Supreme Court: ಪೋಕ್ಸೋ ವ್ಯಾಪ್ತಿ ವಿಸ್ತರಣೆ: ಸುಪ್ರೀಂ ತೀರ್ಪು ಐತಿಹಾಸಿಕ


Team Udayavani, Sep 24, 2024, 6:00 AM IST

supreme-Court

ಮಕ್ಕಳನ್ನು ಒಳಗೊಂಡ ಲೈಂಗಿಕ ದೃಶ್ಯಗಳಿರುವ ಅಶ್ಲೀಲ ವೀಡಿಯೋಗಳನ್ನು ಕೇವಲ ಡೌನ್‌ಲೋಡ್‌ ಮಾಡಿಕೊಳ್ಳುವುದು ಮತ್ತು ವೀಕ್ಷಿಸುವುದು ಪೋಕೊÕà ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಗಳ ಪ್ರಕಾರ ಅಪರಾಧ ಅಲ್ಲ ಎಂಬ ಮದ್ರಾಸ್‌ ಹೈಕೋರ್ಟ್‌ನ ತೀರ್ಪನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್‌ನ ನಡೆ ಸ್ವಾಗತಾರ್ಹ ಮತ್ತು ಐತಿಹಾಸಿಕವಾದುದು. ಕಾನೂನು ಮತ್ತು ಕಾಯಿ ದೆಗಳನ್ನು ಕೇವಲ ಕಣ್ಣುಮುಚ್ಚಿ ಅನುಸರಿಸಬಾರದು ಅಥವಾ ಅನ್ವಯಿಸ ಬಾರದು; ಮಾನವ ಸಹಜ ವಿವೇಚನೆಯನ್ನೂ ಉಪಯೋಗಿಸಬೇಕು ಎನ್ನುವುದಕ್ಕೆ ಸುಪ್ರೀಂ ಕೋರ್ಟ್‌ನ ತೀರ್ಪು ಶ್ರೇಷ್ಠ ಉದಾಹರಣೆಯಂತಿದೆ.

ಮದ್ರಾಸ್‌ ಹೈಕೋರ್ಟ್‌ನ ತೀರ್ಪನ್ನು ರದ್ದುಪಡಿಸಿ, ಮಕ್ಕಳ ಅಶ್ಲೀಲ ವೀಡಿಯೋಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ಮತ್ತು ವೀಕ್ಷಿಸುವುದು ಕೂಡ ಪೋಕೊÕà ಹಾಗೂ ಐಟಿ ಕಾಯಿದೆಗಳಡಿ ಶಿಕ್ಷಾರ್ಹ ಅಪರಾಧಗಳು ಎಂಬ ತೀರ್ಪನ್ನು ಸರ್ವೋಚ್ಚ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾ| ಜೆ.ಬಿ. ಪರ್ದಿವಾಲಾ ಮತ್ತು ನ್ಯಾ| ಮನೋಜ್‌ ಮಿಶ್ರಾ ಅವರಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಪೀಠವು ನೀಡಿದೆ. ಮುಂದುವರಿದು, ಮಕ್ಕಳ ಅಶ್ಲೀಲ ದೃಶ್ಯಗಳು ಮತ್ತು ಅವುಗಳ ಕಾನೂನಾತ್ಮಕ ಪರಿಣಾಮಗಳ ಕುರಿತಾಗಿ ಮಾರ್ಗ ದರ್ಶಿ ಸೂತ್ರಗಳನ್ನು ಕೂಡ ನೀಡಿದೆ. ಪೋಕೊÕà ಕಾಯಿದೆಯಡಿ ಮಕ್ಕಳ ಅಶ್ಲೀಲ ದೃಶ್ಯಗಳನ್ನು “ಮಕ್ಕಳನ್ನು ಲೈಂಗಿಕವಾಗಿ ಶೋಷಿಸಬಹುದಾದ ಮತ್ತು ದೌರ್ಜನ್ಯಕ್ಕೀಡು ಮಾಡಬಹುದಾದ ಆಕರಗಳು’ ಎಂಬುದಾಗಿ ವ್ಯಾಖ್ಯಾನಿಸಿ ಸೇರ್ಪಡೆಗೊಳಿಸುವುದಕ್ಕಾಗಿ ಕಾಯಿದೆಗೆ ತಿದ್ದುಪಡಿ ತರುವಂತೆ ಸಂಸತ್ತಿಗೆ ತಾನು ಸೂಚನೆ ನೀಡಿರುವುದಾಗಿ ನ್ಯಾಯಪೀಠ ಹೇಳಿದೆ.

