Temple: ಉದ್ಭವ ಶಿವಲಿಂಗ- ಕಿರಿಯಾಡಿಯ ಹಿರಿಯ ದೇವಾಲಯದ ಹಿರಿಯ ಕಥೆ


Team Udayavani, Aug 16, 2024, 4:24 PM IST

Temple: ಉದ್ಭವ ಶಿವಲಿಂಗ- ಕಿರಿಯಾಡಿಯ ಹಿರಿಯ ದೇವಾಲಯದ ಹಿರಿಯ ಕಥೆ

ನಾವು ಮಹಾಭಾರತ ಕಥೆಯನ್ನು ಕೇಳಿರುತ್ತೇವೆ, ಓದಿರುತ್ತೇವೆ. ಅದರಲ್ಲಿ ಪಾಂಡವರೂ ಮತ್ತು ಕೌರವರು ಪಗಡೆ ಆಟವಂತೂ ಒಮ್ಮೆ ಮೈ ಜುಮ್ಮ್ ಎನ್ನುವಂತಿದೆ. ಹೇಗೆ ಶಕುನಿಯು ಮೋಸದ ಪಗಡೆ ಆಡಿ ಪಾಂಡವರನ್ನು ಸೋಲಿಸಿ ವನವಾಸಕ್ಕೆ ಕಳುಹಿಸಿದನು ಎಂದು. ಪಾಂಡವರು ವನವಾಸಕ್ಕೆ ಹೋಗುತ್ತಾರೆ. ಅವರು ಇಡೀ ಭಾರತ ದೇಶವನ್ನು ಸುತ್ತಿ ಬರುತ್ತಾರೆ ಎಂದು ಹೇಳುವುದು ಇದೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮಕ್ಕೆ ಬಂದಿರುತ್ತಾರೆ ಎಂಬ ನಂಬಿಕೆ ಇದೆ. ಇದಕ್ಕೆ ಪ್ರತೀತಿ, ಕಥೆ, ಗ್ರಾಮದ ಹೆಸರು ಸಾಕ್ಷಿ ವಿನಃ ಯಾವುದೇ ಲಿಖಿತ ದಾಖಲೆಗಳು ಇಲ್ಲ.

ನಾನು ಮೊದಲೇ ಹೇಳಿದಂತೆ ಉಜಿರೆ ಗ್ರಾಮದಿಂದ 3 ಕಿ.ಮೀ ಹೋದಾಗ ಕಿರಿಯಾಡಿ ಎಂಬ ರಸ್ತೆಯಲ್ಲಿ ಒಂದು ಶಿವ ದೇವಾಲಯವಿದೆ. ಅಲ್ಲಿಂದ ಸ್ವಲ್ಪ ದೂರ ಹೋದರೆ ಸಿಗುವುದೇ ಭೀಮ ಗುಡ್ಡೆ.ಪ್ರತೀತಿಗಳ ಪ್ರಕಾರ ಹಿಂದೆ ಪಾಂಡವರು ವನವಾಸಕ್ಕೆ ಬಂದು ಇದೇ ಭೀಮ ಗುಡ್ಡೆಯಲ್ಲಿ ವಾಸಿಸುತ್ತಿದ್ದರು. ಆಗ ಜನವಸತಿ ಕಡಿಮೆ ಇತ್ತೋ ಏನೋ ತಿಳಿಯದು.ಅಲ್ಲಿನ ಜನ ಆ ಸ್ಥಳಕ್ಕೆ ಹೆಸರಿಟ್ಟಿದ್ದರೋ ತಿಳಿಯದು. ಆದರೆ ಭೀಮನ ಬಳಗ ಬಂದು ಅಲ್ಲಿ ನೆಲೆಸಿದ ಕಾರಣ ಅವನ ಹೆಸರು ನಾಮಕರಣ ಮಾಡಿದ್ದರು, ಎಂದು ಜನ ಹೇಳುತ್ತಾರೆ.

ಅಲ್ಲಿನ ಕಥೆಯಂತೆ ಭೀಮನ ಸಂಗಡಿಗರು ಒಂದು ದಿನ ಅಲ್ಲಿಯ ತಂಗಿದ್ದರು ಹಾಗೂ ಅಲ್ಲಿಯೇ ತಮ್ಮ ಆಹಾರ ತಯಾರಿಸಿಕೊಂಡಿದ್ದರು ಎಂಬ ನಂಬಿಕೆಯು ಇದೆ. ಆ ಸಮಯದಲ್ಲಿ ನೀರಿನ ಮೂಲಗಳಾದ ಕೆರೆ, ಬಾವಿಗಳು ಇರಲ್ಲಿಲ. ಹುಡುಕಾಡುತ್ತ ಬಂದ ಭೀಮ ಕಿರಿಯಾಡಿ ಎಂಬಲ್ಲಿ ತನ್ನ ಒಂದು ಕೈಯಿಂದ ಮಣ್ಣನ್ನು ಒಂದೇ ಬಾರಿ ಅಗೆದಾಗ ಅಲ್ಲಿ ನೀರು ಸಿಕ್ಕಿತ್ತು. ಅದನ್ನು ಹೀಗ “ಸರಸ್ವತಿ ಕೆರೆ” ಎಂದು ಕರೆಯುತ್ತಾರೆ. ಅವರು ನಿಮಿ೯ಸಿದ ಆ ಕೆರೆ ಕೈಯಲ್ಲಿ ಗುದ್ದಿದಂತೆ ಕಾಣುತ್ತದೆ. ವಷ೯ಪೂತಿ೯ ನೀರು ತುಂಬಿರುತ್ತದೆ. ಕಾಲಕ್ರಮೇಣ ಅದೇ ಕೆರೆಯಲ್ಲಿ ಸರಸ್ವತಿ ದೇವಿ ಸ್ನಾನಕ್ಕೆ ಬರುತ್ತಾರೆ ಎಂಬ ನಂಬಿಕೆ ಹುಟ್ಟಿಕೊಂಡಿತ್ತು.

