ರುದ್ರಾಭಿಷೇಕ ಮೂಲಕ ರಾಮಮಂದಿರಕ್ಕೆ ಅಡಿಪಾಯ

ಭಾರತೀಯರ ಶತಮಾನಗಳ ಕನಸಿನ ನನಸಿಗೆ ಶ್ರೀಕಾರ ; ಮಂದಿರ ನಿರ್ಮಾಣಕ್ಕೆ ಎರಡು ವಿನ್ಯಾಸಗಳು ಪರಿಗಣನೆಯಲ್ಲಿ

Team Udayavani, Jun 11, 2020, 6:00 AM IST

ರುದ್ರಾಭಿಷೇಕ ಮೂಲಕ ರಾಮಮಂದಿರಕ್ಕೆ ಅಡಿಪಾಯ

ಅಯೋಧ್ಯೆ: ಭಾರತೀಯರ ಶತಮಾನಗಳ ಕನಸಿನ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ರಾಮಜನ್ಮಭೂಮಿಯಲ್ಲಿ ಬುಧವಾರ ಚಾಲನೆ ನೀಡಲಾಯಿತು.

ಇಲ್ಲಿನ ಕುಬೇರ ತಿಲ ದಲ್ಲಿ ಬೆಳಗ್ಗೆ ರುದ್ರಾಭಿಷೇಕ, ಇನ್ನಿತರ ಪೂಜಾ ಕೈಂಕರ್ಯ ಗಳನ್ನು ನೆರವೇರಿಸುವ ಮೂಲಕ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತು.

ಈ ಸಂದರ್ಭ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಮಹಾಂತ ಕೆ.ಎನ್‌. ದಾಸ್‌ ಮಾತನಾಡಿ, ಅಡಿಗಲ್ಲು ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಆಗಮಿಸಬೇಕಿತ್ತು. ಆದರೆ ಕೊರೊನಾ ಬಿಕ್ಕಟ್ಟು ಆರಂಭವಾದ ಬಳಿಕ ಅವರು ಯಾವುದೇ ಸಾರ್ವಜನಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಹಾಗಾಗಿ ಈ ಕಾರ್ಯಕ್ರಮಕ್ಕೆ ಅವರು ಬಂದಿಲ್ಲ ಎಂದರು.

ವಿಎಚ್‌ಪಿ ವಿನ್ಯಾಸವೇ ಅಂತಿಮ?
ಮಂದಿರದ ವಿನ್ಯಾಸ ಹೇಗಿರಬೇಕು ಎಂಬ ವಿಚಾರವಾಗಿ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆ ಯಲ್ಲಿ ನಾನಾ ವಿನ್ಯಾಸಗಳನ್ನು ಪರಿಗಣಿಸಲಾಗುತ್ತಿದೆ. 1992ರಲ್ಲಿ ವಿಶ್ವ ಹಿಂದೂ ಪರಿಷತ್‌ ತನ್ನದೇ ಆದ ಮಂದಿರ ವಿನ್ಯಾಸವೊಂದನ್ನು ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಂದಿಟ್ಟಿತ್ತು. ಆ ವಿನ್ಯಾಸ ರಚಿಸಿದ್ದು ಹೆಸರಾಂತ ವಾಸ್ತುಶಿಲ್ಪಿ ಚಂದ್ರಕಾಂತ ಸೋಮಪುರ್‌. ಹಾಗಾಗಿ ಆ ವಿನ್ಯಾಸಕ್ಕೆ ಅವರ ಹೆಸರನ್ನೇ ಇಡಲಾಗಿದೆ. ದೇಶದ ತುಂಬೆಲ್ಲ ರಾಮಮಂದಿರ ಆಂದೋಲನ ಪ್ರಖರವಾಗಿ ರೂಪುಗೊಂಡಿದ್ದ ದಿನಗಳಲ್ಲಿ ಅದೇ ವಿನ್ಯಾಸದ ರಾಮಮಂದಿರದ ಚಿತ್ರವನ್ನು ಎಲ್ಲ ಕರಪತ್ರಗಳಲ್ಲಿ, ಕ್ಯಾಲೆಂಡರ್‌ಗಳಲ್ಲಿ ಮುದ್ರಿಸಲಾಗಿತ್ತು. ಜನರೂ ಅದನ್ನು ಮೆಚ್ಚಿಕೊಂಡಿದ್ದರು. ಅದೇ ವಿನ್ಯಾಸದಲ್ಲೇ ರಾಮಮಂದಿರ ಮೂಡಿಬರಲಿ ಎಂಬುದು ಅನೇಕರ ಅಭಿಪ್ರಾಯವಾಗಿದೆ.