ಈ ಸಂದರ್ಭದಲ್ಲಿ ನ್ಯಾಯಪೀಠವು ಹೇಳಿರುವ ಅಂಶವೊಂದು ಈ ಇಡೀ ತೀರ್ಪಿನ ಮಹತ್ವವನ್ನು ಸಾರುತ್ತದೆ. ಮಕ್ಕಳನ್ನು ಬಲಿಪಶು ಮಾಡುವ ಮತ್ತು ದೌರ್ಜನ್ಯಕ್ಕೀಡು ಮಾಡುವ ನಿಟ್ಟಿನಲ್ಲಿ ಮಕ್ಕಳ ಅಶ್ಲೀಲ ದೃಶ್ಯಗಳು ಅಥವಾ “ಪೋರ್ನೋಗ್ರಫಿ’ಯು ಹೊಂದಿರುವ ಅನುರಣನಾತ್ಮಕ ಪರಿಣಾಮವನ್ನು ಹಾಗೂ ತತ್ಸಂಬಂಧಿ ಕುಕೃತ್ಯಗಳನ್ನು ಕಾನೂನು ಪಾಲಕರ ಗಮನಕ್ಕೆ ತರುವ ಸಮಾಜ ಮತ್ತು ಸಂಬಂಧಪಟ್ಟ ಎಲ್ಲರ ಪಾತ್ರದ ಬಗ್ಗೆ ನಾವು ನೀಡಿರುವ ಮಾರ್ಗದರ್ಶಿ ಸೂತ್ರದಲ್ಲಿ ಹೇಳಿದ್ದೇವೆ ಎಂಬುದಾಗಿ ನ್ಯಾಯಪೀಠ ತಿಳಿಸಿದೆ.

ಮೂಲದಲ್ಲಿ, ಈ ಪ್ರಕರಣವು 28 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಮಕ್ಕಳ ಅಶ್ಲೀಲ ದೃಶ್ಯಗಳನ್ನು ಮೊಬೈಲ್‌ ಫೋನ್‌ನಲ್ಲಿ ಡೌನ್‌ಲೋಡ್‌ ಮಾಡಿ ವೀಕ್ಷಿಸಿದ್ದಕ್ಕೆ ಸಂಬಂಧಿಸಿದ್ದು. ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್‌ ಹೈಕೋರ್ಟ್‌, ಮಕ್ಕಳ ಲೈಂಗಿಕ ದೃಶ್ಯಗಳನ್ನು ಕೇವಲ ಡೌನ್‌ಲೋಡ್‌ ಮಾಡಿಕೊಳ್ಳುವುದು ಮತ್ತು ವೀಕ್ಷಿಸುವುದು ಪೋಕೊÕà ಮತ್ತು ಐಟಿ ಕಾನೂನು ಪ್ರಕಾರ ಅಪರಾಧವಲ್ಲ ಎಂದಿತ್ತು. ಅಂದರೆ ಮದ್ರಾಸ್‌ ಹೈಕೋರ್ಟ್‌ ಕಾನೂನನ್ನು ಕಣ್ಣುಮುಚ್ಚಿ ಅನುಸರಿಸಿತ್ತೇ ವಿನಾ ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿರುವಂತೆ ಮಕ್ಕಳ ಅಶ್ಲೀಲ ದೃಶ್ಯ ವೀಕ್ಷಣೆಯಿಂದ ಆಗಬಹುದಾದ “ಅನುರಣನಾತ್ಮಕ’ ಪರಿಣಾಮಗಳ ಬಗ್ಗೆ ವಿಶ್ಲೇಷಣೆ ನಡೆಸಿರಲಿಲ್ಲ. ಸರಳವಾಗಿ ಹೇಳುವುದಾದರೆ, ಅಂತಹ ದೃಶ್ಯಗಳನ್ನು ವೀಕ್ಷಿಸುವ ಮೂಲಕ ಮಾನಸಿಕವಾಗಿ ಭ್ರಷ್ಟನಾಗಬಲ್ಲ ವ್ಯಕ್ತಿ ಮುಂದೊಂದು ದಿನ ತಾನೂ ಅಂತಹ ಕೃತ್ಯ ಎಸಗುವ ಸಾಧ್ಯತೆಯಿದೆ ಎಂಬುದನ್ನು ಸುಪ್ರೀಂ ಕೋರ್ಟ್‌ ಗಮನಿಸಿದೆ.

