಗಳೂರಿನ ಸವಾರರೊಬ್ಬರು ಹೇಳಿದ ಪ್ರಕಾರ ಮೊಬೈಲ್‌ ಸಂದೇಶದ ಬಳಿಕ ಅಂಚೆ ಕಚೇರಿ, ವಾಹನದ ಶೋರೂಂ ಹಾಗೂ ಆರ್‌ಟಿಒ ಕಚೇರಿ ಅಲೆದಾಡಿದರೂ ಕಾರ್ಡ್‌ ಸಿಕ್ಕಿಲ್ಲ.

ಡಿಜಿ ಲಾಕರ್‌ನಲ್ಲಿವೆ ದಾಖಲೆಗಳು
ಚಿಪ್‌ ಕಾರ್ಡ್‌ಗಳ ಕೊರತೆಯಿಂದಾಗಿ ಸಮಯಕ್ಕೆ ಸರಿಯಾಗಿ ಸ್ಮಾರ್ಟ್‌ ಕಾರ್ಡ್‌ಗಳನ್ನು ವಿತರಿಸಲಾಗುತ್ತಿಲ್ಲ. ಪ್ರತೀ ತಿಂಗಳು ಸಾವಿರಾರು ಕಾರ್ಡ್‌ಗಳ ವಿತರಣೆಯ ಜವಾಬ್ದಾರಿ ಇದ್ದು, ವಿಳಂಬವಾಗುತ್ತಿದೆ. ಉಳಿದಂತೆ ಎಲ್ಲ ದಾಖಲೆಗಳನ್ನು ಡಿಜಿ ಲಾಕರ್‌ ಮೂಲಕ ಡೌನ್‌ಲೋಡ್‌ ಮಾಡಬಹುದು.

ಕಾರ್ಡ್‌ಗಳ ಕೊರತೆಯಿಂದ ವಿಳಂಬ
ತಮಗೆ ಎದುರಾಗಿರುವ ಸಮಸ್ಯೆಯ ಬಗ್ಗೆ ಸವಾರರೊಬ್ಬರು ಸ್ಥಳೀಯ ಆರ್‌ಟಿಒ ಕಚೇರಿಗೆ ದೂರು ನೀಡಿದ್ದು, ಚಿಪ್‌ ಹೊಂದಿರುವ ಕಾರ್ಡ್‌ಗಳ ಕೊರತೆಯಿಂದ ವಿಳಂಬವಾಗುತ್ತಿದೆ ಎಂದಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದು ಯಾವುದೇ ಸಮಸ್ಯೆಗಳಿಲ್ಲ ಎನ್ನುತ್ತಿದ್ದಾರೆ. ತಂತ್ರಜ್ಞಾನ ಇಷ್ಟೊಂದು ಮುಂದುವರಿದ ಸಮಯದಲ್ಲಿ ಕಾರ್ಡ್‌ ವಿತರಣೆಗೆ ವಿಳಂಬ ಮಾಡುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಕೆಲವು ಬಾರಿ ತಾಂತ್ರಿಕ ಕಾರಣಗಳಿಂದಾಗಿ ಸಣ್ಣಪುಟ್ಟ ಗೊಂದಲಗಳಾಗುತ್ತದೆ. ರಾಜ್ಯದ ಎಲ್ಲ ಕಡೆ ಸಮಸ್ಯೆ ಇಲ್ಲ. ಕೆಲವೊಂದು ಆರ್‌ಟಿಒ ವ್ಯಾಪ್ತಿಯಲ್ಲಿ ಸಮಸ್ಯೆಗಳಿದ್ದು ಅವುಗಳನ್ನು ಸ್ಥಳೀಯವಾಗಿಯೇ ಬಗೆಹರಿಸಬೇಕಾಗುತ್ತದೆ.
– ಯೋಗೀಶ್‌ ಎ. ಎಂ. ರಾಜ್ಯ ಸಾರಿಗೆ ಆಯುಕ್ತರು