ಶಿವಲಿಂಗ ಉದ್ಭವಾಯಿತು ಎಂಬ ನಂಬಿಕೆ ಇದೆ. ಅದೇ ಶಿವಲಿಂಗಕ್ಕೆ ಗುಡಿ ಕಟ್ಟಿ ಪೂಜಿಸಲಾಗುತ್ತಿತ್ತು. ಶಿವಲಿಂಗಕ್ಕೆ ಪ್ರತಿದಿನ ಸರಸ್ವತಿ ಕೆರೆಯಿಂದ ನೀರು ತಂದು ಅಭಿಷೇಕ ಮಾಡುತ್ತಾರೆ. ವಿಶೇಷ ದಿನಗಳಾದ ಆಟಿ ಅಮಾವಾಸ್ಯೆ, ಶಿವರಾತ್ರಿ, ಸೋಮವಾರ ವಿಶೇಷ ಪೂಜೆ ನಡೆಯುತ್ತದೆ. ಇಲ್ಲಿ ಶಿವ, ಗಣೇಶ, ಅ‌ನ್ನಪೂರ್ಣೆ ಮುಂತಾದ ದೇವರ ಗುಡಿಗಳಿವೆ. ಪ್ರತಿದಿನ ದೇವರಿಗೆ ಪೂಜೆ ನಡೆಯುತ್ತದೆ. ಕಾಲಕ್ರಮೇಣ ಜನರ ಕೈಯಲ್ಲಿ ದೇವರ ಕೆಲಸವಾಗುವಂತೆ ಜೀರ್ಣೋದ್ಧಾರ ಕ್ರಿಯೆಯೂ ನಡೆಯಿತು.

ಪ್ರತಿವರ್ಷವು ರಥೋತ್ಸವ ಮಾಡಿ ಸಂಭ್ರಮ ಪಡುತ್ತಾರೆ. ಪ್ರಕೃತಿ ಸೌಂದರ್ಯ ಹೇಳುವುದೇ ಬೇಡ ಗಿಡಮರಗಳ ನಡುವೆ ದೇವಾಲಯ. ದೇವಾಲಯದ ಎದುರು ಗದ್ದೆಗಳು, ಆಹಾರಕ್ಕಾಗಿ ಬಂದ ಚಿಲಿಪಿಲಿ ಹಕ್ಕಿಗಳು,ಮೇವಿಗಾಗಿ ಬಂದ ದನ ಕರುಗಳು, ಹಸಿ ಹಸಿರಾಗಿಬಿಟ್ಟ ಚಿಗುರುಗಳು, ಪರಿಮಳ ಸುರಿಸೊ ಹೂವುಗಳು, ಇವುಗಳನ್ನು ನೋಡುವಾಗ ಹಿಂದೆ ನಮ್ಮ ಮುತ್ತಜ್ಜಿ ಮುತ್ತಜ್ಜನ ಕಾಲದ ಪ್ರಕೃತಿ ನೋಡುವಂತೆ ಕಾಣುತ್ತದೆ. ಭಕ್ತರು ದೇವಾಲಯದ ಸುತ್ತಮುತ್ತ ಹಾಗೆ ತಮ್ಮ ಪರಿಸರ ಕಾಪಾಡಿ ಮನಸ್ಸಿಗೆ ದೇಹಕ್ಕೆ ಸಂತೋಷ ಕೊಡುವ ಸ್ಥಳವಾಗಿ ಕಂಡು ಬರುವುದೇ ಈ ಕಿರಿಯಾಡಿ ದೇವಾಲಯ.

