Threat: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂ*ಬ್ ಬೆದರಿಕೆ!
ಆರು ವಿಮಾನಗಳಲ್ಲಿ ಸ್ಪೋ*ಟಕದ ಎಚ್ಚರಿಕೆ, ಬೆದರಿಕೆ ಸಂದೇಶದಿಂದಾಗಿ ಏರ್ಪೋರ್ಟ್ ಅಧಿಕಾರಿಗಳು ಅಲರ್ಟ್
Team Udayavani, Oct 20, 2024, 7:21 PM IST
ಬೆಂಗಳೂರು: ಆರು ವಿಮಾನಗಳಲ್ಲಿ ಒಟ್ಟು 12 ಮಂದಿ ಬಾಂಬರ್ಗಳಿರುವುದಾಗಿ ಅನಾಮಧೇಯ ಟ್ವಿಟರ್ ಖಾತೆಯಿಂದ ಬಾಂಬ್ ಬೆದರಿಕೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಮಾಂಡ್ ಸೆಂಟರ್ಗೆ ಬಾಂಬ್ ಬೆದರಿಕೆ ಸಂದೇಶ ರವಾನೆಯಾಗಿದೆ. ಸದ್ಯ ಹುಸಿ ಬಾಂಬ್ ಬೆದರಿಕೆ ಸಂದೇಶ ರವಾನಿಸಿದವರ ವಿರುದ್ಧ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಡಿಗೋ ಏರ್ಲೈನ್ಸ್ನ ಐಎಕ್ಸ್ 233, ಐಎಕ್ಸ್ 375, ಐಎಕ್ಸ್481, ಐಎಕ್ಸ್ 383, ಐಎಕ್ಸ್ 549, ಐಎಕ್ಸ್ 399 ವಿಮಾನಗಳಲ್ಲಿ ಬಾಂಬರ್ಗಳಿರುವುದಾಗಿ ಟ್ವೀಟ್ ರವಾನಿಸಲಾಗಿದೆ. ಮಂಗಳೂರು, ದುಬೈ, ತಿರುವನಂತಪುರಂ ಮಸ್ಕತ್ ಸೇರಿ ದೇಶದ ವಿವಿಧ ಏರ್ಪೋರ್ಟ್ಗಳಿಂದ ತೆರಳುವ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕಲಾಗಿದೆ. ಬೆದರಿಕೆ ಸಂದೇಶದಿಂದಾಗಿ ವಿಮಾನ ನಿಲ್ದಾಣ ಅಧಿಕಾರಿಗಳು ಅಲರ್ಟ್ ಆಗಿದ್ದು. ಕಳೆದ ಒಂದು ವಾರದಲ್ಲಿ ಎರಡನೇ ಬಾರಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ಗೆ ಹುಸಿ ಬಾಂಬ್ ಬೆದರಿಕೆ ಬಂದಿದೆ.
ಇಂಡಿಗೋ ಪ್ರಯಾಣಿಕರ ಪರದಾಟ
ಇಂಡಿಗೋ ಸರ್ವರ್ ಡೌನ್ ಆದ್ದರಿಂದ ಏರ್ಪೋರ್ಟ್ನಲ್ಲಿ ಪ್ರಯಾಣಿಕರು ಪರದಾಡಿದ್ದರು. ಕೆಂಪೇಗೌಡ ಏರ್ಪೋರ್ಟ್ ಟರ್ಮಿನಲ್ 1ರಲ್ಲಿ ಚೆಕ್ ಇನ್ ಮತ್ತು ಚೆಕ್ ಔಟ್ ಆಗಲು ನೂರಾರು ಮಂದಿ ಪ್ರಯಾಣಿಕರು ಪರದಾಡಿದರು. ಜೊತೆಗೆ ಚೆಕ್ ಇನ್ ಮತ್ತು ಚೆಕ್ ಔಟ್ ಆಗಲು ಟರ್ಮಿನಲ್ 1 ರಲ್ಲಿ ನಲ್ಲಿ ಸಾವಿರಾರು ಜನ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲುವಂತಾಗಿತ್ತು.
