![Maha Kumbh 2025: Minister Prahlad Joshi takes holy dip at Triveni Sangam](https://www.udayavani.com/wp-content/uploads/2025/02/js-415x231.jpg)
![Maha Kumbh 2025: Minister Prahlad Joshi takes holy dip at Triveni Sangam](https://www.udayavani.com/wp-content/uploads/2025/02/js-415x231.jpg)
Team Udayavani, Jan 30, 2025, 7:30 AM IST
ಬೆಳ್ತಂಗಡಿ: ಕೇರಳದ ತಿರುವನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇಗುಲದ ಪ್ರಧಾನ ಅರ್ಚಕ(ಪೆರಿಯ ನಂಬಿ)ರಾಗಿ ಕೊಕ್ಕಡದ ಸತ್ಯನಾರಾಯಣ ತೋಡ್ತಿಲ್ಲಾಯ (45) ನೇಮಕಗೊಂಡಿದ್ದರೆ. ಇವರು ಕೊಕ್ಕಡದ ದಿ| ಸುಬ್ರಾಯ ತೋಡ್ತಿಲ್ಲಾಯ ಹಾಗೂ ಶಾರದಾ ದಂಪತಿಯ ಎರಡನೇ ಪುತ್ರ.
ಮಹಾ ಪ್ರಧಾನ ಅರ್ಚಕರೆಂದರೆ ಅವರಿಗೆ ಸಂಸ್ಥಾನದಿಂದ ನೀಡುವ ಕೊಡೆ (ಛತ್ರಿ) ಮರ್ಯಾದೆ ಇರುವ ವಿಶೇಷ ಸ್ಥಾನ. ಈ ಮಹಾ ಅರ್ಚಕ ಸ್ಥಾನವನ್ನು ಈ ವರೆಗೆ ಪಡೆದವರಲ್ಲಿ ಸತ್ಯನಾರಾಯಣ ತೋಡ್ತಿಲ್ಲಾಯರು ಅತಿ ಕಿರಿಯರು.
ಅರ್ಚಕರಾಗಿ ಸೇರಿದ 6 ತಿಂಗಳಲ್ಲೇ ಇವರಿಗೆ ಮಹಾ ಪ್ರಧಾನ ಅರ್ಚಕ ಸ್ಥಾನ ಸಿಕ್ಕಿದೆ. ಈ ಹುದ್ದೆ ಅಕ್ಕರೆ ದೇಶಿ (ಕೊಕ್ಕಡದ 8 ಮನೆತನ) ಹಾಗೂ ಇಕ್ಕರೆ ದೇಶಿ ಕೇರಳದ 4 ಮನೆತನದ ಒಳಗಾಗಿ ಬರುವಂಥದ್ದು. ಈ ಹಿಂದೆ ಈ ಹುದ್ದೆಯಲ್ಲಿ ರಾಜೇಂದ್ರ ಅರೆಮನೆತ್ತಾಯ (ಅಕ್ಕರೆದೇಶಿ) ಅವರು 1.4 ವರ್ಷ ಸೇವೆ ಸಲ್ಲಿಸಿದ್ದರು.
ಈ ಹುದ್ದೆಗೇರಿದ ಬಳಿಕ ಗೃಹಸ್ಥಾಶ್ರಮ ತೊರೆದು ಸನ್ಯಾಸಿಯಂತೆ ಇರಬೇಕು. ಜತೆಗೆ ದೇವರ ಯಾವುದೇ ಉತ್ಸವಗಳಿಗೆ ಇವರದೇ ಪ್ರಧಾನ ಪೌರೋಹಿತ್ಯವಾಗಿರುತ್ತದೆ. ಸತ್ಯನಾರಾಯಣ ಅವರು ಜ.30ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.