ಟೆನಿಸ್‌ ಸಿಂಗಲ್ಸ್‌ : ಸುಮಿತ್‌ ನಾಗಲ್‌ ಮೊದಲ ನಗು


Team Udayavani, Jul 24, 2021, 11:12 PM IST

ಟೆನಿಸ್‌ ಸಿಂಗಲ್ಸ್‌ : ಸುಮಿತ್‌ ನಾಗಲ್‌ ಮೊದಲ ನಗು

ಟೋಕಿಯೊ: ಪುರುಷರ ವಿಭಾಗದ ಟೆನಿಸ್‌ ಸಿಂಗಲ್ಸ್‌ನಲ್ಲಿ ಸುಮಿತ್‌ ನಾಗಲ್‌ ನಗು ಹೊಮ್ಮಿಸಿದ್ದಾರೆ. ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಅವರು ಉಜ್ಬೆಕಿಸ್ಥಾನದ ಡೆನ್ನಿಸ್‌ ಇಸ್ತೋಮಿನ್‌ ವಿರುದ್ಧ ದಿಟ್ಟ ಹೋರಾಟ ಪ್ರದರ್ಶಿಸಿ 6-4, 6-7 (6), 6-4 ಅಂತರದ ಮೇಲುಗೈ ಸಾಧಿಸಿದರು. 2 ಗಂಟೆ, 34 ನಿಮಿಷಗಳ ತನಕ ಇವರ ಹೋರಾಟ ಸಾಗಿತು. ಮುಂದಿನ ಸುತ್ತಿನಲ್ಲಿ ಡ್ಯಾನಿಲ್‌ ಮೆಡ್ವೆಡೇವ್‌ ಅವರ ಕಠಿನ ಸವಾಲು ಎದುರಾಗಲಿದೆ. ಮೆಡ್ವೆಡೇವ್‌ ಕಜಾಕ್‌ಸ್ಥಾನದ ಅಲೆಕ್ಸಾಂಡರ್‌ ಬಬ್ಲಿಕ್‌ ಅವರನ್ನು 6-4, 7-6 (8)ರಿಂದ ಮಣಿಸಿದರು.

ಸುಮಿತ್‌ ನಾಗಲ್‌ ಒಲಿಂಪಿಕ್ಸ್‌ ಸಿಂಗಲ್ಸ್‌ನಲ್ಲಿ ಗೆಲುವು ಸಾಧಿಸಿದ ಭಾರತದ ಕೇವಲ 3ನೇ ಟೆನಿಸಿಗ. 1988ರ ಸಿಯೋಲ್‌ ಗೇಮ್ಸ್‌ನಲ್ಲಿ ಜೀಶನ್‌ ಅಲಿ ಪರಗ್ವೆಯ ವಿಕ್ಟೊ ಕ್ಯಾಬಲ್ಲೆರೊ ಅವರನ್ನು ಮಣಿಸಿದ್ದರು. ಮುಂದಿನದು ಲೆಜೆಂಡ್ರಿ ಲಿಯಾಂಡರ್‌ ಪೇಸ್‌ ಸರದಿ. 1996ರ ಅಟ್ಲಾಂಟಾ ಗೇಮ್ಸ್‌ನಲ್ಲಿ ಬ್ರಝಿಲ್‌ನ ಫೆರ್ನಾಂಡೊ ಮೆಲಿಗೆನಿ ಅವರನ್ನು ಮಣಿಸಿದ ಪೇಸ್‌ ಕಂಚು ಜಯಿಸಿದ್ದರು. ಪೇಸ್‌ ಗೆಲುವಿನ ಬಳಿಕ ಸೋಮದೇವ್‌ ದೇವವರ್ಮನ್‌, ವಿಷ್ಣುವರ್ಧನ್‌ 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಆಡಿದರೂ ಮೊದಲ ಸುತ್ತಿನಲ್ಲೇ ಎಡವಿದ್ದರು.