ಆರು ಇಂಡಿಗೋ ಸೇರಿ ಇಪ್ಪತ್ತು ವಿಮಾನಗಳಿಗೆ ಬಾಂಬ್ ಬೆದರಿಕೆ:
ಇಂಡಿಗೋದ 6 ವಿಮಾನ ಸೇರಿದಂತೆ ವಿಸ್ತಾರ, ಏರ್ ಇಂಡಿಯಾ ಸಂಸ್ಥೆಯ ಒಟ್ಟು 20 ವಿಮಾನಗಳಿಗೆ ಭಾನುವಾರ ಮತ್ತೆ ಬಾಂಬ್ ಬೆದರಿಕೆ ಬಂದಿದೆ. ಈ ಬಗ್ಗೆ ಇಂಡಿಗೋ ವಕ್ತಾರ ಮಾತನಾಡಿ ಸಂಸ್ಥೆಯ ವಿಮಾನಗಳಿಗೆ ಬೆದರಿಕೆ ಕರೆಗಳು ಬಂದಿವೆ. 6ಇ 58 (ಜೆಡ್ಡಾದಿಂದ ಮುಂಬೈ), 6ಇ 87 (ಕೋಯಿಕೋಡ್ನಿಂದ ದಮ್ಮಾಮ್), 6 ಇ 11 (ದೆಹಲಿಯಿಂದ ಇಸ್ತಾಂಬುಲ್), 6ಇ 17 (ಮುಂಬೈನಿಂದ ಇಸ್ತಾನ್ಬುಲ್), 6ಇ 133 (ಪುಣೆ- ಜೋಧಪುರ), ಮತ್ತು 6ಇ 112 (ಗೋವಾದಿಂದ ಅಹಮದಾಬಾದ್) ಎಂದರು. ಶನಿವಾರ ಕೂಡ ಒಂದೇ ದಿನ ಭಾರತದ 30ಕ್ಕೂ ಅಧಿಕ ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿದ್ದು, ಸಂಚಾರ ಅಸ್ತವ್ಯಸ್ತವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಆನ್ಲೈನ್ನಲ್ಲೇ ಅನುಕಂಪದ ಅರ್ಜಿ ನಿರ್ವಹಣೆ
Fraud Case: ನೌಕರಿ ಕೊಡಿಸುವುದಾಗಿ 47 ಲಕ್ಷ ರೂ. ನಗದು ದೋಚಿದ ಕಾನ್ಸ್ಟೆಬಲ್
Shiggaon Bypoll: ನಾವು ಟಿಕೆಟ್ ಕೇಳಿಲ್ಲ: ಭರತ್ ಬೊಮ್ಮಾಯಿ
BY Election: ಚನ್ನಪಟ್ಟಣದಲ್ಲಿ ಸ್ಪರ್ಧೆಗೆ ಒತ್ತಡ, ವರಿಷ್ಠರ ತೀರ್ಮಾನಕ್ಕೆ ಬದ್ಧ: ಡಿಕೆಸು
Karnataka: ಶಿಕ್ಷಕರಿಗೆ ಸಹಪಠ್ಯ ಸ್ಪರ್ಧೆ ವೇಳಾಪಟ್ಟಿ ಪ್ರಕಟ
MUST WATCH
ಹೊಸ ಸೇರ್ಪಡೆ
Chhattisgarh: ಅಜ್ಜಿಯ ನರಬಲಿ ನಡೆಸಿ ಶಿವಲಿಂಗಕ್ಕೆ ರಕ್ತ ಅರ್ಪಣೆ!
Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ
Compliant: ಈಶಾ ಸಂಸ್ಥೆಯಲ್ಲಿ ಮಗನಿಗೆ ಲೈಂಗಿಕ ದೌರ್ಜನ್ಯ: ದಂಪತಿ ಆರೋಪ
Odisha: ಕುಟುಂಬಸ್ಥರ ಕಣ್ತಪ್ಪಿಸಲು ಟ್ರಂಕ್ನಲ್ಲಿ ಪ್ರಿಯಕರನ ಬಚ್ಚಿಟ್ಟ ಯುವತಿ!
Policy: ವಿಮಾನ ನಿಲ್ದಾಣದಲ್ಲಿ ಅಪ್ಪುಗೆಗೆ ಸಮಯ ಮಿತಿ ಹೇರಿದ ನ್ಯೂಜಿಲೆಂಡ್ ಸರಕಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.