Team India: ಕ್ರಿಕೆಟ್‌ ಆಯ್ಕೆ ಸಮಿತಿಯೊಂದಿಗೆ ಗಂಭೀರ್‌, ಜಯ್‌ ಶಾ ಚರ್ಚೆ

ಅನೌಪಚಾರಿಕ ಸಭೆಗೆ ಹೊಸದಿಲ್ಲಿ ನಿವಾಸದಿಂದಲೇ ಭಾಗವಹಿಸಿದ ನೂತನ ಕೋಚ್‌ ಗೌತಮ್‌

Team Udayavani, Jul 18, 2024, 7:35 AM IST

Gambir

ಹೊಸದಿಲ್ಲಿ: ಟೀಮ್‌ ಇಂಡಿಯಾದ ನೂತನ ಕೋಚ್‌ ಗೌತಮ್‌ ಗಂಭೀರ್‌ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ರಾಷ್ಟ್ರೀಯ ಆಯ್ಕೆ ಸಮಿತಿ ಜತೆ ಚರ್ಚೆ ನಡೆಸಿದ್ದಾರೆ. ಆನ್‌ಲೈನ್‌ನಲ್ಲಿ ಸುಮಾರು ಒಂದು ಗಂಟೆ ಕಾಲ ಇವರ ನಡುವೆ ಮಾತುಕತೆ ನಡೆದಿತ್ತು ಎಂಬುದಾಗಿ ಕ್ರಿಕೆಟ್‌ ವೆಬ್‌ಸೈಟ್‌ ಒಂದು ವರದಿ ಮಾಡಿದೆ.

ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿ ಸದಸ್ಯರೆಲ್ಲ ಇದರಲ್ಲಿ ಪಾಲ್ಗೊಂಡಿದ್ದರು. ಗಂಭೀರ್‌ ತಮ್ಮ ಹೊಸದಿಲ್ಲಿ ನಿವಾಸದಿಂದಲೇ ಈ ಅನೌಪಚಾರಿಕ ಸಭೆಯಲ್ಲಿ ಭಾಗವಹಿಸಿದರು. ಭವಿಷ್ಯದ ಟೀಮ್‌ ಇಂಡಿಯಾ, ತನ್ನ ಅಪೇಕ್ಷೆಯ ತಂಡ ಹಾಗೂ ನಾಯಕತ್ವದ ಕುರಿತು ಮಾತುಕತೆ ನಡೆಯಿತು. ಆಯ್ಕೆ ವಿಷಯದಲ್ಲಿ ತಾನು ಕೈಯಾಡಿಸುವುದಿಲ್ಲ, ಆದರೆ ತನ್ನ ಬಯಕೆಯ ತಂಡ ಹೇಗಿರಬೇಕು ಎಂಬ ಕುರಿತು ಗಂಭೀರ್‌ ಹೇಳಿಕೊಂಡರು ಎಂದು ವರದಿಯಾಗಿದೆ. ಮೂರೂ ಮಾದರಿಗಳಲ್ಲಿ ಆಡಬಲ್ಲ ಕ್ರಿಕೆಟಿಗರನ್ನು ತಾನು ಬಯಸುವುದಾಗಿ ಕೋಚ್‌ ಆದ ಬಳಿಕ ಗಂಭೀರ್‌ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.

ನಾಯಕರಾರು ಲಂಕಾ ಸರಣಿಗೆ?
ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದ ನಾಯಕತ್ವದ ಕುರಿತು ಏನೇನು ಮಾತುಕತೆ ನಡೆಯಿತು ಎಂದು ತಿಳಿದು ಬಂದಿಲ್ಲ. ಟಿ20 ಹಾಗೂ ಏಕದಿನ ತಂಡಗಳು ಶೀಘ್ರದಲ್ಲೇ ಪ್ರಕಟಗೊಳ್ಳಲಿವೆ. ಟಿ20 ಸರಣಿಗೆ ಹಾರ್ದಿಕ್‌ ಪಾಂಡ್ಯ ಅಥವಾ ಸೂರ್ಯಕುಮಾರ್‌ ಯಾದವ್‌, ಏಕದಿನ ಸರಣಿಗೆ ರೋಹಿತ್‌ ಶರ್ಮ ನಾಯಕರಾಗುವ ಸಾಧ್ಯತೆ ಇದೆ.

ಏಕದಿನ ಆಡಲಿರುವ ರೋಹಿತ್‌
ರೋಹಿತ್‌ ಶರ್ಮ ಶ್ರೀಲಂಕಾ ಪ್ರವಾಸದ ಏಕದಿನ ಸರಣಿಯಲ್ಲಿ ಆಡು ವು ದಾಗಿ ಹೇಳಿರುವ ಬಗ್ಗೆ ಈ ಸಭೆ  ಯಲ್ಲಿ ಸುಳಿವು ಲಭಿಸಿದೆ. ಐಸಿಸಿ ಚಾಂಪಿ ಯನ್ಸ್‌ ಟ್ರೋಫಿ ಪಂದ್ಯಾ ವಳಿಗೂ ಮುನ್ನ ಹೆಚ್ಚಿನ ಏಕದಿನ ಪಂದ್ಯ ಗಳಿಲ್ಲದ ಕಾರಣ ರೋಹಿತ್‌ ಈ ಸರಣಿ ಯಲ್ಲಿ ಆಡುವುದು ಬಹುತೇಕ ಖಚಿತ.

ಅಯ್ಯರ್‌ ಪುನರಾಗಮನ?
ವಿರಾಟ್‌ ಕೊಹ್ಲಿ ಮತ್ತು ಜಸ್‌ಪ್ರೀತ್‌ ಬುಮ್ರಾ ಅವರಿಗೆ ವಿಶ್ರಾಂತಿ ಲಭಿಸುವ ಕಾರಣ ಶ್ರೇಯಸ್‌ ಅಯ್ಯರ್‌ ಏಕದಿನ ತಂಡವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಹಾಗೆಯೇ ಕೆ.ಎಲ್‌. ರಾಹುಲ್‌ ಕೂಡ.