ಹೊಸ ಕಾರು ಖರೀದಿಸಿ ಎರಡು ತಿಂಗಳು ಕಳೆದಿದ್ದು, ಸ್ಮಾರ್ಟ್‌ಕಾರ್ಡ್‌ ಬಂದಿಲ್ಲ. ಯಾರಲ್ಲೂ ಕೇಳಿದರೂ ಸಮರ್ಪಕ ಉತ್ತರ ಸಿಗುತ್ತಿಲ್ಲ. ಪೋಸ್ಟ್‌ ಮೂಲಕ ಮನೆಗೆ ಬರುವುದಾಗಿ ಇಲಾಖೆಯವರು ತಿಳಿಸಿದ್ದು, ಇನ್ನೂ ಕೈ ಸೇರಿಲ್ಲ. ಪ್ರಯಾಣದ ಸಂದರ್ಭದಲ್ಲಿ ಅನಗತ್ಯ ಗೊಂದಲವಾಗುತ್ತಿದೆ. ದೂರ ಪ್ರಯಾಣಿಸಲು ಆತಂಕವಾಗುತ್ತಿದೆ. – ಲೋಕೇಶ್‌, ಕಾರು ಮಾಲಕರು, ಮಂಗಳೂರು

– ಸಂತೋಷ್‌ ಮೊಂತೇರೊ

ಟಾಪ್ ನ್ಯೂಸ್

Karkala: ಕಫ ಉಲ್ಬಣ… ಮೂರು ತಿಂಗಳ ಮಗು ಸಾ*ವು

Karkala: ಕಫ ಉಲ್ಬಣ… ಮೂರು ತಿಂಗಳ ಮಗು ಸಾ*ವು

WPL 2025: ಆರ್‌ಸಿಬಿ ಆಘಾತ… ಗಾಯ, ಶ್ರೇಯಾಂಕಾ ಡಬ್ಲ್ಯೂಪಿಎಲ್‌ನಿಂದ ಹೊರಕ್ಕೆ

WPL 2025: ಆರ್‌ಸಿಬಿ ಆಘಾತ… ಗಾಯ, ಶ್ರೇಯಾಂಕಾ ಡಬ್ಲ್ಯೂಪಿಎಲ್‌ನಿಂದ ಹೊರಕ್ಕೆ

Women’s FIH Pro League: ಭಾರತಕ್ಕೆ ಇಂಗ್ಲೆಂಡ್‌ ವಿರುದ್ಧ 3-2ರಿಂದ ಜಯ

Women’s FIH Pro League: ಭಾರತಕ್ಕೆ ಇಂಗ್ಲೆಂಡ್‌ ವಿರುದ್ಧ 3-2ರಿಂದ ಜಯ

Akhilesh-Yadav

Maha Kumbh Mela: ಕುಂಭ ಮೇಳ ಅವಧಿ ಫೆ.26ರ ಬಳಿಕವೂ ವಿಸ್ತರಿಸಿ: ಅಖಿಲೇಶ್‌ ಯಾದವ್‌

Tragedy: ಕುದುರೆ ಮೇಲೆ ಕುಳಿತು ಮೆರವಣಿಗೆ ಹೊರಟ ವರನಿಗೆ ಹೃದಯಾಘಾತ… ದುರಂತ ಅಂತ್ಯ

Tragedy: ಸಾವಿನ ಕದ ತಟ್ಟಿದ ವರ… ಕುದುರೆ ಮೇಲೆ ಕುಳಿತು ಮೆರವಣಿಗೆ ಹೊರಟ ವರನಿಗೆ ಹೃದಯಾಘಾತ

ICC Event: ಚಾಂಪಿಯನ್ಸ್‌ ಟ್ರೋಫಿಯೇ ರೋಹಿತ್‌, ಕೊಹ್ಲಿ, ಜಡೇಜಗೆ ಕೊನೆಯ ಐಸಿಸಿ ಕೂಟ?