– ಕಾವ್ಯ, ಉಜಿರೆ

ಟಾಪ್ ನ್ಯೂಸ್

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

akhilesh

Akhilesh Yadav ಗಂಭೀರ ಆರೋಪ: ಅಯೋಧ್ಯೆಯಲ್ಲಿ ಭಾರೀ ಭೂ ಹಗರಣ

1-sadsadasd

Ganesh festival; ಡೋಲು-ತಾಸೆಯವರ ಸಂಖ್ಯೆಗೆ NGT ನಿರ್ಬಂಧಕ್ಕೆ ಸುಪ್ರೀಂ ತಡೆ

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಶಾರುಖ್‌ – ಅಟ್ಲಿ ʼಜವಾನ್‌ʼ

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಸೂಪರ್‌ ಹಿಟ್ ʼಜವಾನ್‌ʼ

Good News: ಶೀಘ್ರದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಸಾಧ್ಯತೆ? ಪಂಕಜ್‌ ಜೈನ್

Good News: ಶೀಘ್ರದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಸಾಧ್ಯತೆ? ಪಂಕಜ್‌ ಜೈನ್

1-ffsdf

Chikkaballapur ನಗರಸಭೆ ಕೋಲಾಹಲ; ಡಾ.ಸುಧಾಕರ್ ಮೇಲುಗೈ: ಸವಾಲು ಹಾಕಿದ ಪ್ರದೀಪ್ ಈಶ್ವರ್!

HDK

Nagamangala Riots: ಗಲಭೆಗೆ ಕಾಂಗ್ರೆಸ್‌ ಸರಕಾರದ ತುಷ್ಟೀಕರಣ ನೀತಿಯೇ ಕಾರಣ: ಎಚ್‌ಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Paris ಪ್ಯಾರಾಲಿಂಪಿಕ್ಸ್‌ ನಲ್ಲಿ ಭಾರತಕ್ಕೆ ಹೆಚ್ಚು ಯಶಸ್ಸು ಸಿಕ್ಕಿದ್ಹೇಗೆ? ಇಲ್ಲಿದೆ ವಿವರ

Olympics Vs Para; ಪ್ಯಾರಾಲಿಂಪಿಕ್ಸ್‌ ನಲ್ಲಿ ಭಾರತಕ್ಕೆ ಹೆಚ್ಚು ಯಶಸ್ಸು ಸಿಕ್ಕಿದ್ಹೇಗೆ?

1-ssss

US Presidential debate; ಟ್ರಂಪ್-ಕಮಲಾ ಮುಖಾಮುಖಿ: ಬಾಣಕ್ಕೆ ಪ್ರತಿಬಾಣ

Abu Dhabi:ವಿದೇಶ ಪ್ರವಾಸ ಕಥನ-ಅಬುಧಾಬಿ ಹಿಂದು ಮಂದಿರ ಸರ್ವ ಧರ್ಮದ ಸೌಹಾರ್ದತೆಯ ಸಂಕೇತ

Abu Dhabi:ವಿದೇಶ ಪ್ರವಾಸ ಕಥನ-ಅಬುಧಾಬಿ ಹಿಂದು ಮಂದಿರ ಸರ್ವ ಧರ್ಮದ ಸೌಹಾರ್ದತೆಯ ಸಂಕೇತ

ಈ ಗ್ರಾಮದಲ್ಲಿರುವ ಮನುಷ್ಯರಷ್ಟೇ ಅಲ್ಲ ಸಾಕು ಪ್ರಾಣಿಗಳೂ ಮಾಂಸಾಹಾರ ಮುಟ್ಟಲ್ವಂತೆ

Non Veg:ಈ ಗ್ರಾಮದಲ್ಲಿರುವ ಮನುಷ್ಯರಷ್ಟೇ ಅಲ್ಲ ಸಾಕು ಪ್ರಾಣಿಗಳೂ ಮಾಂಸಾಹಾರ ಮುಟ್ಟಲ್ವಂತೆ

30 ಟಿವಿ ಚಾನೆಲ್‌, 2 ಕ್ರಿಕೆಟ್‌ ಟೀಮ್.. ಇವರೇ ನೋಡಿ ಭಾರತದ ಶ್ರೀಮಂತ ಸಿನಿಮಾ ನಿರ್ಮಾಪಕ

30 ಟಿವಿ ಚಾನೆಲ್‌, 2 ಕ್ರಿಕೆಟ್‌ ಟೀಮ್.. ಇವರೇ ನೋಡಿ ಭಾರತದ ಶ್ರೀಮಂತ ಸಿನಿಮಾ ನಿರ್ಮಾಪಕ

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

1-baghi

Hombale Films ಬಹು ನಿರೀಕ್ಷಿತ ಬಘೀರ ಚಿತ್ರದ ರಿಲೀಸ್ ಡೇಟ್ ಘೋಷಣೆ

Road Mishap: ಸ್ಕೂಟಿಗೆ ಬೈಕ್‌ ಡಿಕ್ಕಿ; ಬೈಕ್ ಸವಾರ ಮೃತ್ಯು

Road Mishap: ಸ್ಕೂಟಿಗೆ ಬೈಕ್‌ ಡಿಕ್ಕಿ; ಬೈಕ್ ಸವಾರ ಮೃತ್ಯು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Ronny actress Samikshaa

Ronny ಗೆಲ್ಲುವ ಸಿನಿಮಾ: ನಟಿ ಸಮೀಕ್ಷಾ

akhilesh

Akhilesh Yadav ಗಂಭೀರ ಆರೋಪ: ಅಯೋಧ್ಯೆಯಲ್ಲಿ ಭಾರೀ ಭೂ ಹಗರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.