ಅಭ್ಯಾಸ ಆರಂಭಿಸಿದ ಶಮಿ
ಹೊಸದಿಲ್ಲಿ: ಮೊಹಮ್ಮದ್‌ ಶಮಿ ಬೌಲಿಂಗ್‌ ಅಭ್ಯಾಸ ಆರಂಭಿಸಿದ್ದಾರೆ. ತಮ್ಮ ಬೌಲಿಂಗ್‌ ವೀಡಿಯೋವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ಏಕದಿನ ವಿಶ್ವಕಪ್‌ ವೇಳೆ ಹಿಮ್ಮಡಿ ಗಾಯಕ್ಕೀಡಾಗಿದ್ದ ಶಮಿ, 9 ತಿಂಗಳಿನಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಟಿ20 ವಿಶ್ವಕಪ್‌ನಲ್ಲೂ ಅವರಿಗೆ ಆಡಲಾಗಿರಲಿಲ್ಲ. ಶಸ್ತ್ರಚಿಕಿತ್ಸೆ ಮಾಡಿಕೊಂಡ ಬಳಿಕ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಪುನಶ್ಚೇತನ ಪ್ರಕ್ರಿಯೆಯಲ್ಲಿ ತೊಡಗಿದ್ದರು.

ಟಾಪ್ ನ್ಯೂಸ್

Accident-Logo

Accident: ದುಬಾೖಯಲ್ಲಿ ಅಪಘಾತ: ಗೋಕಾಕದ ನಾಲ್ವರ ಸಾವು

Ravikumar

MUDAದಲ್ಲಿ ನಡೆದ ಅಕ್ರಮ ಸಿಬಿಐ ತನಿಖೆಗೆ ಒಪ್ಪಿಸಿ: ಎಂಎಲ್‌ಸಿ ರವಿಕುಮಾರ್‌

DK-Shiva-Kumar

By Election: ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ: ಡಿಸಿಎಂ ಡಿ.ಕೆ. ಶಿವಕುಮಾರ್‌ ಪುನರುಚ್ಚಾರ

Rastra-pathi-Bhavan

CM ಅಭಿಯೋಜನೆ: ರಾಷ್ಟ್ರಪತಿಗಳಿಗೆ ಕಾಂಗ್ರೆಸ್‌ ಮಾಡಿದ್ದ ಮನವಿಗೆ ಸ್ಪಂದನೆ

air india

Air India ಜತೆ ವಿಲೀನ: ಸೆ.3ರ ಬಳಿಕ ವಿಸ್ತಾರ ಟಿಕೆಟ್‌ ಬುಕ್ಕಿಂಗ್‌ ಇಲ್ಲ!

Supreme Court

Supreme Court: ಇತ್ಯರ್ಥಕ್ಕೆ ಬಾಕಿ ಉಳಿದಿವೆ 83 ಸಾವಿರ ಪ್ರಕರಣಗಳು

Congress-Symbol

AICC: ರಾಜ್ಯಕ್ಕೆ ಕಾಂಗ್ರೆಸ್‌ನಿಂದ ನಾಲ್ವರು ಕಾರ್ಯದರ್ಶಿಗಳ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aa-MT

Maharaja Trophy ಕ್ರಿಕೆಟ್‌: ಬೆಂಗಳೂರು ಫೈನಲ್‌ಗೆ

1-fff

U-20 ಹೈಜಂಪ್‌:ಪೂಜಾ ರಾಷ್ಟ್ರೀಯ ದಾಖಲೆ

1-aaaaaaa

US Open-2024; ಮೂರನೇ ಸುತ್ತಿಗೆ ಸಿನ್ನರ್‌, ಸ್ವಿಯಾಟೆಕ್‌: ಅಲ್ಕರಾಜ್‌ಗೆ ಸೋಲಿನ ಆಘಾತ

1-atki

Lord’s Test: ಎಂಟನೇ ಕ್ರಮಾಂಕದಲ್ಲಿ ಆಡಲಿಳಿದು ಅಟ್ಕಿನ್ಸನ್‌ ಶತಕ

1-asasa

Paris Paralympics: ಮನೀಷ್‌ ನರ್ವಾಲ್‌ ರಜತ ಸಂಭ್ರಮ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Accident-Logo

Accident: ದುಬಾೖಯಲ್ಲಿ ಅಪಘಾತ: ಗೋಕಾಕದ ನಾಲ್ವರ ಸಾವು

Ravikumar

MUDAದಲ್ಲಿ ನಡೆದ ಅಕ್ರಮ ಸಿಬಿಐ ತನಿಖೆಗೆ ಒಪ್ಪಿಸಿ: ಎಂಎಲ್‌ಸಿ ರವಿಕುಮಾರ್‌

DK-Shiva-Kumar

By Election: ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ: ಡಿಸಿಎಂ ಡಿ.ಕೆ. ಶಿವಕುಮಾರ್‌ ಪುನರುಚ್ಚಾರ

Rastra-pathi-Bhavan

CM ಅಭಿಯೋಜನೆ: ರಾಷ್ಟ್ರಪತಿಗಳಿಗೆ ಕಾಂಗ್ರೆಸ್‌ ಮಾಡಿದ್ದ ಮನವಿಗೆ ಸ್ಪಂದನೆ

Parliment New

Waqf Act: ಜನರ ಸಲಹೆ ಸ್ವೀಕಾರಕ್ಕೆ ಜೆಪಿಸಿ ತೀರ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.