ಸರ್ವೋಚ್ಚ ನ್ಯಾಯಮೂರ್ತಿಗಳೇ ಹೇಳಿರುವಂತೆ, ಇದೊಂದು ಮೈಲಿಗಲ್ಲು ಎನಿಸಬಲ್ಲ ತೀರ್ಪು ಹಾಗೂ ಮಕ್ಕಳನ್ನು ಲೈಂಗಿಕವಾಗಿ ಶೋಷಿಸುವ ಮತ್ತು ದೌರ್ಜನ್ಯಕ್ಕೀಡು ಮಾಡುವ ಆಕರಗಳ ಬಗ್ಗೆ ನ್ಯಾಯಾಂಗ ಇಷ್ಟು ವಿಸ್ತೃತವಾಗಿ ಪರಿಶೀಲಿಸಿರುವ ಉದಾಹರಣೆ ಜಗತ್ತಿನಲ್ಲೇ ಪ್ರಥಮ. ಹೀಗಾಗಿಯೇ ಸ್ವಾಗತಾರ್ಹ ತೀರ್ಪು ಇದು.

ಟಾಪ್ ನ್ಯೂಸ್

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತವಾಗಿ ಧನಾಗಮವಾಗಲಿದೆ

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತವಾಗಿ ಧನಾಗಮವಾಗಲಿದೆ

Garlic2

Smuggling Garlic: ಭಾರತಕ್ಕೆ ನಿಷೇಧಿತ ಚೀನಿ ಬೆಳ್ಳುಳ್ಳಿ ಪ್ರವೇಶ!

Munirathna

Legal Action: ಮುನಿರತ್ನ ವಿಧಾನಸಭೆ ಸದಸ್ಯತ್ವ ಅಮಾನತು?

BJP-Meeting

By Election: ಚನ್ನಪಟ್ಟಣ ಬಿಜೆಪಿಗೆ ಕೇಳಲು ಕೋರ್‌ಕಮಿಟಿ ಸೂತ್ರ!

Udupi: ಸಂತೆಕಟ್ಟೆ ರಸ್ತೆ ಕಥೆ ವ್ಯಥೆ; ಈ ಸರ್ವೀಸ್‌ ರಸ್ತೆಗಳೆಂಬ ನಿತ್ಯ ತಮಾಷೆ !

Udupi: ಸಂತೆಕಟ್ಟೆ ರಸ್ತೆ ಕಥೆ ವ್ಯಥೆ; ಈ ಸರ್ವೀಸ್‌ ರಸ್ತೆಗಳೆಂಬ ನಿತ್ಯ ತಮಾಷೆ !

Murder-Represent

Bengaluru: ಅಕ್ರಮ ಸಂಬಂಧವೇ ನೇಪಾಲಿ ಮಹಿಳೆಯ ಕೊಲೆಗೆ ಕಾರಣ

Tirupati ಘಟನೆ ಬೆನ್ನಲ್ಲೇ ರಾಜ್ಯದಲ್ಲಿ ತುಪ್ಪ ಗುಣಮಟ್ಟ ಪರಿಶೀಲನೆ ಆರಂಭ

Tirupati ಘಟನೆ ಬೆನ್ನಲ್ಲೇ ರಾಜ್ಯದಲ್ಲಿ ತುಪ್ಪ ಗುಣಮಟ್ಟ ಪರಿಶೀಲನೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka: ಶಾಲೆಗಳು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಪರಿಹರಿಸಿ

Karnataka: ಶಾಲೆಗಳು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಪರಿಹರಿಸಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ

Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತವಾಗಿ ಧನಾಗಮವಾಗಲಿದೆ

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತವಾಗಿ ಧನಾಗಮವಾಗಲಿದೆ

Garlic2

Smuggling Garlic: ಭಾರತಕ್ಕೆ ನಿಷೇಧಿತ ಚೀನಿ ಬೆಳ್ಳುಳ್ಳಿ ಪ್ರವೇಶ!

Munirathna

Legal Action: ಮುನಿರತ್ನ ವಿಧಾನಸಭೆ ಸದಸ್ಯತ್ವ ಅಮಾನತು?

BJP-Meeting

By Election: ಚನ್ನಪಟ್ಟಣ ಬಿಜೆಪಿಗೆ ಕೇಳಲು ಕೋರ್‌ಕಮಿಟಿ ಸೂತ್ರ!

Udupi: ಸಂತೆಕಟ್ಟೆ ರಸ್ತೆ ಕಥೆ ವ್ಯಥೆ; ಈ ಸರ್ವೀಸ್‌ ರಸ್ತೆಗಳೆಂಬ ನಿತ್ಯ ತಮಾಷೆ !

Udupi: ಸಂತೆಕಟ್ಟೆ ರಸ್ತೆ ಕಥೆ ವ್ಯಥೆ; ಈ ಸರ್ವೀಸ್‌ ರಸ್ತೆಗಳೆಂಬ ನಿತ್ಯ ತಮಾಷೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.