ICC Event: ಚಾಂಪಿಯನ್ಸ್‌ ಟ್ರೋಫಿಯೇ ರೋಹಿತ್‌, ಕೊಹ್ಲಿ, ಜಡೇಜಗೆ ಕೊನೆಯ ಐಸಿಸಿ ಕೂಟ?

SHashi Taroor (2)

US; ಮುಚ್ಚಿದ ಬಾಗಿಲುಗಳ ಹಿಂದೆ ಗಡಿಪಾರು ವಿಷಯ ಮೋದಿ ಪ್ರಸ್ತಾಪಿಸಿದ್ದಾರೆಯೇ?:ತರೂರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Mangaluru: ನಾವು ಧರ್ಮ ವಿರೋಧಿ‌‌ಯಲ್ಲ, ಆದರೆ…: ಪ್ರಕಾಶ್‌ ರಾಜ್

Mangaluru: ನಾವು ಧರ್ಮ ವಿರೋಧಿ‌‌ಯಲ್ಲ, ಆದರೆ…: ಪ್ರಕಾಶ್‌ ರಾಜ್ ಹೇಳಿದ್ದೇನು?

Mangaluru: ನಗರಗಳ ಜಲತ್ಯಾಜ್ಯ ವ್ಯರ್ಥವಲ್ಲ ಮರುಬಳಕೆ ಮಾಡಿದರೆ ಸಂಪತ್ತು!

Mangaluru: ನಗರಗಳ ಜಲತ್ಯಾಜ್ಯ ವ್ಯರ್ಥವಲ್ಲ ಮರುಬಳಕೆ ಮಾಡಿದರೆ ಸಂಪತ್ತು!

MUST WATCH

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

ಹೊಸ ಸೇರ್ಪಡೆ

Karkala: ಕಫ ಉಲ್ಬಣ… ಮೂರು ತಿಂಗಳ ಮಗು ಸಾ*ವು

Karkala: ಕಫ ಉಲ್ಬಣ… ಮೂರು ತಿಂಗಳ ಮಗು ಸಾ*ವು

Belthangady: ಕಾರು- ರಿಕ್ಷಾ ಅಪಘಾತ; ರಿಕ್ಷಾ ಚಾಲಕನಿಗೆ ಗಂಭೀರ ಗಾಯ

Belthangady: ಕಾರು- ರಿಕ್ಷಾ ಅಪಘಾತ; ರಿಕ್ಷಾ ಚಾಲಕನಿಗೆ ಗಂಭೀರ ಗಾಯ

WPL 2025: ಆರ್‌ಸಿಬಿ ಆಘಾತ… ಗಾಯ, ಶ್ರೇಯಾಂಕಾ ಡಬ್ಲ್ಯೂಪಿಎಲ್‌ನಿಂದ ಹೊರಕ್ಕೆ

WPL 2025: ಆರ್‌ಸಿಬಿ ಆಘಾತ… ಗಾಯ, ಶ್ರೇಯಾಂಕಾ ಡಬ್ಲ್ಯೂಪಿಎಲ್‌ನಿಂದ ಹೊರಕ್ಕೆ

Women’s FIH Pro League: ಭಾರತಕ್ಕೆ ಇಂಗ್ಲೆಂಡ್‌ ವಿರುದ್ಧ 3-2ರಿಂದ ಜಯ

Women’s FIH Pro League: ಭಾರತಕ್ಕೆ ಇಂಗ್ಲೆಂಡ್‌ ವಿರುದ್ಧ 3-2ರಿಂದ ಜಯ

Akhilesh-Yadav

Maha Kumbh Mela: ಕುಂಭ ಮೇಳ ಅವಧಿ ಫೆ.26ರ ಬಳಿಕವೂ ವಿಸ್ತರಿಸಿ: ಅಖಿಲೇಶ್‌ ಯಾದವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.