![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 10, 2021, 8:13 PM IST
ಕಾಬೂಲ್/ಬೀಜಿಂಗ್: ಆತಂಕಕಾರಿ ಬೆಳವಣಿಗೆ ಎಂಬಂತೆ, ಅಮೆರಿಕ ಸೇನಾ ಪಡೆಯ ವಾಪಸಾತಿ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿ ಕಾಲೂರಲು ಪ್ರಯತ್ನಿಸುತ್ತಿರುವ ಚೀನಾಗೆ ತಾಲಿಬಾನ್ ಕೆಂಪುಹಾಸಿನ ಸ್ವಾಗತ ಕೋರಿದೆ. “ಚೀನಾವನ್ನು ನಾವು ಅಫ್ಘನ್ನ ಸ್ನೇಹಿತನೆಂದು ಪರಿಗಣಿಸುತ್ತೇವೆ. ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿರುವ ಉಯೂರ್ ಇಸ್ಲಾಮಿಕ್ ಉಗ್ರರಿಗೆ ನಾವು ಆಶ್ರಯ ನೀಡುವುದಿಲ್ಲ’ ಎಂದು ತಾಲಿಬಾನ್ ಶನಿವಾರ ಭರವಸೆ ನೀಡಿದೆ.
ತಾಲಿಬಾನ್ ಆಡಳಿತದಡಿ, ಕ್ಸಿನ್ ಜಿಯಾಂಗ್ ನಲ್ಲಿ ಉಗ್ರವಾದವನ್ನು ಬಿತ್ತುತ್ತಿರುವ ಈಸ್ಟ್ ತುರ್ಕಿಸ್ತಾನ್ ಇಸ್ಲಾಮಿಕ್ ಮೂವ್ ಮೆಂಟ್ (ಇಟಿಐಎಂ) ಎಂಬ ಉಗ್ರ ಸಂಘಟನೆಗೆ ಅಫ್ಘಾನಿಸ್ತಾನವೇ ಸ್ವರ್ಗವಾಗಬಹುದು ಎಂಬ ಆತಂಕ ಚೀನಾಗಿತ್ತು. ಈಗ ಈ ಆತಂಕಕ್ಕೆ ಸ್ವತಃ ತಾಲಿಬಾನ್ ವಕ್ತಾರ ಸುಹೈನ್ ಶಹೀನ್ ತೆರೆ ಎಳೆದಿದ್ದಾನೆ. ನಮಗೆ ಚೀನಾ ಸ್ನೇಹಿತ. ಆದಷ್ಟು ಬೇಗ ಇಲ್ಲಿ ಪುನರ್ ನಿರ್ಮಾಣ ಕಾರ್ಯ ಆರಂಭಿಸುವ ಕುರಿತು ಚೀನಾದೊಂದಿಗೆ ಮಾತುಕತೆ ನಡೆಸುತ್ತೇವೆ ಎಂದೂ ಶಹೀನ್ ಹೇಳಿದ್ದಾನೆ. ಜತೆಗೆ, ಅಲ್ ಖೈದಾವಾಗಲೀ ಅಥವಾ ಬೇರೆ ಉಗ್ರ ಸಂಘಟನೆಯಾಗಲೀ ಅಫ್ಘನ್ ಪ್ರವೇಶಿಸಲು ನಾವು ಬಿಡುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾನೆ.
ಇದನ್ನೂ ಓದಿ : ಕೋವಿಡ್:ರಾಜ್ಯದಲ್ಲಿಂದು 2879 ಸೋಂಕಿತರು ಗುಣಮುಖ; 2162 ಹೊಸ ಪ್ರಕರಣ ಪತ್ತೆ
ಅಫ್ಘನ್ ಪೈಲಟ್ ಗಳ ಹತ್ಯೆ
ಅಫ್ಘಾನಿಸ್ತಾನದ ವಿಮಾನಗಳ ಪೈಲಟ್ ಗಳ ಮೇಲೆ ಈಗ ತಾಲಿಬಾನ್ ಕಣ್ಣು ಬಿದ್ದಿದೆ. ಈವರೆಗೆ 7 ಮಂದಿ ಪೈಲಟ್ ಗಳನ್ನು ಉಗ್ರರು ಹತ್ಯೆಗೈದಿದ್ದಾರೆ. “ಈ ಪೈಲಟ್ ಗಳೇ ನಮ್ಮವರ ಮೇಲೆ ಬಾಂಬ್ ದಾಳಿ ನಡೆಸಿದವರು. ಹಾಗಾಗಿ ಅವರನ್ನು ಕೊಲ್ಲಲು ಯೋಜನೆ ರೂಪಿಸಿದ್ದೇವೆ’ ಎಂದು ತಾಲಿಬಾನ್ ಹೇಳಿದೆ. ಹತ್ಯೆಯ ಭೀತಿಯಿಂದ ಇತ್ತೀಚೆಗೆ 41 ವರ್ಷದ ಪೈಲಟ್ ಝಮರಾಯ್ ಅವರು ತಮ್ಮ ಮನೆಯನ್ನೇ ಮಾರಿ ಬೇರೆಡೆಗೆ ತೆರಳಲು ಯೋಜಿಸಿದ್ದರು. ಅದರಂತೆ, ರಿಯಲ್ ಎಸ್ಟೇಟ್ ಏಜೆಂಟನ್ನು ಭೇಟಿಯಾಗಲು ತೆರಳಿದ್ದರು. ರಿಯಲ್ ಎಸ್ಟೇಟ್ ಕಚೇರಿಗೇ ನುಗ್ಗಿ ಅವರ ಪುತ್ರನೆದುರೇ ಝಮರಾಯ್ ರನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದರು.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.