T20 Cricket:  ಶ್ರೀಲಂಕಾ ವಿರುದ್ಧ 43 ರನ್‌ಗಳಿಂದ ಗೆದ್ದ ಭಾರತ

ಅಬ್ಬರದ ಆರಂಭ ಒದಗಿಸಿದ ಉಭಯ ತಂಡಗಳು, ಬಿರುಸಿನ ಅರ್ಧಶತಕ ಸಿಡಿಸಿ ನಾಯಕನ ಆಟವಾಡಿದ ಸೂರ್ಯ ಕುಮಾರ್‌ ಯಾದವ್‌

Team Udayavani, Jul 27, 2024, 11:29 PM IST

Team-India

ಪಲ್ಲೆಕೆಲೆ: ಟಿ20 ವಿಶ್ವ ಚಾಂಪಿಯನ್‌ ಭಾರತ ಮೊದಲ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾವನ್ನು 43 ರನ್ನುಗಳಿಂದ ಮಣಿಸಿ ಶುಭಾರಂಭ ಮಾಡಿದೆ. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 7 ವಿಕೆಟಿಗೆ 213 ರನ್‌ ಪೇರಿಸಿದರೆ, ಶ್ರೀಲಂಕಾ 19.2 ಓವರ್‌ಗಳಲ್ಲಿ 170ಕ್ಕೆ ಆಲೌಟ್‌ ಆಯಿತು.

ಅಬ್ಬರದ ಆರಂಭ
ಭಾರತದ ಆರಂಭ ಅಬ್ಬರದಿಂದ ಕೂಡಿತ್ತು. ಜೈಸ್ವಾಲ್‌ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿ ಸ್ಫೋಟಕ ಆಟದ ಸೂಚನೆಯಿತ್ತರು. ಪವರ್‌ ಪ್ಲೇಯಲ್ಲಿ ಜೈಸ್ವಾಲ್‌-ಗಿಲ್‌ ಸೇರಿಕೊಂಡು ಲಂಕಾ ದಾಳಿಯನ್ನು ಪುಡಿಗಟ್ಟಿದರು. ರನ್‌ ಸರಾಗವಾಗಿ ಹರಿದುಬರತೊಡಗಿತು. ಇನ್ನೇನು 6 ಓವರ್‌ ಮುಗಿಯಬೇಕು ಎನ್ನುವಷ್ಟರಲ್ಲಿ ಲಂಕಾ ಮೊದಲ ಯಶಸ್ಸು ಸಾಧಿಸಿತು.

ಪವರ್‌ ಪ್ಲೇಯ ಕೊನೆಯ ಎಸೆತದಲ್ಲಿ ಗಿಲ್‌ ವಿಕೆಟ್‌ ಬಿತ್ತು. ಮೊದಲ ವಿಕೆಟಿಗೆ 74 ರನ್‌ ಹರಿದು ಬಂತು. ಗಿಲ್‌ ಗಳಿಕೆ 16 ಎಸೆತಗಳಿಂದ 34 ರನ್‌ (6 ಫೋರ್‌, 1 ಸಿಕ್ಸರ್‌). ಈ ವಿಕೆಟ್‌ ಮದುಶಂಕ ಪಾಲಾಯಿತು. ಶ್ರೀಲಂಕಾ ವಿರುದ್ಧ ಪವರ್‌ ಪ್ಲೇಯಲ್ಲಿ ಭಾರತ ಗಳಿಸಿದ ಅತ್ಯಧಿಕ ರನ್‌ ಇದಾಗಿದೆ.

7ನೇ ಓವರ್‌ನಲ್ಲಿ ದಾಳಿಗೆ ಇಳಿದ ವನಿಂದು ಹಸರಂಗ ಮೊದಲ ಎಸೆತದಲ್ಲೇ ದೊಡ್ಡದೊಂದು ಬೇಟೆಯಾಡಿದರು. ಮುನ್ನುಗ್ಗಿ ಬಂದ ಜೈಸ್ವಾಲ್‌ ಸ್ಟಂಪ್ಡ್ ಆದರು. ಜೈಸ್ವಾಲ್‌ ಕೊಡುಗೆ 21 ಎಸೆತಗಳಿಂದ 40 ರನ್‌. ಸಿಡಿಸಿದ್ದು 5 ಬೌಂಡರಿ, 2 ಸಿಕ್ಸರ್‌. ಹೀಗೆ ಸತತ 2 ಎಸೆತಗಳಲ್ಲಿ 2 ವಿಕೆಟ್‌ ಉಡಾಯಿಸಿದ ಶ್ರೀಲಂಕಾ ನಿಟ್ಟುಸಿರೆಳೆಯಿತು. ಆದರೆ ಭಾರತದ ಓಟದ ಗತಿಗೇನೂ ತೊಂದರೆ ಆಗಲಿಲ್ಲ. ನಾಯಕ ಸೂರ್ಯಕುಮಾರ್‌ ಯಾದವ್‌ ಸಿಡಿಯಲಾರಂಭಿಸಿದರು. ಅರ್ಧ ಹಾದಿ ಕ್ರಮಿಸುವಾಗ ಭಾರತದ ಸ್ಕೋರ್‌ 2ಕ್ಕೆ 111 ರನ್‌ ಆಗಿತ್ತು.