“ನಗರ’ ವಿನ್ಯಾಸವೂ ಪರಿಗಣನೆಯಲ್ಲಿ
ಮತ್ತೂಂದು ಮೂಲದ ಪ್ರಕಾರ, ಮಂದಿರಕ್ಕೆ “ನಗರ’ ಎಂಬ ವಿನ್ಯಾಸವನ್ನೂ ಪರಿಗಣಿಸಲಾಗುತ್ತಿದೆ. ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ “ನಗರ’ ಮಾದರಿಯ ಕಟ್ಟಡಗಳು ಹೆಚ್ಚು ಪ್ರಸಿದ್ಧಿ. ಅದರಲ್ಲಿ ಉಕ್ಕು, ಸಿಮೆಂಟ್‌ ಬಳಕೆಯಿರುವುದಿಲ್ಲ. ಅಮೃತಶಿಲೆ ಗಳನ್ನೇ ಸ್ಲ್ಯಾಬ್ ಗಳನ್ನಾಗಿ ಪರಿವರ್ತಿಸಿ ಅವುಗಳನ್ನು ಜೋಡಿಸಿ ಮಂದಿರಗಳನ್ನು ನಿರ್ಮಿಸಲಾಗುತ್ತದೆ. ಈ ಶೈಲಿಯೂ ಪರಿಗಣನೆಯಲ್ಲಿದೆ ಎನ್ನಲಾಗಿದೆ.

ಮೋದಿ ನಿರ್ಧರಿಸುತ್ತಾರೆ
ಮೇಲ್ಕಂಡ ಎರಡೂ ಬಗೆಯ ವಿನ್ಯಾಸ ಗಳ ಲ್ಲೊಂ ದರ ಆಯ್ಕೆಯನ್ನು ಮೋದಿ ಅವರ ವಿವೇಚನೆಗೆ ಬಿಡಲಾಗಿದೆ. ಸದ್ಯ ದಲ್ಲೇ ಎರಡೂ ವಿನ್ಯಾಸಗಳನ್ನು ಕೊಂಡೊಯ್ದು ಅವರ ಸಲಹೆ ಕೇಳಲಾಗುತ್ತದೆ. ಭೇಟಿಯ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಮಹಾಂತ ಕೆ.ಎನ್‌. ದಾಸ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-ccc

Champions Trophy; ಹೊಸ ದಾಖಲೆ ಬರೆದ ಕಪ್ತಾನ ರೋಹಿತ್ ಶರ್ಮ

1-rekha-1

Rekha Gupta; ದೆಹಲಿ ಸಿಎಂ ಆಯ್ಕೆ ಹಿಂದೆ ಬಿಜೆಪಿಯ ಭವಿಷ್ಯದ ಯೋಜನೆಗಳ ಸುಳಿವು?