ಇದನ್ನೂ ಓದಿ : ಹಾಕಿ: ಮನ್‌ಪ್ರೀತ್‌ ಪಡೆಗೆ ಜಯ : ವನಿತೆಯರಿಗೆ ಸೋಲು
**
ಆರ್ಚರಿ: ಗುರಿ ತಪ್ಪಿದ ಬದಲಿ ಜೋಡಿ
ಟೋಕಿಯೊ: ಆರ್ಚರಿ ಮಿಕ್ಸೆಡ್‌ ಸ್ಪರ್ಧೆಯಲ್ಲಿ ಭಾರತದ ದೀಪಿಕಾ ಕುಮಾರಿ- ಪ್ರವೀಣ್‌ ಜಾಧವ್‌ ಜೋಡಿ ಕೊರಿಯಾ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ನಿರಾಸೆ ಮೂಡಿಸಿದೆ. ಇದೇ ಮೊದಲ ಸಲ ಒಲಿಂಪಿಕ್ಸ್‌ ಸ್ಪರ್ಧೆಗಿಳಿದಿದ್ದ 17 ವರ್ಷದ ಕಿಮ್‌ ಜೆ ಡೋಕ್‌ ಹಾಗೂ 20 ವರ್ಷದ ಅನ್‌ ಸಾನ್‌ ಸೇರಿಕೊಂಡು ಭಾರತದ ಭರವಸೆಯನ್ನು 6-2 ಅಂತರದಿಂದ ಚಿವುಟಿ ಹಾಕಿದರು.
ಕೊನೆಯ ಕ್ಷಣದಲ್ಲಿ ಅತನು ದಾಸ್‌ ಅವರನ್ನು ಹೊರಗಿರಿಸಿ ಪ್ರವೀಣ್‌ ಜಾಧವ್‌ ಅವರನ್ನು ದೀಪಿಕಾಗೆ ಜೋಡಿಯಾಗಿ ಕಣಕ್ಕಿಳಿಸಿದ್ದು ಈಗ ಟೀಕೆಗೆ ಗುರಿಯಾಗಿದೆ. ಇದೊಂದು “ಬಿಗ್‌ ಬ್ಲಿಂಡರ್‌’ ಎಂದು ಆರ್ಚರಿ ತರಬೇತುದಾರರನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ತಂಡದೊಂದಿಗಿದ್ದ ಎಎಐ ಅಧಿಕಾರಿ ವೀರೇಂದ್ರ ಸಚೆªàವ್‌ ಈ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ರ್‍ಯಾಂಕಿಂಗ್‌ ಸುತ್ತಿನಲ್ಲಿ ಅತನು ದಾಸ್‌ಗಿಂತ ಪ್ರವೀಣ್‌ ಜಾಧವ್‌ ಉತ್ತಮ ಪ್ರದರ್ಶನ ನೀಡಿದ ಕಾರಣ ಈ ಬದಲಾವಣೆ ಮಾಡಲಾಗಿತ್ತು.
**

ಒಂದೇ ಕೈಯಲ್ಲಿ ಟಿಟಿ ಯಶಸ್ಸು!

ಈಕೆಯ ಹೆಸರು ನಟಾಲಿಯಾ ಪಾರ್ಟಿಕಾ. ದೇಶ ಪೋಲೆಂಡ್‌. ಆಟ ಟೇಬಲ್‌ ಟೆನಿಸ್‌. ವಿಶೇಷ ಹಾಗೂ ಅಚ್ಚರಿಯೆಂದರೆ, ಈಕೆ ಹೊಂದಿರುವುದು ಒಂದೇ ಕೈ!

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾರ್ಟಿಕಾ ಪಾಲ್ಗೊಂಡಿದ್ದು, ಆಸ್ಟ್ರೇಲಿಯದ ಮೈಕಲ್‌ ಬ್ರೋಮ್ಲಿ ಅವರನ್ನು ಮೊದಲ ಪಂದ್ಯದಲ್ಲಿ ಪರಾಭವಗೊಳಿಸಿದ್ದಾರೆ.

ಹುಟ್ಟುವಾಗಲೇ ಬಲಗೈ ಹೊಂದಿರದ ನಟಾಲಿಯಾ ಪಾರ್ಟಿಕಾ 1999ರಲ್ಲಿ ಮೊದಲ ಅಂತಾರಾಷ್ಟ್ರೀಯ ಪದಕ ಗೆದ್ದರು. ಅದು ವಿಶ್ವ ಚಾಂಪಿಯನ್‌ಶಿಪ್‌ ಆಗಿತ್ತು. 2000ದ ಸಿಡ್ನಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿಗ ಈಕೆಯ ವಯಸ್ಸು ಕೇವಲ 11 ವರ್ಷ. ಇದೊಂದು ದಾಖಲೆ ಎನಿಸಿತು. 2004ರ ಆಥೇನ್ಸ್‌ ಪ್ಯಾರಾಲಿಂಪಿಕ್ಸ್‌ ಸಿಂಗಲ್ಸ್‌ನಲ್ಲಿ ಚಿನ್ನ, ತಂಡ ಸ್ಪರ್ಧೆಯಲ್ಲಿ ಬೆಳ್ಳಿಗೆ ಕೊರಳೊಡ್ಡಿದರು. ಪದಕ ಬೇಟೆ ಮುಂದುವರಿಯುತ್ತಲೇ ಹೋಯಿತು. ಟೋಕಿಯೊದಲ್ಲಿ ಈಕೆಯ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.