Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ
Team Udayavani, Sep 18, 2024, 12:54 AM IST
“ಈ ಜಗತ್ತಿನ ಸೃಷ್ಟಿಕರ್ತ ನಾನೇ ಆದ ಕಾರಣ ಜಗತ್ತು ಹೇಗೆ ಆಯಿತು ಎನ್ನುವುದು ನನಗೆ ಗೊತ್ತಿದೆ. ಎಲ್ಲರ ತಂದೆಯೂ ನಾನೇ ಆದ್ದರಿಂದ ನಾನು ಮೊದಲೇ ಬಂದೆ. ನಾನು ಮಾತ್ರ ಎಲ್ಲಿಂದ ಬಂದೆ ಎನ್ನುವುದು ಯಾರಿಗೂ ಗೊತ್ತಿಲ್ಲ.
ನನ್ನನ್ನು ಅಜ (ಅನಾದಿ), ಲೋಕ ಮಹೇಶ್ವರ ಎಂದು ಯಾರು ತಿಳಿಯುತ್ತಾರೋ ಸರ್ವಪಾಪಗಳಿಂದ ಮುಕ್ತರಾಗುತ್ತಾರೆ’ ಎನ್ನುತ್ತಾನೆ ಶ್ರೀಕೃಷ್ಣ. ಸರ್ವೋತ್ತಮ ಜ್ಞಾನಕ್ಕೂ, ಅಜತ್ವಜ್ಞಾನಕ್ಕೂ ಸಂಬಂಧವಿದೆ. ಅಜತ್ವ =ಹುಟ್ಟಿಲ್ಲದವ. ಭಗವಂತನಿಗೆ ಹುಟ್ಟಿಲ್ಲ, ಹುಟ್ಟಿಲ್ಲದವನೇ ಸರ್ವೋತ್ತಮ.
ಈ ಜ್ಞಾನ ಸಾತ್ವಿಕ, ದೈವೀ ಸಂಪತ್ತಿನಲ್ಲಿ ಮೂಡುವಂಥದ್ದು. ದೈವೀ ಸಂಪತ್ತೇ ಮೋಕ್ಷಕ್ಕೆ ಕಾರಣ. ಭಗವಂತನ ವಿಭೂತಿಯನ್ನು ತಿಳಿದವರು ಸರ್ವಪಾಪದಿಂದ ಮುಕ್ತನಾಗುತ್ತಾರೆ. ಇಲ್ಲಿ ಭಾವಸಮನ್ವಯ ಬೇಕು. ಎಲ್ಲವನ್ನೂ ಸಮರ್ಪಣೆ ಮಾಡುವಷ್ಟು ಭಾವನೆ ಬೇಕು.. “…. ಭಕ್ತ್ಯಾಭಗವದರಾಧನಮೇವ..’ ಎನ್ನುವುದಕ್ಕೆ ಇದು ಪೂರಕ. ಭಗವಂತನನ್ನು ಇಷ್ಟು ತಿಳಿದುಕೊಂಡರೆ ಅಂತಹ ಜೀವಿಗಳ ಮೇಲೆ ಭಗವದನುಗ್ರಹ ಪ್ರಾಪ್ತವಾಗುತ್ತದೆ ಅಂದರೆ ಅದು ನಮ್ಮ ಮಾನವ ಬುದ್ಧಿಯ ಅನುಭವದ ಅಳತೆಗೋಲಿನಿಂದಲ್ಲ. “ಸತ್ಯವನ್ನು ತಿಳಿಯುತ್ತಾನಲ್ಲ ಈ ಮನುಷ್ಯ’ ಎಂಬ ಪ್ರೀತಿಗಾಗಿ ಭಗವಂತನ ವಿಶೇಷ ಅನುಗ್ರಹವಿದು. ಅರ್ಜುನ ಒಬ್ಬ ಸುಜೀವಿಯಾದ ಕಾರಣ ತಾನು ಕೊಟ್ಟ ಜ್ಞಾನವನ್ನು ಅರಗಿಸಿಕೊಳ್ಳಲು ಕೃಷ್ಣ ಆತನಿಗೆ ವಿಶೇಷ ಜ್ಞಾನವನ್ನೂ ಕೊಡುತ್ತಾನೆ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Katapady:ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಾಹನ
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!
ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು
Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ
Bajpe ಬಸ್ ನಿಲ್ದಾಣ ಕಟ್ಟಡ ಪೂರ್ಣ; 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.