ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಕಡಿಮೆ ದರದಲ್ಲಿ ನಿತ್ಯ ಊಟ ದೊರಕುತ್ತಿರುವುದು ನನ್ನ ಪುಣ್ಯ...

Team Udayavani, Nov 12, 2024, 5:41 PM IST

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಉದಯವಾಣಿ ಸಮಾಚಾರ
ರಬಕವಿ-ಬನಹಟ್ಟಿ: 12ರೂಪಾಯಿಗೆ ಟಿ-ಕಾಫಿ ಸಿಗದ ಈ ಕಾಲದಲ್ಲಿ ಇಲ್ಲಿನ ಅಮ್ಮ ಫೌಂಡೇಶನ್‌ ಬನಹಟ್ಟಿಯ ಮಂಗಳವಾರ ಪೇಟೆಯ ಈಶ್ವರಲಿಂಗ ಮೈದಾನ ಹತ್ತಿರವಿರುವ ಊಟದ ಮನೆಯಲ್ಲಿ ಕೇವಲ 12 ರೂ.ಗಳಲ್ಲಿ ಬಡವರ, ನಿರ್ಗತಿಕರ ಹಸಿವು ನೀಗಿಸುವ ಕೆಲಸ ಮಾಡುತ್ತಿದೆ.

ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಬಿಸಿ ಬಿಸಿ ಜುನಕಾ, ಬಿಸಿ ರೊಟ್ಟಿ ನೀಡುವ ಕಾಯಕದಲ್ಲಿ ನಿರತವಾಗಿದೆ. ಚಿಕ್ಕಪಡಸಲಗಿಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ವಿಜ್ಞಾನ ವಿಷಯದ ಶಿಕ್ಷಕರಾಗಿರುವ ಬಸವರಾಜ ಜಾಲೋಜಿ ಯಾವುದೇ ಅಪೇಕ್ಷೆಯಿಲ್ಲದೆ, ಮತ್ತೊಬ್ಬರ ಸಹಾಯ- ಸಹಕಾರವಿಲ್ಲದೆ ಇಂತಹ ಮಹತ್ವದ ಕಾರ್ಯದಲ್ಲಿ ತೊಡಗಿದ್ದಾರೆ.

ಪ್ರಸ್ತುತ ದಿನಂಪ್ರತಿ 120 ರಿಂದ 150 ಜನರು ಆಹಾರ ಸೇವಿಸಲು ಬರುತ್ತಾರೆ. 2 ರೊಟ್ಟಿ, ಜುನುಕದೊಂದಿಗೆ ಉಳ್ಳಾಗಡ್ಡಿ, ಸೌತೆಕಾಯಿ ನೀಡುವ ಇವರು ಈ ಭಾಗದ ಬಡವರಿಗೆ ಭಾಗ್ಯದಾತರಾಗಿದ್ದಾರೆ.

ಬಡವರಿಗೆ ಆಧಾರ: ದಿನಂಪ್ರತಿ ಕೂಲಿ ಕಾರ್ಮಿಕರಿಗೆ, ಚಿಕ್ಕ ವೇತನ ದೊರಕುವ ಸಿಬ್ಬಂದಿಗೆ, ನಿರಾಶ್ರಿತರಿಗೆ ಈ ಊಟದ
ಮನೆ ಸಂಜೀವಿನಿಯಾಗಿದೆ. ಇಂದಿನ ದಿನಮಾನದಲ್ಲಿಕೇವಲ 12 ರೂ.ಗೆ ದಿನಂಪ್ರತಿ 2 ರೊಟ್ಟಿ ಜತೆಗೆ ಸಾಕಾಗುವಷ್ಟು ಜುನುಕಾ ಒದಗಿಸುತ್ತಿರುವುದು ವಿಶೇಷ.

ಬಡವರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ 12ರೂ.ಗೆ ರೊಟ್ಟಿ ಊಟ ನೀಡಲಾಗುತ್ತಿದೆ. ಎಲ್ಲಿಯವರೆಗೂ ಆ ದೇವರು ಶಕ್ತಿ ನೀಡುತ್ತಾನೋ, ಅಲ್ಲಿಯವರೆಗೂ ಈ ಕಾರ್ಯ ಮುಂದುವರಿಸಿಕೊಂಡು ಹೋಗುತ್ತೇನೆ.’
ಬಸವರಾಜ ಜಾಲೋಜಿ,ಶಿಕ್ಷಕ,
ಅಮ್ಮಾ ಫೌಂಡೇಶನ್‌ ಸಂಸ್ಥಾಪಕ, ಬನಹಟ್ಟಿ

ಕಳೆದೆರಡು ವರ್ಷಗಳಿಂದ ಇಲ್ಲಿಯೇ ನಿತ್ಯ ಊಟ ಮಾಡುತ್ತೇನೆ. ನಿತ್ಯ 80 ರಿಂದ 100 ರೂ. ಸಂಪಾದಿಸುತ್ತೇನೆ. ಕಡಿಮೆ ದರದಲ್ಲಿ ನಿತ್ಯ ಊಟ ದೊರಕುತ್ತಿರುವುದು ನನ್ನ ಪುಣ್ಯ.
ಗುರಪಾದ ತಳವಾರ, ಕೂಲಿ ಕಾರ್ಮಿಕ.

ವೇತನ ಅಷ್ಟಕಷ್ಟೇಯಿದ್ದರೂ ಬಡವರಿಗೆ ಊಟ ಒದಗಿಸುವದರಲ್ಲಿ ತೃಪ್ತಿ ಇದೆ. ನಿರಂತರ ಸೇವೆಯಲ್ಲಿ ನೆಮ್ಮದಿಯಿದೆ.
ವಾಸಂತಿ ಮಠಪತಿ, ಅಡುಗೆ ತಯಾರಕರು.

■ ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

Governor sends back microfinance ordinance without signing it

Govt: ಮೈಕ್ರೋ ಫೈನಾನ್ಸ್‌ ಸುಗ್ರೀವಾಜ್ಞೆಗೆ ಸಹಿ ಹಾಕದೆ ವಾಪಾಸ್‌ ಕಳುಹಿಸಿದ ರಾಜ್ಯಪಾಲರು

America: ಹತ್ತು ಜನರಿದ್ದ ವಿಮಾನ ಅಲಾಸ್ಕಾ ಬಳಿ ಕಣ್ಮರೆ-ತೀವ್ರ ಶೋಧ ಕಾರ್ಯಾಚರಣೆ!

America: ಹತ್ತು ಜನರಿದ್ದ ವಿಮಾನ ಅಲಾಸ್ಕಾ ಬಳಿ ಕಣ್ಮರೆ-ತೀವ್ರ ಶೋಧ ಕಾರ್ಯಾಚರಣೆ!

ಮಹಾ ಕುಂಭ ಭಕ್ತರಿಗಾಗಿ ಪ್ರಯಾಗ್‌ರಾಜ್ ನಿಂದ ತ್ರಿವೇಣಿ ಸಂಗಮಕ್ಕೆ ಹೆಲಿಕಾಪ್ಟರ್ ಸೇವೆ

ಮಹಾ ಕುಂಭ ಭಕ್ತರಿಗಾಗಿ ಪ್ರಯಾಗ್‌ರಾಜ್ ನಿಂದ ತ್ರಿವೇಣಿ ಸಂಗಮಕ್ಕೆ ಹೆಲಿಕಾಪ್ಟರ್ ಸೇವೆ

6-belagavi

Belagavi: ಮಹಾ ಕುಂಭಮೇಳಕ್ಕೆ ಹೊರಟಿದ್ದ ಬೆಳಗಾವಿಯ ‌ನಾಲ್ವರು ಸೇರಿ ಆರು ಮಂದಿ ದುರ್ಮರಣ

7

Thandel: ಕಡಲ ತೀರದ ಪ್ರೇಮಯಾನದಲ್ಲಿ ಮೋಡಿ ಮಾಡಿದ ಚೈ – ಪಲ್ಲವಿ; ಹೇಗಿದೆ ʼತಾಂಡೇಲ್ʼ?