Champions Trophy: Hruday hits century despite pain

Champions Trophy: ನೋವಿನ ನಡುವೆಯೂ ಹೃದೋಯ್‌ ಶತಕ; ಭಾರತಕ್ಕೆ 229 ರನ್‌ ಗುರಿ

Tollywood: ಪ್ರಶಾಂತ್‌ ನೀಲ್‌ – ಜೂ. ಎನ್‌ಟಿಆರ್‌ ಚಿತ್ರದ ಶೂಟ್‌ ಶುರು: ಫೋಟೋ ವೈರಲ್

Tollywood: ಪ್ರಶಾಂತ್‌ ನೀಲ್‌ – ಜೂ. ಎನ್‌ಟಿಆರ್‌ ಚಿತ್ರದ ಶೂಟ್‌ ಶುರು: ಫೋಟೋ ವೈರಲ್

Dharwad: ರಸ್ತೆ ಬದಿ ವಾಹನಕ್ಕೆ ಬೈಕ್ ಡಿಕ್ಕಿ : ಮೂವರು ಯುವಕರು ಸ್ಥಳದಲ್ಲೇ ಸಾವು

Dharwad: ರಸ್ತೆ ಬದಿ ವಾಹನಕ್ಕೆ ಬೈಕ್ ಡಿಕ್ಕಿ : ಮೂವರು ಯುವಕರು ಸ್ಥಳದಲ್ಲೇ ಸಾವು

Udupi ಕ್ಷೇತ್ರದ ಯೋಜನೆಗಳಿಗೆ ವಿಶೇಷ ಅನುದಾನಕ್ಕೆ ಸಿಎಂಗೆ ಯಶ್‌ಪಾಲ್‌ ಸುವರ್ಣ ಮನವಿ

Udupi ಕ್ಷೇತ್ರದ ಯೋಜನೆಗಳಿಗೆ ವಿಶೇಷ ಅನುದಾನಕ್ಕೆ ಸಿಎಂಗೆ ಶಾಸಕ ಯಶ್‌ಪಾಲ್‌ ಮನವಿ

ನಾಗಾ ಸಾಧುಗಳ ನಾಯಕ ಅವಧೇಶಾನಂದ ಗಿರಿ ಮಹಾರಾಜರಿಗೆ ಆದಿಚುಂಚನಗಿರಿ ವಿಜ್ಞಾತಂ ಪುರಸ್ಕಾರ

ನಾಗಾ ಸಾಧುಗಳ ನಾಯಕ ಅವಧೇಶಾನಂದ ಗಿರಿ ಮಹಾರಾಜರಿಗೆ ಆದಿಚುಂಚನಗಿರಿ ವಿಜ್ಞಾತಂ ಪುರಸ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-swati

Delhi; ರೇಖಾ ಗುಪ್ತಾ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾದ ಸ್ವಾತಿ ಮಲಿವಾಲ್

1-aas

OTT platforms; ನೀತಿಸಂಹಿತೆಗೆ ಬದ್ಧರಾಗಿರಿ: ಅಶ್ಲೀ*ಲ ಜೋಕ್ ಗಳ ವಿರುದ್ಧ ಕೇಂದ್ರ ಎಚ್ಚರಿಕೆ

Delhi CM Rekha Gupta: ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕಾರ

Delhi CM Rekha Gupta: ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕಾರ

Video: ಭಯವಾಗುತ್ತೆ, ಲಿಫ್ಟ್ ಒಳಗೆ ನಾಯಿ ತರಬೇಡಿ… ಬಾಲಕ ಬೇಡಿಕೊಂಡರೂ ಕೇಳದ ಮಹಿಳೆ

Video: ಭಯವಾಗುತ್ತೆ, ಲಿಫ್ಟ್ ಒಳಗೆ ನಾಯಿ ತರಬೇಡಿ… ಬಾಲಕ ಬೇಡಿಕೊಂಡರೂ ಕೇಳದ ಮಹಿಳೆ

Hyderabad: KCR ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿದ್ದ ವ್ಯಕ್ತಿ‌ ಶವವಾಗಿ ಪತ್ತೆ!

Hyderabad: KCR ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿದ್ದ ವ್ಯಕ್ತಿ‌ ಶವವಾಗಿ ಪತ್ತೆ!

MUST WATCH

udayavani youtube

ಬೆಂಗಳೂರಿಗರು ಈ ಜಾಗಕ್ಕೊಮ್ಮೆ ತಪ್ಪದೇ ಭೇಟಿ ಕೊಡಿ

udayavani youtube

ಮಠ ಗುರುಪ್ರಸಾದ್ ಕೊನೇ ಕಾಲ್ ಆಡಿಯೋ | ಪತ್ನಿಗೆ ಹೇಳಿದ್ದೇನು ?

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

ಹೊಸ ಸೇರ್ಪಡೆ

1-ccc

Champions Trophy; ಹೊಸ ದಾಖಲೆ ಬರೆದ ಕಪ್ತಾನ ರೋಹಿತ್ ಶರ್ಮ

14

Gudibande; ಕಣ್ಣು ಕಿತ್ತುಬರುವಂತೆ ಮಹಿಳೆಯ ಮೇಲೆ ಅಮಾನುಷ ಹಲ್ಲೆ

Manipal: ಎಫ್ಐಸಿಸಿಐ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ 3ನೇ ಬ್ಯಾಚ್‌ ಮಾಹೆಯಲ್ಲಿ ಆರಂಭ

Manipal: ಎಫ್ಐಸಿಸಿಐ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ 3ನೇ ಬ್ಯಾಚ್‌ ಮಾಹೆಯಲ್ಲಿ ಆರಂಭ

1-korata

Koratagere;ಕ್ಷೌರದ ಅಂಗಡಿ ತೆರವಿಗೆ ಸವಿತಾ ಸಮಾಜದಿಂದ ಮುಷ್ಕರ

13

Gangavathi: 24 ಗಂಟೆಗಳ ಕಾರ್ಯಾಚರಣೆ; ತುಂಗಾಭದ್ರಾ ನದಿಯಲ್ಲಿ ತೆಲಂಗಾಣ ವೈದ್ಯೆಯ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.