ನಾಯಕನ ಜವಾಬ್ದಾರಿಯ ನಡುವೆಯೂ ದಿಟ್ಟ ಬ್ಯಾಟಿಂಗ್‌ ಪ್ರದರ್ಶಿಸಿದ ಸೂರ್ಯ 20ನೇ ಅರ್ಧ ಶತಕ ಬಾರಿಸಿ ಮಿಂಚಿದರು. ಇದು ಲಂಕಾ ವಿರುದ್ಧ ಆಡಿದ 6 ಪಂದ್ಯಗಳಲ್ಲಿ ಸೂರ್ಯ ಸಿಡಿಸಿದ 4ನೇ 50 ಪ್ಲಸ್‌ ಗಳಿಕೆ. ಇದರಲ್ಲಿ ಒಂದು ಶತಕವೂ ಸೇರಿದೆ. ಸೂರ್ಯ 26 ಎಸೆತಗಳಿಂದ 58 ರನ್‌ ಸಿಡಿಸಿದರು (8 ಬೌಂಡರಿ, 2 ಸಿಕ್ಸರ್‌). ಸೂರ್ಯ-ಪಂತ್‌ ಜೋಡಿಯಿಂದ 7.1 ಓವರ್‌ಗಳಲ್ಲಿ 76 ರನ್‌ ಒಟ್ಟುಗೂಡಿತು. ರಿಷಭ್‌ ಪಂತ್‌ ಆರಂಭದಲ್ಲಿ ತೀರಾ ನಿಧಾನಿಯಾಗಿದ್ದರು. ಸೂರ್ಯ ಔಟಾದ ಬಳಿಕ ಬಿರುಸಿನ ಆಟಕ್ಕಿಳಿದು 49 ರನ್‌ ಮಾಡಿದರು (33 ಎಸೆತ, 6 ಬೌಂಡರಿ, 1 ಸಿಕ್ಸರ್‌).

ನಿಸ್ಸಂಕ-ಮೆಂಡಿಸ್‌ ಬಿರುಸು
ಭಾರತದಂತೆ ಲಂಕಾ ಆರಂಭವೂ ಬಿರುಸಿನಿಂದ ಕೂಡಿತ್ತು. ಪಥುಮ್‌ ನಿಸ್ಸಂಕ-ಕುಸಲ್‌ ಮೆಂಡಿಸ್‌ 8.4 ಓವರ್‌ಗಳಿಂದ 84 ರನ್‌ ಪೇರಿಸಿದರು. ನಿಸ್ಸಂಕ 48 ಎಸೆತಗಳಿಂದ 79 (7 ಬೌಂಡರಿ, 4 ಸಿಕ್ಸರ್‌), ಮೆಂಡಿಸ್‌ 45 ರನ್‌ ಬಾರಿಸಿದರು. ಪರಾಗ್‌ ಕೇವಲ 5 ರನ್‌ ವೆಚ್ಚದಲ್ಲಿ 3 ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ-7 ವಿಕೆಟಿಗೆ 213 (ಸೂರ್ಯಕುಮಾರ್‌ 58, ಪಂತ್‌ 49, ಜೈಸ್ವಾಲ್‌ 40, ಗಿಲ್‌ 34, ಪತಿರಣ 40ಕ್ಕೆ 4). ಶ್ರೀಲಂಕಾ-19.2 ಓವರ್‌ಗಳಲ್ಲಿ 170 (ನಿಸ್ಸಂಕ 79, ಮೆಂಡಿಸ್‌ 45, ಪರಾಗ್‌ 5ಕ್ಕೆ 3, ಅರ್ಷದೀಪ್‌ 24ಕ್ಕೆ 2, ಅಕ್ಷರ್‌ 38ಕ್ಕೆ 2).

ಪಂದ್ಯಶ್ರೇಷ್ಠ: ಸೂರ್ಯಕುಮಾರ್‌ ಯಾದವ್‌

ಟಾಪ್ ನ್ಯೂಸ್

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

Ranji Trophy: Samit Dravid in possible squad

Ranji Trophy: ಸಂಭಾವ್ಯ ತಂಡದಲ್ಲಿ ಸಮಿತ್‌ ದ್ರಾವಿಡ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.