ರಜೆ ನಿರಾಕರಿಸಿದ್ದಕ್ಕೆ ನಾಲ್ವರು ಸಹೋದ್ಯೋಗಿಗಳಿಗೆ ಚಾಕುವಿನಿಂದ ಇರಿದ ಸರಕಾರಿ ಉದ್ಯೋಗಿ

Denied Leave: ಸಿಗದ ರಜೆ… ಕೋಪದಿಂದ ನಾಲ್ವರು ಸಹೋದ್ಯೋಗಿಗಳಿಗೆ ಚಾಕು ಇರಿದ ಸರಕಾರಿ ನೌಕರ

Hangal: ದೇವಸ್ಥಾನದ ಕಳಸಾರೋಹಣದ ವೇಳೆ ಕ್ರೇನ್‌ ಬಕೆಟ್‌ ಮುರಿದು ಬಿದ್ದು ಓರ್ವ ಸಾವು

Hangal: ದೇವಸ್ಥಾನದ ಕಳಸಾರೋಹಣದ ವೇಳೆ ಕ್ರೇನ್‌ ಬಕೆಟ್‌ ಮುರಿದು ಬಿದ್ದು ಓರ್ವ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-mudhol

Mudhol: ಜೆಸಿಬಿ ಸದ್ದಿಗೆ ಕಾಡುಪ್ರಾಣಿಗಳು ಕಂಗಾಲು

2-mudhol

Mudhol ಟ್ರ್ಯಾಕ್ಟರ್ ಗೆ ಬೈಕ್‌ ಡಿಕ್ಕಿ: ತಂದೆ-ಮಗ ಸ್ಥಳದಲ್ಲೇ ಸಾವು

2-mudhol

Mudhol: ಹಣದಾಸೆಗೆ 50 ಸಾವಿರ ಕಳೆದುಕೊಂಡ ಉದ್ಯಮಿ; ಆನ್‌ಲೈನ್‌ ಮೂಲಕ ಹಣ ಪಡೆದು ವಂಚನೆ

1-deee

ರಬಕವಿ-ಬನಹಟ್ಟಿ; ಮೀಟರ್ ಬಡ್ಡಿ ಕಿರುಕುಳ: ಇಬ್ಬರ ಬಂಧನ

7

Mudhol: ಮಾಚಕನೂರ ಸೇತುವೆ ಮೇಲೆ‌ ಮೊಸಳೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

6(2

Bajpe: ಸುಂಕದಕಟ್ಟೆ ಅಂಗನವಾಡಿ ಸಂಕಟದಲ್ಲಿ!

4

Bantwal: ರೈಲು ನಿಲ್ದಾಣ ಅಭಿವೃದ್ಧಿ; ಮಾರ್ಚ್‌ ತಿಂಗಳೊಳಗೆ ಬಹುತೇಕ ಪೂರ್ಣ

5

Uppinangady: ಜಾಗ ಮಂಜೂರಾದರೂ ಆರಂಭವಾಗದ ಅಂಬೇಡ್ಕರ್‌ ವಸತಿ ಶಾಲೆ

Governor sends back microfinance ordinance without signing it

Govt: ಮೈಕ್ರೋ ಫೈನಾನ್ಸ್‌ ಸುಗ್ರೀವಾಜ್ಞೆಗೆ ಸಹಿ ಹಾಕದೆ ವಾಪಾಸ್‌ ಕಳುಹಿಸಿದ ರಾಜ್ಯಪಾಲರು

America: ಹತ್ತು ಜನರಿದ್ದ ವಿಮಾನ ಅಲಾಸ್ಕಾ ಬಳಿ ಕಣ್ಮರೆ-ತೀವ್ರ ಶೋಧ ಕಾರ್ಯಾಚರಣೆ!

America: ಹತ್ತು ಜನರಿದ್ದ ವಿಮಾನ ಅಲಾಸ್ಕಾ ಬಳಿ ಕಣ್ಮರೆ-ತೀವ್ರ ಶೋಧ ಕಾರ್ಯಾಚರಣೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.